AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Movie Review: ‘ಬ್ಯಾಕ್​ ಬೆಂಚರ್ಸ್​’ ಚಿತ್ರದಲ್ಲಿ ಕಾಲೇಜ್ ಮಂದಿ ಕಥೆ; ತರ್ಲೆ, ತಮಾಷೆಗೆ ಆದ್ಯತೆ

ಯುವ ಪ್ರೇಕ್ಷಕರೇ ‘ಬ್ಯಾಕ್​ ಬೆಂಚರ್ಸ್​’ ಸಿನಿಮಾದ ಟಾರ್ಗೆಟ್​. ಸ್ಟೂಡೆಂಟ್​ ಲೈಫ್​ನ ಫನ್ನಿ ಸಂಗತಿಗಳೇ ಈ ಚಿತ್ರದಲ್ಲಿನ ಹೈಲೈಟ್​. ಕಾಲೇಜು ಕಹಾನಿ ನೋಡಿ ಎಂಜಾಯ್​ ಮಾಡುವ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗುತ್ತದೆ. ಹೊಸ ನಟ-ನಟಿಯರೇ ತುಂಬಿಕೊಂಡಿರುವ ಈ ಸಿನಿಮಾದ ಪ್ಲಸ್​ ಏನು? ಮೈನಸ್​ ಏನು ಎಂಬುದು ಈ ವಿಮರ್ಶೆಯಲ್ಲಿದೆ..

Movie Review: ‘ಬ್ಯಾಕ್​ ಬೆಂಚರ್ಸ್​’ ಚಿತ್ರದಲ್ಲಿ ಕಾಲೇಜ್ ಮಂದಿ ಕಥೆ; ತರ್ಲೆ, ತಮಾಷೆಗೆ ಆದ್ಯತೆ
‘ಬ್ಯಾಕ್​ ಬೆಂಚರ್ಸ್​’ ಸಿನಿಮಾ ಪೋಸ್ಟರ್​
ಮದನ್​ ಕುಮಾರ್​
|

Updated on: Jul 20, 2024 | 7:47 PM

Share

ಸಿನಿಮಾ: ಬ್ಯಾಕ್​ ಬೆಂಚರ್ಸ್​. ನಿರ್ದೇಶನ: ಬಿ.ಆರ್​. ರಾಜಶೇಖರ್​. ನಿರ್ಮಾಣ: ರಮ್ಯಾ. ಪಾತ್ರವರ್ಗ: ರಂಜನ್​, ಜತಿನ್​ ಆರ್ಯನ್, ಆಕಾಶ್​ ಎಂ.ಪಿ., ಶಶಾಂಕ್​ ಸಿಂಹ, ಸುಚೇಂದ್ರ ಪ್ರಸಾದ್​, ಅರವಿಂದ್​ ಕುಪ್ಲಿಕರ್​, ಮಾನ್ಯ ಗೌಡ, ಅನುಷಾ ಸುರೇಶ್​ ಮುಂತಾದವರು. ಸ್ಟಾರ್​: 3/5

ಪ್ರೇಮಕಥೆಗಳು ಮತ್ತು ಕಾಲೇಜು ಕಥೆಗಳು ಎವರ್​ಗ್ರೀನ್​ ಆಗಿರುತ್ತವೆ. ಅಂತಹ ಕಥಾಹಂದರದ ಸಿನಿಮಾಗಳನ್ನು ಯುವ ಪ್ರೇಕ್ಷಕರು ಹೆಚ್ಚು ಇಷ್ಟಪಡುತ್ತಾರೆ. ‘ಜೋಶ್​’, ‘ಜಾಲಿಡೇಸ್​’ ಸಿನಿಮಾಗಳೇ ಈ ಮಾತಿಗೆ ಉದಾಹರಣೆ. ಆ ಚಿತ್ರಗಳ ಸಾಲಿಗೆ ಸೇರುವಂತಹ ಇನ್ನೊಂದು ಸಿನಿಮಾ ‘ಬ್ಯಾಕ್​ ಬೆಂಚರ್ಸ್​’. ಶೀರ್ಷಿಯೇ ಹೇಳುವಂತೆ ಇದು ಕೊನೇ ಬೆಂಚಿನಲ್ಲಿ ಕುಳಿತ ವಿದ್ಯಾರ್ಥಿಗಳ ಕಥೆ ಇರುವ ಸಿನಿಮಾ. ಬಹುತೇಕ ಹೊಸ ಕಲಾವಿದರನ್ನೇ ಆಯ್ಕೆ ಮಾಡಿಕೊಂಡು ನಿರ್ದೇಶಕ ಬಿ.ಆರ್​. ರಾಜಶೇಖರ್​ ಅವರು ‘ಬ್ಯಾಕ್​ ಬೆಂಚರ್ಸ್​’ ಸಿನಿಮಾ ಮಾಡಿದ್ದಾರೆ.

ವಿದ್ಯಾರ್ಥಿ ಜೀವನ ಸೂಪರ್​ ಆಗಿರುತ್ತದೆ. ಅಲ್ಲಿನ ತರಲೆ, ತಮಾಷೆ, ಮೋಜು, ಮಸ್ತಿಗೆ ಲೆಕ್ಕವೇ ಇಲ್ಲ. ಹದಿಹರೆಯದ ಮನಸ್ಸುಗಳೆಲ್ಲ ಒಂದೆಡೆ ಸೇರಿದಾಗ ಇರುವ ಜೋಶ್​ಗೆ ಮಿತಿ ಕೂಡ ಇರುವುದಿಲ್ಲ. ಪ್ರತಿ ಕಾಲೇಜಿನಲ್ಲೂ, ಪ್ರತಿ ಬ್ಯಾಚ್​ನಲ್ಲೂ ಇಂಥದ್ದೆಲ್ಲ ಇದ್ದೇ ಇರುತ್ತದೆ. ಮೊದಲ ಪ್ರೀತಿಯನ್ನು ಪಡೆಯಲು ಪ್ರಯತ್ನಿಸಿದ್ದು, ಮೊದಲ ಬಾರಿ ಪ್ರಪೋಸ್​ ಮಾಡಿದ್ದು, ಕ್ಲಾಸ್​ ರೂಮ್​ನಲ್ಲಿ ಮಾಡಿದ ಕೀಟಲೆ, ಮೊದಲ ಗಲಾಟೆ, ಏನೋ ಮಾಡಲು ಹೋಗಿ ಇನ್ನೇನೋ ಆಗಿದ್ದು, ಅಪ್ಪ-ಅಮ್ಮನ ಎದುರು ಬೈಯ್ಯಿಸಿಕೊಂಡಿದ್ದು.. ಹೀಗೆ ಎಲ್ಲವೂ ಸುಂದರ ನೆನಪುಗಳು. ಅವುಗಳನ್ನೆಲ್ಲ ಪ್ರೇಕ್ಷಕರಿಗೆ ಮತ್ತೊಮ್ಮೆ ನೆನಪಿಸುವ ಸಿನಿಮಾ ‘ಬ್ಯಾಕ್​ ಬೆಂಚರ್ಸ್​’.

‘ಬ್ಯಾಕ್​ ಬೆಂಚರ್ಸ್​’ ಸಿನಿಮಾದ ಕಥೆಯ ಪ್ಯಾಟರ್ನ್​ ಹಳೆಯದಾಗಿದ್ದರೂ ಕೂಡ ಪಾತ್ರವರ್ಗದ ಕಾರಣದಿಂದಾಗಿ ಇದರಲ್ಲಿ ಹೊಸತನ ತುಂಬಿದೆ. ಈ ಸಿನಿಮಾದಲ್ಲಿ ನಟಿಸಿರುವ ಬಹುತೇಕ ಕಲಾವಿದರು ಹೊಸಬರು. ಆದ್ದರಿಂದ ಪ್ರೇಕ್ಷಕರಿಗೆ ತಾಜಾ ಅನುಭವ ಸಿಗುತ್ತದೆ. ಯಾವುದೇ ಪೂರ್ವಾಗ್ರಹ ಇಲ್ಲದೇ ಈ ಹೊಸ ಕಲಾವಿದರನ್ನು ನೋಡಿದಾಗ ಸಿಗುವ ಅನುಭೂತಿ ಹೊಸತು. ವಿದ್ಯಾರ್ಥಿಗಳ ಪಾತ್ರದಲ್ಲಿ ಕಾಣಿಸಿಕೊಂಡ ರಂಜನ್​, ಮಾನ್ಯ ಗೌಡ, ಶಶಾಂಕ್​ ಸಿಂಹ, ಜತಿನ್​ ಆರ್ಯನ್, ಆಕಾಶ್​ ಎಂ.ಪಿ., ಕುಂಕುಮ್, ಚತುರ್ಥಿ ರಾಜ್​ ಮುಂತಾದವರು ಈ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಈ ಸಿನಿಮಾದಲ್ಲಿ ಗಂಭೀರವಾದ ಯಾವುದೇ ವಿಷಯಗಳೂ ಇಲ್ಲ. ಸರಿ-ತಪ್ಪುಗಳ ಪಾಠ ಮಾಡುವಂತಹ ದೃಶ್ಯಗಳೂ ಅತಿಯಾಗಿಲ್ಲ. ಶುರುವಿನಿಂದ ಕೊನೇ ತನಕ ಫನ್​ ತೋರಿಸಿ, ಕೊನೆಯಲ್ಲಿ ಸಣ್ಣದೊಂದು ಮೆಸೇಜ್​ ನೀಡಲಾಗಿದೆ. ಎಷ್ಟು ಸಾಧ್ಯವೋ ಅಷ್ಟು ನಗಿಸಲು ‘ಬ್ಯಾಕ್​ ಬೆಂಚರ್ಸ್​’ ಪ್ರಯತ್ನಿಸಿದ್ದಾರೆ. ಕಾಮಿಡಿಯೇ ಈ ಸಿನಿಮಾದ ಹೈಲೈಟ್​. ಅನುಭವಿ ನಟ ಸುಚೇಂದ್ರ ಪ್ರಸಾದ್​ ಕೂಡ ಕಾಮಿಡಿ ಪಾತ್ರದಲ್ಲಿ ಸೈ ಎನಿಸಿಕೊಂಡಿದ್ದಾರೆ. ಅವರು ತೆರೆ ಮೇಲೆ ಬಂದಾಗಲೆಲ್ಲ ನಗು ಗ್ಯಾರಂಟಿ. ನಕುಲ್ ಅಭ್ಯಂಕರ್​ ಅವರ ಸಂಗೀತ, ಮನೋಹರ್​ ಜೋಶಿ ಅವರ ಛಾಯಾಗ್ರಹಣದಿಂದ ಸಿನಿಮಾದ ಮೆರುಗು ಹೆಚ್ಚಿದೆ. ಇದೆಲ್ಲವೂ ಈ ಸಿನಿಮಾದ ಪ್ಲಸ್​ ಪಾಯಿಂಟ್ಸ್​.

ಇದನ್ನೂ ಓದಿ: ಶ್ರೀಮಂತರ ಮಕ್ಕಳ ಕಾಟ, ಚಂದನ್​ ಶೆಟ್ಟಿ ಪಾಠ: ಇದು ಟಾಸ್ಕ್​ಗಳ ಸುಳಿಗೆ ಸಿಕ್ಕ ಸಿನಿಮಾ

‘ಬ್ಯಾಕ್​ ಬೆಂಚರ್ಸ್​’ ಚಿತ್ರದಲ್ಲಿ ಕೆಲವು ಮೈನಸ್​ ವಿಷಯಗಳೂ ಇವೆ. ಆರಂಭದಿಂದ ಕೊನೇ ತನಕ ಸಿನಿಮಾದ ಲಯ ಒಂದೇ ರೀತಿಯಲ್ಲಿ ಸಾಗುತ್ತದೆ. ಹೆಚ್ಚೇನೂ ಏರಿಳಿತವನ್ನು ಇಲ್ಲಿ ನಿರೀಕ್ಷಿಸಲಾಗದು. ಮೊದಲಾರ್ಧದಲ್ಲಿ ನೋಡಿದಂತಹ ತರ್ಲೆ-ತಮಾಷೆಯ ಸಂಗತಿಗಳೇ ದ್ವಿತೀಯಾರ್ಧದಲ್ಲೂ ಮುಂದುವರಿಯುತ್ತವೆ. ಅದರ ಬದಲು ಬೇರೆ ಅಂಶಗಳು ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಫಸ್ಟ್​ ಹಾಫ್​ಗೆ ಹೋಲಿಸಿದರೆ ಸೆಕೆಂಡ್​ ಹಾಫ್​ ಸ್ವಲ್ಪ ಡಲ್​ ಎನಿಸಿದೆ.​ ಇಂತಹ ಒಂದಷ್ಟು ಅಂಶಗಳನ್ನು ಮಾಫಿ ಮಾಡಿದರೆ ‘ಬ್ಯಾಕ್​ ಬೆಂಚರ್ಸ್​’ ಕಹಾನಿ ಹಿಡಿಸುತ್ತದೆ. ಕಾಲೇಜು ಹುಡುಗ-ಹುಡುಗಿಯರಿಗೆ ಈ ಕಥೆ ಹೆಚ್ಚು ಕನೆಕ್ಟ್​ ಆಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾತ್ರಿ ವೇಳೆಯೂ ಉಷ್ಣ ಅಲೆ, ಹೆಚ್ಚಲಿದೆ ತಾಪಮಾನ: ಹವಾಮಾನ ತಜ್ಞ ಮುನ್ಸೂಚನೆ
ರಾತ್ರಿ ವೇಳೆಯೂ ಉಷ್ಣ ಅಲೆ, ಹೆಚ್ಚಲಿದೆ ತಾಪಮಾನ: ಹವಾಮಾನ ತಜ್ಞ ಮುನ್ಸೂಚನೆ
ಕುಡಿದ ಮತ್ತಿನಲ್ಲಿ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ
ಕುಡಿದ ಮತ್ತಿನಲ್ಲಿ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಾಟ
ಬಳ್ಳಾರಿಯಲ್ಲಿ ಭಾರಿ ಬಿಸಿಲು, ತಾಪಮಾನ ತಾಳಲಾರದೆ ಮಡಿಕೆಗಳ ಮೊರೆ ಹೋದ ಜನ!
ಬಳ್ಳಾರಿಯಲ್ಲಿ ಭಾರಿ ಬಿಸಿಲು, ತಾಪಮಾನ ತಾಳಲಾರದೆ ಮಡಿಕೆಗಳ ಮೊರೆ ಹೋದ ಜನ!
ಕೇಂದ್ರ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಮೊಮ್ಮಗನಿಗೂ ಬಿಟ್​ಕಾಯಿನ್ ನಂಟು!
ಕೇಂದ್ರ ಮಾಜಿ ಸಚಿವ ಕೆ.ರೆಹಮಾನ್ ಖಾನ್ ಮೊಮ್ಮಗನಿಗೂ ಬಿಟ್​ಕಾಯಿನ್ ನಂಟು!
ನಾನು ಸರ್ಕಾರ ಅಲ್ಲ, ಸಂಪುಟ ಸ್ಥಾನ ಮಾನ ನೀಡಿರೋದು ಗೌರವಕ್ಕೆ: ರಾಯರೆಡ್ಡಿ
ನಾನು ಸರ್ಕಾರ ಅಲ್ಲ, ಸಂಪುಟ ಸ್ಥಾನ ಮಾನ ನೀಡಿರೋದು ಗೌರವಕ್ಕೆ: ರಾಯರೆಡ್ಡಿ
ನಲಪಾಡ್ ಮನೆ ಮೇಲೆ ಇ.ಡಿ ದಾಳಿಗೆ ಕಾರಣವಾಯ್ತಾ 10 ಲಕ್ಷ ರೂ!
ನಲಪಾಡ್ ಮನೆ ಮೇಲೆ ಇ.ಡಿ ದಾಳಿಗೆ ಕಾರಣವಾಯ್ತಾ 10 ಲಕ್ಷ ರೂ!
ಕ್ರಿಕೆಟ್ ಬಾಲ್​ ಒಳಗೆ ಗಾಂಜಾ, ಮೊಬೈಲ್ ಇಟ್ಟು ಕೈದಿಗಳಿಗೆ ಸಪ್ಲೈ!
ಕ್ರಿಕೆಟ್ ಬಾಲ್​ ಒಳಗೆ ಗಾಂಜಾ, ಮೊಬೈಲ್ ಇಟ್ಟು ಕೈದಿಗಳಿಗೆ ಸಪ್ಲೈ!
ಸಿಎಂ ನಾಯ್ಡು ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವಾಗ ಕುಸಿದ ಬಿದ್ದ ಕಮಾಂಡೋ
ಸಿಎಂ ನಾಯ್ಡು ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವಾಗ ಕುಸಿದ ಬಿದ್ದ ಕಮಾಂಡೋ
ಕನ್ನಡಿಗ ಪೊಲೀಸ್​​ ಅಧಿಕಾರಿಗಳ ಮೇಲೆ ದೌರ್ಜನ್ಯ!, ಆರೋಪ ಯಾರ ಮೇಲೆ?
ಕನ್ನಡಿಗ ಪೊಲೀಸ್​​ ಅಧಿಕಾರಿಗಳ ಮೇಲೆ ದೌರ್ಜನ್ಯ!, ಆರೋಪ ಯಾರ ಮೇಲೆ?
ರಣಬಿಸಿಲಿನಿಂದ ರಕ್ಷಣೆಗೆ ಶ್ವಾನದಳಕ್ಕೆ ವಿಶೇಷ 'ಕೂಲ್' ಟ್ರೀಟ್ಮೆಂಟ್!
ರಣಬಿಸಿಲಿನಿಂದ ರಕ್ಷಣೆಗೆ ಶ್ವಾನದಳಕ್ಕೆ ವಿಶೇಷ 'ಕೂಲ್' ಟ್ರೀಟ್ಮೆಂಟ್!