AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜಾಲಿವುಡ್​’ಗೆ ಶುಭಕೋರಿದ ಶಿವರಾಜ್​ಕುಮಾರ್​, ಡಿಕೆಶಿ; ಇಲ್ಲಿದೆ ಹತ್ತು ಹಲವು ಬಗೆಯ ಮನರಂಜನೆ

‘ಸ್ಯಾಂಡಲ್​ವುಡ್, ಬಾಲಿವುಡ್, ಕಾಲಿವುಡ್.. ಹೀಗೆ ಎಲ್ಲವೂ‌ ಒಂದೆಡೆ ಬಂದು ಸೇರುವ ಸ್ಥಳವೇ ಜಾಲಿವುಡ್. ಹಿಂದೆ ಇದೇ ಜಾಗದಲ್ಲಿ ನಾನು ಸಾಕಷ್ಟು ಸಿನಿಮಾಗಳ ಶೂಟಿಂಗ್​ನಲ್ಲಿ ಭಾಗಿ ಆಗಿದ್ದೆ. ಅದೆಲ್ಲ ಈಗ ನೆನಪಿಗೆ ಬರುತ್ತಿದೆ’ ಎಂದು ​ಶಿವರಾಜ್​ಕುಮಾರ್ ಹೇಳಿದ್ದಾರೆ. ಆಗಸ್ಟ್ 27ರಿಂದ ಈ ಥೀಮ್​ ಪಾರ್ಕ್​ ಕಾರ್ಯಾರಂಭ ಮಾಡಲಿದೆ.

‘ಜಾಲಿವುಡ್​’ಗೆ ಶುಭಕೋರಿದ ಶಿವರಾಜ್​ಕುಮಾರ್​, ಡಿಕೆಶಿ; ಇಲ್ಲಿದೆ ಹತ್ತು ಹಲವು ಬಗೆಯ ಮನರಂಜನೆ
ಜಾಲಿವುಡ್​ ಉದ್ಘಾಟನಾ ಸಮಾರಂಭ
ಮದನ್​ ಕುಮಾರ್​
|

Updated on: Aug 22, 2023 | 7:27 PM

Share

ಬೇರೆ ಬೇರೆ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ವೇಲ್ಸ್ ಗ್ರೂಪ್‌ನ ಸಂಸ್ಥಾಪಕ ಐಶರಿ ಕೆ. ಗಣೇಶ್ ಅವರು ಬಿಡದಿ ಬಳಿ ‘ಜಾಲಿವುಡ್ ಸ್ಟುಡಿಯೋಸ್ ಮತ್ತು ಅಡ್ವೆಂಚರ್ಸ್’ (Jollywood) ಆರಂಭಿಸಿದ್ದಾರೆ. ಇತ್ತೀಚೆಗೆ ಇದರ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಅನೇಕ ಗಣ್ಯರು ಸಾಕ್ಷಿಯಾದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar), ಸ್ಯಾಂಡಲ್​ವುಡ್​ ನಟ ಶಿವರಾಜಕುಮಾರ್, ಸಂಸದ ಡಿ.ಕೆ. ಸುರೇಶ್, ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ ಮುಂತಾದವರು ಅತಿಥಿಗಳಾಗಿ ಬಂದು ‘ಜಾಲಿವುಡ್​’ಗೆ ಶುಭ ಕೋರಿದರು. ಇದೊಂದು ಸ್ಟುಡಿಯೋ ಮತ್ತು ಥೀಮ್​ ಪಾರ್ಕ್​ ಆಗಿದ್ದು. ಇದರಲ್ಲಿ ಹತ್ತು ಹಲವು ಬಗೆಯ ಮನರಂಜನೆ ಸಿಗಲಿದೆ. ಇದೇ ಜಾಗದಲ್ಲಿ ಶೂಟಿಂಗ್​ ಮಾಡಿದ ಹಳೆಯ ದಿನಗಳಲ್ಲಿ ಶಿವರಾಜ್​ಕುಮಾರ್​ (Shivarajkumar) ನೆನಪು ಮಾಡಿಕೊಂಡರು.

ಆಗಸ್ಟ್ 27ರಿಂದ ‘ಜಾಲಿವುಡ್’ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ. ಆ ಬಗ್ಗೆ ಐಶರಿ ಕೆ. ಗಣೇಶ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ರೀತಿಯ ಒಂದು ಥೀಮ್​ ಪಾರ್ಕ್​ ಮಾಡಬೇಕು ಎಂಬುದು ಅವರ ಬಹುವರ್ಷಗಳ ಕನಸಾಗಿತ್ತು. ಆ ಕನಸು ಈಗ ನನಸಾಗಿದೆ. ‘ಕಳೆದ 30 ವರ್ಷಗಳಿಂದ ನಾವು ಆರೋಗ್ಯ, ಶಿಕ್ಷಣ, ಸಿನಿಮಾ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದೇವೆ. ಕುಟುಂಬದವರೆಲ್ಲ ಒಟ್ಟಾಗಿ ಖುಷಿಯಿಂದ ಸಮಯ ಕಳೆಯುವಂಥ ಒಂದು ಥೀಮ್ ಪಾರ್ಕ್ ನಿರ್ಮಿಸಬೇಕು ಎಂಬುದು ನನ್ನ ಆಸೆ ಆಗಿತ್ತು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪರಭಾಷಿಗರಿಗೂ ಹತ್ತಿರವಾದ ಶಿವರಾಜ್​ಕುಮಾರ್; ಹ್ಯಾಟ್ರಿಕ್ ಹೀರೋಈ ಖದರ್​ಗೆ ಭರಪೂರ ಮೆಚ್ಚುಗೆ

‘ಕಳೆದ 2 ವರ್ಷಗಳ ಕಾಲದಿಂದ ಈ ಪ್ರಕ್ರಿಯೆ ನಡೆಯುತ್ತಿತ್ತು. ಫಿಲ್ಮ್​ ಸಿಟಿಯನ್ನು ನವೀಕರಿಸಿರುವುದು ಮಾತ್ರವಲ್ಲದೇ ಅನೇಕ ರೀತಿಯ ಮನರಂಜನೆಯ ಆಟಗಳನ್ನು ಆರಂಭಿಸಿದ್ದೇವೆ. ಭಾರತೀಯ ಚಿತ್ರರಂಗಕ್ಕೆ ಇದನ್ನು ಅರ್ಪಿಸುತ್ತೇವೆ. ನಮ್ಮ ಈ ಪಾರ್ಕ್​ನಲ್ಲಿ 33 ಮುಖ್ಯ ಆಕರ್ಷಣೆಗಳು ಇವೆ. ಜಾಲಿವುಡ್​ಗೆ ಬರುವ ಜನರಿಗೆ ಮನರಂಜನೆ ಗ್ಯಾರಂಟಿ’ ಎಂದಿದ್ದಾರೆ ಐಶರಿ ಕೆ. ಗಣೇಶ್. ‘ಕಳೆದ 4 ವರ್ಷಗಳಿಂದ ನಾನು ಯಾವುದೇ ಖಾಸಗಿ ಕಾರ್ಯಕ್ರಮಗಳ ಉದ್ಘಾಟನೆ ಹೋಗಿರಲಿಲ್ಲ. ಇದೇ ಮೊದಲು ಇಲ್ಲಿಗೆ ಬಂದಿದ್ದೇನೆ. ‘ಜಾಲಿವುಡ್’ ತುಂಬ ಚೆನ್ನಾಗಿದೆ. ಬೆಂಗಳೂರು ಮತ್ತು ಬೇರೆ ಊರುಗಳ ಜನರು ಇದನ್ನು ನೋಡಿ ಖುಷಿಪಡಲಿ’ ಎಂದು ಡಿ.ಕೆ. ಶಿವಕುಮಾರ್ ಅವರು ಶುಭ ಕೋರಿದ್ದಾರೆ.

ಇದನ್ನೂ ಓದಿ: ‘ಬಿಗ್​ ಡ್ಯಾಡಿ’ ಜೊತೆ ಬರ್ತಾನೆ ‘ಬೀರ್​ಬಲ್​’: ಮುಗಿಯಿತು ಶಿವರಾಜ್​ಕುಮಾರ್​ ನಟನೆಯ ‘ಘೋಸ್ಟ್​’ ಚಿತ್ರೀಕರಣ

ಸಂಸದ ಡಿ.ಕೆ. ಸುರೇಶ್, ಶಾಸಕ ಬಾಲಕೃಷ್ಣ ಕೂಡ ‘ಜಾಲಿವುಡ್’ಗೆ ಶುಭ ಹಾರೈಸಿದರು. ಈ ವೇಳೆ ಸಿ.ಇ.ಓ. ಆರವ್ ಕೂಡ ಉಪಸ್ಥಿತರಿದ್ದರು. ಈ ಥೀಮ್ ಪಾರ್ಕ್​ ಬಗ್ಗೆ ಶಿವಣ್ಣ ಮಾತನಾಡಿದರು. ‘ಸ್ಯಾಂಡಲ್​ವುಡ್, ಬಾಲಿವುಡ್, ಕಾಲಿವುಡ್.. ಹೀಗೆ ಎಲ್ಲವೂ‌ ಒಂದೆಡೆ ಬಂದು ಸೇರುವ ಸ್ಥಳವೇ ಜಾಲಿವುಡ್. ಹಿಂದೆ ಇದೇ ಜಾಗದಲ್ಲಿ ನಾನು ಸಾಕಷ್ಟು ಸಿನಿಮಾಗಳ ಶೂಟಿಂಗ್​ನಲ್ಲಿ ಭಾಗಿ ಆಗಿದ್ದೆ. ಅದೆಲ್ಲ ಈಗ ನೆನಪಿಗೆ ಬರುತ್ತಿದೆ’ ಎಂದರು ಶಿವರಾಜ್​ಕುಮಾರ್​.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಬರೋಬ್ಬರಿ 209 ಎಸೆತಗಳು ಬಾಕಿ... ಹೀನಾಯ ಸೋಲುಂಡ ಪಾಕಿಸ್ತಾನ್
ಬರೋಬ್ಬರಿ 209 ಎಸೆತಗಳು ಬಾಕಿ... ಹೀನಾಯ ಸೋಲುಂಡ ಪಾಕಿಸ್ತಾನ್
ಎಲ್‌ಪಿಜಿ ಸಿಲಿಂಡರ್​ ಬಿಕ್ಕಟ್ಟು: ಪೆಟ್ರೋಲಿಯಂ ಸಚಿವಾಲಯದಿಂದ ಮಹತ್ವದ ಹೇಳಿಕ
ಎಲ್‌ಪಿಜಿ ಸಿಲಿಂಡರ್​ ಬಿಕ್ಕಟ್ಟು: ಪೆಟ್ರೋಲಿಯಂ ಸಚಿವಾಲಯದಿಂದ ಮಹತ್ವದ ಹೇಳಿಕ
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹತ್ಯೆಗೆ ಯತ್ನ
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹತ್ಯೆಗೆ ಯತ್ನ
ಮನೆಯಲ್ಲಿ ಸೂರ್ಯರಶ್ಮಿ ನೇರವಾಗಿ ಬೀಳುವುದರಿಂದ ಎಷ್ಟು ಲಾಭ ಗೊತ್ತಾ?
ಮನೆಯಲ್ಲಿ ಸೂರ್ಯರಶ್ಮಿ ನೇರವಾಗಿ ಬೀಳುವುದರಿಂದ ಎಷ್ಟು ಲಾಭ ಗೊತ್ತಾ?
ಇಂದು ಈ ರಾಶಿಯವರ ಕೆಲಸ ಕಾರ್ಯದಲ್ಲಿ ಶುಭ!
ಇಂದು ಈ ರಾಶಿಯವರ ಕೆಲಸ ಕಾರ್ಯದಲ್ಲಿ ಶುಭ!
ನಿಜವಾದ ಕೇರಳ ಸ್ಟೋರಿ: ಮುಸ್ಲಿಂ ಯುವಕನ ಜತೆ ಮದುವೆ ಆದ ಕುಂಭಮೇಳದ ಹುಡುಗಿ
ನಿಜವಾದ ಕೇರಳ ಸ್ಟೋರಿ: ಮುಸ್ಲಿಂ ಯುವಕನ ಜತೆ ಮದುವೆ ಆದ ಕುಂಭಮೇಳದ ಹುಡುಗಿ
ಕೊಪ್ಪಳದ ಗ್ರಾಮವೊಂದರಲ್ಲಿ ಹಾಡಹಗಲೇ ಚಿರತೆ ಓಡಾಟ: ವಿಡಿಯೋ ನೋಡಿ
ಕೊಪ್ಪಳದ ಗ್ರಾಮವೊಂದರಲ್ಲಿ ಹಾಡಹಗಲೇ ಚಿರತೆ ಓಡಾಟ: ವಿಡಿಯೋ ನೋಡಿ
ಉದ್ಘಾಟನೆಯಾದ 6 ತಿಂಗಳೊಳಗೆ ಬಂಗಾಳದ ಫ್ಲೈಓವರ್ ಗೋಡೆ ಕುಸಿತ
ಉದ್ಘಾಟನೆಯಾದ 6 ತಿಂಗಳೊಳಗೆ ಬಂಗಾಳದ ಫ್ಲೈಓವರ್ ಗೋಡೆ ಕುಸಿತ
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ