AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಪ್ರತಿಭಟನೆ; ಸುದೀಪ್ ತೆಗೆದುಕೊಂಡ್ರು ಅಚ್ಚರಿಯ ನಿಲುವು

‘ಬಿಗ್​ ಬಾಸ್​ ಮನೆಯಲ್ಲಿ ನೀವೇ ಕಳಪೆ ಆಗ್ತೀನಿ ಅಂದ್ರಿ. ಮನೆಯವರೆಲ್ಲರೂ ಕಳಪೆ ಕೊಟ್ಟಾಗ, ನೀವೆ ಇದನ್ನು ವಿರೋಧಿಸಿದ್ರಿ ಏಕೆ’ ಎಂದು ಪ್ರಶ್ನಿಸಿದರು ಸುದೀಪ್​.

ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಪ್ರತಿಭಟನೆ; ಸುದೀಪ್ ತೆಗೆದುಕೊಂಡ್ರು ಅಚ್ಚರಿಯ ನಿಲುವು
ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಪ್ರತಿಭಟನೆ; ಸುದೀಪ್ ತೆಗೆದುಕೊಂಡ್ರು ಅಚ್ಚರಿಯ ನಿಲುವು
TV9 Web
| Edited By: |

Updated on: Jul 18, 2021 | 6:44 AM

Share

ಬಿಗ್​ ಬಾಸ್​ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್​ ಅವರಿಗೆ ಕಳಪೆ ಎಂದು ಕೊಟ್ಟ ವಿಚಾರ ಸಾಕಷ್ಟು ವಿಚಾರಗಳಿಗೆ ನಾಂದಿ ಹಾಡಿತ್ತು. ಚಕ್ರವರ್ತಿ ಚಂದ್ರಚೂಡ್ ಅವರು ಬಿಗ್​ ಬಾಸ್​ ಮನೆಯಲ್ಲಿ ಈ ಬಗ್ಗೆ ದೊಡ್ಡ ಪ್ರತಿಭಟನೆಯನ್ನೇ ಮಾಡಿದ್ದಾರೆ. ಈ ಬಗ್ಗೆ ವಾರದ ಪಂಚಾಯ್ತಿಯಲ್ಲಿ ಚರ್ಚೆ ಆಗಿದೆ. ಸುದೀಪ್​ ಈ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.

‘ಬಿಗ್​ ಬಾಸ್​ ಮನೆಯಲ್ಲಿ ನೀವೇ ಕಳಪೆ ಆಗ್ತೀನಿ ಅಂದ್ರಿ. ಮನೆಯವರೆಲ್ಲರೂ ಕಳಪೆ ಕೊಟ್ಟಾಗ, ನೀವೆ ಇದನ್ನು ವಿರೋಧಿಸಿದ್ರಿ ಏಕೆ’ ಎಂದು ಪ್ರಶ್ನಿಸಿದರು ಸುದೀಪ್​. ‘ಕಳಪೆ ಪಟ್ಟ ಕೊಡುವಾಗ ನೀಡುವ ಕಾರಣ ಸರಿಯಾಗಿರಬೇಕು. ಆದರೆ, ಅವರು ನೀಡಿದ ಕಾರಣ ನನಗೆ ಕನ್ವಿನ್ಸ್​ ಆಗಿಲ್ಲ. ಹೀಗಾಗಿ, ನಾನು ಜೈಲಿನಲ್ಲಿ ಪ್ರತಿಭಟನೆ ನಡೆಸಿದ್ದೇನೆ. ಬಿಗ್​ ಬಾಸ್​ ಮನೆಯಲ್ಲಿ ರಾಜಕೀಯ ನಡೆಯುತ್ತಿದೆ. ಇಲ್ಲಿ ಎಲ್ಲವೂ ಸುಳ್ಳು’ ಎಂದರು ಚಕ್ರವರ್ತಿ.

ಇದಕ್ಕೆ ಉತ್ತರಿಸಿದ ಸುದೀಪ್​, ‘ಬಿಗ್​ ಬಾಸ್ ಮನೆಯಲ್ಲಿ ಕಳಪೆ ಕೊಡೋದು ಅವರ ಒಪಿನೀಯನ್​. ಅದು ಅವರವರಿಗೆ ಬಿಟ್ಟಿದ್ದು. ಒಂದು ವಾರ ಟಾಸ್ಕ್​ ಕೊಡಲ್ಲ. ಯಾರು ಯಾರ ಜತೆಯೂ ಮಾತನಾಡುವ ಹಾಗಿಲ್ಲ ಎಂದು ನಿಯಮ ತಂದರೆ ಹೇಗಿರುತ್ತದೆ?’ ಎಂದು ಸುದೀಪ್​ ಪ್ರಶ್ನೆ ಮಾಡಿದರು.

‘ಬಿಗ್​ ಬಾಸ್​ ಮನೆಯಲ್ಲಿ ಅತ್ಯುತ್ತಮ ಎನ್ನುವ ಬಿರುದು ನೀಡುತ್ತಾರೆ. ಆದರೆ, ಅದಕ್ಕೆ ನೀಡಿದ ಕಾರಣ ಸರಿ ಇರಲ್ಲ. ಇದರ ಬಗ್ಗೆ ಯಾರೊಬ್ಬರೂ ಮಾತನಾಡಿಯೇ ಇಲ್ಲ. ಕಳಪೆ ಎಂದಾಗ ಮಾತ್ರ ನೀವು ಈ ರೀತಿ ಮಾಡ್ತೀರಿ. ಜೈಲಿಗೆ ಹೋದ ಕೆಲವರು ತರ್ಲೆ ಮಾಡಿದಾರೆ, ಸಾಕಷ್ಟು ಜನ ಎಂಟರ್​​ಟೇನ್​ ನೀಡಿದ್ದಾರೆ. ಜೈಲು​ ಬಿಗ್​ ಬಾಸ್​ನ ಒಂದು ಭಾಗ’ ಅಷ್ಟೇ ಎಂದರು ಸುದೀಪ್​.

‘ಕಳಪೆ ಅನ್ನೋದನ್ನು ಮಾತ್ರ ಯಾಕೆ ಅಷ್ಟು ಚರ್ಚೆ ಮಾಡ್ತೀರಾ? ಮನೆಯವರ ಅಭಿಪ್ರಾಯ ತಿಳಿಸೋಕೆ ಇರೋದು ಅದು. ನೀವು ಏನೇ ಮಾಡಿದರು ಅದನ್ನು ಜನರು ನೋಡುತ್ತಿರುತ್ತಾರೆ’ ಎಂದು ಸುದೀಪ್​ ಮಾತು ಮುಗಿಸಿದರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಹಾರಿತು ಕಪ್ಪು ಬಾವುಟ; ಏಕಾಂಗಿಯಾದ ಚಕ್ರವರ್ತಿ ಚಂದ್ರಚೂಡ್​?

ಬಿಗ್​ ಬಾಸ್​ ವೂಟ್ ನಿರೂಪಣೆಗೆ ಬರಲಿದ್ದಾರೆ ಹೊಸ ನಿರೂಪಕರು

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್