ಬಿಗ್ ಬಜೆಟ್ ಸಿನಿಮಾಗಳೇ ಮುಳುವಾದಾಗ; ಖ್ಯಾತ ನಿರ್ಮಾಣ ಸಂಸ್ಥೆಗೆ ಬ್ಯಾಕ್ ಟು ಬ್ಯಾಕ್ ಫ್ಲಾಪ್

ಲೈಕಾ ಪ್ರೊಡಕ್ಷನ್ ತಮಿಳಿನಲ್ಲಿ ಹಲವು ಸಿನಿಮಾ ನಿರ್ಮಾಣ ಮಾಡಿದೆ. 2014ರಲ್ಲಿ ರಿಲೀಸ್ ಆದ ‘ಕತ್ತಿ’ ಸಿನಿಮಾ ಮೂಲಕ ಸಿನಿಮಾ ನಿರ್ಮಾಣಕ್ಕೆ ಇಳಿದರು ‘ಲೈಕಾ ಪ್ರೊಡಕ್ಷನ್’ ಅವರು. ಇತ್ತೀಚೆಗೆ ಏಕೋ ನಿರ್ಮಾಣ ಸಂಸ್ಥೆಯು ನಷ್ಟವನ್ನು ಅನುಭವಿಸುತ್ತಿದೆ. ಬ್ಯಾಕ್ ಟು ಬ್ಯಾಕ್ ಫ್ಲಾಪ್​​ಗಳನ್ನು ನಿರ್ಮಾಣ ಸಂಸ್ಥೆ ನೀಡುತ್ತಿದೆ.

ಬಿಗ್ ಬಜೆಟ್ ಸಿನಿಮಾಗಳೇ ಮುಳುವಾದಾಗ; ಖ್ಯಾತ ನಿರ್ಮಾಣ ಸಂಸ್ಥೆಗೆ ಬ್ಯಾಕ್ ಟು ಬ್ಯಾಕ್ ಫ್ಲಾಪ್
ಲೈಚಾ ಪ್ರೊಡಕ್ಷನ್ ಹೌಸ್ ಸಿನಿಮಾಗಳು
Edited By:

Updated on: Oct 17, 2024 | 8:19 AM

ತಮಿಳನ ಖ್ಯಾತ ನಿರ್ಮಾಣ ಸಂಸ್ಥೆಗಳಲ್ಲಿ ‘ಲೈಕಾ ಪ್ರೊಡಕ್ಷನ್ಸ್​’ ಕೂಡ ಒಂದು. ಈ ನಿರ್ಮಾಣ ಸಂಸ್ಥೆ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದೆ. ಆದರೆ, ಇತ್ತೀಚೆಗೆ ಏಕೋ ನಿರ್ಮಾಣ ಸಂಸ್ಥೆಯು ನಷ್ಟವನ್ನು ಅನುಭವಿಸುತ್ತಿದೆ. ಬ್ಯಾಕ್ ಟು ಬ್ಯಾಕ್ ಫ್ಲಾಪ್​​ಗಳನ್ನು ನಿರ್ಮಾಣ ಸಂಸ್ಥೆ ನೀಡುತ್ತಿದೆ. ಕಮಲ್ ಹಾಸನ್ ಬಳಿಕ ರಜನಿಕಾಂತ್ ಕೂಡ ಚಿತ್ರಕ್ಕೆ ಹೊರೆ ಆಗಿದ್ದಾರೆ.

ಲೈಕಾ ಪ್ರೊಡಕ್ಷನ್ ತಮಿಳಿನಲ್ಲಿ ಹಲವು ಸಿನಿಮಾ ನಿರ್ಮಾಣ ಮಾಡಿದೆ. 2014ರಲ್ಲಿ ರಿಲೀಸ್ ಆದ ‘ಕತ್ತಿ’ ಸಿನಿಮಾ ಮೂಲಕ ಸಿನಿಮಾ ನಿರ್ಮಾಣಕ್ಕೆ ಇಳಿದರು ‘ಲೈಕಾ ಪ್ರೊಡಕ್ಷನ್’ ಅವರು. ಎಆರ್ ಮುರುಗದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ದಳಪತಿ ವಿಜಯ್, ಸಮಂತಾ ಈ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದ ಯಶಸ್ಸಿನ ಬಳಿಕ ಲೈಕಾ ಹಿಂದಿರುಗಿ ನೋಡಲೇ ಇಲ್ಲ.

ಆ ಬಳಿಕ ‘ಎನಕ್ಕು ಇನ್ನೋರು ಪೇರು ಇರುಕ್ಕು’ ಸಿನಿಮಾ ಮಾಡಿದರು. 10 ವರ್ಷಗಳ ಜರ್ನಿಯಲ್ಲಿ ಹಲವು ಸಿನಿಮಾಗಳನ್ನು ‘ಲೈಕಾ’ ಕಡೆಯಿಂದ ನಿರ್ಮಾಣ ಆಗಿದೆ. ಆದರೆ, ಇತ್ತೀಚೆಗೆ ಅವರಿಗೆ ಅದೃಷ್ಟವು ಕೈ ಹಿಡಿಯುತ್ತಿಲ್ಲ. ಈ ಸಂಸ್ಥೆ ನಿರ್ಮಾಣ ಮಾಡಿದ ‘ರಾಮ ಸೇತು’, ‘ಚಂದ್ರಮುಖಿ 2’ ರೀತಿಯ ಸಿನಿಮಾಗಳು ಸೋಲು ಕಂಡವು.

ಈ ವರ್ಷ ‘ಲಾಲ್ ಸಲಾಂ’ ಬಿಡುಗಡೆ ಆಯಿತು. 100 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ಈ ಚಿತ್ರವು ಸಾಕಷ್ಟು ನಷ್ಟವನ್ನು ಅನುಭವಿಸಿತು ಎಂದೇ ಹೇಳಬಹುದು. ‘ಇಂಡಿಯನ್ 2’ ಚಿತ್ರವು ಕಮಲ್ ಹಾಸನ್ ನಟಿಸಿದ್ದರು. ಶಂಕರ್ ಅವರು ಈ ಚಿತ್ರವನ್ನು ನಿರ್ದೇಶನವನ್ನು ಮಾಡಿದ್ದರು. ಈಗ ‘ವೆಟ್ಟೈಯಾನ್’ ಕೂಡ ಅವರಿಗೆ ಹೊಡೆತಕೊಟ್ಟಿದೆ. ಈ ಸಿನಿಮಾದಲ್ಲಿ ರಜನಿಕಾಂತ್​ಗೆ ದೊಡ್ಡ ಸಂಭಾವನೆಯನ್ನೇ ಕೊಡಲಾಗಿದೆ.

ಇದನ್ನೂ ಓದಿ: ಆತ್ಮಹತ್ಯೆಗೂ ಮೊದಲು ಮಕ್ಕಳಿಗೆ ಕರೆ ಮಾಡಿದ್ದ ಮಲೈಕಾ ತಂದೆ; ತೋಡಿಕೊಂಡ ದುಃಖವೇನು?

ಈಗ ‘ಲೈಕಾ’ದವರು ‘ಇಂಡಿಯನ್ 3’ ಮಾಡುತ್ತಿದ್ದಾರೆ. ಥಿಯೇಟರ್​ನಲ್ಲಿ ಸಿನಿಮಾ ಮಾಡಿ ಲಾಸ್ ಮಾಡಿಕೊಳ್ಳಬಾರದು ಎಂದು ಅವರು ನಿರ್ಧಾರ ಮಾಡಿದಂತೆ. ಈ ಕಾರಣದಿಂದಲೇ ‘ಇಂಡಿಯನ್ 3’ ಚಿತ್ರದ ಬಿಸ್ನೆಸ್​ನಲ್ಲಿ ನಷ್ಟ ಮಾಡಿಕೊಳ್ಳಬಾರದು ಎನ್ನುವ ಕಾರಣಕ್ಕೆ ‘ಲೈಕಾ ಪ್ರೊಡಕ್ಷನ್’ ಇದನ್ನು ನೇರವಾಗಿ ಒಟಿಟಿಗೆ ತರುತ್ತಿದೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆ ಒಳ್ಳೆಯ ಕತೆಗಳನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us