AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೃದಯಾಘಾತದಿಂದ ಜ್ಯೂ. ಎನ್​ಟಿಆರ್​ ಆಪ್ತ ನಿರ್ಮಾಪಕ ಮಹೇಶ್​ ಎಸ್​. ಕೊನೆರು ನಿಧನ

ಸ್ಟಾರ್​ ನಟ ಜ್ಯೂ. ಎನ್​ಟಿಆರ್​ ಅವರಿಗೆ ಪರ್ಸನಲ್​ ಪಿಆರ್​ಓ ಆಗಿ ಮಹೇಶ್​ ಎಸ್​. ಕೊನೆರು ಅವರು ಕಾರ್ಯ ನಿರ್ವಹಿಸುತ್ತಿದ್ದರು. ಮಹೇಶ್​ ಸಾವಿನ ಸುದ್ದಿ ಕೇಳಿ ಜ್ಯೂ. ಎನ್​ಟಿಆರ್​ ತೀವ್ರ ನೋವಿನಲ್ಲಿದ್ದಾರೆ.

ಹೃದಯಾಘಾತದಿಂದ ಜ್ಯೂ. ಎನ್​ಟಿಆರ್​ ಆಪ್ತ ನಿರ್ಮಾಪಕ ಮಹೇಶ್​ ಎಸ್​. ಕೊನೆರು ನಿಧನ
ಹೃದಯಾಘಾತದಿಂದ ಮಹೇಶ್ ಎಸ್. ಕೊನೆರು ನಿಧನ
TV9 Web
| Updated By: ಮದನ್​ ಕುಮಾರ್​|

Updated on:Oct 12, 2021 | 1:10 PM

Share

ತೆಲುಗು ಚಿತ್ರರಂಗದಲ್ಲಿ ಖ್ಯಾತಿ ಪಡೆದಿದ್ದ ನಿರ್ಮಾಪಕ ಮಹೇಶ್​ ಎಸ್​. ಕೊನೆರು ನಿಧನರಾಗಿದ್ದಾರೆ. ಮಂಗಳವಾರ (ಅ.12) ಅವರು ಹೃದಯಾಘಾತದಿಂದ ಮೃತರಾದರು ಎಂಬ ಕಹಿ ಸುದ್ದಿ ಕೇಳಿಬಂದಿದೆ. ಹಾರ್ಟ್​ ಅಟ್ಯಾಕ್​ ಆದಾಗ ಅವರು ವಿಶಾಖಪಟ್ಟಣದ ತಮ್ಮ ಮನೆಯಲ್ಲಿ ಇದ್ದರು ಎನ್ನಲಾಗಿದೆ. ಮಹೇಶ್​ ಕೊನೆರು ನಿಧನಕ್ಕೆ ಜ್ಯೂ. ಎನ್​ಟಿಆರ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ. ಇಡೀ ಚಿತ್ರರಂಗ ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದೆ.

ಮೊದಲು ಪತ್ರಕರ್ತರಾಗಿದ್ದ ಮಹೇಶ್​ ಕೊನೆರು ಅವರು ನಂತರ ಸೆಲೆಬ್ರಿಟಿಗಳಿಗೆ ಪಿಆರ್​ಓ ಆಗಿ ಕೆಲಸ ಮಾಡಲು ಆರಂಭಿಸಿದರು. ಬಳಿಕ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿದ್ದರು. ಸ್ಟಾರ್​ ನಟ ಜ್ಯೂ. ಎನ್​ಟಿಆರ್​ ಅವರಿಗೆ ಪರ್ಸನಲ್​ ಪಿಆರ್ ಆಗಿ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಮಹೇಶ್​ ಸಾವಿನ ಸುದ್ದಿ ಕೇಳಿ ಜ್ಯೂ. ಎನ್​ಟಿಆರ್​ ತೀವ್ರ ನೋವಿನಲ್ಲಿದ್ದಾರೆ.

‘ನನ್ನ ಆತ್ಮೀಯ ಗೆಳೆಯ ಮಹೇಶ್​ ಕೊನೆರು ಇನ್ನಿಲ್ಲ. ಇದನ್ನು ನಂಬಲ್ಲಾಗುತ್ತಿಲ್ಲ. ತೀವ್ರ ನೋವಿನೊಂದಿಗೆ ನಿಮಗೆ ಈ ವಿಷಯ ತಿಳಿಸುತ್ತಿದ್ದೇನೆ. ಈ ಸುದ್ದಿ ತಿಳಿದು ನನಗೆ ಶಾಕ್​ ಆಗಿದೆ ಮತ್ತು ಮಾತುಗಳೇ ಬರುತ್ತಿಲ್ಲ. ಅವರ ಕುಟುಂಬದವರು ಮತ್ತು ಆಪ್ತರಿಗೆ ನನ್ನ ಸಂತಾಪಗಳು’ ಎಂದು ಜ್ಯೂ. ಎನ್​ಟಿಆರ್​ ಟ್ವೀಟ್​ ಮಾಡಿದ್ದಾರೆ.

ನಂದಮೂರಿ ಕಲ್ಯಾಣ್​ರಾಮ್​ ನಟನೆಯ ‘118’ ಸಿನಿಮಾ ಮೂಲಕ ನಿರ್ಮಾಪಕರಾಗಿ ಮಹೇಶ್​ ಕೊನೆರು ಬಡ್ತಿ ಪಡೆದುಕೊಂಡಿದ್ದರು. ಅವರು ನಿರ್ಮಿಸಿದ್ದ ‘ತಿಮ್ಮರುಸು’ ಚಿತ್ರ ಜು.30ರಂದು ತೆರೆಕಂಡಿತ್ತು. ‘ಪೊಲೀಸ್​ ವಾರಿ ಹೆಚ್ಚರಿಕಾ’ ಮತ್ತು ‘ಸಭಕು ಸಮಸ್ಕಾರಂ’ ಚಿತ್ರಗಳು ನಿರ್ಮಾಣ ಹಂತದಲ್ಲಿ ಇರುವಾಗಲೇ ಅವರು ಕೊನೆಯುಸಿರು ಎಳೆದಿದ್ದಾರೆ.

ಇದನ್ನೂ ಓದಿ:

ಪ್ರೇಯಸಿ ಮಡಿಲಲ್ಲೇ ಪ್ರಾಣ ಬಿಟ್ರಾ ಸಿದ್ದಾರ್ಥ್​? ಹೃದಯಾಘಾತ ಆಗೋದಕ್ಕೂ ಮುನ್ನ ನಡೆದಿದ್ದೇನು? ಇಲ್ಲಿದೆ ವಿವರ

ಅನುಮಾನಾಸ್ಪದವಾಗಿ ಮೃತಪಟ್ಟ ‘ಕಾಂಚನ 3’ ನಟಿ; ಇದರ ಹಿಂದಿದೆ ಬಾಯ್​ಫ್ರೆಂಡ್​ ಕೈವಾಡ?

Published On - 12:55 pm, Tue, 12 October 21

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ