AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ತಿಕ್​ ಆರ್ಯನ್​ಗೆ ಗೇಟ್​ ಪಾಸ್​ ಕೊಟ್ಟ ಬೆನ್ನಲ್ಲೇ ಕರಣ್​​ ಜೋಹರ್​ಗೆ ಬಿಗ್​ ಶಾಕ್​

ಕರಣ್ ಜೋಹರ್ ಹಾಗೂ ನಟ ಕಾರ್ತಿಕ್​ ಆರ್ಯನ್​ ನಡುವೆ ಸಂಘರ್ಷ ಏರ್ಪಟ್ಟಿತ್ತು. ಇದು ಮಿತಿಮೀರಿದ್ದು, ಇನ್ನೆಂದಿಗೂ ನಮ್ಮ ಪ್ರೊಡಕ್ಷನ್​​ನಲ್ಲಿ ಸ್ಥಾನವಿಲ್ಲ ಎನ್ನುವ ಖಡಕ್ ಸಂದೇಶವನ್ನು ಕರಣ್ ರವಾನಿಸಿದ್ದರು.

ಕಾರ್ತಿಕ್​ ಆರ್ಯನ್​ಗೆ ಗೇಟ್​ ಪಾಸ್​ ಕೊಟ್ಟ ಬೆನ್ನಲ್ಲೇ ಕರಣ್​​ ಜೋಹರ್​ಗೆ ಬಿಗ್​ ಶಾಕ್​
ಕರಣ್​ ಜೋಹರ್
ರಾಜೇಶ್ ದುಗ್ಗುಮನೆ
|

Updated on: Apr 24, 2021 | 8:56 PM

Share

ಬಾಲಿವುಡ್​ನ ಹೆಸರಾಂತ ನಿರ್ಮಾಪಕರ ಸಾಲಿನಲ್ಲಿ ಕರಣ್​ ಜೋಹರ್​ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಸ್ಟಾರ್​ ನಟರ ಮಕ್ಕಳ ಸಿನಿಮಾಗಳಿಗೆ ಮೊದಲ ಆದ್ಯತೆ ನೀಡುವ ಸಂಪ್ರದಾಯವನ್ನು ಅವರು ಈ ಮೊದಲಿನಿಂದಲೂ ನಡೆಸಿಕೊಂಡೇ ಬಂದಿದ್ದಾರೆ. ಇತ್ತೀಚೆಗೆ, ಕಾರ್ತಿಕ್​ ಆರ್ಯನ್​ ಅವರ ಜತೆ ಮುಂದೆಂದಿಗೂ ಕೆಲಸ ಮಾಡುವುದಿಲ್ಲ ಎಂದು ಕರಣ್​ ಒಡೆತನದ ಧರ್ಮ ಪ್ರೊಡಕ್ಷನ್​ ಘೋಷಣೆ ಮಾಡಿದೆ ಎನ್ನುವ ಸುದ್ದಿ ಹಬ್ಬಿತ್ತು. ಈ ಬೆನ್ನಲ್ಲೇ ಕರಣ್​​ಗೆ ಶಾಕ್​ ಒಂದು ಎದುರಾಗಿದೆ.

2020ರ ಅಕ್ಟೋಬರ್​ ಸಮಯ. ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್​ ಬಾಲಿವುಡ್​ನಲ್ಲಿ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿತ್ತು. ಕರಣ್​ ಅವರ ಧರ್ಮ ಪ್ರೊಡಕ್ಷನ್​ ಸಹಯೋಗದೊಂದಿಗೆ ಲೈಕಾ ಬಾಲಿವುಡ್​ಗೆ ಎಂಟ್ರಿ ಕೊಡುವುದರಲ್ಲಿತ್ತು.

ಈ ಮೊದಲು ಧರ್ಮ ಪ್ರೊಡಕ್ಷನ್​ ಫೋಕ್ಸ್​​ ಸ್ಟಾರ್​ ಸ್ಟುಡಿಯೋ ಜತೆ ಸಹಯೋಗ ಹೊಂದಿತ್ತು. ಆದರೆ, ಯಾವಾಗ ಫಾಕ್ಸ್​​ ಸ್ಟಾರ್​ ಸ್ಟುಡಿಯೋವನ್ನು ವಾಲ್ಟ್​​ ಡಿಸ್ನಿ ಖರೀದಿ ಮಾಡಿತ್ತೋ ಆಗ ಕರಣ್​ ಸ್ಟುಡಿಯೋ ಪಾರ್ಟ್ನರ್​ ಹುಡುಕೋಕೆ ಆರಂಭಿಸಿದ್ದರು. ಈ ವೇಳೆ ಸಹಯೋಗಕ್ಕೆ ಮುಂದಾಗಿದ್ದು ಲೈಕಾ.

ಎಲ್ಲವೂ ಅಂತಿಮ ಆಗುವ ಹಂತದಲ್ಲಿತ್ತು. ಆದರೆ, ಕೊನೆಯ ಹಂತದಲ್ಲಿ ಈ ಒಪ್ಪಂದ ಮುರಿದು ಬಿದ್ದಿದೆ. ಇದಕ್ಕೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಆದರೆ, ಭವಿಷ್ಯದಲ್ಲಿ ಈ ಡೀಲ್​ ಆಗುವುದೇ ಇಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಕರಣ್​ ನಿರ್ಮಾಣದ ಸಾಕಷ್ಟು ಸಿನಿಮಾಗಳು ಶೂಟಿಂಗ್​ ಹಂತದಲ್ಲಿವೆ. ಶೇರ್​ಶಾ, ದೋಸ್ತಾನಾ 2, ಜುಗ್​ ಜುಗ್​ ಜೀಯೋ, ಲೈಗರ್​ ಸೇರಿ ಸಾಕಷ್ಟು ಸಿನಿಮಾಗಳಿಗೆ ಧರ್ಮಾ ಪ್ರೊಡಕ್ಷನ್​ ಬಂಡವಾಳ ಹೂಡುತ್ತಿದೆ. ಇದಕ್ಕೆ ಸ್ಟುಡಿಯೋ ಒಂದರ ಬೆಂಬಲ ಬೇಕೆಬೇಕು. ಹೀಗಾಗಿ, ಧರ್ಮ ಪ್ರೊಡಕ್ಷನ್​ ಯಾರ ಜತೆ ಒಪ್ಪಂದ ಮಾಡಿಕೊಳ್ಳಲಿದೆ ಎಂಬುದು ಸದ್ಯದ ಕುತೂಹಲ.

ಕರಣ್ ಜೋಹರ್ ಹಾಗೂ ನಟ ಕಾರ್ತಿಕ್​ ಆರ್ಯನ್​ ನಡುವೆ ಸಂಘರ್ಷ ಏರ್ಪಟ್ಟಿತ್ತು. ಇದು ಮಿತಿಮೀರಿದ್ದು, ಇನ್ನೆಂದಿಗೂ ನಮ್ಮ ಪ್ರೊಡಕ್ಷನ್​​ನಲ್ಲಿ ಸ್ಥಾನವಿಲ್ಲ ಎನ್ನುವ ಖಡಕ್ ಸಂದೇಶವನ್ನು ಕರಣ್ ರವಾನಿಸಿದ್ದರು. ದೋಸ್ತಾನಾ 2 ಸಿನಿಮಾದಲ್ಲಿ ಕಾರ್ತಿಕ್​ ನಟಿಸಬೇಕಿತ್ತು.

ಇದನ್ನೂ ಓದಿ: ಸುಶಾಂತ್ ರೀತಿ ಕಾರ್ತಿಕ್ ಆರ್ಯನ್​ಗೂ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸಬೇಡಿ; ಕರಣ್​​​ಗೆ ಕಂಗನಾ ಛೀಮಾರಿ

ನಮ್ಮ ಪ್ರೊಡಕ್ಷನ್​ ಹೌಸ್​​ನಲ್ಲಿ ನಿನಗೆ ಅವಕಾಶ ಇಲ್ಲ; ಸ್ಟಾರ್​ ನಟನನ್ನೇ ಹೊರ ದಬ್ಬಿದ ಕರಣ್​ ಜೋಹರ್

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!