AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಹಾಡಿನಿಂದ ನಿರ್ದೇಶಕನ ಜೊತೆ ಶುರುವಾಯ್ತು ರಮ್ಯಾ ಕೃಷ್ಣ ಪ್ರೀತಿ

ಕೃಷ್ಣ ವಂಶಿ ಅವರು ಜನಪ್ರಿಯ ನಟಿ ರಮ್ಯಾ ಕೃಷ್ಣ ಅವರೊಂದಿಗಿನ ತಮ್ಮ ಪ್ರೇಮಕಥೆಯನ್ನು ಬಹಿರಂಗಪಡಿಸಿದ್ದಾರೆ. 'ಗುಲಾಬಿ' ಚಿತ್ರದ ಹಾಡುಗಳಿಂದ ಪ್ರೇರಿತರಾದ ರಮ್ಯಾ, ಮೊದಲ ಭೇಟಿಯ ನಂತರ ವಂಶಿ ಅವರೊಂದಿಗೆ ಸಂಪರ್ಕ ಸಾಧಿಸಿದರು. ಪೇಜರ್ ಮತ್ತು ಶೂಟಿಂಗ್ ಸ್ಥಳಗಳಲ್ಲಿ ಅವರ ಸಂಭಾಷಣೆ ಬೆಳೆಯಿತು. ಔಪಚಾರಿಕ ಪ್ರಪೋಸಲ್ ಇಲ್ಲದೆ, ಪರಸ್ಪರ ಪ್ರೀತಿಯಿಂದ ಅವರು ಸುಖಿ ಸಂಸಾರ ನಡೆಸುತ್ತಿದ್ದಾರೆ.

ಒಂದು ಹಾಡಿನಿಂದ ನಿರ್ದೇಶಕನ ಜೊತೆ ಶುರುವಾಯ್ತು ರಮ್ಯಾ ಕೃಷ್ಣ ಪ್ರೀತಿ
ರಮ್ಯಾ-ಕೃಷ್ಣ
 ಶ್ರೀಲಕ್ಷ್ಮೀ ಎಚ್
| Edited By: |

Updated on: May 02, 2026 | 8:02 AM

Share

ನಿರ್ದೇಶಕ ಕೃಷ್ಣ ವಂಶಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಜನಪ್ರಿಯ ನಟಿ ರಮ್ಯಾ ಕೃಷ್ಣ ಅವರ ಪ್ರೀತಿ ಮತ್ತು ಮದುವೆಯ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರೇಮಕಥೆ ‘ಗುಲಾಬಿ’ ಚಿತ್ರದ ಹಾಡುಗಳಿಂದ ಪ್ರಾರಂಭವಾಯಿತು ಎಂದು ಅವರು ಹೇಳಿದರು. ಟಿವಿಯಲ್ಲಿ ‘ಗುಲಾಬಿ’ಸಿನಿಮಾದ ಹಾಡುಗಳನ್ನು ನೋಡಿ ರಮ್ಯಾ ಕೃಷ್ಣ ಇಷ್ಟಪಟ್ಟರು. ಆ ಸಮಯದಲ್ಲಿ ಅವರು ಈಗಾಗಲೇ ದೊಡ್ಡ ತಾರೆಯಾಗಿದ್ದರು ಎಂದು ಕೃಷ್ಣ ವಂಶಿ ಹೇಳಿದರು.

‘ನಮಗೆಲ್ಲರಿಗೂ ಅವರ ಬಗ್ಗೆ ಗೌರವವಿತ್ತು, ನನಗೂ ಸಹ’ ಎಂದು ಅವರು ಹೇಳಿದರು.‘ನಿನ್ನೆ ಪೆಲ್ಲಡತ’ ಚಿತ್ರದ ಪಾತ್ರದ ಬಗ್ಗೆ ಲಕ್ಷ್ಮಿ ಅವರೊಂದಿಗೆ ಮಾತನಾಡಲು ಹೋದಾಗ ಇಬ್ಬರ ನಡುವಿನ ಮೊದಲ ಭೇಟಿಯಾಯಿತು ಎಂದು ಕೃಷ್ಣ ವಂಶಿ ಹೇಳಿದರು. ‘ರಮ್ಯಾ ಕೃಷ್ಣ ಸೆಟ್‌ನಲ್ಲಿದ್ದರು. ಜನಸಂದಣಿಯಿಂದಾಗಿ ಸ್ವಲ್ಪ ನಾಚಿಕೆಪಡುತ್ತಾ ಇದ್ದರು. ಅವರ ಜೊತೆ ಬ್ರಹ್ಮಾನಂದಂ ಇದ್ದರು. ನಂತರ ರಮ್ಯಾ ಕೃಷ್ಣ ಅವರು ಬ್ರಹ್ಮಾನಂದಂ ಬಳಿ ‘ದಯವಿಟ್ಟು ವಂಶಿಯನ್ನು ಪರಿಚಯಿಸಿ’ ಎಂದು ಕೇಳಿದರು.

ಪರಿಚಯದ ನಂತರ ರಮ್ಯಾ ಅವರು, ಕೃಷ್ಣ ವಂಶಿ ಬಳಿ ‘ಗುಲಾಬಿ” ಚಿತ್ರದ ಹಾಡುಗಳು ತುಂಬಾ ಚೆನ್ನಾಗಿವೆ, ತೆಲುಗಿನಲ್ಲಿ ಇಂತಹ ಹಾಡು ಹೊರಬರುತ್ತದೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ’ ಎಂದು ಹೊಗಳಿದರು. ರಮ್ಯಾ ಕೃಷ್ಣ ಬಳಿ ಸಿನಿಮಾ ನೋಡಿದ್ದೀರಾ ಎಂದು ಕೇಳಿದಾಗ, ‘ಟಿವಿಯಲ್ಲಿ ಮಾತ್ರ ಹಾಡುಗಳನ್ನು ನೋಡಿದ್ದೇನೆ’ ಎಂದು ಹೇಳಿದರು. ಅದೇ ದಿನ ಸಂಜೆ ರಮ್ಯಾಗಾಗಿ ಸಿನಿಮಾದ ವಿಶೇಷ ಶೋ ಆಯೋಜಿಸಲಾಯಿತು. ಅಂದಹಾಗೆ, ‘ಗುಲಾಬಿ’ ಚಿತ್ರವನ್ನು ಕೃಷ್ಣ ವಂಶಿ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ಈ ಕಲಾವಿದನ ಜೊತೆ ನಟಿಸೋದು ಎಂದರೆ ರಮ್ಯಾ ಕೃಷ್ಣಗೆ ಸಖತ್ ಭಯ

ಆ ದಿನಗಳಲ್ಲಿ ಹೆಚ್ಚು ಫೋನ್‌ಗಳು ಇಲ್ಲದ ಕಾರಣ, ಆರಂಭದಲ್ಲಿ ಪೇಜರ್‌ಗಳ ಮೂಲಕ ಸಂಭಾಷಣೆ ನಡೆಯುತ್ತಿತ್ತು ಎಂದು ಕೃಷ್ಣ ವಂಶಿ ನೆನಪಿಸಿಕೊಂಡಿದ್ದಾರೆ. ನಂತರ, ಅವರು ಶೂಟಿಂಗ್ ವೇಳೆ ಭೇಟಿ ಆದರು. ಇಬ್ಬರೂ ಪ್ರಪೋಸ್ ಮಾಡಿಕೊಂಡಿರಲಿಲ್ಲ. ಇಬ್ಬರ ಮಧ್ಯೆ ಏನೋ ಇದೆ ಎಂದು ಇಬ್ಬರಿಗೂ ಅನಿಸುತ್ತಿತ್ತಂತೆ. ಈಗ ಇಬ್ಬರೂ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಫಲ ಸಿಗಬೇಕು ಎಂದರೆ ನೀವು ಯಾವ ದಿನ ಉಪವಾಸ ಮಾಡಬೇಕು ಗೊತ್ತಾ?
ಫಲ ಸಿಗಬೇಕು ಎಂದರೆ ನೀವು ಯಾವ ದಿನ ಉಪವಾಸ ಮಾಡಬೇಕು ಗೊತ್ತಾ?
ಇಂದು ಈ ರಾಶಿಯವರು ಅನ್ಯರ ಮಾತಿಗೆ ಹೆಚ್ಚು ಒತ್ತು ಕೊಡಬೇಡಿ
ಇಂದು ಈ ರಾಶಿಯವರು ಅನ್ಯರ ಮಾತಿಗೆ ಹೆಚ್ಚು ಒತ್ತು ಕೊಡಬೇಡಿ
ಶೀಘ್ರವೇ ದರ ಏರಿಕೆ ಶಾಕ್​​?: ಪೆಟ್ರೋಲ್​​ ರೇಟ್​​ 5 ರೂ. ಏರಿಕೆ ಸಾಧ್ಯತೆ
ಶೀಘ್ರವೇ ದರ ಏರಿಕೆ ಶಾಕ್​​?: ಪೆಟ್ರೋಲ್​​ ರೇಟ್​​ 5 ರೂ. ಏರಿಕೆ ಸಾಧ್ಯತೆ
ಬೆಂಗಳೂರಿನಲ್ಲಿ ಮತ್ತೆ ಮಳೆ ಆರ್ಭಟ: ರಸ್ತೆಗಳು ಜಲಾವೃತ; ಜನ್ರು ಪರದಾಟ
ಬೆಂಗಳೂರಿನಲ್ಲಿ ಮತ್ತೆ ಮಳೆ ಆರ್ಭಟ: ರಸ್ತೆಗಳು ಜಲಾವೃತ; ಜನ್ರು ಪರದಾಟ
ತಾತನಾಗಿ ಬಡ್ತಿ ಪಡೆದ ಡಿಕೆ ಶಿವಕುಮಾರ್ ಫಸ್ಟ್ ರಿಯಾಕ್ಷನ್ ಹೇಗಿತ್ತು ನೋಡಿ
ತಾತನಾಗಿ ಬಡ್ತಿ ಪಡೆದ ಡಿಕೆ ಶಿವಕುಮಾರ್ ಫಸ್ಟ್ ರಿಯಾಕ್ಷನ್ ಹೇಗಿತ್ತು ನೋಡಿ
ಜಮ್ಮುವಿನ ಬಂಟ್ಲಾಬ್‌ನಲ್ಲಿ ಭೀಕರ ಅಪಘಾತ; ಸೇತುವೆ ಕುಸಿದು 7 ಜನ ಸಾವು
ಜಮ್ಮುವಿನ ಬಂಟ್ಲಾಬ್‌ನಲ್ಲಿ ಭೀಕರ ಅಪಘಾತ; ಸೇತುವೆ ಕುಸಿದು 7 ಜನ ಸಾವು
ದಂಡ ಕಟ್ಟಿದ ಬಳಿಕ ಫಾರ್ಮ್​ಗೆ ಮರಳಿದ ರಿಯಾನ್ ಪರಾಗ್
ದಂಡ ಕಟ್ಟಿದ ಬಳಿಕ ಫಾರ್ಮ್​ಗೆ ಮರಳಿದ ರಿಯಾನ್ ಪರಾಗ್
ಇರಾನ್​ ಪರಿಸ್ಥಿತಿ ಹೇಗಿದೆ?ಯುದ್ಧದ ನೆಲದಿಂದ ವರದಿ ಮಾಡಿದ ಟಿವಿ9 ರಿಪೋರ್ಟರ್
ಇರಾನ್​ ಪರಿಸ್ಥಿತಿ ಹೇಗಿದೆ?ಯುದ್ಧದ ನೆಲದಿಂದ ವರದಿ ಮಾಡಿದ ಟಿವಿ9 ರಿಪೋರ್ಟರ್
ಡೆಲ್ಲಿ ವಿರುದ್ಧ ಐದೇ ಎಸೆತಗಳಿಗೆ ಸುಸ್ತಾದ ಜೈಸ್ವಾಲ್, ವೈಭವ್
ಡೆಲ್ಲಿ ವಿರುದ್ಧ ಐದೇ ಎಸೆತಗಳಿಗೆ ಸುಸ್ತಾದ ಜೈಸ್ವಾಲ್, ವೈಭವ್
RV ರಸ್ತೆ-ಸಿಲ್ಕ್ ಬೋರ್ಡ್ ಡಬಲ್‌ ಡೆಕ್ಕರ್‌ ಫ್ಲೈಓವರ್​​​ಗೆ ಚಾಲನೆ
RV ರಸ್ತೆ-ಸಿಲ್ಕ್ ಬೋರ್ಡ್ ಡಬಲ್‌ ಡೆಕ್ಕರ್‌ ಫ್ಲೈಓವರ್​​​ಗೆ ಚಾಲನೆ