Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಕ್ಯಾಪ್ಟನ್​ ರೂಂನಲ್ಲಿ ಭೂತ? ಕಪ್ಪಗಿನ ಆಕೃತಿ ಕಂಡು ಬೆಚ್ಚಿಬಿದ್ದ ಶಮಂತ್​

Bigg Boss Kannada: ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್​ ರೂಂ ಇದೆ. ಈ ಕ್ಯಾಪ್ಟನ್​ ರೂಂನಲ್ಲಿ ಐಷಾರಾಮಿ ವ್ಯವಸ್ಥೆ ಇದೆ. ಅಲ್ಲಿಯ ಬೆಡ್​ ಕೂಡ ವಿಶೇಷವಾಗಿದೆ.

ಬಿಗ್​ ಬಾಸ್​ ಕ್ಯಾಪ್ಟನ್​ ರೂಂನಲ್ಲಿ ಭೂತ? ಕಪ್ಪಗಿನ ಆಕೃತಿ ಕಂಡು ಬೆಚ್ಚಿಬಿದ್ದ ಶಮಂತ್​
ಶಮಂತ್​ ಬ್ರೋ ಗೌಡ
Follow us
TV9 Web
| Updated By: Digi Tech Desk

Updated on:Jun 25, 2021 | 10:38 AM

ಬಿಗ್​ ಬಾಸ್​ ಮನೆಯಲ್ಲಿ ವಿಚಿತ್ರ ಶಕ್ತಿ ಇದೆಯಾ? ದೆವ್ವ ಇದೆಯಾ? ಹೀಗೊಂದು ಚರ್ಚೆಯನ್ನು ಹುಟ್ಟು ಹಾಕುವ ಕೆಲಸವನ್ನು ಶಮಂತ್​ ಹೇಳಿಕೆ ಮಾಡಿದೆ. ಎರಡನೇ ಇನ್ನಿಂಗ್ಸ್​ನ ಮೊದಲ ದಿನ ನಡೆದ ಭಯಾನಕ ಅನುಭವದ ಬಗ್ಗೆ ಶಮಂತ್​ ಹೇಳಿಕೊಂಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್​ ರೂಂ ಇದೆ. ಈ ಕ್ಯಾಪ್ಟನ್​ ರೂಂನಲ್ಲಿ ಐಷಾರಾಮಿ ವ್ಯವಸ್ಥೆ ಇದೆ. ಅಲ್ಲಿಯ ಬೆಡ್​ ಕೂಡ ವಿಶೇಷವಾಗಿದೆ. ಮನೆಯ ಕ್ಯಾಪ್ಟನ್​ಗೆ ಸಿಗುವ ವಿಶೇಷ ಸವಲತ್ತುಗಳಲ್ಲಿ ಇದು ಕೂಡ ಒಂದು. ಕ್ಯಾಪ್ಟನ್​ ಆಗಲು ಬಯಸೋಕೆ ಇದು ಕೂಡ ಒಂದು ಕಾರಣ. ಆದರೆ, ಕ್ಯಾಪ್ಟನ್​ ಆದಷ್ಟು ದಿನ ಶಮಂತ್​ಗೆ ಅಲ್ಲಿ ನಿದ್ದೇಯೆ ಬಂದಿಲ್ಲವಂತೆ.

ಮೊದಲ ದಿನದಂದು ಶಮಂತ್ ಹಾಗೂ ಪ್ರಿಯಾಂಕಾ ಮಾತನಾಡಿಕೊಂಡರು. ‘ನಾನು ಬೆಡ್​ರೂಂಗೆ ಹೋದೆ. ರಘು ಭೂತ-ಕೋಲ ಎಂದು ಏನೋ ಹೇಳುತ್ತಿದ್ದರು. ಆಗ ಕ್ಯಾಪ್ಟನ್​ ರೂಂನಲ್ಲಿ ವಿಚಿತ್ರ ಆಕೃತಿಯೊಂದು ಹಾದು ಹೋಯ್ತು. ನಾನು ಐದು ನಿಮಿಷ ತಲೆಕೆಡಿಸಿಕೊಂಡೆ. ಆದರೆ, ಈ ವಿಚಾರವನ್ನು ಯಾರಿಗೂ ಹೇಳಿಲ್ಲ. ನಿಮಗೇ ಮೊದಲು ಹೇಳುತ್ತಿದ್ದೇನೆ. ನಾನು ಪ್ರ್ಯಾಂಕ್​ ಮಾಡ್ತಿಲ್ಲ. ಈ ವಿಚಾರದಲ್ಲಿ ಪ್ರ್ಯಾಂಕ್’​ ಮಾಡಬಾರದು’ ಎಂದು ಪ್ರಿಯಾಂಕಾಗೆ ಶಮಂತ್​ ಹೇಳಿದರು.

‘ನಾನು ಕ್ಯಾಪ್ಟನ್​ ಆದಾಗ ನಿದ್ದೆಯೇ ಮಾಡಿಲ್ಲ. ಅಲ್ಲಿ ಮಲಗಿದವರಿಗೆ ಯಾರಿಗೂ ನಿದ್ದೆ ಬರಲ್ಲ. ಎರಡು ವಾರ ಅಲ್ಲಿ ಹೇಗೆ ಕಳೆದೆನೋ ಗೊತ್ತಿಲ್ಲ. ಜಾಸ್ತಿ ಹೊತ್ತು ಅದರ ಬಗ್ಗೆ ಮಾತನಾಡಬಾರದು’ ಎಂದು ಮಾತುಕತೆ ಮುಗಿಸಿದರು ಶಮಂತ್.  ​

ನಂತರ ಈ ಬಗ್ಗೆ ಚಕ್ರವರ್ತಿ ಚಂದ್ರಚೂಡ್​ ಜತೆ ಶಮಂತ್​ ಚರ್ಚೆ ಮಾಡಿದರು. ಚಕ್ರವರ್ತಿ ಕೆಲವು ಸಾಧ್ಯತೆಗಳ ಬಗ್ಗೆ ಹೇಳಿದರೂ ಶಮಂತ್​ಗೆ ಆ ಹೇಳಿಕೆ ತೃಪ್ತಿ ನೀಡಿಲ್ಲ. ನಂತರ ಅವರು​ ತಲೆಕೆಡಿಸಿಕೊಂಡು, ಬಿಗ್​ ಬಾಸ್ ಎದುರೂ ಅದನ್ನು ಹೇಳಿಕೊಂಡರು.

ಇದನ್ನೂ ಓದಿ: Divya Uruduga: ಕೊವಿಡ್​ನಿಂದ ಕುಟುಂಬದವರನ್ನು ಕಳೆದುಕೊಂಡಿದ್ದಾರೆ ದಿವ್ಯಾ ಉರುಡುಗ; ಬಿಗ್​ ಬಾಸ್​ ಮನೆಯಲ್ಲಿ ಭಾವುಕ ನುಡಿ

150 ಜೊತೆ ಬಟ್ಟೆಯೊಂದಿಗೆ ಬಿಗ್​ ಬಾಸ್​ ಮನೆಗೆ ಬಂದಿದ್ದಾರೆ ಪ್ರಶಾಂತ್ ಸಂಬರಗಿ; ಸುದೀಪ್​ ರಿಯಾಕ್ಷನ್​​ ಹೇಗಿತ್ತು?

Published On - 9:59 am, Fri, 25 June 21

25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
25 ವರ್ಷಗಳ ಹಿಂದೆಯೇ ಬ್ಯಾಂಕ್ ಜನಾರ್ದನ್​ಗೆ ಹಾರ್ಟ್ ಸಮಸ್ಯೆ: ಸಾಧು ಕೋಕಿಲ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಭಾರತದ ಲೇಸರ್ ವೆಪನ್ ಸಿಸ್ಟಂ ಪ್ರಯೋಗದ ವಿಡಿಯೋ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಕುಮಾರಸ್ವಾಮಿ ಮನೆಗೆ ಲೇಟಾಗಿ ಹೋಗಿದ್ದರೆ ಅವರೇ ಅದಕ್ಕೆ ಜಬಾಬ್ದಾರರು: ಸಚಿವ
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು
ಪಬ್ಲಿಕ್​ನಲ್ಲಿ ಮುಸ್ಲಿಂ ಮಹಿಳೆಯ ಹಿಜಾಬ್ ಕಳಚಿದ ಪುರುಷರು
ಭಯಾನಕ ವಿಡಿಯೋ: ಜೀಪ್ ರ‍್ಯಾಲಿ ನಡೆಯುವ ವೇಳೆ‌ ಕಾಡಾನೆ ಡೆಡ್ಲಿ ಅಟ್ಯಾಕ್
ಭಯಾನಕ ವಿಡಿಯೋ: ಜೀಪ್ ರ‍್ಯಾಲಿ ನಡೆಯುವ ವೇಳೆ‌ ಕಾಡಾನೆ ಡೆಡ್ಲಿ ಅಟ್ಯಾಕ್
4 ವರ್ಷದ ಪ್ರೀತಿಗೆ ಸಾಕ್ಷಿಯಾದ ಅಂಬೇಡ್ಕರ್ ಜಯಂತಿ: ಪ್ರತಿಮೆ ಎದುರೇ ವಿವಾಹ
4 ವರ್ಷದ ಪ್ರೀತಿಗೆ ಸಾಕ್ಷಿಯಾದ ಅಂಬೇಡ್ಕರ್ ಜಯಂತಿ: ಪ್ರತಿಮೆ ಎದುರೇ ವಿವಾಹ
ಜಾತಿಗಣತಿ ವರದಿ ಬಗ್ಗೆ ಕೇಳಿದರೆ ಸಿಡಿಮಿಡಿಗೊಳ್ಳುವ ಸಿಎಂ ಸಿದ್ದರಾಮಯ್ಯ
ಜಾತಿಗಣತಿ ವರದಿ ಬಗ್ಗೆ ಕೇಳಿದರೆ ಸಿಡಿಮಿಡಿಗೊಳ್ಳುವ ಸಿಎಂ ಸಿದ್ದರಾಮಯ್ಯ
ನಿರ್ಜನ ಪ್ರದೇಶದಲ್ಲಿ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ್ದ ಆರೋಪಿ
ನಿರ್ಜನ ಪ್ರದೇಶದಲ್ಲಿ ತಪ್ಪಿಸಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ್ದ ಆರೋಪಿ
ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ
ತಾಯಿಯನ್ನು ಬೇಗ ಕಳೆದುಕೊಂಡ ನಮಗೆ ಅಮ್ಮನ ಕೊರತೆ ಕಾಡದಂತೆ ಬೆಳೆಸಿದರು:ಜ್ಯೋತಿ
ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
ಮೋಸದಾಟದ ಡೌಟ್... ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್