AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗುಂಟೂರು ಸಿನಿಮಾ’ ಬಜೆಟ್​ಗಿಂತಲೂ ಮಹೇಶ್ ಬಾಬು ಸಂಭಾವನೆ ಹೆಚ್ಚು!

Mahesh Babu: ‘ಗುಂಟೂರು ಖಾರಂ’ ಸಿನಿಮಾದ ಬಜೆಟ್ ಎಷ್ಟು? ಆ ಸಿನಿಮಾಕ್ಕೆ ಮಹೇಶ್ ಬಾಬು ಪಡೆದ ಸಂಭಾವನೆ ಎಷ್ಟು?

‘ಗುಂಟೂರು ಸಿನಿಮಾ’ ಬಜೆಟ್​ಗಿಂತಲೂ ಮಹೇಶ್ ಬಾಬು ಸಂಭಾವನೆ ಹೆಚ್ಚು!
ಮಂಜುನಾಥ ಸಿ.
|

Updated on: Jan 18, 2024 | 5:44 PM

Share

ಮಹೇಶ್ ಬಾಬು (Mahesh Babu) ನಟನೆಯ ‘ಗುಂಟೂರು ಸಿನಿಮಾ’ (Gunturu Kaaram) ಕಳೆದ ಸಂಕ್ರಾಂತಿಗೆ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಭಾರಿ ಪ್ರಮಾಣದ ಕಲೆಕ್ಷನ್ ಅನ್ನು ಸಿನಿಮಾ ಮಾಡಿಲ್ಲವಾದರೂ ಸಿನಿಮಾ ಯಶಸ್ವಿಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮಹೇಶ್ ಬಾಬು ಅಂತೂ, ಸಿನಿಮಾ ಯಶಸ್ವಿಯಾಗಿರುವ ಖುಷಿಗೆ ಚಿತ್ರತಂಡಕ್ಕೆ ತಮ್ಮ ಮನೆಯಲ್ಲಿ ಪಾರ್ಟಿ ಸಹ ನೀಡಿದ್ದಾರೆ. ಅಂದಹಾಗೆ ಈ ಸಿನಿಮಾ ನಿರ್ಮಾಣಕ್ಕೆ ಖರ್ಚಾದ ಒಟ್ಟು ಮೊತ್ತದಲ್ಲಿ ಅರ್ಧದಷ್ಟು ಮೊತ್ತವನ್ನು ಮಹೇಶ್ ಬಾಬು ಒಬ್ಬರಿಗೇ ಸಂಭಾವನೆ ರೂಪದಲ್ಲಿ ನೀಡಲಾಗಿದೆಯಂತೆ.

‘ಗುಂಟೂರು ಖಾರಂ’ ಪ್ರಚಾರ ಎಲ್ಲ ಸೇರಿಸಿ ಸುಮಾರು 200 ಕೋಟಿ ಖರ್ಚು ಮಾಡಲಾಗಿದೆ ಎಂಬ ಮಾಹಿತಿ ವಿಕಿಪೀಡಿಯಾನಲ್ಲಿದೆ. ಇದರಲ್ಲಿ ಮಹೇಶ್ ಬಾಬು ಸೇರಿದಂತೆ ಇತರೆ ನಟರ ಸಂಭಾವನೆಯೂ ಸೇರಿದೆ. ಯಾವುದೇ ಭಾರಿ ಲೊಕೇಶನ್​ಗಳಲ್ಲಿ, ದೊಡ್ಡ ಸೆಟ್​ಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿಲ್ಲ, ವಿಎಫ್​ಎಕ್ಸ್​ಗಳು ಸಹ ಸಿನಿಮಾದಲ್ಲಿಲ್ಲ. ಹಾಗಾಗಿ ಸಿನಿಮಾದ ಬಜೆಟ್​ 200 ಕೋಟಿ ಅಲ್ಲ ಬದಲಿಗೆ 150 ರಿಂದ 160 ಆಗಿರಬಹುದೆಂಬ ಲೆಕ್ಕಾಚಾರವೂ ಇದೆ.

ಇನ್ನು ಈ ಸಿನಿಮಾಕ್ಕೆ ಮಹೇಶ್ ಬಾಬು ಭಾರಿ ಮೊತ್ತದ ಸಂಭಾವನೆ ಪಡೆದುಕೊಂಡಿದ್ದಾರೆ. ಮಾಹಿತಿಯಂತೆ ಸುಮಾರು 80 ಕೋಟಿ ರೂಪಾಯಿ ಸಂಭಾವನೆಯನ್ನು ಮಹೇಶ್ ಬಾಬು ಈ ಸಿನಿಮಾಕ್ಕೆ ಪಡೆದುಕೊಂಡಿದ್ದಾರಂತೆ. ಇದು ಸಿನಿಮಾದ ಒಟ್ಟು ಬಜೆಟ್​ನ ಅರ್ಧದಷ್ಟು ಮೊತ್ತ. ಇತರೆ ನಟರ ಸಂಭಾವನೆ, ಪ್ರಚಾರವನ್ನು ಕೈಬಿಟ್ಟರೆ, ಸಿನಿಮಾದ ಚಿತ್ರೀಕರಣಕ್ಕೆ ಎಷ್ಟು ಖರ್ಚಾಗಿದೆಯೋ ಅದಕ್ಕಿಂತಲೂ ಹೆಚ್ಚಿನ ಸಂಭಾವನೆಯನ್ನು ಮಹೇಶ್ ಬಾಬು ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ:ಖಾಸಗಿ ಜೆಟ್, ಐಷಾರಾಮಿ ಮನೆ, ಸ್ವಂತ ಥಿಯೇಟರ್; ಮಹೇಶ್ ಬಾಬು ಒಟ್ಟೂ ಆಸ್ತಿ ಎಷ್ಟು?

ಮಹೇಶ್ ಬಾಬು, ಭಾರಿ ಸಂಖ್ಯೆಯ ಅಭಿಮಾನಿಗಳಿರುವ ನಟರಲ್ಲಿ ಒಬ್ಬರು. ಅದರಲ್ಲಿಯೂ ಮಹೇಶ್ ಬಾಬುಗೆ ಮಹಿಳಾ ಅಭಿಮಾನಿಗಳ ಸಂಖ್ಯೆ ದೊಡ್ಡ ಸಂಖ್ಯೆಯಲ್ಲಿದೆ. ಮಹೇಶ್ ಬಾಬು ಸಿನಿಮಾಕ್ಕೆ ಮಹಿಳೆಯರು, ಕುಟುಂಬಸ್ಥರು ಚಿತ್ರಮಂದಿರಕ್ಕೆ ಆಗಮಿಸುತ್ತಾರೆಂಭ ನಂಬಿಕೆ ಇದೆ. ಅಲ್ಲದೆ ಇತರೆ ನಟರ ಸಿನಿಮಾಗಳಿಗಿಂತಲೂ ಹೆಚ್ಚಿನ ಮೊತ್ತಕ್ಕೆ ಮಹೇಶ್ ಬಾಬು ಸಿನಿಮಾಗಳ ಸ್ಯಾಟಲೈಟ್ ಹಕ್ಕು ಮಾರಾಟವಾಗುತ್ತದೆ ಎಂಬ ಮಾತು ಸಹ ಇದೆ. ಹಾಗಾಗಿ ಮಹೇಶ್ ಬಾಬು ಪ್ಯಾನ್ ಇಂಡಿಯಾ ಸಿನಿಮಾ ಸ್ಟಾರ್ ಎಂದು ಇನ್ನೂ ಅನ್ನಿಸಿಕೊಳ್ಳದಿದ್ದರೂ ಸಹ ಭಾರಿ ಮೊತ್ತದ ಸಂಭಾವನೆಯನ್ನೇ ಪಡೆಯುತ್ತಾರೆ.

ಮಹೇಶ್ ಬಾಬು ಪ್ರಸ್ತುತ ರಾಜಮೌಳಿ ಸಿನಿಮಾಕ್ಕಾಗಿ ತಯಾರಿ ಆರಂಭಿಸಿದ್ದಾರೆ. ಈ ಸಿನಿಮಾ ಮೂಲಕ ಗ್ಲೋಬಲ್ ಸ್ಟಾರ್ ಆಗಲು ತಯಾರಾಗುತ್ತಿದ್ದಾರೆ. ರಾಜಮೌಳಿ ಜೊತೆಗಿನ ಸಿನಿಮಾಕ್ಕೆ ಮಹೇಶ್ ಬಾಬು ಸುಮಾರು 200 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮಹೇಶ್ ಬಾಬುಗಿಂತಲೂ ಹೆಚ್ಚು ಸಂಭಾವನೆಯನ್ನು ರಾಜಮೌಳಿ ಪಡೆಯಲಿದ್ದಾರೆ ಎಂಬ ಮಾತು ಸಹ ಇದೆ. ಒಂದೊಮ್ಮೆ ಇದು ನಿಜವಾದರೆ ಸ್ಟಾರ್ ನಟನಿಗಿಂತಲೂ ನಿರ್ದೇಶಕ ಹೆಚ್ಚು ಸಂಭಾವನೆ ಪಡೆದಂತಾಗುತ್ತದೆ. ಇದು ಭಾರತ ಚಿತ್ರರಂಗದ ಅಪರೂಪದ ಘಟನೆಯಾಗಲಿದೆ.

‘ಗುಂಟೂರು ಖಾರಂ’ ಸಿನಿಮಾವನ್ನು ತ್ರಿವಿಕ್ರಮ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಮಹೇಶ್ ಬಾಬು ಜೊತೆಗೆ ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದಾರೆ. ರಮ್ಯಕೃಷ್ಣ, ಪ್ರಕಾಶ್ ರೈ ಇನ್ನೂ ಹಲವು ನಟರು ಈ ಸಿನಿಮಾದಲ್ಲಿದ್ದಾರೆ. ಸಿನಿಮಾವನ್ನು ರಾಧಾ ಕೃಷ್ಣ ನಿರ್ಮಾಣ ಮಾಡಿದ್ದು ದಿಲ್ ರಾಜು ವಿತರಣೆ ಮಾಡಿದ್ದರು. ಸಿನಿಮಾದ ಕಲೆಕ್ಷನ್ 200 ಕೋಟಿಯನ್ನು ದಾಟಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ