AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖ್ಯಾತ ಧಾರಾವಾಹಿ ನಟಿ ಬಗ್ಗೆ ಮಂಜು ಪಾವಗಡ ಹೇಳಿದ ಒಗಟನ್ನು ನಿಮ್ಮಿಂದ ಬಿಡಿಸೋಕೆ ಸಾಧ್ಯವಾ?

ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳಿಗೆ ಒಂದು ಟಾಸ್ಕ್​ ನೀಡಲಾಗಿತ್ತು. ಈ ಟಾಸ್ಕ್​ ಪ್ರಕಾರ ಎರಡು ತಂಡಗಳು ಸೀಟ್​ ಮೇಲೆ ಕೂರಬೇಕು. ಮಂಜು ಪಾವಗಡ, ಶಮಂತ್​, ಪ್ರಶಾಂತ್​, ವೈಷ್ಣವಿ ಗೌಡ, ನಿಧಿ ಸುಬ್ಬಯ್ಯ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಎರಡು ತಂಡಗಳನ್ನು ಪ್ರತಿನಿಧಿಸಿ ಕೂತಿದ್ದಾರೆ.

ಖ್ಯಾತ ಧಾರಾವಾಹಿ ನಟಿ ಬಗ್ಗೆ ಮಂಜು ಪಾವಗಡ ಹೇಳಿದ ಒಗಟನ್ನು ನಿಮ್ಮಿಂದ ಬಿಡಿಸೋಕೆ ಸಾಧ್ಯವಾ?
ಮಂಜು ಪಾವಗಡ
TV9 Web
| Updated By: ಮದನ್​ ಕುಮಾರ್​|

Updated on: Jun 26, 2021 | 9:57 AM

Share

ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಸೆಕೆಂಡ್ ಇನ್ನಿಂಗ್ಸ್​ ಆರಂಭದಿಂದಲೇ ಉತ್ತಮ ಮೈಲೇಜ್​ ಪಡೆದುಕೊಂಡಿದೆ. ಮಂಜು ಪಾವಗಡ ಸಾಕಷ್ಟು ಮನರಂಜನೆ ನೀಡುತ್ತಿದ್ದಾರೆ. ಮನೆಗೆ ಬಂದ ದಿನದಿಂದಲೂ ಎಲ್ಲರನ್ನೂ ನಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈಗ ಅವರು ಹೀರೋಯಿನ್​ ಒಬ್ಬರ ಬಗ್ಗೆ ಒಂದು ಒಗಟನ್ನು ಹೇಳಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳಿಗೆ ಕುರ್ಚಿ ಪಾಲಿಟಿಕ್ಸ್​ ಟಾಸ್ಕ್​ ನೀಡಲಾಗಿತ್ತು. ಈ ಟಾಸ್ಕ್​ ಪ್ರಕಾರ ಎರಡು ತಂಡಗಳು ಸೀಟ್​ ಮೇಲೆ ಕೂರಬೇಕು. ಮಂಜು ಪಾವಗಡ, ಶಮಂತ್​, ಪ್ರಶಾಂತ್​, ವೈಷ್ಣವಿ ಗೌಡ, ನಿಧಿ ಸುಬ್ಬಯ್ಯ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಎರಡು ತಂಡಗಳನ್ನು ಪ್ರತಿನಿಧಿಸಿ ಕೂತಿದ್ದರು. ಈ ವೇಳೆ ಮಂಜು ಸಾಕಷ್ಟು ನಗಿಸುವ ಕೆಲಸ ಮಾಡಿದ್ದಾರೆ. ಅಲ್ಲದೆ, ಪಕ್ಕದಲ್ಲಿ ಕೂತಿದ್ದ ಶಮಂತ್​ಗೆ ಒಗಟೊಂದನ್ನು ಹೇಳಿದ್ದಾರೆ.

‘ಅವರು ಎಂಟೂವರೆ ಅಡಿ ಎತ್ತರ ಇದ್ದಾರೆ. ಈ ಹೀರೋಯಿನ್​ ಒಂದು ಸೀರಿಯಲ್​ ಮಾಡಿದ್ರು. 7-8 ವರ್ಷ ಬರೀ ಅದೇ ಸೌಂಡ್​. ಹೀರೋಯಿನ್​ ವರ್ಲ್ಡ್​​​​ ಫೇಮಸ್​. ಗೊತ್ತಿದ್ದೂ ಸುಮ್ಮನಿರುತ್ತಾರೆ. ಗಂಡ ಎಂದರೆ ಆಕೆಗೆ ಭಯ-ಭಕ್ತಿ. ಗಂಡ-ಹೆಂಡತಿ ಸಂಬಂಧ ಹೆಚ್ಚು ಗಟ್ಟಿ. ಈ ಹೀರೋಯಿನ್​ ಯಾರು? ಸೀರಿಯಲ್​ ಕೊನೆಯ ಪದ ‘..ಸಾಕ್ಷಿ’ ಮೊದಲು ‘ಬೆಂಕಿ’ ಇಟ್ಟಾಗ ಮುಂದೆ ‘ಸಾಕ್ಷಿ’ ಬರುತ್ತೆ’ ಎಂದರು.

ಈ ಮಾತನ್ನು ದಿವ್ಯಾ ಉರುಡುಗ, ವೈಷ್ಣವಿ ಹಾಗೂ ಶಮಂತ್ ಕೇಳುತ್ತಿದ್ದರು. ಈ ವೇಳೆ ‘ಅಗ್ನಿ ಸಾಕ್ಷಿ ಸನ್ನಿಧಿ ವೈಷ್ಣವಿ ಗೌಡ’ ಎಂದು ಒಗಟನ್ನು ಬಿಡಿಸಿದರು ಶಮಂತ್​. ಈ ಮಾತನ್ನು ಕೇಳಿದ ವೈಷ್ಣವಿ ಕೂಡ ಬಿದ್ದು ಬಿದ್ದು ನಕ್ಕರು.

‘ನಿಮ್ಮ ಉಪಕಾರ ಏಳು ಜನ್ಮ ಕಳೆದರೂ ಮರೆಯಲ್ಲ. ನಿಮ್ಮ ಕೈ ಕೊಡಿ. ಕಾಲು ಎಂದು ಹಿಡಿದುಕೊಳ್ತೇನೆ’ ಎಂದರು ವೈಷ್ಣವಿ. ಈ ಚರ್ಚೆ ಸಾಕಷ್ಟು ನಗು ತರಿಸಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಕ್ಯಾಪ್ಟನ್​ ರೂಂನಲ್ಲಿ ಭೂತ? ಕಪ್ಪಗಿನ ಆಕೃತಿ ಕಂಡು ಬೆಚ್ಚಿಬಿದ್ದ ಶಮಂತ್​

ವಾರ್ನಿಂಗ್​ ನಂತರವೂ ಬಿಗ್​ ಬಾಸ್​ ಹೆಸರು ದುರ್ಬಳಕೆ ಮಾಡಿಕೊಂಡ 11 ಸ್ಪರ್ಧಿಗಳು; ಕಾದಿದೆಯಾ ದೊಡ್ಡ ಶಿಕ್ಷೆ?

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!