AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

23 ವರ್ಷವಾದರೂ ಮಾಸದ ‘ಮಾಯಾಮೃಗ’ ಹಾಡು ಕಂಪೋಸ್​ ಆಗಿದ್ದು ಲಂಚ್​ ಬ್ರೇಕ್​ನ​ ಕೆಲವೇ ನಿಮಿಷಗಳಲ್ಲಿ; ಇಲ್ಲಿದೆ ಇಂಟರೆಸ್ಟಿಂಗ್​ ಮಾಹಿತಿ

Mayamruga Kannada Serial: ಭಾರಿ ಮೋಡಿ ಮಾಡಿದ ‘ಮಾಯಾಮೃಗ’ ಶೀರ್ಷಿಕೆ ಗೀತೆಗೆ ರಾಗ ಸಂಯೋಜನೆ ಮಾಡಿದವರು ಸಿ. ಅಶ್ವತ್​. ಅದಕ್ಕೆ ಸಾಹಿತ್ಯ ಬರೆದವರು ಕೆ.ಎಸ್​. ನರಸಿಂಹಸ್ವಾಮಿ. ಅಚ್ಚರಿ ಎಂದರೆ ಈ ಗೀತೆ ಸಿದ್ಧವಾಗಿದ್ದು ಮಧ್ಯಾಹ್ನ ಊಟದ​ ಬ್ರೇಕ್​ನ ಕೆಲವೇ ನಿಮಿಷಗಳಲ್ಲಿ!

23 ವರ್ಷವಾದರೂ ಮಾಸದ ‘ಮಾಯಾಮೃಗ’ ಹಾಡು ಕಂಪೋಸ್​ ಆಗಿದ್ದು ಲಂಚ್​ ಬ್ರೇಕ್​ನ​ ಕೆಲವೇ ನಿಮಿಷಗಳಲ್ಲಿ; ಇಲ್ಲಿದೆ ಇಂಟರೆಸ್ಟಿಂಗ್​ ಮಾಹಿತಿ
ಮಂಜುಳಾ ಗುರುರಾಜ್​, ಟಿಎನ್​ ಸೀತಾರಾಮ್​, ಸಿ. ಅಶ್ವತ್ಥ್​
ಮದನ್​ ಕುಮಾರ್​
|

Updated on: May 28, 2021 | 10:41 AM

Share

1998ರಲ್ಲಿ ದೂರದರ್ಶನ ವಾಹಿನಿಯಲ್ಲಿ ಪ್ರಸಾರ ಆರಂಭಿಸಿದ ‘ಮಾಯಾಮೃಗ’ ಧಾರಾವಾಹಿ ನಂತರ 2014ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಮರುಪ್ರಸಾರವನ್ನೂ ಕಂಡಿತ್ತು. ಇಂದಿಗೂ ಈ ಸೀರಿಯಲ್​ ಬಗ್ಗೆ ಜನರು ಮಾತನಾಡುತ್ತಾರೆ. ಅಷ್ಟರಮಟ್ಟಿಗೆ ಫೇಮಸ್​ ಆಗಿತ್ತು ಮಾಯಾಮೃಗ. ಟಿಎನ್ ಸೀತಾರಾಮ್​, ಪಿ. ಶೇಷಾದ್ರಿ, ನಾಗೇಂದ್ರ ಶಾ ಸೇರಿ ನಿರ್ದೇಶಿಸಿದ ಈ ಸೀರಿಯಲ್ ಇನ್ನು ಕೆಲವೇ ದಿನಗಳಲ್ಲಿ ಮತ್ತೆ ವೀಕ್ಷಣೆಗೆ ಲಭ್ಯವಾಗಲಿದೆ. ವೆಬ್​ ಸಿರೀಸ್​ ರೂಪದಲ್ಲಿ ಪ್ರಸಾರ ಮಾಡಲು ಸಿದ್ಧತೆ ನಡೆದಿದೆ. ಈ ಪ್ರಯುಕ್ತ ‘ಮಾಯಾಮೃಗ’ದ ಶೀರ್ಷಿಕೆ ಗೀತೆಯ ಕುರಿತು ಕೆಲವು ಇಂಟರೆಸ್ಟಿಂಗ್​ ವಿಚಾರಗಳನ್ನು ತಂಡ ಹಂಚಿಕೊಂಡಿದೆ.

‘1988ರ ಸಮಯದಲ್ಲಿ ಸಂಜೆ ನಾಲ್ಕೂವರೆಗೆ ಟಿವಿಯಲ್ಲಿ ಮಾಯಾಮೃಗ ಧಾರಾವಾಹಿಯ ಶೀರ್ಷಿಕೆ ಗೀತೆ ಕೇಳಿಸಿದ ತಕ್ಷಣ ಬೆಂಗಳೂರಿನ ಬೀದಿಗಳು ಖಾಲಿ ಆಗಿ ಬಿಡುತ್ತಿದ್ದವು’ ಎನ್ನುವ ಮೂಲಕ ಅದರ ಜನಪ್ರಿಯತೆಯನ್ನು ನೆನಪಿಸಿಕೊಳ್ಳುತ್ತಾರೆ ನಟ ದತ್ತಣ್ಣ. ‘ಇಂದಿಗೂ ನಾನು ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಮಾಯಾಮೃಗದ ಹಾಡು ಹೇಳುವಂತೆ ಜನರು ಒತ್ತಾಯಿಸುತ್ತಾರೆ’ ಎನ್ನುತ್ತಾರೆ ಎಂ.ಡಿ. ಪಲ್ಲವಿ. ಇಷ್ಟೆಲ್ಲ ಮೋಡಿ ಮಾಡಿದ ಶೀರ್ಷಿಕೆ ಗೀತೆಗೆ ರಾಗ ಸಂಯೋಜನೆ ಮಾಡಿದವರು ಸಿ. ಅಶ್ವತ್​. ಅದಕ್ಕೆ ಸಾಹಿತ್ಯ ಬರೆದವರು ಕೆ.ಎಸ್​. ನರಸಿಂಹಸ್ವಾಮಿ. ಅಚ್ಚರಿ ಎಂದರೆ ಈ ಗೀತೆ ಸಿದ್ಧವಾಗಿದ್ದು ಲಂಚ್​ ಬ್ರೇಕ್​ನ ಕೆಲವೇ ನಿಮಿಷಗಳಲ್ಲಿ!

‘ಧಾರಾವಾಹಿಗೆ ಶೀರ್ಷಿಕೆ ಗೀತೆ ಮಾಡಿಸಲು ನಾವು ಸಿ. ಅಶ್ವತ್ಥ್​ ಬಳಿ ಹೋದಾಗ ಅವರು ಸ್ಟುಡಿಯೋದಲ್ಲಿ ಬೇರೆ ಯಾವುದೋ ಹಾಡನ್ನು ರೆಕಾರ್ಡ್​ ಮಾಡಿಸುತ್ತಿದ್ದರು. ಅಶ್ವತ್ಥ್​ ಅವರಿಗೆ ದೈನಂದಿನ ಧಾರಾವಾಹಿಗಳ ಕಲ್ಪನೆಯೇ ಇರಲಿಲ್ಲ. ಜನರು ಪ್ರತಿ ದಿನ ನೋಡುತ್ತಾರಾ ಎಂದು ಅವರು ಪ್ರಶ್ನೆ ಮಾಡಿದರು. ನಂತರ ರಾಗ ಸಂಯೋಜನೆ ಮಾಡಲು ಒಪ್ಪಿಕೊಂಡರು. ಊಟದ ಬ್ರೇಕ್​ನಲ್ಲೇ ಒಂದು ಹಾರ್ಮೋನಿಯಂ ತೆಗೆದುಕೊಂಡು ಸಂಗೀತ ಸಂಯೋಜಿಸಿದರು. ಕೇವಲ ಒಂದೂವರೆ ನಿಮಿಷದಲ್ಲಿ ರಾಗ ಸಂಯೋಜನೆ ಮಾಡಿದರು. ಇಂದಿಗೂ ಅದು ಅದ್ಭುತವಾದ ಹಾಡಾಗಿ ಉಳಿದುಕೊಂಡಿದೆ’ ಎಂದು ಆ ದಿನಗಳ ನೆನಪು ಮೆಲುಕು ಹಾಕಿದ್ದಾರೆ ಟಿಎನ್​ ಸೀತಾರಾಮ್​.

‘ಲಂಚ್​ ಬ್ರೇಕ್​ ಮುಗಿಯುವುದರೊಳಗೆ ಹಾಡು ಸಿದ್ಧವಾಯ್ತು. ಅರ್ಚನಾ ಮತ್ತು ನಾನು ಕೋರಸ್​ ಹಾಡಿದೆವು. ಮಂಜುಳಾ ಗುರುರಾಜ್​ ಧ್ವನಿಯಲ್ಲಿ ಹಾಡು ಮೂಡಿಬಂತು. ತುಂಬ ಒಳ್ಳೆಯ ಗೀತೆ ಎಷ್ಟು ಟೈಮ್​ ತೆಗೆದುಕೊಂಡಿತು ಎನ್ನುವುದು ಅಚ್ಚರಿ ಆಗುತ್ತದೆ. ಆ ಹಾಡಿನಲ್ಲಿ ಎಲ್ಲವೂ ಚೆನ್ನಾಗಿ ಕೂಡಿ ಬಂದಿದೆ’ ಎಂಬುದು ಎಂಡಿ ಪಲ್ಲವಿ ಮಾತುಗಳು.

ಇದನ್ನೂ ಓದಿ:

ವೆಬ್​ ಸಿರೀಸ್​ ರೂಪದಲ್ಲಿ ಬರಲಿದೆ ಕನ್ನಡದ ಸೂಪರ್​ ಹಿಟ್​ ಧಾರಾವಾಹಿ ಮಾಯಾಮೃಗ; ಪ್ರೇಕ್ಷಕರಿಗೆ ಗುಡ್​ ನ್ಯೂಸ್​

ಟಿ.ಎನ್.​ ಸೀತಾರಾಮ್ ಹೊಸ ಧಾರಾವಾಹಿಗೆ ಟೈಟಲ್​ ಫಿಕ್ಸ್​; ಮೇಧಾ ವಿದ್ಯಾಭೂಷಣ​ ನಾಯಕಿ!

ಮೃತ ಮತದಾರರ ಜತ ಟೀ ಕುಡಿಯುವಂತೆ ಮಾಡಿದ ಆಯೋಗಕ್ಕೆ ಧನ್ಯವಾದ:ರಾಹುಲ್​
ಮೃತ ಮತದಾರರ ಜತ ಟೀ ಕುಡಿಯುವಂತೆ ಮಾಡಿದ ಆಯೋಗಕ್ಕೆ ಧನ್ಯವಾದ:ರಾಹುಲ್​
ಶಿವಕುಮಾರ್ ಸಿಎಂ ಆಗ್ತಾರಾ ಅಂತ ಕೇಳಿದರೆ ಇಕ್ಬಾಲ್ ಹುಸ್ಸೇನ್ ಮುಗುಳ್ನಕ್ಕರು
ಶಿವಕುಮಾರ್ ಸಿಎಂ ಆಗ್ತಾರಾ ಅಂತ ಕೇಳಿದರೆ ಇಕ್ಬಾಲ್ ಹುಸ್ಸೇನ್ ಮುಗುಳ್ನಕ್ಕರು
ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ