AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

150 ಜೊತೆ ಬಟ್ಟೆಯೊಂದಿಗೆ ಬಿಗ್​ ಬಾಸ್​ ಮನೆಗೆ ಬಂದಿದ್ದಾರೆ ಪ್ರಶಾಂತ್ ಸಂಬರಗಿ; ಸುದೀಪ್​ ರಿಯಾಕ್ಷನ್​​ ಹೇಗಿತ್ತು?

ಪ್ರಶಾಂತ್​ ಸಂಬರಗಿ ಕನ್ನಡ ಬಿಗ್​ ಬಾಸ್ ಸೀಸನ್​ 8 ಮೊದಲ ಇನ್ನಿಂಗ್ಸ್​ನಲ್ಲಿ ತಾವು ಧರಿಸುವ ಬಟ್ಟೆ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಇದನ್ನು ಸೆಕೆಂಡ್​ ಇನ್ನಿಂಗ್ಸ್​ನಲ್ಲೂ ಅವರು ಮುಂದುವರಿಸುತ್ತಿದ್ದಾರೆ.

150 ಜೊತೆ ಬಟ್ಟೆಯೊಂದಿಗೆ ಬಿಗ್​ ಬಾಸ್​ ಮನೆಗೆ ಬಂದಿದ್ದಾರೆ ಪ್ರಶಾಂತ್ ಸಂಬರಗಿ; ಸುದೀಪ್​ ರಿಯಾಕ್ಷನ್​​ ಹೇಗಿತ್ತು?
150 ಜೊತೆ ಬಟ್ಟೆಯೊಂದಿಗೆ ಬಿಗ್​ ಬಾಸ್​ ಮನೆಗೆ ಬಂದಿದ್ದಾರೆ ಪ್ರಶಾಂತ್ ಸಂಬರಗಿ; ಸುದೀಪ್​ ರಿಯಾಕ್ಷನ್​​ ಹೇಗಿತ್ತು?
ರಾಜೇಶ್ ದುಗ್ಗುಮನೆ
| Edited By: |

Updated on: Jun 24, 2021 | 2:55 PM

Share

ಪ್ರಶಾಂತ್​ ಸಂಬರಗಿ ಬಿಗ್​ ಬಾಸ್​ ಮನೆಯಲ್ಲಿ ಕೇಂದ್ರ ಬಿಂದು ಆಗಿರೋಕೆ ಪ್ರಯತ್ನಪಡುತ್ತಿರುತ್ತಾರೆ. ಇದಕ್ಕೆ ಅವರು ನಾನಾ ರೀತಿಯ ಸರ್ಕಸ್​ ಕೂಡ ಮಾಡಿದ್ದಾರೆ. ಈಗ ಅದು ಎರಡನೇ ಇನ್ನಿಂಗ್ಸ್​ನಲ್ಲೂ ಮುಂದುವರಿಯಲಿದೆ. ಬಿಗ್​ ಬಾಸ್​ ವೇದಿಕೆ ಮೇಲೆಯೇ ಈ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ.

ಪ್ರಶಾಂತ್​ ಸಂಬರಗಿ ‘ಕನ್ನಡ ಬಿಗ್​ ಬಾಸ್ ಸೀಸನ್​ 8’ರ ಮೊದಲ ಇನ್ನಿಂಗ್ಸ್​ನಲ್ಲಿ ತಾವು ಧರಿಸುವ ಬಟ್ಟೆ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ನಾನಾ ರೀತಿಯ ಬಟ್ಟೆ ಧರಿಸಿ ಮಿಂಚಿದ್ದರು. ಇದನ್ನು ಸೆಕೆಂಡ್​ ಇನ್ನಿಂಗ್ಸ್​ನಲ್ಲೂ ಅವರು ಮುಂದುವರಿಸುತ್ತಿದ್ದಾರೆ.

ಜೂನ್​ 23ರಂದು ಕೊನೆಯ ಸ್ಪರ್ಧಿಯಾಗಿ ಪ್ರಶಾಂತ್​ ಬಿಗ್​ ಬಾಸ್​ ವೇದಿಕೆ ಏರಿದರು. ಈ ವೇಳೆ ಪ್ರಶಾಂತ್​ಗೆ ಸುದೀಪ್​ ಪ್ರಶ್ನೆ ಒಂದನ್ನು ಕೇಳಿದರು. ‘ನನಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಬೇಕು ಎಂದಿದೆ. ಅದರಲ್ಲಿ ಮುಖ್ಯವಾಗಿ ಒಂದು ಪ್ರಶ್ನೆ ಕೇಳುತ್ತಿದ್ದೇನೆ. ಈ ಬಾರಿ ಎಷ್ಟು ಬಟ್ಟೆಗಳನ್ನು ತಂದಿದ್ದೀರಾ’ ಎನ್ನುವ ಪ್ರಶ್ನೆ ಸುದೀಪ್​ ಕಡೆಯಿಂದ ಬಂತು. ಇದಕ್ಕೆ ಉತ್ತರಿಸಿದ ಪ್ರಶಾಂತ್​, ‘150 ಬಟ್ಟೆ ತಂದಿದ್ದೇನೆ’ ಎಂದರು. ಈ ವಿಚಾರ ಕೇಳಿದ ಸುದೀಪ್​ ಅಚ್ಚರಿ ಪಟ್ಟರು.

‘ಇನ್ನು ಉಳಿದಿರೋದು ನಾಲ್ಕೇ ವಾರ. ಅಷ್ಟೆಲ್ಲ ಬಟ್ಟೆ ಏಕೆ’ ಎಂದು ಸುದೀಪ್​ ಅಚ್ಚರಿ ಹೊರ ಹಾಕಿದರು. ಇದಕ್ಕೆ ಉತ್ತರಿಸಿದ ಪ್ರಶಾಂತ್​, ‘ನಿತ್ಯ ನಾಲ್ಕೈದು ವಿಧದ ಬಟ್ಟೆ ಹಾಕುತ್ತೇನೆ. ಯಾವಾಗಲೂ ಬಿಳಿ ಬಟ್ಟೆ ಹಾಕಿಕೊಂಡಿರುವುದಕ್ಕಿಂತ ಸ್ವಲ್ಪ ಕಲರ್​ಫುಲ್​ ಕಾಣಬೇಕು ಅನ್ನೋದು ನನ್ನ ಉದ್ದೇಶ’ ಎಂದರು ಪ್ರಶಾಂತ್​.

‘ಒಂದೊಮ್ಮೆ ನೀವು ಫೈನಲ್​ಗೆ ಬಂದರೆ ಅದಕ್ಕೂ ಬಟ್ಟೆ ರೆಡಿ ಇರುತ್ತದೆಯೇ?’ ಎಂದು ಕೇಳಲಾಯಿತು. ಆಗ ಪ್ರಶಾಂತ್​, ‘ಹೌದು, ಅದಕ್ಕೂ ಬಟ್ಟೆ ರೆಡಿ ಇದೆ. ಆದರೆ, ಯಾವುದು ಅಂತ ಡಿಸೈಡ್​ ಮಾಡಿಲ್ಲ. ನಾನು ಫೈನಲ್​ಗೆ ಬರೋದು ಸತ್ಯ’ ಎಂದು ಪ್ರಶಾಂತ್​ ಭವಿಷ್ಯ ನುಡಿದರು.

ಇದನ್ನೂ ಓದಿ:

Bigg Boss Kannada: ಹೊಸ ಬದಲಾವಣೆಯೊಂದಿಗೆ ಬಿಗ್​ ಬಾಸ್​ ಮನೆ ಸೇರಿದ ರಘು ಗೌಡ

Bigg Boss Kannada: ಬಿಗ್​ ಬಾಸ್​ ಮತ್ತೆ ಶುರುವಾಗಲು ಕಾರಣವಾದ ಪ್ರಮುಖ ವ್ಯಕ್ತಿ ಯಾರು? ಆ ಸ್ಪರ್ಧಿಯ ಮೇಲಿದೆ ಗುಮಾನಿ

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ