AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಮಾಶ್ರೀ ಹೇಳಿದ ಆ ಒಂದು ಮಾತಿಗೆ ಕಣ್ಣೀರು ಹಾಕಿದ್ದ ಎಸ್​. ಜಾನಕಿ

ಖ್ಯಾತ ಗಾಯಕಿ ಎಸ್. ಜಾನಕಿ ನಿಧನದಿಂದ ಸಂಗೀತ ಲೋಕಕ್ಕೆ ದೊಡ್ಡ ನಷ್ಟವಾಗಿದೆ. ಕನ್ನಡದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಜಾನಕಿ, 2014ರ ರಾಜ್ಯೋತ್ಸವ ಪ್ರಶಸ್ತಿ ಸಂದರ್ಭದಲ್ಲಿ ಉಮಾಶ್ರೀ 'ಅಮ್ಮ' ಎಂದಾಗ ಭಾವುಕರಾಗಿದ್ದರು. ಅಭಿಮಾನಿಗಳ ಅಪಾರ ಪ್ರೀತಿಗೆ ಮನಸೋತು ಪ್ರಶಸ್ತಿ ಸ್ವೀಕರಿಸಿದ್ದಾಗಿ ಹೇಳಿದ್ದರು. ಅವರ ಕನ್ನಡಾಭಿಮಾನ ಮತ್ತು ಅಭಿಮಾನಿಗಳೊಂದಿಗಿನ ಬಾಂಧವ್ಯ ಸದಾ ಸ್ಮರಣೀಯ.

ಉಮಾಶ್ರೀ ಹೇಳಿದ ಆ ಒಂದು ಮಾತಿಗೆ ಕಣ್ಣೀರು ಹಾಕಿದ್ದ ಎಸ್​. ಜಾನಕಿ
ಉಮಾಶ್ರೀ-ಜಾನಕಿ
ರಾಜೇಶ್ ದುಗ್ಗುಮನೆ
|

Updated on:Jul 13, 2026 | 12:09 PM

Share

ಮುಖ್ಯಾಂಶಗಳು

  • ಗಾಯಕಿ ಎಸ್. ಜಾನಕಿ ನಿಧನ
  • ಸಂಗೀತ ಸಾಮ್ರಾಜ್ಯಕ್ಕೆ ತುಂಬಲಾರದ ನಷ್ಟ
  • ಕನ್ನಡ ನಾಡು ಮತ್ತು ಕನ್ನಡಿಗರ ಮೇಲೆ ಅಗಾಧ ಪ್ರೀತಿ

ಖ್ಯಾತ ಗಾಯಕಿ ಎಸ್​. ಜಾನಕಿ ಅವರು ಇಂದು (ಜುಲೈ 11) ರಾತ್ರಿ 7.30ರ ಸುಮಾರಿಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರು ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದರು. ಅವರ ನಿಧನವು ಸಂಗೀತ ಲೋಕಕ್ಕೆ ದೊಡ್ಡ ನಷ್ಟವನ್ನು ತಂದಿದೆ. ಜಾನಕಿ ಅವರು ಆಂಧ್ರದವರು. ಆದರೆ, ಅವರಿಗೆ ಕನ್ನಡದ ಬಗ್ಗೆ ವಿಶೇಷ ಗೌರವ ಇತ್ತು. ಇಲ್ಲಿನ ಜನರು ಕೊಡುತ್ತಿದ್ದ ಪ್ರೀತಿಗೆ ಅವರು ಮನಸೋತಿದ್ದರು. ಅವರು ಈ ಮೊದಲು ಕನ್ನಡದಲ್ಲೇ ಮಾತನಾಡಿ, ಇಲ್ಲಿನ ಜನರು ತೋರಿಸಿದ್ದ ಪ್ರೀತಿಗೆ ಖುಷಿ ಹೊರಹಾಕಿದ್ದರು.

2014ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕಾರ್ಯಕ್ರಮದಲ್ಲಿ ಜಾನಕಿ ಅವರು ಭಾಗಿ ಆಗಿ, ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ್ದರು. ‘ನಾನು 1957ರಲ್ಲಿ ಚಿತ್ರರಂಗಕ್ಕೆ ಬಂದೆ. ಅಂದಿನಿಂದ ಎಷ್ಟೋ ಹಾಡುಗಳನ್ನು ಹಾಡಿದ್ದೇನೆ. ನಾನು ಹೆಚ್ಚು ಹಾಡನ್ನು ಹಾಡಿದ್ದು ಕನ್ನಡದಲ್ಲಿ. ನಂತರ ಬೇರೆ ಭಾಷೆಗಳಲ್ಲಿ ಹಾಡಿದ್ದೇನೆ. ನಾನು ಅಭಿಮಾನಿಗಳ ಮನಸ್ಸಿನಲ್ಲಿ ತುಂಬಿಕೊಂಡಿದ್ದೇನೆ. ಅವರು ನನಗೆ ಕೊಡೋ ಪ್ರಶಸ್ತಿ ತುಂಬಾ ದೊಡ್ಡದು. ನನಗೂ ಒಂದು ಪ್ರಶಸ್ತಿ ಕೊಟ್ಟರು. ತುಂಬಾ ಖುಷಿ ಆಯಿತು’ ಎಂದಿದ್ದರು ಜಾನಕಿ.

‘ಉಮಾಶ್ರೀ ಅವರು ಕರೆ ಮಾಡಿ ನನಗೆ ಅವಾರ್ಡ್ ಕೊಡೋ ಬಗ್ಗೆ ಹೇಳಿದರು. ಬರಬೇಕು ಎಂದು ಆಹ್ವಾನ ಕೊಟ್ಟರು. ನನಗೆ ಕಮಿಟ್​​ಮೆಂಟ್ ಇದೆ, ಒಂದು ವಾರ ಆದರೂ ಮೊದಲು ಹೇಳಬೇಕಿತ್ತು ಎಂದಿದ್ದೆ. ಬರಲೇಬೇಕು ಎಂದು ಹಠ ಹಿಡಿದರು. ನೀವು ನನ್ನ ತಾಯಿ ಹಾಗೆ ಎಂದರು. ಅಮ್ಮ ಎಂದಾಗ ನನಗೆ ಅಳು ಬಂದುಹೋಯ್ತು. ಎಲ್ಲಾ ಅಭಿಮಾನಿಗಳು ನನ್ನ ಅಮ್ಮ ಎನ್ನುತ್ತಾರೆ. ಅಭಿಮಾನಿಗಳಿಗೋಸ್ಕರ ಪ್ರಶಸ್ತಿ ಸ್ವೀಕರಿಸಿದ್ದಾರೆ’ ಎಂದಿದ್ದರು ಜಾನಕಿ.

ಇದನ್ನೂ ಓದಿ: S Janaki Obituary: ಎಸ್ ಜಾನಕಿ ನಿಧನ: 20 ಭಾಷೆ, 48 ಸಾವಿರ ಹಾಡು, ಗಾಯಕಿ ನಡೆದುಬಂದ ಹಾದಿ

‘ನನಗೆ ಸಾಕಷ್ಟು ಫೋನ್ ಹಾಗೂ ಮೆಸೇಜ್​​ಗಳು ಬಂದಿದ್ದವು. ನೀವು ಪ್ರಶಸ್ತಿ ಸ್ವೀಕರಿಸಬೇಕು ಎಂದಿದ್ದರು. ನಿಮಗೋಸ್ಕರ ಅವಾರ್ಡ್ ಸ್ವೀಕರಿಸಿದ್ದೇನೆ’ ಎಂದು ಅವರು ಕನ್ನಡದಲ್ಲೇ ಮಾತನಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:56 pm, Sat, 11 July 26

Follow Us
ಖಾತೆ ಮಾಡಿಸಲು ಲಂಚ ಕೇಳಿದ ಆರೋಪ: GBA ಅಧಿಕಾರಿಗಳಿಗೆ ಸಾರ್ವಜನಿಕರಿಂದ ತರಾಟೆ
ಖಾತೆ ಮಾಡಿಸಲು ಲಂಚ ಕೇಳಿದ ಆರೋಪ: GBA ಅಧಿಕಾರಿಗಳಿಗೆ ಸಾರ್ವಜನಿಕರಿಂದ ತರಾಟೆ
ಆಷಾಢ ಮಾಸದ ಆಡಿ ಶುಕ್ರವಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಆಷಾಢ ಮಾಸದ ಆಡಿ ಶುಕ್ರವಾರ: ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ನಿವೃತ್ತ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗೆ ಗುಡ್​ನ್ಯೂಸ್: ವಿಡಿಯೋ ನೋಡಿ
ನಿವೃತ್ತ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗೆ ಗುಡ್​ನ್ಯೂಸ್: ವಿಡಿಯೋ ನೋಡಿ
ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ
ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ
ಮೀಸಲಾತಿ ವ್ಯವಸ್ಥೆ ಬಗ್ಗೆ RSS​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
ಮೀಸಲಾತಿ ವ್ಯವಸ್ಥೆ ಬಗ್ಗೆ RSS​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅನಾವರಣ ಆಗಲಿದೆ ಬೆಂಗಳೂರಿನ ಮೆಜೆಸ್ಟಿಕ್ ಲೋಕ
‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅನಾವರಣ ಆಗಲಿದೆ ಬೆಂಗಳೂರಿನ ಮೆಜೆಸ್ಟಿಕ್ ಲೋಕ
‘ಸಿಟಿ ಲೈಟ್ಸ್’ ಸಿನಿಮಾ ಚಿತ್ರೀಕರಣದ ಅನುಭವ ಹಂಚಿಕೊಂಡ ಮೋನಿಷಾ: ವಿಡಿಯೋ
‘ಸಿಟಿ ಲೈಟ್ಸ್’ ಸಿನಿಮಾ ಚಿತ್ರೀಕರಣದ ಅನುಭವ ಹಂಚಿಕೊಂಡ ಮೋನಿಷಾ: ವಿಡಿಯೋ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ: ನದಿ ತೀರಕ್ಕೆ ತೆರಳದಂತೆ ಕಟ್ಟೆಚ್ಚರ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ: ನದಿ ತೀರಕ್ಕೆ ತೆರಳದಂತೆ ಕಟ್ಟೆಚ್ಚರ
ಭೈರತಿ ಸುರೇಶ್ ವಿರುದ್ಧ ಅವಹೇಳನಕಾರಿ ಕಮೆಂಟ್: ಸಿದ್ದರಾಮಯ್ಯ ಅಭಿಮಾನಿ ಬಂಧನ
ಭೈರತಿ ಸುರೇಶ್ ವಿರುದ್ಧ ಅವಹೇಳನಕಾರಿ ಕಮೆಂಟ್: ಸಿದ್ದರಾಮಯ್ಯ ಅಭಿಮಾನಿ ಬಂಧನ
ಕಂಚಿನ ಪದಕ ವಿಜೇತೆ ಕನ್ನಡತಿ ಶಿಲ್ಪಾಗೆ ಅದ್ಧೂರಿ ಸ್ವಾಗತ
ಕಂಚಿನ ಪದಕ ವಿಜೇತೆ ಕನ್ನಡತಿ ಶಿಲ್ಪಾಗೆ ಅದ್ಧೂರಿ ಸ್ವಾಗತ