Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಹ್ಲಿ ಮದುವೆ ನಂತರ ಅನುಷ್ಕಾ ಶರ್ಮಾಗೆ ಕರಣ್​ ಜೋಹರ್​ ಬಳಸಿದ ಆ ಒಂದು ಶಬ್ದ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು

Karan Johar: ಅದು 2018ರ ಸಮಯ. ಅನುಷ್ಕಾ ಶರ್ಮಾ ಭಾರತೀಯ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿಯನ್ನು ಮದುವೆಯಾಗಿ ಕೆಲವೇ ತಿಂಗಳು ಕಳೆದಿದ್ದವು. ಹಿಂದಿ ರಿಯಾಲಿಟಿ ಶೋ ಒಂದಕ್ಕೆ ‘ಜೀರೋ’ ಚಿತ್ರದ ಪ್ರಮೋಷನ್​ಗೆ ಕತ್ರಿನಾ ಕೈಫ್​ ಹಾಗೂ ಅನುಷ್ಕಾ ಬಂದಿದ್ದರು.

ಕೊಹ್ಲಿ ಮದುವೆ ನಂತರ ಅನುಷ್ಕಾ ಶರ್ಮಾಗೆ ಕರಣ್​ ಜೋಹರ್​ ಬಳಸಿದ ಆ ಒಂದು ಶಬ್ದ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು
ಅನುಷ್ಕಾ-ವಿರಾಟ್​ ದಂಪತಿ ಹಾಗೂ ಕರಣ್​
Follow us
ರಾಜೇಶ್ ದುಗ್ಗುಮನೆ
|

Updated on: May 24, 2021 | 9:12 PM

ಕರಣ್​ ಜೋಹರ್​ ಬಾಲಿವುಡ್​ನ ಖ್ಯಾತ ನಿರ್ಮಾಪಕ. ಸಾಕಷ್ಟು ಬಿಗ್​ ಬಜೆಟ್​ ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಅವರಿಗಿದೆ. ಅಷ್ಟೇ ಅಲ್ಲ, ಅವರು ಸಾಕಷ್ಟು ಸ್ಟಾರ್​ಗಳ ಮಕ್ಕಳನ್ನು ಬಾಲಿವುಡ್​ಗೆ ಪರಿಚಯ ಮಾಡಿದ್ದಾರೆ. ಇನ್ನು, ಕರಣ್​ ವಿವಾದದ ಮೂಲಕವೂ ಆಗಾಗ ಸುದ್ದಿಯಾಗುತ್ತಾರೆ. ಅವರು ನಟಿ ಅನುಷ್ಕಾ ಶರ್ಮಾಗೆ ಬಳಸಿದ ಒಂದು ಶಬ್ದ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಅದು 2018ರ ಸಮಯ. ಅನುಷ್ಕಾ ಶರ್ಮಾ ಭಾರತೀಯ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿಯನ್ನು ಮದುವೆಯಾಗಿ ಕೆಲವೇ ತಿಂಗಳು ಕಳೆದಿದ್ದವು. ಹಿಂದಿ ರಿಯಾಲಿಟಿ ಶೋ ಒಂದಕ್ಕೆ ‘ಜೀರೋ’ ಚಿತ್ರದ ಪ್ರಮೋಷನ್​ಗೆ ಕತ್ರಿನಾ ಕೈಫ್​ ಹಾಗೂ ಅನುಷ್ಕಾ ಬಂದಿದ್ದರು. ಈ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಕರಣ್​.

ಈ ವೇಳೆ ಗೇಮ್​ ಒಂದನ್ನು ಆಡಿಸಲಾಗಿತ್ತು. ಈ ಆಟದಲ್ಲಿ ಕರಣ್​, ‘ಕೋಯಿ ಮಿಲ್​ ಗಯಾ’ ಚಿತ್ರದ ಸಾಂಗ್​ ವಿಚಾರವಾಗಿ ಪ್ರಶ್ನೆಯೊಂದನ್ನು ಕೇಳಿದ್ದರು. ಈ ಪ್ರಶ್ನೆಗೆ ಕತ್ರಿನಾ ಕೈಫ್​ ಸರಿಯಾಗಿ ಉತ್ತರ ನೀಡಿದರು.

ಕರಣ್​ ಕೇಳಿದ ಮುಂದಿನ ಪ್ರಶ್ನೆಗೆ ಅನುಷ್ಕಾ ತಕ್ಷಣಕ್ಕೆ ಉತ್ತರ ನೀಡಿದರು. ಆಗ ಕತ್ರಿನಾ, ‘ನನಗೆ ಅವಕಾಶವನ್ನೇ ನೀಡಿಲ್ಲ’ ಎಂದು ದೂರಿದ್ದರು. ‘ನಾನು ಅವಕಾಶವನ್ನು ಬಾಚಿಕೊಂಡೆ’ ಎಂದು ಹೇಳುತ್ತಲೇ ಫೋರ್​ ಎಂದಿದ್ದರು ಅನುಷ್ಕಾ. ಆಗ ಕರಣ್​, ‘ನಮ್ಮ ಹುಡುಗಿ ತುಂಬಾನೇ ದೊಡ್ಡವಳಾಗಿದ್ದಾರೆ. ಕ್ರಿಕೆಟ್​ ಜೋಕ್​ಗಳನ್ನು ಹೇಳುತ್ತಿದ್ದಾರೆ. ಅನುಷ್ಕಾ ದೇಶದ ಸೊಸೆ’ ಎಂದು ಹೇಳಿದ್ದರು.

ವಿರಾಟ್​ ಟೀಂ ಇಂಡಿಯಾದ ನಾಯಕ. ಹೀಗಾಗಿ, ಅನುಷ್ಕಾಗೆ ದೇಶದ ಸೊಸೆ ಎಂಬಪದವನ್ನು  ಕರಣ್​ ಬಳಸಿದ್ದರು. ಇದನ್ನು ಸಾಕಷ್ಟು ಜನರು ಪ್ರಶ್ನೆ ಮಾಡಿದ್ದರು.

ಅನುಷ್ಕಾ ಹಾಗೂ ವಿರಾಟ್​ 2017ರ ಡಿಸೆಂಬರ್​ನಲ್ಲಿ ಇಟಲಿಗೆ ತೆರಳಿ ಮದುವೆ ಆದರು. ಹಲವು ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರು. ಈ ವರ್ಷ ಜನವರಿಯಲ್ಲಿ ವಮಿಕಾ ಹೆಸರಿನ ಮಗು ಅವರಿಗೆ ಜನಿಸಿತು. ಕೊವಿಡ್​ ಸಂಕಷ್ಟದ ಸಮಯದಲ್ಲಿ ಅನುಷ್ಕಾ ಹಾಗೂ ವಿರಾಟ್​ ಸಹಾಯಕ್ಕೆ ನಿಂತಿದ್ದಾರೆ. ಕೊವಿಡ್​-19 ರಿಲೀಫ್​ ಫಂಡ್​ಗೆ 2 ಕೋಟಿ ನೀಡಿದ್ದರು. ಅಲ್ಲದೆ, ಜನರಿಂದಲೂ ಹಣ ಪಡೆದು ಅಗತ್ಯ ಇರುವವರಿಗೆ ನೀಡಿದ್ದರು.

ಇದನ್ನೂ ಓದಿ: ಕಾರ್ತಿಕ್​ ಆರ್ಯನ್​ಗೆ ಗೇಟ್​ ಪಾಸ್​ ಕೊಟ್ಟ ಬೆನ್ನಲ್ಲೇ ಕರಣ್​​ ಜೋಹರ್​ಗೆ ಬಿಗ್​ ಶಾಕ್​

ಸುಶಾಂತ್ ರೀತಿ ಕಾರ್ತಿಕ್ ಆರ್ಯನ್​ಗೂ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸಬೇಡಿ; ಕರಣ್​​​ಗೆ ಕಂಗನಾ ಛೀಮಾರಿ

ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಮಾತು ವಾಪಸ್ ಪಡೆಯುತ್ತೇನೆಂದರೂ ಬಿಡದ ಯತ್ನಾಳ್, ಕೊನೆಗೆ ಕೈಮುಗಿದ ಖಾದರ್​​
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಸಂಘರ್ಷದ ಹಾದಿ ಬೇಡ, ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋಗೋಣ: ರೇಣುಕಾಚಾರ್ಯ
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಹೋಳಿ ಬಣ್ಣ ತಾಕದಂತೆ ಜಾಮಾ ಮಸೀದಿ ಮೇಲೆ ಟಾರ್ಪಲ್ ಮುಚ್ಚಿದ ಪೊಲೀಸರು
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಅಶ್ವಥ್ ನಾರಾಯಣಗೆ ಹೇಳೋದು ಪೂರ್ತಿ ಕೇಳು ತಮ್ಮಾ ಎಂದ ಸಿದ್ದರಾಮಯ್ಯ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ
ಲಲಿತ್ ಮಹಲ್​ನಲ್ಲಿ ‘ಡೆವಿಲ್’ ಶೂಟಿಂಗ್, ದರ್ಶನ್ ಭಾಗಿ: ವಿಡಿಯೋ