AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಕ್ಯಾಪ್ಟನ್​ ರೂಂನಲ್ಲಿ ಭೂತ? ಕಪ್ಪಗಿನ ಆಕೃತಿ ಕಂಡು ಬೆಚ್ಚಿಬಿದ್ದ ಶಮಂತ್​

Bigg Boss Kannada: ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್​ ರೂಂ ಇದೆ. ಈ ಕ್ಯಾಪ್ಟನ್​ ರೂಂನಲ್ಲಿ ಐಷಾರಾಮಿ ವ್ಯವಸ್ಥೆ ಇದೆ. ಅಲ್ಲಿಯ ಬೆಡ್​ ಕೂಡ ವಿಶೇಷವಾಗಿದೆ.

ಬಿಗ್​ ಬಾಸ್​ ಕ್ಯಾಪ್ಟನ್​ ರೂಂನಲ್ಲಿ ಭೂತ? ಕಪ್ಪಗಿನ ಆಕೃತಿ ಕಂಡು ಬೆಚ್ಚಿಬಿದ್ದ ಶಮಂತ್​
ಶಮಂತ್​ ಬ್ರೋ ಗೌಡ
TV9 Web
| Edited By: |

Updated on:Jun 25, 2021 | 10:38 AM

Share

ಬಿಗ್​ ಬಾಸ್​ ಮನೆಯಲ್ಲಿ ವಿಚಿತ್ರ ಶಕ್ತಿ ಇದೆಯಾ? ದೆವ್ವ ಇದೆಯಾ? ಹೀಗೊಂದು ಚರ್ಚೆಯನ್ನು ಹುಟ್ಟು ಹಾಕುವ ಕೆಲಸವನ್ನು ಶಮಂತ್​ ಹೇಳಿಕೆ ಮಾಡಿದೆ. ಎರಡನೇ ಇನ್ನಿಂಗ್ಸ್​ನ ಮೊದಲ ದಿನ ನಡೆದ ಭಯಾನಕ ಅನುಭವದ ಬಗ್ಗೆ ಶಮಂತ್​ ಹೇಳಿಕೊಂಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್​ ರೂಂ ಇದೆ. ಈ ಕ್ಯಾಪ್ಟನ್​ ರೂಂನಲ್ಲಿ ಐಷಾರಾಮಿ ವ್ಯವಸ್ಥೆ ಇದೆ. ಅಲ್ಲಿಯ ಬೆಡ್​ ಕೂಡ ವಿಶೇಷವಾಗಿದೆ. ಮನೆಯ ಕ್ಯಾಪ್ಟನ್​ಗೆ ಸಿಗುವ ವಿಶೇಷ ಸವಲತ್ತುಗಳಲ್ಲಿ ಇದು ಕೂಡ ಒಂದು. ಕ್ಯಾಪ್ಟನ್​ ಆಗಲು ಬಯಸೋಕೆ ಇದು ಕೂಡ ಒಂದು ಕಾರಣ. ಆದರೆ, ಕ್ಯಾಪ್ಟನ್​ ಆದಷ್ಟು ದಿನ ಶಮಂತ್​ಗೆ ಅಲ್ಲಿ ನಿದ್ದೇಯೆ ಬಂದಿಲ್ಲವಂತೆ.

ಮೊದಲ ದಿನದಂದು ಶಮಂತ್ ಹಾಗೂ ಪ್ರಿಯಾಂಕಾ ಮಾತನಾಡಿಕೊಂಡರು. ‘ನಾನು ಬೆಡ್​ರೂಂಗೆ ಹೋದೆ. ರಘು ಭೂತ-ಕೋಲ ಎಂದು ಏನೋ ಹೇಳುತ್ತಿದ್ದರು. ಆಗ ಕ್ಯಾಪ್ಟನ್​ ರೂಂನಲ್ಲಿ ವಿಚಿತ್ರ ಆಕೃತಿಯೊಂದು ಹಾದು ಹೋಯ್ತು. ನಾನು ಐದು ನಿಮಿಷ ತಲೆಕೆಡಿಸಿಕೊಂಡೆ. ಆದರೆ, ಈ ವಿಚಾರವನ್ನು ಯಾರಿಗೂ ಹೇಳಿಲ್ಲ. ನಿಮಗೇ ಮೊದಲು ಹೇಳುತ್ತಿದ್ದೇನೆ. ನಾನು ಪ್ರ್ಯಾಂಕ್​ ಮಾಡ್ತಿಲ್ಲ. ಈ ವಿಚಾರದಲ್ಲಿ ಪ್ರ್ಯಾಂಕ್’​ ಮಾಡಬಾರದು’ ಎಂದು ಪ್ರಿಯಾಂಕಾಗೆ ಶಮಂತ್​ ಹೇಳಿದರು.

‘ನಾನು ಕ್ಯಾಪ್ಟನ್​ ಆದಾಗ ನಿದ್ದೆಯೇ ಮಾಡಿಲ್ಲ. ಅಲ್ಲಿ ಮಲಗಿದವರಿಗೆ ಯಾರಿಗೂ ನಿದ್ದೆ ಬರಲ್ಲ. ಎರಡು ವಾರ ಅಲ್ಲಿ ಹೇಗೆ ಕಳೆದೆನೋ ಗೊತ್ತಿಲ್ಲ. ಜಾಸ್ತಿ ಹೊತ್ತು ಅದರ ಬಗ್ಗೆ ಮಾತನಾಡಬಾರದು’ ಎಂದು ಮಾತುಕತೆ ಮುಗಿಸಿದರು ಶಮಂತ್.  ​

ನಂತರ ಈ ಬಗ್ಗೆ ಚಕ್ರವರ್ತಿ ಚಂದ್ರಚೂಡ್​ ಜತೆ ಶಮಂತ್​ ಚರ್ಚೆ ಮಾಡಿದರು. ಚಕ್ರವರ್ತಿ ಕೆಲವು ಸಾಧ್ಯತೆಗಳ ಬಗ್ಗೆ ಹೇಳಿದರೂ ಶಮಂತ್​ಗೆ ಆ ಹೇಳಿಕೆ ತೃಪ್ತಿ ನೀಡಿಲ್ಲ. ನಂತರ ಅವರು​ ತಲೆಕೆಡಿಸಿಕೊಂಡು, ಬಿಗ್​ ಬಾಸ್ ಎದುರೂ ಅದನ್ನು ಹೇಳಿಕೊಂಡರು.

ಇದನ್ನೂ ಓದಿ: Divya Uruduga: ಕೊವಿಡ್​ನಿಂದ ಕುಟುಂಬದವರನ್ನು ಕಳೆದುಕೊಂಡಿದ್ದಾರೆ ದಿವ್ಯಾ ಉರುಡುಗ; ಬಿಗ್​ ಬಾಸ್​ ಮನೆಯಲ್ಲಿ ಭಾವುಕ ನುಡಿ

150 ಜೊತೆ ಬಟ್ಟೆಯೊಂದಿಗೆ ಬಿಗ್​ ಬಾಸ್​ ಮನೆಗೆ ಬಂದಿದ್ದಾರೆ ಪ್ರಶಾಂತ್ ಸಂಬರಗಿ; ಸುದೀಪ್​ ರಿಯಾಕ್ಷನ್​​ ಹೇಗಿತ್ತು?

Published On - 9:59 am, Fri, 25 June 21

Follow Us
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್