AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kangana Ranaut: ಇಂದಿರಾ ಗಾಂಧಿ ಬಗ್ಗೆ ಕಂಗನಾ ಮಾಡುವ ‘ಎಮರ್ಜೆನ್ಸಿ’ ಚಿತ್ರ ಫ್ಲಾಪ್​ ಆಗಲಿದೆ; ಭವಿಷ್ಯ ನುಡಿದ ನಟ

Kamaal R Khan: ಸದಾ ಒಂದಿಲ್ಲೊಂದು ವಿಚಾರಗಳ ಬಗ್ಗೆ ಕಮೆಂಟ್​ ಮಾಡುತ್ತ, ವಿವಾದ ಸೃಷ್ಟಿಸಿಕೊಳ್ಳುವಲ್ಲಿ ಕಮಾಲ್​ ಆರ್​. ಖಾನ್​ ಫೇಮಸ್​. ಈಗ ಅವರು ಕಂಗನಾ ರಣಾವತ್​ ತಂಟೆಗೆ ಬಂದಿದ್ದಾರೆ.

Kangana Ranaut: ಇಂದಿರಾ ಗಾಂಧಿ ಬಗ್ಗೆ ಕಂಗನಾ ಮಾಡುವ ‘ಎಮರ್ಜೆನ್ಸಿ’ ಚಿತ್ರ ಫ್ಲಾಪ್​ ಆಗಲಿದೆ; ಭವಿಷ್ಯ ನುಡಿದ ನಟ
ಕಂಗನಾ ರಣಾವತ್​
ಮದನ್​ ಕುಮಾರ್​
|

Updated on: Jun 27, 2021 | 1:45 PM

Share

ನಟಿ ಕಂಗನಾ ರಣಾವತ್​ ಅವರು ವಿವಾದ ಮಾಡಿಕೊಳ್ಳುವುದರಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಅದರ ನಡುವೆಯೇ ಹೊಸ ಹೊಸ ಸಿನಿಮಾ ಅನೌನ್ಸ್​ ಮಾಡುತ್ತಿರುತ್ತಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತು ಸಿನಿಮಾ ಮಾಡುವುದಾಗಿ ಅವರು ಕೆಲವೇ ದಿನಗಳ ಹಿಂದೆ ಘೋಷಿಸಿದರು. ಆ ಚಿತ್ರದ ಬಗ್ಗೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಳ್ಳುವಂತಾಗಿದೆ. ಅಚ್ಚರಿ ಎಂದರೆ ಚಿತ್ರಕ್ಕೆ ‘ಎಮರ್ಜೆನ್ಸಿ’ ಎಂದು ಹೆಸರು ಇಡಲಾಗಿದ್ದು, ಇಂದಿರಾ ಗಾಂಧಿಯ ಪಾತ್ರದಲ್ಲಿ ನಟಿಸುವುದರ ಜೊತೆಗೆ ನಿರ್ದೇಶನವನ್ನೂ ಸ್ವತಃ ಕಂಗನಾ ಮಾಡಲಿದ್ದಾರೆ. ಆದರೆ ಆ ಸಿನಿಮಾ ಖಂಡಿತವಾಗಿ ಸೋಲಲಿದೆ ಎಂದು ಕಮಾಲ್​ ಆರ್​. ಖಾನ್ ಭವಿಷ್ಯ ನುಡಿದಿದ್ದಾರೆ.

‘ಇಂದಿರಾ ಗಾಂಧಿ ಮತ್ತು ಎಮರ್ಜೆನ್ಸಿ ಕುರಿತು ನಿರ್ದೇಶಕ ಮಧುರ್​ ಭಂಡಾರ್ಕರ್​ ಅವರು ‘ಇಂದೂ ಸರ್ಕಾರ್’ ಸಿನಿಮಾ ಮಾಡಿದ್ದರು. ನಾಯಿ ಕೂಡ ಆ ಸಿನಿಮಾ ನೋಡಲು ​ಹೋಗಿರಲಿಲ್ಲ. ಈಗ ಅಕ್ಕ ಕಂಗನಾ ರಣಾವತ್​ ಅವರು ಅದೇ ವಿಷಯದ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಅಂದರೆ ಆಕೆ ಸತತ 12ನೇ ಸಿನಿಮಾದಲ್ಲೂ ಸೋಲಬೇಕು ಅಂತ ಅಂದುಕೊಂಡಿದ್ದಾರೆ. ಅವರು ನಟಿಸಿದ 11 ಸಿನಿಮಾಗಳು ಈಗಾಗಲೇ ಫ್ಲಾಪ್​ ಆಗಿವೆ’ ಎಂದು ಕಮಾಲ್​ ಆರ್​. ಖಾನ್​ ವ್ಯಂಗ್ಯ ಮಾಡಿದ್ದಾರೆ.

ಸದಾ ಒಂದಿಲ್ಲೊಂದು ವಿಚಾರಗಳ ಬಗ್ಗೆ ಕಮೆಂಟ್​ ಮಾಡುತ್ತ, ವಿವಾದ ಸೃಷ್ಟಿಸಿಕೊಳ್ಳುವಲ್ಲಿ ಕಮಾಲ್​ ಆರ್​. ಖಾನ್​ ಫೇಮಸ್​. ಈಗ ಅವರು ಕಂಗನಾ ತಂಟೆಗೆ ಬಂದಿದ್ದಾರೆ. ಕಂಗನಾ ಎಂಥ ಕಿರಿಕ್​ ಪಾರ್ಟಿ ಎಂಬುದು ಗೊತ್ತಿದ್ದರೂ ಕೂಡ ಅವರು ‘ಎಮರ್ಜೆನ್ಸಿ’ ಸಿನಿಮಾ ಬಗ್ಗೆ ಅಪಶಕುನ ನುಡಿದಿದ್ದಾರೆ. ಇದು ಈಗ ಸೋಶಿಯಲ್​​ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಇದಕ್ಕೆ ಕಂಗನಾ ಯಾವ ರೀತಿ ತಿರುಗೇಟು ನೀಡುತ್ತಾರೆ ಎಂಬುದನ್ನು ನೋಡಲು ನೆಟ್ಟಿಗರು ಕಾಯುತ್ತಿದ್ದಾರೆ.

‘ಎಮರ್ಜೆನ್ಸಿ’ ಸಿನಿಮಾ ಮೇಲೆ ಕಂಗನಾ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಮತ್ತೊಮ್ಮೆ ನಿರ್ದೇಶಕಿಯ ಕ್ಯಾಪ್​ ಧರಿಸಲು ಖುಷಿ ಎನಿಸುತ್ತದೆ. ಈ ಚಿತ್ರಕ್ಕಾಗಿ 2 ವರ್ಷಕ್ಕೂ ಅಧಿಕ ಸಮಯ ಕೆಲಸ ಮಾಡಿದ ಬಳಿಕ ಅನಿಸುತ್ತಿರುವುದು ಏನೆಂದರೆ, ಈ ಚಿತ್ರಕ್ಕೆ ನನ್ನ ಹೊರತಾಗಿ ಬೇರೆ ಯಾರೂ ಕೂಡ ಚೆನ್ನಾಗಿ ನಿರ್ದೇಶನ ಮಾಡಲು ಸಾಧ್ಯವಿಲ್ಲ. ಈ ಸಿನಿಮಾಗಾಗಿ ನನ್ನ ನಟನೆಯ ಕೆಲವು ಬೇರೆ ಪ್ರಾಜೆಕ್ಟ್​ಗಳನ್ನು ತ್ಯಾಗ ಮಾಡಬೇಕಾಗಿದೆ. ಆದರೂ ನಾನು ಈ ಚಿತ್ರ ಮಾಡಲು ನಿರ್ಧರಿಸಿದ್ದೇನೆ. ತುಂಬ ಎಗ್ಸೈಟ್​ ಆಗಿದ್ದೇನೆ. ಇದು ಒಂದು ಅದ್ಭುತ ಜರ್ನಿ ಆಗಿರಲಿದೆ’ ಎಂದು ಕಂಗನಾ ಇತ್ತೀಚೆಗಷ್ಟೇ ಹೇಳಿಕೊಂಡಿದ್ದರು.

ಇದನ್ನೂ ಓದಿ:

‘ಇಂಡಿಯಾ’ ಅನ್ನೋದು ಗುಲಾಮರ ಹೆಸರು ಎಂದ ಕಂಗನಾ ರಣಾವತ್​​ಗೆ ಕ್ಲಾಸ್​ ತೆಗೆದುಕೊಂಡ ನೆಟ್ಟಿಗರು

ಆ್ಯಸಿಡ್​ ದಾಳಿಯಿಂದ ಕಂಗನಾ ಅಕ್ಕನ ಮುಖಕ್ಕೆ 53 ಸರ್ಜರಿ; ಕಡೆಗೂ ಯೋಗದಿಂದ ನಡೆದಿದ್ದು ಮ್ಯಾಜಿಕ್​

Follow Us
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ