AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ವೇದಿಕೆ ಮೇಲೆ ಆರ್​ಸಿಬಿಗೆ ಆಲ್​ ದಿ ಬೆಸ್ಟ್​ ಅಂದ್ರು ಸುದೀಪ್​!

ಬಿಗ್​ ಬಾಸ್​ ಮನೆಯ ಕಡೆಯಿಂದ, ಬಿಗ್​ ಬಾಸ್​ ಸ್ಪರ್ಧಿಗಳ ಪರವಾಗಿ, ಬಿಗ್​ ಬಾಸ್​ ತಂತ್ರಜ್ಞರ ಪರವಾಗಿ ಸುದೀಪ್​ ಆರ್​ಸಿಬಿಗೆ ಆಲ್​ ದಿ ಬೆಸ್ಟ್ ಹೇಳಿದರು. ಇದಕ್ಕೆ ಬಿಗ್​ ಬಾಸ್​ ಸ್ಪರ್ಧಿಗಳು ಕೂಡ ಧ್ವನಿಗೂಡಿಸಿದರು.

ಬಿಗ್​ ಬಾಸ್​ ವೇದಿಕೆ ಮೇಲೆ ಆರ್​ಸಿಬಿಗೆ ಆಲ್​ ದಿ ಬೆಸ್ಟ್​ ಅಂದ್ರು ಸುದೀಪ್​!
ವಿರಾಟ್​ ಕೊಹ್ಲಿ-ಸುದೀಪ್​
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​|

Updated on: Apr 05, 2021 | 7:19 AM

Share

ಕಳೆದ 13 ಸೀಸನ್​ಗಳಿಂದ ಆರ್​ಸಿಬಿಗೆ ಕಪ್​ ಗೆಲ್ಲೋಕೆ ಸಾಧ್ಯವಾಗಿಲ್ಲ. ಆದರೆ, ಈ ಸಲ ಕಪ್​ ನಮ್ಮದೆ ಎನ್ನುವ ಸ್ಲೋಗನ್​ ಹೇಳೋಕೆ ಆರ್​ಸಿಬಿ ಫ್ಯಾನ್ಸ್​ ಮರೆತಿಲ್ಲ. ಏಪ್ರಿಲ್​ 19ರಿಂದ ಸೀಸನ್​ 14 ಆರಂಭವಾಗುತ್ತಿದೆ. ಐಪಿಎಲ್​ ಆರಂಭಕ್ಕೂ ಮೊದಲು ಕಿಚ್ಚ ಸುದೀಪ್​ ಬಿಗ್​ ಬಾಸ್ ಪರವಾಗಿ ಹಾಗೂ ಬಿಗ್​ ಬಾಸ್​ ಸ್ಪರ್ಧಿಗಳು, ತಂತ್ರಜ್ಞರ ಪರವಾಗಿ ಆರ್​ಸಿಬಿಗೆ ಆಲ್​ ದಿ ಬೆಸ್ಟ್​ ಹೇಳಿದ್ದಾರೆ.

ಶನಿವಾರ (ಏ.3) ಬಿಗ್​ ಬಾಸ್ ಮನೆಯಲ್ಲಿ ಮುಂಜಾನೆ ಐಪಿಎಲ್​ ಆ್ಯಂಥಮ್​ ಗೀತೆಯನ್ನು ಹಾಕಲಾಗಿತ್ತು. ಮನೆಯವರಿಗೆ ಇದು ಐಪಿಎಲ್​ ಸೀಸನ್​ 14ರ ಆ್ಯಂಥಮ್​ ಎಂಬುದು ಗೊತ್ತಾಗಿಲ್ಲ. ಇದನ್ನು ಸುದೀಪ್​ ಭಾನುವಾರ (ಏಪ್ರಿಲ್​ 04) ವಿವರಿಸಿದ್ದಾರೆ. ಶನಿವಾರ ಪ್ರಸಾರವಾದ ಗೀತೆ ಐಪಿಎಲ್​ನದ್ದು ಎಂದು ಹೇಳಿ, ಆ ಹಾಡಿನ ವಿಡಿಯೋ ಕೂಡ ಪ್ರಸಾರ ಮಾಡಿದ್ದರು. ಇದನ್ನು ಕೇಳಿದ ಕೂಡಲೇ ಬಿಗ್​ ಬಾಸ್​ ಮನೆಯ ಸ್ಪರ್ಧಿಗಳು ಸಖತ್​ ಎಗ್ಸೈಟ್​ ಆಗಿದ್ದಾರೆ.

ಮೊದಲ ಮ್ಯಾಚ್​ ಆರ್​ಸಿಬಿ vs ಮುಂಬೈ ನಡುವೆ ನಡೆಯಲಿದೆ ಎಂದು ಸುದೀಪ್​ ಮಾಹಿತಿ ನೀಡಿದರು. ರಘು ಗೌಡ ಆರ್​ಸಿಬಿ ಫ್ಯಾನ್​. ಕಳೆದ ಐಪಿಎಲ್​ ಸೀಸನ್​ನಲ್ಲಿ ಆರ್​ಸಿಬಿ ಬಗ್ಗೆ ಸಾಕಷ್ಟು ಪೋಸ್ಟ್​ ಹಾಕಿದ್ದಾರೆ. ಹೀಗಾಗಿ, ಅವರು ಈ ವಿಚಾರ ಕೇಳುತ್ತಿದ್ದಂತೆ ಸಖತ್​ ಖುಷಿಯಾಗಿದ್ದಾರೆ. ಅಷ್ಟೇ ಅಲ್ಲ, ಆರ್​ಸಿಬಿಗೆ ಆಲ್​ ​ದಿ ಬೆಸ್ಟ್​ ಎಂದು ​ಜೈಕಾರ ಹಾಕಿದ್ದಾರೆ.

ಬಿಗ್​ ಬಾಸ್​ ಮನೆಯ ಕಡೆಯಿಂದ, ಬಿಗ್​ ಬಾಸ್​ ಸ್ಪರ್ಧಿಗಳ ಪರವಾಗಿ, ಬಿಗ್​ ಬಾಸ್​ ತಂತ್ರಜ್ಞರ ಪರವಾಗಿ ಸುದೀಪ್​ ಆರ್​ಸಿಬಿಗೆ ಆಲ್​ ದಿ ಬೆಸ್ಟ್ ಹೇಳಿದರು. ಇದಕ್ಕೆ ಬಿಗ್​ ಬಾಸ್​ ಸ್ಪರ್ಧಿಗಳು ಕೂಡ ಧ್ವನಿಗೂಡಿಸಿದರು.

ಇನ್ನು, ಕಿಚ್ಚ ಸುದೀಪ್​ ಕೂಡ ಕ್ರಿಕೆಟ್ ಪ್ರಿಯರು. ಸ್ಯಾಂಡಲ್​ವುಡ್​ನಲ್ಲಿ ಕ್ರಿಕೆಟ್​ ಮ್ಯಾಚ್​ ನಡೆಸೋಕೆ ಇವರದೇ ನೇತೃತ್ವ. ಹೀಗಾಗಿ, ಇವರಿಗೆ ಕ್ರಿಕೆಟ್​ ಮೇಲೆ ಹೆಚ್ಚು ಆಸಕ್ತಿ ಇದೆ. ಆರ್​ಸಿಬಿ ಅವರ ಫೇವರಿಟ್​ ತಂಡ.

ಇದನ್ನೂ ಓದಿ: Bigg Boss Kannada: ​19ನೇ ವಯಸ್ಸಿಗೆ ಇದು ದೊಡ್ಡದು ಅಂದುಕೊಂಡ್ರಾ? ವಿಶ್ವನಿಗೆ ಸುದೀಪ್​ ಮಾತಿನ ಪಂಚ್​!

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು