ಹೀಗೆ ಆದರೆ ಒಂದು ದಿನ ಸರ್ಜರಿ ಮಾಡಬೇಕಾಗುತ್ತದೆ!; ವೈಷ್ಣವಿಗೆ ಸುದೀಪ್​ ಎಚ್ಚರಿಕೆ

ಮೇ 3ರ ಎಪಿಸೋಡ್​ನಲ್ಲಿ ಸುದೀಪ್​ ಧ್ವನಿ ಬಿಗ್​ ಬಾಸ್​ ಮನೆಯವರಿಗೆ ಕೇಳಿದೆ. ಎಲ್ಲರಿಗೂ ಸುದೀಪ್​ ಕಿವಿಮಾತು ಹೇಳಿದ್ದಾರೆ.,

ಹೀಗೆ ಆದರೆ ಒಂದು ದಿನ ಸರ್ಜರಿ ಮಾಡಬೇಕಾಗುತ್ತದೆ!; ವೈಷ್ಣವಿಗೆ ಸುದೀಪ್​ ಎಚ್ಚರಿಕೆ
ಸುದೀಪ್​-ವೈಷ್ಣವಿ
Follow us
| Updated By: ಮದನ್​ ಕುಮಾರ್​

Updated on: May 04, 2021 | 12:33 PM

ಬಿಗ್​ ಬಾಸ್​ ಮನೆಯಲ್ಲಿ ವೈಷ್ಣವಿ ಗೌಡ ತುಂಬಾನೇ ಸೈಲೆಂಟ್​. ಅನೇಕ ಸಂದರ್ಭಗಳಲ್ಲಿ ಅವರು ಮಾತನ್ನೇ ಆಡುವುದಿಲ್ಲ. ಇದು ಕೆಲವೊಮ್ಮೆ ಅವರಿಗೆ ಪ್ಲಸ್​ ಆಗಿದೆ. ಇನ್ನೂ ಕೆಲವೊಮ್ಮೆ ಮೈನಸ್​ ಆಗಿದೆ. ಈ ಬಗ್ಗೆ ಸುದೀಪ್​ ಮಾತನಾಡಿದ್ದಾರೆ! ಅಷ್ಟೇ ಅಲ್ಲ, ವೈಷ್ಣವಿಗೆ ಕಿವಿಮಾತು ಕೂಡ ಹೇಳಿದ್ದಾರೆ.

ಕಿಚ್ಚ ಸುದೀಪ್​ಗೆ ಅನಾರೋಗ್ಯ ಕಾಡಿತ್ತು. ಹೀಗಾಗಿ, ಅವರು ಎರಡು ವಾರ ಮನೆಯಲ್ಲೇ ರೆಸ್ಟ್​ ಮಾಡಿದ್ದರು. ಕರ್ನಾಟಕದಲ್ಲಿ ಕೊರೊನಾ ಹೆಚ್ಚಿದ್ದರಿಂದ ಶೂಟಿಂಗ್ಗೆ​ ಬ್ರೇಕ್​ ಹಾಕಲಾಗಿದೆ. ಹೀಗಾಗಿ, ವೀಕೆಂಡ್​ ಶೂಟ್​ ಮಾಡೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮೇ 3ರ ಎಪಿಸೋಡ್​ನಲ್ಲಿ ಸುದೀಪ್​ ಧ್ವನಿ ಬಿಗ್​ ಬಾಸ್​ ಮನೆಯವರಿಗೆ ಕೇಳಿದೆ.

ಬೆಳಗ್ಗೆ ಬಿಗ್​ ಬಾಸ್​ ಸ್ಪರ್ಧಿಗಳಿಗೆ ಕೇಳಿಸಿಕೊಳ್ಳಿ ಎಂಬ ಪತ್ರ ಸಂದೇಶ ಬಂದಿತ್ತು. ಎರಡನೇ ಪತ್ರದಲ್ಲಿ ಚೆನ್ನಾಗಿ ಕೇಳಿಸಿಕೊಳ್ಳಿ ಎಂದಿತ್ತು. ಅದರ ಅರ್ಥ ಏನು ಎಂದು ಸ್ಪರ್ಧಿಗಳೆಲ್ಲ ಆಲೋಚನೆ ಮಾಡುತ್ತಿರುವಾಗಲೇ ಸುದೀಪ್ ಅವರ ಧ್ವನಿ ಕೇಳಿಸಿದೆ. ಎಲ್ಲಾ ಸ್ಪರ್ಧಿಗಳಿಗೂ ಸುದೀಪ್​ ಕಿವಿಮಾತು ಹೇಳಿದ್ದಾರೆ.

ಮೊದಲು ವೈಷ್ಣವಿ ಅವರಿಗೆ ಸುದೀಪ್​ ಧ್ವನಿ ಬಂತು. ವೈಷ್ಣವಿ ನೀವು ನಿಮ್ಮ ಅಭಿಪ್ರಾಯ ಹೇಳ್ತೀರಾ. ಆ ಬಗ್ಗೆ ಖುಷಿ ಇದೆ. ಆದರೆ, ಹೀಟೆಡ್​ ಚರ್ಚೆ ಆದಾಗ ನಿಮ್ಮ ಮನಸ್ಸಿನಲ್ಲಿ ಏನಿರುತ್ತದೆಯೋ ಅದನ್ನು ಹೇಳಿ. ಇಲ್ಲ ಅಂದ್ರೆ ಇದೆಲ್ಲ ಹೆಪ್ಪುಗಟ್ಟಿ ಸರ್ಜರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ವೈಷ್ಣವಿ ಸಾಕಷ್ಟು ವಿಚಾರಗಳನ್ನು ತಮ್ಮ ಮನಸ್ಸಿನಲ್ಲೇ ಇಟ್ಟುಕೊಳ್ಳುತ್ತಾರೆ. 9ನೇ ವಾರ ಕ್ಯಾಪ್ಟನ್ಸಿ ಟಾಸ್ಕ್​ ವೇಳೆ ಜಗಳವಾಗಿತ್ತು. ಈ ಜಗಳ ನಡೆಯುವಾಗ ವೈಷ್ಣವಿ ಸೈಲೆಂಟ್​ ಆಗಿದ್ದರು. ಇದರಿಂದ ಸಾಕಷ್ಟು ತೊಂದರೆಗಳು ಸೃಷ್ಟಿ ಆದವು. ಆ ರೀತಿ ಮಾಡಬೇಡಿ. ಅದರಿಂದ ನಿಮಗೇ ತೊಂದರೆ ಎಂದು ಸುದೀಪ್​ ಪರೋಕ್ಷವಾಗಿ ಹೇಳಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್ ಹೆಸರು ದುರ್ಬಳಕೆ ಮಾಡಿಕೊಂಡ ಪ್ರಶಾಂತ್​ ಸಂಬರಗಿ; ಸುದೀಪ್ ಛೀಮಾರಿ

Kichcha Sudeep: ಸುದೀಪ್​ ಇಲ್ಲದೇ 3 ವಾರ ಮೈ ಮರೆತಿದ್ದ ಬಿಗ್​ ಬಾಸ್​ ಮಂದಿಗೆ ಛಾಟಿ ಬೀಸಿದ ಕಿಚ್ಚನ ವಾಯ್ಸ್​ ಮೆಸೇಜ್​

Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ