ಮೋಹನ್​ಲಾಲ್ ಅಸಲಿ ಮುಖ ಬಯಲು ಮಾಡ್ತೀನಿ, ಅವರ ಕುಕೃತ್ಯ ಬಯಲು ಮಾಡುವ ಪುಸ್ತಕ ಬರೀತೀನಿ: ಮಲಯಾಳಂ ನಟ

ಮಲಯಾಳಂ ಸ್ಟಾರ್ ನಟ ಮೋಹನ್​ಲಾಲ್ ಬಗ್ಗೆ ಅದೇ ಚಿತ್ರರಂಗದ ಹಿರಿಯ ನಟ ಶ್ರೀನಿವಾಸನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೋಹನ್​ಲಾಲ್ ಒಬ್ಬ ಬೂಟಾಟಿಕೆ ವ್ಯಕ್ತಿತ್ವವುಳ್ಳ ವ್ಯಕ್ತಿ, ಪುಸ್ತಕ ಬರೆದು ಆತನ ಕುಕೃತ್ಯಗಳನ್ನು ಬಹಿರಂಗಪಡಿಸುತ್ತೇನೆ ಎಂದಿದ್ದಾರೆ.

ಮೋಹನ್​ಲಾಲ್ ಅಸಲಿ ಮುಖ ಬಯಲು ಮಾಡ್ತೀನಿ, ಅವರ ಕುಕೃತ್ಯ ಬಯಲು ಮಾಡುವ ಪುಸ್ತಕ ಬರೀತೀನಿ: ಮಲಯಾಳಂ ನಟ
ಮೋಹನ್ ಲಾಲ್
Follow us
|

Updated on: Apr 03, 2023 | 6:58 PM

ಮಲಯಾಳಂ (Malayalam) ಸ್ಟಾರ್ ನಟ ಮೋಹನ್​ಲಾಲ್​ಗೆ (Mohanlal) ದೊಡ್ಡ ಅಭಿಮಾನಿ ವರ್ಗವಿದೆ. ಮಲಯಾಳಂ ಮಾತ್ರವೇ ಅಲ್ಲದೆ ಇತರೆ ಚಿತ್ರರಂಗಗಳಲ್ಲಿಯೂ ಮೋಹನ್​ಲಾಲ್​ ಅವರಿಗೆ ಗೌರವ, ಆದರಗಳಿವೆ. ಆದರೆ ಮಲಯಾಳಂ ನಟರೊಬ್ಬರು ಮೋಹನ್​ಲಾಲ್ ದುಷ್ಟ ವ್ಯಕ್ತಿ, ಅವರ ನಿಜಬಣ್ಣ ಬಯಲು ಮಾಡುತ್ತೇನೆ. ಸಾಯುವುದರೊಳಗೆ ಪುಸ್ತಕವೊಂದನ್ನು ಬರೆದು ಅದರಲ್ಲಿ ಮೋಹನ್​ಲಾಲ್ ಮಾಡಿರುವ ಕುಕೃತ್ಯಗಳನ್ನೆಲ್ಲ ಬಯಲು ಮಾಡುತ್ತೇನೆ ಎಂದಿದ್ದಾರೆ.

ಮಲಯಾಳಂ ಚಿತ್ರರಂಗದ ನಟ ಶ್ರೀನಿವಾಸನ್ (Sreenivasan) ಆಗಾಗ್ಗೆ ಮೋಹನ್​ಲಾಲ್​ ಬಗ್ಗೆ ಕಿಡಿ ಕಾರುತ್ತಲೇ ಇರುತ್ತಾರೆ. ಹಲವು ಸಿನಿಮಾಗಳಲ್ಲಿ ಈ ಇಬ್ಬರೂ ಒಟ್ಟಿಗೆ ನಟಿಸಿದ್ದಾರಾದರೂ ಇಬ್ಬರೂ ದೂರ-ದೂರ. ಇತ್ತೀಚೆಗೆ ಮಾಧ್ಯಮಗಳೊಟ್ಟಿಗೆ ಮಾತನಾಡುತ್ತಾ, ಮೋಹನ್​ಲಾಲ್ ಬೂಟಾಟಿಕೆಯುಳ್ಳ ವ್ಯಕ್ತಿ. ಆತನದ್ದು ಒಳಗೊಂಡು-ಹೊರಗೊಂದು ವ್ಯಕ್ತಿತ್ವ. ಸಾಯುವುದರ ಒಳಗೆ ಪುಸ್ತಕ ಬರೆದು ಆತನ ಕುಕೃತ್ಯಗಳನ್ನು ಬಯಲು ಮಾಡುತ್ತೇನೆ ಎಂದಿದ್ದಾರೆ.

”ಪ್ರೇಮ್ ನಜೀರ್, ತಾವು ನಿರ್ದೇಶನ ಮಾಡುವ ಸಿನಿಮಾದಲ್ಲಿ ನಟಿಸುವಂತೆ ಮೋಹನ್​ಲಾಲ್ ಅನ್ನು ಕೇಳಿದ್ದರು. ಕಡತ್ತನಂದನ್ ಅಂಬಾಡಿ ಸಿನಿಮಾ ಚಿತ್ರೀಕರಣದ ವೇಳೆ ಪ್ರೇಮ್ ನಜೀರ್, ಮೋಹನ್​ಲಾಲ್​ಗೆ ಕತೆ ಹೇಳಿದ್ದರು. ಆದರೆ ಮೋಹನ್​ಲಾಲ್ ಅದರಲ್ಲಿ ಆಸಕ್ತಿ ತೋರಿಸಿರಲಿಲ್ಲ. ಬಳಿಕ ನಾನು ನಟರಾಜನ್ ಹೆಸರಿನ ಮಧ್ಯವರ್ತಿ ಮೂಲಕ ಮೋಹನ್​ಲಾಲ್​ಗೆ ಕತೆ ಹೇಳಿಸಿದೆ. ಕತೆ ಕೇಳಿ ಮೋಹನ್​ಲಾಲ್ ಆತನನ್ನು ಬೈದು ಬಿಟ್ಟ ಆ ನಂತರ ಅದೇ ಕತೆಯನ್ನು ಸಂದೇಸಮ್ ಹೆಸರಿನ ಸಿನಿಮಾ ಮಾಡಿದೆವು ಅದೂ ಸೂಪರ್ ಹಿಟ್ ಆಯಿತು” ಎಂದಿದ್ದಾರೆ ಶ್ರೀನಿವಾಸನ್.

ಪ್ರೇಮ್ ನಜೀರ್ ಸಾಯುವ ಮುನ್ನ ಮೋಹನ್​ಲಾಲ್​ಗೆ ಅಡ್ವಾನ್ಸ್ ಕೊಟ್ಟಿದ್ದರು. ಆದರೆ ಕೆಲವು ದಿನಗಳ ಬಳಿಕ ಅವರು ನಿಧನ ಹೊಂದಿದರು. ಆಗ ಮೋಹನ್​ಲಾಲ್, ಪ್ರೇಮ್ ನಜೀರ್ ಅವರ ಸಿನಿಮಾದಲ್ಲಿ ನಟಿಸುವ ಆಸೆ ನನಗಿತ್ತು ಎಂದು ಮಾಧ್ಯಮಗಳ ಮುಂದೆ ಹೇಳಿದ್ದು ಕೇಳಿ ನನಗೆ ರೇಜಿಗೆ ಹುಟ್ಟಿತು ಎಂದಿದ್ದಾರೆ ಶ್ರೀನಿವಾಸನ್.

ಪ್ರೇಮ್ ನಜೀರ್ ಶಾನವಾಜ್ ಸಹ ಈ ಬಗ್ಗೆ ಮಾತನಾಡಿದ್ದು, ‘ಪ್ರೇಮ್ ನಜೀರ್ ಅವರಿಗೆ ಮೋಹನ್​ಲಾಲ್ ಜೊತೆ ಸಿನಿಮಾ ಮಾಡುವ ಆಸೆಯಿತ್ತು. ಆದರೆ ಯಾವ ಸಮಸ್ಯೆಗಳಿಂದ ಅದು ಸೆಟ್ಟೇರಲಿಲ್ಲ ಎಂಬುದು ಗೊತ್ತಿಲ್ಲ. ಮೋಹನ್​ಲಾಲ್ ಆಗೆಲ್ಲ ಪ್ರಿಯದರ್ಶನ್ ಜೊತೆಗೆ ಚಿತ್ರಕತೆ ಚರ್ಚೆಗೆ ಬರುತ್ತಿದ್ದರು, ಆದರೆ ಆ ಸಿನಿಮಾ ಯಾಕೆ ಪ್ರಾರಂಭವಾಗಲಿಲ್ಲ ಎಂಬುದು ಗೊತ್ತಿಲ್ಲ” ಎಂದಿದ್ದಾರೆ. ಶ್ರೀನಿವಾಸನ್ ಮಾಡುತ್ತಿರುವ ಆರೋಪಗಳು ನಿಜವೇ ಎಂಬ ಪ್ರಶ್ನೆಗೆ, ಸತ್ಯ ಏನೆಂಬುದು ನನಗೆ ಗೊತ್ತಿಲ್ಲ ಆದರೆ ಶ್ರೀನಿವಾಸನ್ ಅವರು ಹೇಳಿದ ಮೇಲೆ ನಂಬದೇ ಇರಲಾಗುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Mohanlal Birthday: ಕುಸ್ತಿಯಲ್ಲಿ ಸ್ಟೇಟ್​ ಚಾಂಪಿಯನ್​ ಆಗಿದ್ದ ಮೋಹನ್​ಲಾಲ್​ ನಂತರ ನಟನಾಗಿದ್ದು ಹೇಗೆ?

ಮೋಹನ್​ಲಾಲ್ ಬ್ಯುಸಿ ಸ್ಟಾರ್ ನಟರಲ್ಲಿ ಒಬ್ಬರು. ಮಲಯಾಳಂ ಮಾತ್ರವೇ ಅಲ್ಲದೆ ಹಲವು ಭಾಷೆಗಳಲ್ಲಿ ನಟಿಸುತ್ತಿದ್ದಾರೆ. ರಜನೀಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿರುವ ಮೋಹನ್​ಲಾಲ್, ಲಿಜೊ ಜೋಸ್ ನಿರ್ದೇಶನದ ಮಲೈಕೋಟ್ಟೈ ವಾಲಿಬಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ದೃಶ್ಯಂ ನಿರ್ದೇಶಕ ಜೀತು ಜೋಸೆಫ್ ನಿರ್ದೇಶನದ ರಾಮ್ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ ಲುಸಿಫರ್​ನ ಎರಡನೇ ಭಾಗದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಇದರ ಜೊತೆಗೆ ಮೋಹನ್​ಲಾಲ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಬಾರೋಜ್ ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ