Bigg Boss Kannada: ಬಿಗ್​ ಬಾಸ್​ ಮತ್ತೆ ಶುರುವಾಗಲು ಕಾರಣವಾದ ಪ್ರಮುಖ ವ್ಯಕ್ತಿ ಯಾರು? ಆ ಸ್ಪರ್ಧಿಯ ಮೇಲಿದೆ ಗುಮಾನಿ

BBK8: ಬಿಗ್​ ಬಾಸ್​ ಕನ್ನಡ ಸೀಸನ್​ 8ಕ್ಕೆ ಮರು ಚಾಲನೆ ಸಿಕ್ಕಿದ್ದಕ್ಕೆ ಒಬ್ಬ ಸ್ಪರ್ಧಿಯೇ ಕಾರಣ ಎಂದು ಹಲವರು ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ಯಾರಿಗೂ ಅನುಮಾನವೇ ಇಲ್ಲ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

Bigg Boss Kannada: ಬಿಗ್​ ಬಾಸ್​ ಮತ್ತೆ ಶುರುವಾಗಲು ಕಾರಣವಾದ ಪ್ರಮುಖ ವ್ಯಕ್ತಿ ಯಾರು? ಆ ಸ್ಪರ್ಧಿಯ ಮೇಲಿದೆ ಗುಮಾನಿ
ಕಿಚ್ಚ ಸುದೀಪ್​
Follow us
| Updated By: ಮದನ್​ ಕುಮಾರ್​

Updated on: Jun 24, 2021 | 9:03 AM

ಕನ್ನಡ ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾದಿದ್ದ ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಸೆಕೆಂಡ್​ ಇನ್ನಿಂಗ್ಸ್​​ ಶುರುವಾಗಿದೆ. ಈ ಜನಪ್ರಿಯ ಕಾರ್ಯಕ್ರಮಕ್ಕೆ ಬುಧವಾರ (ಜೂ.23) ಅದ್ದೂರಿಯಾಗಿ ಮರುಚಾಲನೆ ನೀಡಲಾಗಿದೆ. ಕಿಚ್ಚ ಸುದೀಪ್​ ಎಂದಿನ ಚಾರ್ಮ್​ನಲ್ಲಿ ವೇದಿಕೆ ಏರಿದರು. 12 ಸ್ಪರ್ಧಿಗಳನ್ನು ಮತ್ತೆ ದೊಡ್ಮನೆ ಒಳಗೆ ಕಳಿಸಲಾಗಿದೆ. ಕೊರೊನಾ ಎರಡನೇ ಅಲೆ ಜೋರಾದಾಗ ಈ ಶೋ ಅರ್ಧಕ್ಕೆ ನಿಲ್ಲಿಸಬೇಕಾಗಿತ್ತು. ಶೋ ಮತ್ತೆ ಶುರುವಾಗುತ್ತೋ ಇಲ್ಲವೋ ಎಂಬ ಅನುಮಾನ ಕಾಡುತ್ತಿತ್ತು. ಕಡೆಗೂ ಬಿಗ್​ ಬಾಸ್​ ಮರಳಿ ಬಂದಿದೆ. ಆದರೆ ಇದಕ್ಕೆ ಕಾರಣವಾದ ಪ್ರಮುಖ ವ್ಯಕ್ತಿ ಯಾರು?

‘ಬಿಗ್​ ಬಾಸ್​ ಕನ್ನಡ ಸೀಸನ್​ 8’ಕ್ಕೆ ಮರು ಚಾಲನೆ ಸಿಗಲು ಕಾರಣ ಆಗಿರುವವರು ಯಾರು ಎಂಬ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ನಡೆದಿದೆ. ಶಮಂತ್​ ಬ್ರೋ ಗೌಡ ಅವರೇ ಕಾರಣ ಎಂದು ಕೆಲವರು ಹೇಳುತ್ತಿದ್ದಾರೆ! ಈಗಾಗಲೇ ವೀಕ್ಷಕರಿಗೆ ಗೊತ್ತಿರುವಂತೆ ಶಮಂತ್​ ಲಕ್ಕಿ ಬಾಯ್​. ಈ ವಿಚಾರದಲ್ಲಿ ಯಾರಿಗೂ ಅನುಮಾನವೇ ಇಲ್ಲ. ಈ ಹಿಂದೆ ಎಲಿಮಿನೇಟ್​ ಆಗಿದ್ದರೂ ಕೂಡ ಅವರು ಅದೃಷ್ಟದ ಬಲದಿಂದ ಬಚಾವ್​ ಆಗಿದ್ದರು. ಈಗ ಅವರ ಅದೃಷ್ಟದಿಂದಲೇ ಶೋ ಮತ್ತೆ ಶುರುವಾಗಿದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

ಶಮಂತ್​ ಪಾಲಿಗೆ ಅದೃಷ್ಟ ಒಲಿದಿರುವುದು ಒಂದೆರಡು ಬಾರಿ ಅಲ್ಲ. ಮೊದಲ ಎರಡು ವಾರ ಅವರು ಸುಲಭವಾಗಿ ಬ್ಯಾಕ್​ ಟು ಬ್ಯಾಕ್ ಕ್ಯಾಪ್ಟನ್​ ಆಗುವ ಮೂಲಕ ಎಲಿಮಿನೇಷನ್​ನಿಂದ ಪಾರಾಗಿದ್ದರು. ನಂತರ ಒಮ್ಮೆ ಇಡೀ ಮನೆಮಂದಿಯೆಲ್ಲ ಬೆಡ್​ರೂಮ್​ ಬಿಟ್ಟುಕೊಟ್ಟು, ಅವರನ್ನು ನಾಮಿನೇಷನ್​ನಿಂದ ಪಾರು ಮಾಡಿದ್ದರು. ಒಂದು ವಾರ ಶಮಂತ್​ ಎಲಿಮಿನೇಟ್​ ಎಂದು ಸುದೀಪ್​ ಘೋಷಿಸಿಯೂ ಆಗಿತ್ತು. ಆದರೆ ಅವರ ಬದಲು ವೈಲ್ಡ್​​ ಕಾರ್ಡ್​ ಸ್ಪರ್ಧಿ ವೈಜಯಂತಿ ಅಡಿಗ ಅವರು ಸ್ವತಃ ಮನೆಯಿಂದ ಹೊರ ಹೋಗುವ ಮೂಲಕ ಶಮಂತ್​ರನ್ನು ಸೇವ್​ ಮಾಡಿದ್ದರು.

ಈ ಎಲ್ಲ ಘಟನೆಗಳು ನಡೆದ ಬಳಿಕ ಶಮಂತ್​ ಲಕ್ಕಿ ಬಾಯ್​ ಎಂಬುದನ್ನು ಎಲ್ಲರೂ ಒಪ್ಪಿಕೊಂಡಿದ್ದರು. ಆ ಬಗ್ಗೆ ಸಿಕ್ಕಾಪಟ್ಟೆ ತಮಾಷೆಯನ್ನೂ ಮಾಡಿದ್ದರು. ಆ ತಮಾಷೆಯ ಸರಣಿ ಈಗಲೂ ಮುಂದುವರಿದಿದೆ. ಶೋ ಅರ್ಧಕ್ಕೆ ನಿಲ್ಲುವಾಗ ಕೊನೆಗೆ ಉಳಿದಿದ್ದ 12 ಜನರಲ್ಲಿ ಲಕ್ಕಿ ಬಾಯ್​ ಶಮಂತ್​ ಕೂಡ ಇರುವುದರಿಂದಲೇ ಈ ಶೋಗೆ ಮರುಚಾಲನೆ ಸಿಕ್ಕಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಇದನ್ನೂ ಓದಿ:

ಬಿಗ್​ ಬಾಸ್​ ಬಗ್ಗೆ ಕಿಚ್ಚ ಸುದೀಪ್​ ಉತ್ಸಾಹದ ಮಾತು; ಹೆಚ್ಚು ಖುಷಿ ಆಗಿದ್ದು ನಟಿ ಜೆನಿಲಿಯಾ

‘ಭಾಷಣ ಚೆನ್ನಾಗಿ ಮಾಡ್ತೀರಾ’; ಬಿಗ್​ ಬಾಸ್​ ವೇದಿಕೆ ಮೇಲೆ ದಿವ್ಯಾ ಉರುಡುಗಗೆ ಸುದೀಪ್ ಎಚ್ಚರಿಕೆ