AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಪ್ರೊಡಕ್ಷನ್​ ಹೌಸ್​​ನಲ್ಲಿ ನಿನಗೆ ಅವಕಾಶ ಇಲ್ಲ; ಸ್ಟಾರ್​ ನಟನನ್ನೇ ಹೊರ ದಬ್ಬಿದ ಕರಣ್​ ಜೋಹರ್

ಕಾರ್ತಿಕ್​ ಆರಂಭದಲ್ಲಿ ಡೇಟ್ಸ್​ ಸಮಸ್ಯೆ ಎಂದು ಶೂಟಿಂಗ್​ಗೆ ಬರುತ್ತಿರಲಿಲ್ಲ. ನಂತರ ಕತೆ ವಿಚಾರಕ್ಕೆ ನಿರ್ಮಾಪಕರಿಗೂ ಹಾಗೂ ಕಾರ್ತಿಕ್​ಗೆ ಭಿನ್ನಾಭಿಪ್ರಾಯಗಳು ಮೂಡಲು ಆರಂಭವಾದವು.

ನಮ್ಮ ಪ್ರೊಡಕ್ಷನ್​ ಹೌಸ್​​ನಲ್ಲಿ ನಿನಗೆ ಅವಕಾಶ ಇಲ್ಲ; ಸ್ಟಾರ್​ ನಟನನ್ನೇ ಹೊರ ದಬ್ಬಿದ ಕರಣ್​ ಜೋಹರ್
ಕರಣ್​ ಜೋಹರ್
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​|

Updated on:Apr 16, 2021 | 5:28 PM

Share

ನಿರ್ಮಾಪಕರು ಹಾಗೂ ನಟರ ನಡುವೆ ಮನಸ್ತಾಪಗಳು ಮೂಡೋದು ಸಹಜ. ಕೆಲವೊಂದು ಜಗಳಗಳು ಇಂಡಸ್ಟ್ರಿಯಲ್ಲೇ ಹುಟ್ಟಿ, ಅಲ್ಲಿಯೇ ಕಾಣೆಯಾಗುತ್ತವೆ. ಆದರೆ, ಕೆಲವು ಮನಸ್ತಾಪಗಳು ಮಾತ್ರ ಬಟಾಬಯಲಾಗುತ್ತವೆ. ಈಗ ಬಾಲಿವುಡ್​ನ ಖ್ಯಾತ ನಿರ್ಮಾಪಕ ಕರಣ್​ ಜೋಹರ್​ ಹಾಗೂ ಬಾಲಿವುಡ್​ನ ಖ್ಯಾತ ನಟನ ನಡುವೆ ಸಂಘರ್ಷ ಏರ್ಪಟ್ಟಿದೆ. ಇದು ಮಿತಿಮೀರಿದ್ದು, ಇನ್ನೆಂದಿಗೂ ನಮ್ಮ ಪ್ರೊಡಕ್ಷನ್​ನಲ್ಲಿ ಸ್ಥಾನವಿಲ್ಲ ಎನ್ನುವ ಖಡಕ್​ ಸಂದೇಶವನ್ನು ಕರಣ್​ ರವಾನಿಸಿದ್ದಾರೆ. ಈ ಜಗಳ ಏರ್ಪಟ್ಟಿದ್ದು ಕರಣ್​ ಜೋಹರ್​ ಹಾಗೂ ಕಾರ್ತಿಕ್​ ಆರ್ಯನ್​ ನಡುವೆ. ದೋಸ್ತಾನ 2 ಸಿನಿಮಾಗೆ ಕಾರ್ತಿಕ್​ ಹೀರೋ ಆಗಿದ್ದರು. 2019ರಲ್ಲೇ ಈ ಬಗ್ಗೆ ಘೋಷಣೆ ಆಗಿತ್ತು. ಆದರೆ, ಕೊರೊನಾ ವೈರಸ್​ ಕಾಣಿಸಿಕೊಂಡಿದ್ದರಿಂದ ಸಿನಿಮಾ ಕೆಲಸಗಳು ಮುಂದೂಡಲ್ಪಟ್ಟಿದ್ದವು. ನಂತರ ಕಾರ್ತಿಕ್​ ಸಿನಿಮಾದಿಂದಲೇ ಹೊರ ಬಂದಿದ್ದರು. ಈಗ ಕೇಳಿ ಬರುತ್ತಿರುವ ಮಾಹಿತಿ ಏನೆಂದರೆ, ಕಾರ್ತಿಕ್​ ಆರ್ಯನ್​ ಜತೆ ಕರಣ್​ ಒಡೆತನದ ಧರ್ಮ ಪ್ರೊಡಕ್ಷನ್​ ಇನ್ನೆಂದೂ ಕೆಲಸ ಮಾಡದಿರಲು ನಿರ್ಧರಿಸಿದೆ.

ಕಾರ್ತಿಕ್​ ಆರಂಭದಲ್ಲಿ ಡೇಟ್ಸ್​ ಸಮಸ್ಯೆ ಎಂದು ಶೂಟಿಂಗ್​ಗೆ ಬರುತ್ತಿರಲಿಲ್ಲ. ನಂತರ ಕತೆ ವಿಚಾರಕ್ಕೆ ನಿರ್ಮಾಪಕರಿಗೂ ಹಾಗೂ ಕಾರ್ತಿಕ್​ಗೆ ಭಿನ್ನಾಭಿಪ್ರಾಯಗಳು ಮೂಡಲು ಆರಂಭವಾದವು. ಕಾರ್ತಿಕ್​ ಮೊದಲು ರಾಮ್​ ಮಾಧ್ವಾನಿ ಅವರ ಧಮಾಕಾ ಸಿನಿಮಾದ ಕೆಲಸಗಳನ್ನು ಪೂರ್ಣಗೊಳಿಸಲು ಹೆಚ್ಚು ಆಸಕ್ತಿ ತೋರಿದ್ದರು. ಇದು ಕರಣ್ ಕೋಪಕ್ಕೆ ಕಾರಣವಾಗಿದೆ. ಕೊನೆಗೆ ಕಾರ್ತಿಕ್​ ಅವರನ್ನು ಸಿನಿಮಾದಿಂದಲೇ ಕೈ ಬಿಡಲು ನಿರ್ಧರಿಸಲಾಗಿದೆ.

ಕಾರ್ತಿಕ್​ ಆರ್ಯನ್​

ಈ ವಿಚಾರದ ಬಗ್ಗೆ ಕೆಲವು ವಾರಗಳ ಕಾಲ ಕಾರ್ತಿಕ್​ ಹಾಗೂ ಕರಣ್​ ನಡುವೆ ಮುಸುಕಿನ ಗುದ್ದಾಟ ನಡೆದೇ ಇತ್ತು. ಕೊನೆಗೆ ಇಬ್ಬರ ನಡುವಿನ ಗೆಳೆತನ ಸಂಪೂರ್ಣವಾಗಿ ಮುರಿದು ಬಿದ್ದಿದೆ ಎನ್ನಲಾಗಿದೆ. ಈ ವಿಚಾರ ಸದ್ಯ ಬಾಲಿವುಡ್​ ಅಂಗಳದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.

ಇದನ್ನೂ ಓದಿ: ಸೋತು ಸುಣ್ಣವಾಗಿರುವ ಶಾರುಖ್​ ಖಾನ್​ಗೆ ಈಗ ಸಿಗುತ್ತಿರುವ ಸಂಭಾವನೆ ಎಷ್ಟು?

ಕ್ಷಮಿಸಿ, ನಾನು ಸಂಭಾವನೆ ಪಡೆಯಲ್ಲ; ಶಾರುಖ್​ಗಾಗಿ ಸಲ್ಮಾನ್​ ಹೀಗೊಂದು ತ್ಯಾಗ!

Published On - 4:54 pm, Fri, 16 April 21

ಕಲಶಕ್ಕೆ ಐದು ಎಲೆ ಇಡುವುದರ ಹಿಂದಿನ ರಹಸ್ಯ ಹಾಗೂ ವಿಶೇಷ ತಿಳಿಯಿರಿ
ಕಲಶಕ್ಕೆ ಐದು ಎಲೆ ಇಡುವುದರ ಹಿಂದಿನ ರಹಸ್ಯ ಹಾಗೂ ವಿಶೇಷ ತಿಳಿಯಿರಿ
ಮೂಲಾ ನಕ್ಷತ್ರದಲ್ಲಿ ಚಂದ್ರ ಸಂಚಾರ: ಯಾವ ರಾಶಿಗೆ ಏನು ಕಾದಿದೆ ತಿಳಿಯಿರಿ
ಮೂಲಾ ನಕ್ಷತ್ರದಲ್ಲಿ ಚಂದ್ರ ಸಂಚಾರ: ಯಾವ ರಾಶಿಗೆ ಏನು ಕಾದಿದೆ ತಿಳಿಯಿರಿ
ನಿಜವಾದ ಟಾಮ್ ಆ್ಯಂಡ್ ಜೆರಿ; ಒಟ್ಟಿಗೇ ಊಟ ಮಾಡುವ ಬೆಕ್ಕು-ಇಲಿ ವಿಡಿಯೋ ವೈರಲ್
ನಿಜವಾದ ಟಾಮ್ ಆ್ಯಂಡ್ ಜೆರಿ; ಒಟ್ಟಿಗೇ ಊಟ ಮಾಡುವ ಬೆಕ್ಕು-ಇಲಿ ವಿಡಿಯೋ ವೈರಲ್
ಕೆಳಗಿಂದ ಮೇಲೆ ಹರಿವ ನೀರಿನಲ್ಲಿ ದೋಣಿ ಬಿಟ್ಟ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಕೆಳಗಿಂದ ಮೇಲೆ ಹರಿವ ನೀರಿನಲ್ಲಿ ದೋಣಿ ಬಿಟ್ಟ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಬ್ರೆಜಿಲ್​ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಕೇಳಿ ತಲೆದೂಗಿದ ಪ್ರಧಾನಿ ಮೋದಿ
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ಪ್ರೀತಿಸಿ ಮದುವೆಯಾದಕೆಯನ್ನು ಬಿಟ್ಟು ಮತ್ತೊಂದು ಮದ್ವೆ: ಪ್ರೀತಿ ಕೊಂದ ಪವನ್
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ತಂದೆ ಬಗ್ಗೆ ಮಕ್ಕಳು ಕೇಳಿದರೆ ಏನು ಹೇಳ್ತೀರಿ? ನಿರ್ಧಾರ ತಿಳಿಸಿದ ಭಾವನಾ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ, ಅದೊಂದು ಜವಾಬ್ದಾರಿ: ಸಿಟಿ ರವಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಯಡಿಯೂರಪ್ಪ ವಿರುದ್ಧ ನಾನು ವಾಗ್ದಾಳಿ ನಡೆಸಲೇ ಇಲ್ಲ: ಲಿಂಬಾವಳಿ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ