AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಜಲ್​ ಸಂಸಾರದಲ್ಲಿ ಸಹೋದರಿಯ ಸ್ವಾರ್ಥ; ಬಹಿರಂಗವಾಗಿಯೇ ಹೇಳಿಕೊಂಡ ನಟಿ

ಕಾಜಲ್ ಅಗರ್​ವಾಲ್​ ಮತ್ತು ಗೌತಮ್​ ಕಿಚಲು ಆದಷ್ಟು ಬೇಗ ಮಗು ಮಾಡಿಕೊಳ್ಳಬೇಕು ಎಂದು ಕಾಜಲ್​ ಸಹೋದರಿ ನಿಶಾ ಅಗರ್​ವಾಲ್​ ಒತ್ತಾಯ ಮಾಡುತ್ತಿದ್ದಾರೆ. ಈ ಬಗ್ಗೆ ಅವರು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಾಯಿ ಬಿಟ್ಟಿದ್ದಾರೆ.

ಕಾಜಲ್​ ಸಂಸಾರದಲ್ಲಿ ಸಹೋದರಿಯ ಸ್ವಾರ್ಥ; ಬಹಿರಂಗವಾಗಿಯೇ ಹೇಳಿಕೊಂಡ ನಟಿ
ಕಾಜಲ್​ ಅಗರ್​ವಾಲ್​, ಗೌತಮ್​ ಕಿಚಲು, ನಿಶಾ
TV9 Web
| Edited By: |

Updated on: Jun 19, 2021 | 1:01 PM

Share

ನಟಿ ಕಾಜಲ್​ ಅಗರ್​ವಾಲ್​ ಅವರು ಬಹುಭಾಷೆಯಲ್ಲಿ ಹೀರೋಯಿನ್​ ಆಗಿ ಮಿಂಚುತ್ತಿರುವಾಗಲೇ ಕಳೆದ ವರ್ಷ ಮದುವೆ ಮಾಡಿಕೊಂಡರು. ಇದು ಅವರ ಅಭಿಮಾನಿಗಳಿಗೆ ನಿಜಕ್ಕೂ ಅಚ್ಚರಿ ಮೂಡಿಸಿದ ಸಂಗತಿ. ಗೆಳಯ ಗೌತಮ್​ ಕಿಚಲು ಜೊತೆ ಅವರು ಈಗ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಪತಿ ಒಪ್ಪಿಗೆ ಕೊಟ್ಟರೆ ಮಾತ್ರ ಸಿನಿಮಾಗಳಲ್ಲಿ ನಟಿಸುತ್ತೇನೆ ಎಂದು ಅವರು ಈ ಹಿಂದೆ ಹೇಳಿಕೆ ನೀಡಿದ್ದು ಕೂಡ ಅನಿರೀಕ್ಷಿತವಾಗಿತ್ತು. ಈಗ ಅವರ ಬಗ್ಗೆ ಸಹೋದರಿ ನಿಶಾ ಅಗರ್​ವಾಲ್ ಕೆಲವು ವಿಚಾರಗಳನ್ನು ಬಾಯಿ ಬಿಟ್ಟಿದ್ದಾರೆ.

2020ರ ಅಕ್ಟೋಬರ್ 30ರಂದು ಕಾಜಲ್ ಅಗರ್​ವಾಲ್​ ಮತ್ತು ಗೌತಮ್​ ಕಿಚಲು ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟರು. ಆದಷ್ಟು ಬೇಗ ಈ ದಂಪತಿ ಮಗು ಮಾಡಿಕೊಳ್ಳಬೇಕು ಎಂದು ಕಾಜಲ್​ ಸಹೋದರಿ ನಿಶಾ ಅಗರ್​ವಾಲ್​ ಒತ್ತಾಯ ಮಾಡುತ್ತಿದ್ದಾರೆ. ಈ ಬಗ್ಗೆ ಅವರು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಕಾಜಲ್​ ಅಗರ್​ವಾಲ್​ ಮಗು ಮಾಡಿಕೊಳ್ಳಬೇಕು ಎಂದು ನಿಶಾ ಒತ್ತಾಯಿಸುತ್ತಿರುವುದರ ಹಿಂದೆ ಅವರ ಸ್ವಾರ್ಥ ಇದೆ. ‘ಅವಳು ಆದಷ್ಟು ಬೇಗ ಮಗುವಿಗೆ ಜನ್ಮ ನೀಡಲಿ ಎಂದು ನಾನು ಹೇಳುವುದಕ್ಕೆ ಒಂದು ಸ್ವಾರ್ಥದ ಕಾರಣ ಇದೆ. ಅವಳು ಮದುವೆ ಆದ ದಿನದಿಂದಲೂ ನಾನು ಇದನ್ನು ಹೇಳುತ್ತಲೇ ಇದ್ದೇನೆ. ಅವರು ಮಕ್ಕಳು ಪಡೆಯುವುದನ್ನು ವಿಳಂಬ ಮಾಡಿದರೆ ನನ್ನ ಮಗನಿಗೆ ಆಟವಾಡಲು ಯಾರೂ ಸಿಗುವುದಿಲ್ಲ. ಕಾಜಲ್​ ಮಗು ಮತ್ತು ನನ್ನ ಮಗನ ನಡುವೆ ವಯಸ್ಸಿನ ಅಂತರ ಆಗಿಬಿಡುತ್ತದೆ. ಅವನಿಗೆ ಈಗಾಗಲೇ 3 ವರ್ಷ ಆಗಿದೆ. ಈ ದಂಪತಿ ಸ್ವಲ್ಪ ಗಡಿಬಿಡಿ ಮಾಡಬೇಕು’ ಎಂದು ನಿಶಾ ಅಗರ್​ವಾಲ್​ ಹೇಳಿದ್ದಾರೆ.

‘ಅಮ್ಮ.. ನನಗೆ ತಂಗಿ ಅಥವಾ ತಮ್ಮ ಬೇಕು ಎಂದು ನನ್ನ ಮಗ ಇಶಾನ್​ ಹೇಳುತ್ತಿರುತ್ತಾನೆ. ಹೋಗಿ ನಿನ್ನ ಆಂಟಿಗೆ ಮನವೊಲಿಸು ಅಂತ ನಾನು ಅವನಿಗೆ ಹೇಳುತ್ತೇನೆ’ ಎಂದಿದ್ದಾರೆ ನಿಶಾ. ನಿಶಾ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ತೆಲುಗು, ತಮಿಳು ಮತ್ತು ಮಲಯಾಳಂ ಸೇರಿ ಕೆಲವು ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ನಟಿಸಿದ್ದ ಅವರು 2014ರ ಬಳಿಕ ಬಣ್ಣದ ಲೋಕದಿಂದ ದೂರ ಉಳಿದುಕೊಂಡಿದ್ದಾರೆ.

ಇದನ್ನೂ ಓದಿ:

Kajal Aggarwal: ಪತಿಗಾಗಿ ಚಿತ್ರರಂಗ ತೊರೆಯೋ ನಿರ್ಧಾರಕ್ಕೆ ಬಂದ ಕಾಜಲ್​ ಅಗರ್​ವಾಲ್​

ಅಭಿಮಾನಿಯ ನೋವಿಗೆ ಸ್ಪಂದಿಸಿದ ಕಾಜಲ್​; ಅಬ್ಬಾ ಅವರು ಮಾಡಿದ ಸಹಾಯ ಮರೆಯಂಗಿಲ್ಲ!

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್