ಜೂನಿಯರ್ ಎನ್​ಟಿಆರ್ ಮಕ್ಕಳು ಏನಾಗ್ತಾರೆ? ಉತ್ತರಿಸಿದ ನಟ

ಜೂನಿಯರ್​ ಎನ್​ಟಿಆರ್ ಅವರಿಗೆ ಅಭಯ್ ರಾಮ್ ಹಾಗೂ ಭಾರ್ಗವ್ ರಾಮ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಅವರು ಚಿತ್ರರಂಗಕ್ಕೆ ಬರಬೇಕು ಎಂದು ಅಭಿಮಾನಿಗಳು ಬಯಸುತ್ತಾರೆ. ಆದರೆ, ಈ ರೀತಿ ಆಗಬಾರದು ಎಂಬುದು ಜೂನಿಯರ್ ಎನ್​ಟಿಆರ್ ಅವರ ಅಭಿಪ್ರಾಯ.

ಜೂನಿಯರ್ ಎನ್​ಟಿಆರ್ ಮಕ್ಕಳು ಏನಾಗ್ತಾರೆ? ಉತ್ತರಿಸಿದ ನಟ
ಎನ್​ಟಿಆರ್ ಹಾಗೂ ಕುಟುಂಬ
Edited By:

Updated on: Oct 09, 2024 | 8:52 AM

ತೆಲುಗು ಚಿತ್ರರಂಗದಲ್ಲಿ ನಂದಮೂರಿ ಕುಟುಂಬದ ಲೆಗಸಿ ತುಂಬಾನೇ ದೊಡ್ಡದು. ಈ ಕುಟುಂಬದಿಂದ ಅನೇಕರು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಅದರಲ್ಲಿ ಜೂನಿಯರ್ ಎನ್​ಟಿಆರ್ ಕೂಡ ಒಬ್ಬರು. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ನಂದಮೂರಿ ಫ್ಯಾಮಿಲಿ ಲೆಗಸಿಯನ್ನು ಕಾಪಾಡಿಕೊಂಡು ಹೋಗುತ್ತಿದ್ದಾರೆ. ಆದರೆ, ಈ ಒತ್ತಡ ಮಕ್ಕಳ ಮೇಲೆ ಬರಬಾರದು ಎನ್ನುವ ಆಶಯ ಅವರದ್ದು.

ಜೂನಿಯರ್​ ಎನ್​ಟಿಆರ್ ಅವರಿಗೆ ಅಭಯ್ ರಾಮ್ ಹಾಗೂ ಭಾರ್ಗವ್ ರಾಮ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಅವರು ಚಿತ್ರರಂಗಕ್ಕೆ ಬರಬೇಕು ಎಂದು ಅಭಿಮಾನಿಗಳು ಬಯಸುತ್ತಾರೆ. ಆದರೆ, ಈ ರೀತಿ ಆಗಬಾರದು ಎಂಬುದು ಜೂನಿಯರ್ ಎನ್​ಟಿಆರ್ ಅವರ ಅಭಿಪ್ರಾಯ. ಅವರು ಸಿನಿಮಾ ಬಿಟ್ಟು ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ಅದಕ್ಕೆ ಜೂನಿಯರ್​ ಎನ್​ಟಿಆರ್ ವಿರೋಧಿಸುವ ಉದ್ದೇಶ ಹೊಂದಿಲ್ಲ.

‘ಅವರಿಗೆ ಒತ್ತಡ ಆಗಬಾರದು. ಅವರು ಎಲ್ಲವೂ ಅನ್ವೇಷಣೆ ಮಾಡಬೇಕು’ ಎಂದು ಜೂನಿಯರ್​ ಎನ್​ಟಿಆರ್ ಅವರು ಹೇಳಿಕೊಂಡಿದ್ದಾರೆ. ಅವರು ನ್ಯಾಷನಲ್​ ಲೆವೆಲ್ ಬ್ಯಾಡ್ಮಿಂಟನ್ ಪ್ಲೇಯರ್ ಹಾಗೂ ಕ್ಲಾಸಿಕಲ್ ಡ್ಯಾನ್ಸರ್. ‘ನನ್ನ ತಂದೆ ನಟನೆ ಮಾಡಬೇಕು ಎಂದು ನನಗೆ ಒತ್ತಡ ಹೇರಿಲ್ಲ. ಆದರೆ, ನಟನಾ ಕ್ಷೇತ್ರದ ಹಿನ್ನೆಲೆ ಇರೋದ್ರಿಂದ ಅದು ನನ್ನ ಸೆಳೆಯಿತು’ ಎಂದಿದ್ದಾರೆ ಅವರು.

90ರ ದಶಕದಲ್ಲಿ ಬಾಲ ಕಲಾವಿದನಾಗಿ ಜೂನಿಯರ್​ ಎನ್​ಟಿಆರ್ ಅವರು ನಟಿಸಿದ್ದರು. ಅವರು 2001ರಲ್ಲಿ ‘ನಿನ್ನು ಚೂಡಲಾನಿ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಹೀರೋ ಆಗಿ ಕಾಲಿಟ್ಟರು. ‘ನಾನು ನ್ಯಾಷನಲ್ ಲೆವೆಲ್ ಬ್ಯಾಡ್ಮಿಂಟ್​ ಆಟಗಾರ. ಪ್ರೊಫೆಷನಲ್ ಕ್ಲಾಸಿಕ್ ಡ್ಯಾನ್ಸರ್. ನನಗೆ ತಪ್ಪುಗಳನ್ನು ಮಾಡಲು ಸಾಕಷ್ಟು ಅವಕಾಶ ಇತ್ತು’ ಎಂದು ಅವರು ಹೇಳಿದ್ದಾರೆ.

ಜೂನಿಯರ್​ ಎನ್​ಟಿಆರ್ ಅವರ ತಾತ ನಂದಮೂರು ತಾರಕ್ ರಾಮ್ ರಾವ್, ಜೂನಿಯರ್ ಎನ್​ಟಿಆರ್ ಅವರ ತಂದೆ ಹರಿಕೃಷ್ಣ, ಅಂಕಲ್ ಬಾಲಕೃಷ್ಣ, ಸಹೋದರ ಕಲ್ಯಾಣ್ ರಾಮ್ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ.

ಇದನ್ನೂ ಓದಿ: ‘ದೇವರ’ ಸೆಲೆಬ್ರೇಷನ್ ವೇಳೆ ಸಿಡಿದ ಪಟಾಕಿ; ಜೂನಿಯರ್ ಎನ್​ಟಿಆರ್​ ಕಟೌಟ್​ಗೆ ಬೆಂಕಿ

ಜೂನಿಯರ್ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಈ ಚಿತ್ರವು ಬಾಕ್ಸ್ ಆಫೀಸ್​​ನಲ್ಲಿ ಸಾಧಾರಣ ಗಳಿಕೆ ಮಾಡುತ್ತಿದೆ. ಈ ಚಿತ್ರಕ್ಕೆ ಎರಡನೇ ಭಾಗವು ಶೀಘ್ರವೇ ಬರಲಿದೆ. ಈ ಚಿತ್ರವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ. ಜೂನಿಯರ್​ ಎನ್​ಟಿಆರ್ ಅವರು ಪ್ರಸ್ತುತ ಪ್ರಶಾಂತ್ ನೀಲ್ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:52 am, Wed, 9 October 24

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us