AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ​19ನೇ ವಯಸ್ಸಿಗೆ ಇದು ದೊಡ್ಡದು ಅಂದುಕೊಂಡ್ರಾ? ವಿಶ್ವನಿಗೆ ಸುದೀಪ್​ ಮಾತಿನ ಪಂಚ್​!

Kichcha Sudeep: ವಿಶ್ವ ಕ್ಯಾಪ್ಟನ್​ ಆಗಿದ್ದಾಗ ಮನೆಯ ಸದಸ್ಯರಿಗೆ ಸ್ವಲ್ಪ ಕಷ್ಟದ ಟಾಸ್ಕ್​ಗಳನ್ನು ನೀಡಲಾಗಿತ್ತು. ಈ ಎಲ್ಲ ಸಂದರ್ಭಗಳನ್ನು ನಿಭಾಯಿಸುವಲ್ಲಿ ವಿಶ್ವ ಯಾಕೋ ವಿಫಲರಾದರು. ಆ ಬಗ್ಗೆ ವೀಕೆಂಡ್​ನಲ್ಲಿ ಚರ್ಚೆ ಆಗಿದೆ.

Bigg Boss Kannada: ​19ನೇ ವಯಸ್ಸಿಗೆ ಇದು ದೊಡ್ಡದು ಅಂದುಕೊಂಡ್ರಾ? ವಿಶ್ವನಿಗೆ ಸುದೀಪ್​ ಮಾತಿನ ಪಂಚ್​!
ವಿಶ್ವನಾಥ್​ - ಕಿಚ್ಚ ಸುದೀಪ್​ ಬಿಗ್​ ಬಾಸ್​
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ|

Updated on: Apr 04, 2021 | 5:42 PM

Share

ಈ ಬಾರಿ ಬಿಗ್​ ಬಾಸ್​ ಮನೆಗೆ ಕಾಲಿಟ್ಟ ಸ್ಪರ್ಧಿಗಳ ಪೈಕಿ ವಿಶ್ವನಾಥ್​ ಅತಿ ಕಿರಿಯ ವ್ಯಕ್ತಿ. ಗಾಯಕನಾಗಿರುವ ಅವರ ವಯಸ್ಸು ಕೇವಲ 19. ಅವರ ಜೊತೆ ಈಗ ಹಣಾಹಣಿ ನಡೆಸುತ್ತಿರುವವರೆಲ್ಲ ದೊಡ್ಡವರು. ಹಾಗಿದ್ದರೂ ಕೂಡ ವಿಶ್ವನಾಥ್​ ಚೆನ್ನಾಗಿ ಆಡುತ್ತಿದ್ದಾರೆ. ಎಷ್ಟರಮಟ್ಟಿಗೆಂದರೆ ಅವರಿಗೆ ಕ್ಯಾಪ್ಟನ್​ ಆಗುವ ಅವಕಾಶ ಕೂಡ ಸಿಕ್ಕಿತು. ಆದರೆ ಅವರು ಆ ಜವಾಬ್ದಾರಿ ನಿಭಾಯಿಸುವಲ್ಲಿ ಎಡವಿದರು ಎಂಬುದು ಕೂಡ ಅಷ್ಟೇ ನಿಜ. ಈ ಬಗ್ಗೆ ಸುದೀಪ್​ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ವಿಶ್ವ ಕ್ಯಾಪ್ಟನ್​ ಆಗಿದ್ದಾಗ ಮನೆಯ ಸದಸ್ಯರಿಗೆ ಸ್ವಲ್ಪ ಕಷ್ಟದ ಟಾಸ್ಕ್​ಗಳನ್ನು ನೀಡಲಾಗಿತ್ತು. ಪ್ರಶಾಂತ್​ ಸಂಬರಗಿ, ಶಂಕರ್​ ಅಶ್ವತ್ಥ್​ ಮುಂತಾದ ಹಿರಿಯರು ತುಂಬ ಆಕ್ರಮಣಕಾರಿಯಾಗಿ ನಡೆದುಕೊಂಡರು. ಅರವಿಂದ್​ ಮತ್ತು ಪ್ರಶಾಂತ್​ ನಡುವೆ ಮಾತಿಕ ಚಕಮಕಿ ಆಯಿತು. ಈ ಎಲ್ಲ ಸಂದರ್ಭಗಳನ್ನು ನಿಭಾಯಿಸುವಲ್ಲಿ ವಿಶ್ವನಾಥ್​ ಸ್ವಲ್ಪ ವಿಫಲರಾದರು. ಅದರ ಬಗ್ಗೆ ವೀಕೆಂಡ್​ನ ಕಿಚ್ಚನ ಪಂಚಾಯಿತಿಯಲ್ಲಿ ಚರ್ಚೆ ಆಗಿದೆ.

‘ನಿಮಗೆ ಕ್ಯಾಪ್ಟನ್​ ಆಗಿರೋಕೆ ಬರುತ್ತಿಲ್ಲ ಅಥವಾ ನಿಮ್ಮನ್ನು ಕ್ಯಾಪ್ಟನ್​ ಆಗಿ ಯಾರೂ ಸೀರಿಯಸ್​ ಆಗಿ ಪರಿಗಣಿಸಿಲ್ಲ. ನನಗೆ ಇದರಲ್ಲಿ ಎರಡನೆಯದು ಹೌದು ಎನಿಸುತ್ತಿದೆ. ಅವರು ನಿಮ್ಮನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದರೆ ಅದು ಅವರ ತಪ್ಪು. ಆದರೆ 19ನೇ ವಯಸ್ಸಿನವರು ಕ್ಯಾಪ್ಟನ್​ ಆಗಬಾರದು ಅಂತ ಎಲ್ಲದರೂ ನಿಯಮ ಇದೆಯಾ? 19ನೇ ವಯಸ್ಸಿಗೆ ಇಲ್ಲಿಯವರೆಗೆ ಬಂದಿದ್ದೇನೆ. ಇದೇ ದೊಡ್ಡದು. ಇಷ್ಟೇ ಸಾಕು ಎಂದುಕೊಂಡಿದ್ದೀರಾ’ ಎಂದು ವಿಶ್ವನಿಗೆ ಸುದೀಪ್​ ಪ್ರಶ್ನಿಸಿದರು.

‘ಇಲ್ಲ’ ಎಂಬ ಉತ್ತರ ವಿಶ್ವ ಅವರ ಕಡೆಯಿಂದ ಬಂತು. ‘ಹಾಗಾದರೆ ನಿಮ್ಮನ್ನು ತಡೆದಿದ್ದು ಯಾರು? ನಾಯಕತ್ವದಲ್ಲಿ ಒಂದು ಕ್ವಾಲಿಟಿ ಬೇಕು. ನಿರ್ಧಾರ ತಪ್ಪೋ ಸರಿಯೋ ಎಂಬುದನ್ನು ಆಮೇಲೆ ನೋಡಿಕೊಳ್ಳೋಣ. ಮೊದಲು ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ. ಆ ನಿರ್ಧಾರ ತೆಗೆದುಕೊಂಡ ಮೇಲೆ ಅದಕ್ಕೆ ಬದ್ಧರಾಗಿ ನಿಲ್ಲಬೇಕು. ಅದು ನಾಯಕರ ಗುಣ. ಇಲ್ಲಿ ಎಲ್ಲರೂ ಮನುಷ್ಯರೇ. ಕ್ಯಾಪ್ಟನ್ಸಿಯನ್ನು ನೀವು ಸಂಪಾದಿಸಿರುವುದು. ಮನೆಯ ಜವಾಬ್ದಾರಿ ನಿಮ್ಮ ಮೇಲಿದೆ. ಕ್ಯಾಪ್ಟನ್ಸಿ ಎಂದರೆ ಬರೀ ಇಮ್ಯೂನಿಟಿ, ಬೆಡ್​ರೂಮ್​ ಮತ್ತು ಕಾಫಿ ಅಷ್ಟೇ ಅಲ್ಲ’ ಎಂದು ಸುದೀಪ್​ ಛಾಟಿ ಬೀಸಿದರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಗೆ ಮತ್ತೊಂದಷ್ಟು ವೈಲ್ಡ್​ ಕಾರ್ಡ್​ ಎಂಟ್ರಿ; ಸುದೀಪ್​ ಕೊಟ್ರು ಸೂಚನೆ

ವೈಲ್ಡ್​ ಕಾರ್ಡ್​ ಎಂಟ್ರಿ ಬೇಡ; ಬಿಗ್​ ಬಾಸ್​ ಮನೆಯಲ್ಲಿ ಹೊಸ ಬೇಡಿಕೆ ಇಟ್ಟ ಸ್ಪರ್ಧಿಗಳು

(Bigg Boss Kannada updates: Kichcha Sudeep criticizes Vishwanath captaincy in BBK8)

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ