‘ಅರ್ಜುನ್ ಚಕ್ರವರ್ತಿ’ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ; ಈ ಚಿತ್ರದಲ್ಲಿದೆ ಕಬಡ್ಡಿ ಆಟಗಾರನ ಕಥೆ

|

Updated on: Oct 30, 2023 | 4:02 PM

ವಿಕ್ರಾಂತ್ ರುದ್ರ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ವಿಜಯ ರಾಮರಾಜು ಅವರು ಅರ್ಜುನ್ ಚಕ್ರವರ್ತಿ ಪಾತ್ರವನ್ನು ಮಾಡುತ್ತಿದ್ದಾರೆ. ‘ಜರ್ನಿ ಆಫ್ ಅನ್‌ಸಂಗ್ ಚಾಂಪಿಯನ್’ ಎಂಬ ಟ್ಯಾಗ್​ಲೈನ್​ ಗಮನ ಸೆಳೆಯುತ್ತಿದೆ. ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಮೂಡಿಬರುತ್ತಿದೆ. ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಆಗಿದೆ.

‘ಅರ್ಜುನ್ ಚಕ್ರವರ್ತಿ’ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ; ಈ ಚಿತ್ರದಲ್ಲಿದೆ ಕಬಡ್ಡಿ ಆಟಗಾರನ ಕಥೆ
‘ಅರ್ಜುನ್​ ಚಕ್ರವರ್ತಿ’ ಸಿನಿಮಾ ಫಸ್ಟ್​ ಲುಕ್​ ಪೋಸ್ಟರ್​
Follow us on

ಕ್ರೀಡೆ ಮತ್ತು ಸಿನಿಮಾ ಕ್ಷೇತ್ರದ ನಡುವೆ ಮೊದಲಿನಿಂದಲೂ ನಂಟು ಇದೆ. ಕ್ರೀಡೆಯಲ್ಲಿ ಸಾಧನೆ ಮಾಡಿದ ಅನೇಕರ ಜೀವನವನ್ನು ಆಧರಿಸಿ ಈಗಾಗಲೇ ಸಾಕಷ್ಟು ಸಿನಿಮಾಗಳು (Biopic) ಬಂದಿವೆ. ಆ ಪೈಕಿ ಕೆಲವು ಚಿತ್ರಗಳು ಸೂಪರ್​ ಹಿಟ್​ ಆಗಿವೆ ಕೂಡ. ಇನ್ನೂ ಅಂತಹ ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೇ ಇವೆ. ತೆರೆಗೆ ತರಬಹುದಾದ ಅನೇಕ ಕಥೆಗಳು ಬಾಕಿ ಇವೆ. ಈಗ ಕಬಡ್ಡಿ (Kabaddi) ಆಟಗಾರ ಅರ್ಜುನ್​ ಚಕ್ರವರ್ತಿ ಕುರಿತು ಸಿನಿಮಾ ಸಿದ್ಧವಾಗುತ್ತಿದೆ. ‘ಅರ್ಜುನ್ ಚಕ್ರವರ್ತಿ’ (Arjun Chakravarthy) ಎಂದೇ ಈ ಸಿನಿಮಾಗೆ ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗೆ ಈ ಸಿನಿಮಾದ ಫಸ್ಟ್​ ಲುಕ್​ ಪೋಸ್ಟರ್​ ಅನಾವರಣ ಮಾಡಲಾಯಿತು.

ಹೇಗಿದೆ ‘ಅರ್ಜುನ್ ಚಕ್ರವರ್ತಿ’ ಫಸ್ಟ್​ ಲುಕ್​?

ಕ್ರೀಡಾಧಾರಿತ ಸಿನಿಮಾ ಆದ್ದರಿಂದ ‘ಅರ್ಜುನ್ ಚಕ್ರವರ್ತಿ’ ಪ್ರಾಜೆಕ್ಟ್​ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿದೆ. ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗಷ್ಟೇ ರಿಲೀಸ್​ ಆಗಿದ್ದು, ಪದಕವನ್ನು ಹಿಡಿದುಕೊಂಡು ಕ್ರೀಡಾಂಗಣದ ಮಧ್ಯಭಾಗದಲ್ಲಿ ನಿಂತು ವಿಜಯದ ಕ್ಷಣವನ್ನು ಅರ್ಜುನ್ ಚಕ್ರವರ್ತಿ ಅವರು ವಿವರಿಸುತ್ತಿರುವಂತಹ ದೃಶ್ಯ ಇದರಲ್ಲಿದೆ. ವಿಕ್ರಾಂತ್ ರುದ್ರ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ವಿಜಯ ರಾಮರಾಜು ಅವರು ಅರ್ಜುನ್ ಚಕ್ರವರ್ತಿ ಪಾತ್ರವನ್ನು ಮಾಡುತ್ತಿದ್ದಾರೆ. ಸಿಜಾ ರೋಸ್ ಕೂಡ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಲಾಲು ಬಯೋಪಿಕ್​ನಲ್ಲಿ ನಟಿಸೋಕೆ ಪಂಕಜ್ ತ್ರಿಪಾಠಿ ಸೂಕ್ತ; ಶುರುವಾಗಿದೆ ಚರ್ಚೆ 

ಸಿನಿಮಾದ ಬಗ್ಗೆ ವಿವರ:

1980ರ ದಶಕದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕಬಡ್ಡಿ ಆಟಗಾರ ಅರ್ಜುನ್ ಚಕ್ರವರ್ತಿ ಅವರ ಬದುಕಿನ ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಮೂಡಿಬರುತ್ತಿದೆ. ಒಬ್ಬ ಕ್ರೀಡಾಪಟುವಿನ ಬದುಕಿನಲ್ಲಿ ಎದುರಾದ ಹೋರಾಟಗಳು ಹಾಗೂ ಸಿಕ್ಕ ಗೆಲುವಿನ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ. ದಯಾನಂದ ರೆಡ್ಡಿ, ಅಜಯ್, ಅಜಯ್ ಘೋಷ್ ಹಾಗೂ ದುರ್ಗೇಶ್ ಅವರು ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ವಿಘ್ನೇಶ್ ಭಾಸ್ಕರನ್ ಅವರ ಸಂಗೀತ ನಿರ್ದೇಶನ ಹಾಗೂ ಜಗದೀಶ್ ಚೀಕಾಟಿ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. ‘ಗ್ಯಾನೆಟ್ ಸೆಲ್ಯುಲಾಯ್ಡ್’ ಬ್ಯಾನರ್​ ಅಡಿಯಲ್ಲಿ ನಿರ್ಮಾಪಕ ಶ್ರೀನಿ ಗುಬ್ಬಾಳ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ: ರಾಖಿ ಸಾವಂತ್​ ಬಯೋಪಿಕ್​ಗೆ ರಿಷಬ್​ ಶೆಟ್ಟಿ ನಿರ್ದೇಶನ? ಮೈಸೂರಿನಿಂದ ಹೊಸ ನ್ಯೂಸ್​

‘ಅರ್ಜುನ್​ ಚಕ್ರವರ್ತಿ’ ಚಿತ್ರದ ಬಗ್ಗೆ ನಿರ್ಮಾಪಕ ಶ್ರೀನಿ ಗುಬ್ಬಾಳ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಜರ್ನಿ ಆಫ್ ಅನ್‌ಸಂಗ್ ಚಾಂಪಿಯನ್’ ಎಂಬುದು ಈ ಚಿತ್ರದ ಟ್ಯಾಗ್​ ಲೈನ್​. ‘ಇದು ಕೇವಲ ಸಿನಿಮಾ ಅಲ್ಲ. ಸವಾಲುಗಳನ್ನು ಮೀರಿ ಎದ್ದುನಿಲ್ಲುವಂತಹ ಹಾಗೂ ನಮ್ಮೆಲ್ಲರಿಗೂ ಸ್ಫೂರ್ತಿ, ಪ್ರೇರಣೆ ನೀಡುವಂತಹ ವ್ಯಕ್ತಿಗಳ ಅದಮ್ಯ ಮನೋಭಾವಕ್ಕೆ ಸಲ್ಲಿಸುವಂತಹ ಗೌರವ ಇದಾಗಿದೆ. ಈ ಚಿತ್ರದಿಂದ ನಾವು ಇಚ್ಛಾಶಕ್ತಿ ಹಾಗೂ ಆತ್ಮಬಲದ ವಿಜಯವನ್ನು ಪ್ರದರ್ಶಿಸಲು ಬಯಸುತ್ತೇವೆ’ ಎಂದಿದ್ದಾರೆ ಶ್ರೀನಿ ಗುಬ್ಬಾಳ. ತೆಲುಗು ಹಾಗೂ ತಮಿಳಿನಲ್ಲಿ ಏಕಕಾಲದಲ್ಲಿ ಶೂಟಿಂಗ್​ ಮಾಡಲಾಗುತ್ತಿದೆ. ಕನ್ನಡ, ಮಲಯಾಳಂ ಮತ್ತು ಹಿಂದಿಗೆ ಡಬ್​ ಮಾಡಲಾಗುವುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.