AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Movie Review: ‘ಬ್ಯಾಕ್​ ಬೆಂಚರ್ಸ್​’ ಚಿತ್ರದಲ್ಲಿ ಕಾಲೇಜ್ ಮಂದಿ ಕಥೆ; ತರ್ಲೆ, ತಮಾಷೆಗೆ ಆದ್ಯತೆ

ಯುವ ಪ್ರೇಕ್ಷಕರೇ ‘ಬ್ಯಾಕ್​ ಬೆಂಚರ್ಸ್​’ ಸಿನಿಮಾದ ಟಾರ್ಗೆಟ್​. ಸ್ಟೂಡೆಂಟ್​ ಲೈಫ್​ನ ಫನ್ನಿ ಸಂಗತಿಗಳೇ ಈ ಚಿತ್ರದಲ್ಲಿನ ಹೈಲೈಟ್​. ಕಾಲೇಜು ಕಹಾನಿ ನೋಡಿ ಎಂಜಾಯ್​ ಮಾಡುವ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗುತ್ತದೆ. ಹೊಸ ನಟ-ನಟಿಯರೇ ತುಂಬಿಕೊಂಡಿರುವ ಈ ಸಿನಿಮಾದ ಪ್ಲಸ್​ ಏನು? ಮೈನಸ್​ ಏನು ಎಂಬುದು ಈ ವಿಮರ್ಶೆಯಲ್ಲಿದೆ..

Movie Review: ‘ಬ್ಯಾಕ್​ ಬೆಂಚರ್ಸ್​’ ಚಿತ್ರದಲ್ಲಿ ಕಾಲೇಜ್ ಮಂದಿ ಕಥೆ; ತರ್ಲೆ, ತಮಾಷೆಗೆ ಆದ್ಯತೆ
‘ಬ್ಯಾಕ್​ ಬೆಂಚರ್ಸ್​’ ಸಿನಿಮಾ ಪೋಸ್ಟರ್​
ಮದನ್​ ಕುಮಾರ್​
|

Updated on: Jul 20, 2024 | 7:47 PM

Share

ಸಿನಿಮಾ: ಬ್ಯಾಕ್​ ಬೆಂಚರ್ಸ್​. ನಿರ್ದೇಶನ: ಬಿ.ಆರ್​. ರಾಜಶೇಖರ್​. ನಿರ್ಮಾಣ: ರಮ್ಯಾ. ಪಾತ್ರವರ್ಗ: ರಂಜನ್​, ಜತಿನ್​ ಆರ್ಯನ್, ಆಕಾಶ್​ ಎಂ.ಪಿ., ಶಶಾಂಕ್​ ಸಿಂಹ, ಸುಚೇಂದ್ರ ಪ್ರಸಾದ್​, ಅರವಿಂದ್​ ಕುಪ್ಲಿಕರ್​, ಮಾನ್ಯ ಗೌಡ, ಅನುಷಾ ಸುರೇಶ್​ ಮುಂತಾದವರು. ಸ್ಟಾರ್​: 3/5

ಪ್ರೇಮಕಥೆಗಳು ಮತ್ತು ಕಾಲೇಜು ಕಥೆಗಳು ಎವರ್​ಗ್ರೀನ್​ ಆಗಿರುತ್ತವೆ. ಅಂತಹ ಕಥಾಹಂದರದ ಸಿನಿಮಾಗಳನ್ನು ಯುವ ಪ್ರೇಕ್ಷಕರು ಹೆಚ್ಚು ಇಷ್ಟಪಡುತ್ತಾರೆ. ‘ಜೋಶ್​’, ‘ಜಾಲಿಡೇಸ್​’ ಸಿನಿಮಾಗಳೇ ಈ ಮಾತಿಗೆ ಉದಾಹರಣೆ. ಆ ಚಿತ್ರಗಳ ಸಾಲಿಗೆ ಸೇರುವಂತಹ ಇನ್ನೊಂದು ಸಿನಿಮಾ ‘ಬ್ಯಾಕ್​ ಬೆಂಚರ್ಸ್​’. ಶೀರ್ಷಿಯೇ ಹೇಳುವಂತೆ ಇದು ಕೊನೇ ಬೆಂಚಿನಲ್ಲಿ ಕುಳಿತ ವಿದ್ಯಾರ್ಥಿಗಳ ಕಥೆ ಇರುವ ಸಿನಿಮಾ. ಬಹುತೇಕ ಹೊಸ ಕಲಾವಿದರನ್ನೇ ಆಯ್ಕೆ ಮಾಡಿಕೊಂಡು ನಿರ್ದೇಶಕ ಬಿ.ಆರ್​. ರಾಜಶೇಖರ್​ ಅವರು ‘ಬ್ಯಾಕ್​ ಬೆಂಚರ್ಸ್​’ ಸಿನಿಮಾ ಮಾಡಿದ್ದಾರೆ.

ವಿದ್ಯಾರ್ಥಿ ಜೀವನ ಸೂಪರ್​ ಆಗಿರುತ್ತದೆ. ಅಲ್ಲಿನ ತರಲೆ, ತಮಾಷೆ, ಮೋಜು, ಮಸ್ತಿಗೆ ಲೆಕ್ಕವೇ ಇಲ್ಲ. ಹದಿಹರೆಯದ ಮನಸ್ಸುಗಳೆಲ್ಲ ಒಂದೆಡೆ ಸೇರಿದಾಗ ಇರುವ ಜೋಶ್​ಗೆ ಮಿತಿ ಕೂಡ ಇರುವುದಿಲ್ಲ. ಪ್ರತಿ ಕಾಲೇಜಿನಲ್ಲೂ, ಪ್ರತಿ ಬ್ಯಾಚ್​ನಲ್ಲೂ ಇಂಥದ್ದೆಲ್ಲ ಇದ್ದೇ ಇರುತ್ತದೆ. ಮೊದಲ ಪ್ರೀತಿಯನ್ನು ಪಡೆಯಲು ಪ್ರಯತ್ನಿಸಿದ್ದು, ಮೊದಲ ಬಾರಿ ಪ್ರಪೋಸ್​ ಮಾಡಿದ್ದು, ಕ್ಲಾಸ್​ ರೂಮ್​ನಲ್ಲಿ ಮಾಡಿದ ಕೀಟಲೆ, ಮೊದಲ ಗಲಾಟೆ, ಏನೋ ಮಾಡಲು ಹೋಗಿ ಇನ್ನೇನೋ ಆಗಿದ್ದು, ಅಪ್ಪ-ಅಮ್ಮನ ಎದುರು ಬೈಯ್ಯಿಸಿಕೊಂಡಿದ್ದು.. ಹೀಗೆ ಎಲ್ಲವೂ ಸುಂದರ ನೆನಪುಗಳು. ಅವುಗಳನ್ನೆಲ್ಲ ಪ್ರೇಕ್ಷಕರಿಗೆ ಮತ್ತೊಮ್ಮೆ ನೆನಪಿಸುವ ಸಿನಿಮಾ ‘ಬ್ಯಾಕ್​ ಬೆಂಚರ್ಸ್​’.

‘ಬ್ಯಾಕ್​ ಬೆಂಚರ್ಸ್​’ ಸಿನಿಮಾದ ಕಥೆಯ ಪ್ಯಾಟರ್ನ್​ ಹಳೆಯದಾಗಿದ್ದರೂ ಕೂಡ ಪಾತ್ರವರ್ಗದ ಕಾರಣದಿಂದಾಗಿ ಇದರಲ್ಲಿ ಹೊಸತನ ತುಂಬಿದೆ. ಈ ಸಿನಿಮಾದಲ್ಲಿ ನಟಿಸಿರುವ ಬಹುತೇಕ ಕಲಾವಿದರು ಹೊಸಬರು. ಆದ್ದರಿಂದ ಪ್ರೇಕ್ಷಕರಿಗೆ ತಾಜಾ ಅನುಭವ ಸಿಗುತ್ತದೆ. ಯಾವುದೇ ಪೂರ್ವಾಗ್ರಹ ಇಲ್ಲದೇ ಈ ಹೊಸ ಕಲಾವಿದರನ್ನು ನೋಡಿದಾಗ ಸಿಗುವ ಅನುಭೂತಿ ಹೊಸತು. ವಿದ್ಯಾರ್ಥಿಗಳ ಪಾತ್ರದಲ್ಲಿ ಕಾಣಿಸಿಕೊಂಡ ರಂಜನ್​, ಮಾನ್ಯ ಗೌಡ, ಶಶಾಂಕ್​ ಸಿಂಹ, ಜತಿನ್​ ಆರ್ಯನ್, ಆಕಾಶ್​ ಎಂ.ಪಿ., ಕುಂಕುಮ್, ಚತುರ್ಥಿ ರಾಜ್​ ಮುಂತಾದವರು ಈ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಈ ಸಿನಿಮಾದಲ್ಲಿ ಗಂಭೀರವಾದ ಯಾವುದೇ ವಿಷಯಗಳೂ ಇಲ್ಲ. ಸರಿ-ತಪ್ಪುಗಳ ಪಾಠ ಮಾಡುವಂತಹ ದೃಶ್ಯಗಳೂ ಅತಿಯಾಗಿಲ್ಲ. ಶುರುವಿನಿಂದ ಕೊನೇ ತನಕ ಫನ್​ ತೋರಿಸಿ, ಕೊನೆಯಲ್ಲಿ ಸಣ್ಣದೊಂದು ಮೆಸೇಜ್​ ನೀಡಲಾಗಿದೆ. ಎಷ್ಟು ಸಾಧ್ಯವೋ ಅಷ್ಟು ನಗಿಸಲು ‘ಬ್ಯಾಕ್​ ಬೆಂಚರ್ಸ್​’ ಪ್ರಯತ್ನಿಸಿದ್ದಾರೆ. ಕಾಮಿಡಿಯೇ ಈ ಸಿನಿಮಾದ ಹೈಲೈಟ್​. ಅನುಭವಿ ನಟ ಸುಚೇಂದ್ರ ಪ್ರಸಾದ್​ ಕೂಡ ಕಾಮಿಡಿ ಪಾತ್ರದಲ್ಲಿ ಸೈ ಎನಿಸಿಕೊಂಡಿದ್ದಾರೆ. ಅವರು ತೆರೆ ಮೇಲೆ ಬಂದಾಗಲೆಲ್ಲ ನಗು ಗ್ಯಾರಂಟಿ. ನಕುಲ್ ಅಭ್ಯಂಕರ್​ ಅವರ ಸಂಗೀತ, ಮನೋಹರ್​ ಜೋಶಿ ಅವರ ಛಾಯಾಗ್ರಹಣದಿಂದ ಸಿನಿಮಾದ ಮೆರುಗು ಹೆಚ್ಚಿದೆ. ಇದೆಲ್ಲವೂ ಈ ಸಿನಿಮಾದ ಪ್ಲಸ್​ ಪಾಯಿಂಟ್ಸ್​.

ಇದನ್ನೂ ಓದಿ: ಶ್ರೀಮಂತರ ಮಕ್ಕಳ ಕಾಟ, ಚಂದನ್​ ಶೆಟ್ಟಿ ಪಾಠ: ಇದು ಟಾಸ್ಕ್​ಗಳ ಸುಳಿಗೆ ಸಿಕ್ಕ ಸಿನಿಮಾ

‘ಬ್ಯಾಕ್​ ಬೆಂಚರ್ಸ್​’ ಚಿತ್ರದಲ್ಲಿ ಕೆಲವು ಮೈನಸ್​ ವಿಷಯಗಳೂ ಇವೆ. ಆರಂಭದಿಂದ ಕೊನೇ ತನಕ ಸಿನಿಮಾದ ಲಯ ಒಂದೇ ರೀತಿಯಲ್ಲಿ ಸಾಗುತ್ತದೆ. ಹೆಚ್ಚೇನೂ ಏರಿಳಿತವನ್ನು ಇಲ್ಲಿ ನಿರೀಕ್ಷಿಸಲಾಗದು. ಮೊದಲಾರ್ಧದಲ್ಲಿ ನೋಡಿದಂತಹ ತರ್ಲೆ-ತಮಾಷೆಯ ಸಂಗತಿಗಳೇ ದ್ವಿತೀಯಾರ್ಧದಲ್ಲೂ ಮುಂದುವರಿಯುತ್ತವೆ. ಅದರ ಬದಲು ಬೇರೆ ಅಂಶಗಳು ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಫಸ್ಟ್​ ಹಾಫ್​ಗೆ ಹೋಲಿಸಿದರೆ ಸೆಕೆಂಡ್​ ಹಾಫ್​ ಸ್ವಲ್ಪ ಡಲ್​ ಎನಿಸಿದೆ.​ ಇಂತಹ ಒಂದಷ್ಟು ಅಂಶಗಳನ್ನು ಮಾಫಿ ಮಾಡಿದರೆ ‘ಬ್ಯಾಕ್​ ಬೆಂಚರ್ಸ್​’ ಕಹಾನಿ ಹಿಡಿಸುತ್ತದೆ. ಕಾಲೇಜು ಹುಡುಗ-ಹುಡುಗಿಯರಿಗೆ ಈ ಕಥೆ ಹೆಚ್ಚು ಕನೆಕ್ಟ್​ ಆಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!