AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಇನ್ನೊಬ್ಬಳು ಹುಡುಗಿ ಬೇಕಿತ್ತು ಎಂದ ಮಂಜು! ಕಿಚ್ಚನ ತಿರುಗೇಟಿಗೆ ಲ್ಯಾಗ್​ ಗಪ್​ಚುಪ್​

Kichcha Sudeep: ಪ್ರತಿ ವೀಕೆಂಡ್​ನಲ್ಲಿ ಖುಷಿಖುಷಿಯಾಗಿ ಮಾತನಾಡುವ ಸುದೀಪ್​ ಅವರು ಏ.3ರಂದು ಯಾಕೋ ಕೊಂಚ ಗರಂ ಆಗಿದ್ದರು. ಮಂಜು ಆಡಿದ ಮಾತಿಗೆ ನಕ್ಕು ಸುಮ್ಮನಾಗುವ ಬದಲು ಸುದೀಪ್​ ಸ್ವಲ್ಪ ಅಸಮಾಧಾನ ತೋರಿಸಿದ್ದಾರೆ.

Bigg Boss Kannada: ಇನ್ನೊಬ್ಬಳು ಹುಡುಗಿ ಬೇಕಿತ್ತು ಎಂದ ಮಂಜು! ಕಿಚ್ಚನ ತಿರುಗೇಟಿಗೆ ಲ್ಯಾಗ್​ ಗಪ್​ಚುಪ್​
ಮಂಜು ಪಾವಗಡ
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ|

Updated on: Apr 04, 2021 | 4:43 PM

Share

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ ಅವರು ಹೆಚ್ಚು ಗಮನ ಸೆಳೆಯುತ್ತಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಅವರ ಮಾತುಗಳಿಂದ ಎಲ್ಲರಿಗೂ ಮನರಂಜನೆ ಸಿಗುತ್ತದೆ. ಆದರೆ ಎಲ್ಲ ಸಂದರ್ಭದಲ್ಲಿಯೂ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕೆಲವೊಮ್ಮೆ ಮಂಜು ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಬೇಕಾಗುತ್ತದೆ. ಐದನೇ ವಾರದ ವೀಕೆಂಡ್​ ಪಂಚಾಯಿತಿಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಸುದೀಪ್​ ಜೊತೆ ಮಾತನಾಡುವಾಗ ಮಂಜು ಎಡವಿದ್ದಾರೆ.

ಸದ್ಯ ಬಿಗ್​ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ ಆಗಿದೆ. ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್​ ಅವರು​ ದೊಡ್ಮನೆಗೆ ಪ್ರವೇಶ ನೀಡಿದ್ದಾರೆ. ಅವರ ಎಂಟ್ರಿ ಹೇಗಿತ್ತು ಎಂಬ ಬಗ್ಗೆ ಮನೆಯ ಎಲ್ಲ ಸದಸ್ಯರ ಬಳಿ ಸುದೀಪ್ ಅಭಿಪ್ರಾಯ ಕೇಳಿದ್ದಾರೆ. ಆಗ ಮಂಜು ಪಾವಗಡ ನೀಡಿದ ಉತ್ತರ ತುಂಬ ಫನ್ನಿಯಾಗಿತ್ತು. ಆದರೆ ಅದಕ್ಕೆ ನಕ್ಕು ಸುಮ್ಮನಾಗುವ ಬದಲು ಸುದೀಪ್​ ಸ್ವಲ್ಪ ಅಸಮಾಧಾನ ತೋರಿಸಿದ್ದಾರೆ.

‘ಚಕ್ರವರ್ತಿ ಚಂದ್ರಚೂಡ್​ ಬದಲಿಗೆ ವೈಲ್ಡ್​ ಕಾರ್ಡ್​ ಮೂಲಕ ಯಾರಾದರೂ ಹುಡುಗಿ ಬರಬಹುದಿತ್ತು ಎಂದುಕೊಂಡಿದ್ದೆ’ ಎಂದು ಮಂಜು ಹೇಳಿದರು. ‘ನಿಮಗೆ ಬಿಗ್​ ಬಾಸ್​ ಎಂದರೆ ಹೇಗೆ ಕಾಣಿಸುತ್ತಿದೆ?’ ಎಂದು ಸುದೀಪ್​ ತಿರಗೇಟು ನೀಡಿದರು. ‘ಮನೆಯಲ್ಲಿ ಹೆಣ್ಮಕ್ಕಳು ಇದ್ದರೆ ಓಡಾಡಿಕೊಂಡಿರುತ್ತಾರೆ. ನೋಡೋಕೆ ಚೆನ್ನಾಗಿರುತ್ತದೆ’ ಅಂತ ಮಂಜು ಸಮರ್ಥನೆ ಮಾಡಿಕೊಂಡರು. ‘ಇಷ್ಟು ಜನರಲ್ಲಿ ಯಾರು ಓಡಾಡಿಕೊಂಡಿದ್ದರೆ ನಿಮಗೆ ಖುಷಿ ಎನಿಸುತ್ತದೆ’ ಎಂದು ಸುದೀಪ್​ ಕೇಳಿದ್ದಕ್ಕೆ ದಿವ್ಯಾ ಸುರೇಶ್​ ಹೆಸರನ್ನು ಮಂಜು ಹೇಳಿದರು. ‘ಒಬ್ಬರು ಇದಾರಲ್ಲಾ ಸಾಕು ಬಿಡಿ’ ಎಂದರು ಸುದೀಪ್​.

ಇನ್ನು, ವೈಲ್ಡ್​ ಕಾರ್ಡ್​ ಬಗ್ಗೆ ವಿಶ್ವನಾಥ್​ ಮತ್ತು ದಿವ್ಯಾ ಕೂಡ ಪ್ರತಿಕ್ರಿಯೆ ನೀಡಿದರು. ‘35 ದಿನ ಹೋರಾಟ ಮಾಡಿ ನಾವು ಈ ಹಂತವನ್ನು ತಲುಪಿದ್ದೇನೆ. ಈಗ ಯಾರೋ ಬಂದು ಮಧ್ಯದಲ್ಲಿ ಆಟ ಶುರು ಮಾಡುವುದು ನ್ಯಾಯವಲ್ಲ ಎನಿಸುತ್ತದೆ’ ಎಂದು ವಿಶ್ವ ಹೇಳಿದ್ದಾರೆ. ಚಕ್ರವರ್ತಿ ಚಂದ್ರಚೂಡ್​ ಬಂದಮೇಲೆ ಕಷ್ಟ ಎನಿಸುತ್ತಿದೆ ಎಂದು ದಿವ್ಯಾ ಸುರೇಶ್​ ಹೇಳಿದ್ದಾರೆ.

ಪ್ರತಿ ವೀಕೆಂಡ್​ನಲ್ಲಿ ಖುಷಿಖುಷಿಯಾಗಿ ಮಾತನಾಡುವ ಸುದೀಪ್​ ಅವರು ಏ.3ರಂದು ಯಾಕೋ ಕೊಂಚ ಗರಂ ಆಗಿದ್ದರು. ಮಂಜು ದ್ವೇಷದ ಆಟ ಆಡಿದ್ದನ್ನು ಹಾಗೂ ಉಡಾಫೆಯ ಮಾತಾಡಿದನ್ನು ಕೂಡ ಸುದೀಪ್​ ಖಂಡಿಸಿದ್ದರು. ಇದೇ ವಿಚಾರಕ್ಕಾಗಿ ದಿವ್ಯಾಗೂ ಕಿಚ್ಚ ಕ್ಲಾಸ್​ ತೆಗೆದುಕೊಂಡರು. ನಂತರ ದಿವ್ಯಾ ಮತ್ತು ಮಂಜು ಕ್ಷಮೆ ಕೇಳಿದರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಗೆ ಮತ್ತೊಂದಷ್ಟು ವೈಲ್ಡ್​ ಕಾರ್ಡ್​ ಎಂಟ್ರಿ; ಸುದೀಪ್​ ಕೊಟ್ರು ಸೂಚನೆ

ವೈಲ್ಡ್​ ಕಾರ್ಡ್​ ಎಂಟ್ರಿ ಬೇಡ; ಬಿಗ್​ ಬಾಸ್​ ಮನೆಯಲ್ಲಿ ಹೊಸ ಬೇಡಿಕೆ ಇಟ್ಟ ಸ್ಪರ್ಧಿಗಳು

(Bigg Boss Kannada updates: Kichcha Sudeep receives hilarious comment from Manju Pavagada about Chakravarthy Chandrachud wild card entry)

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ