AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಮಂತರ ಮಕ್ಕಳ ಕಾಟ, ಚಂದನ್​ ಶೆಟ್ಟಿ ಪಾಠ: ಇದು ಟಾಸ್ಕ್​ಗಳ ಸುಳಿಗೆ ಸಿಕ್ಕ ಸಿನಿಮಾ

‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾ ಮೂಲಕ ಸಂಪೂರ್ಣ ಹೊಸ ತಲೆಮಾರಿನ ಪ್ರೇಕ್ಷಕರನ್ನು ಸೆಳೆದುಕೊಳ್ಳಲು ನಿರ್ದೇಶಕ ಅರುಣ್​ ಅಮುಕ್ತ ಅವರು ಪ್ರಯತ್ನಿಸಿದ್ದಾರೆ. ಒಂದು ರಿಯಾಲಿಟಿ ಶೋ ರೀತಿ ಟಾಸ್ಕ್​ಗಳನ್ನು ಹೆಣೆದು, ಹದಿಹರೆಯದ ಹುಡುಗ-ಹುಡುಗಿಯರಿಗೆ ಪಾಠ ಕಲಿಸುವ ಕಥೆ ಈ ಸಿನಿಮಾದಲ್ಲಿದೆ. ಇಲ್ಲಿದೆ ಸಿನಿಮಾದ ವಿಮರ್ಶೆ..

ಶ್ರೀಮಂತರ ಮಕ್ಕಳ ಕಾಟ, ಚಂದನ್​ ಶೆಟ್ಟಿ ಪಾಠ: ಇದು ಟಾಸ್ಕ್​ಗಳ ಸುಳಿಗೆ ಸಿಕ್ಕ ಸಿನಿಮಾ
‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾ ಪೋಸ್ಟರ್​
ಮದನ್​ ಕುಮಾರ್​
|

Updated on:Jul 19, 2024 | 10:53 PM

Share

ಸಿನಿಮಾ: ವಿದ್ಯಾರ್ಥಿ ವಿದ್ಯಾರ್ಥಿನಿಯರೇ. ನಿರ್ಮಾಣ: ಸುಬ್ರಹ್ಮಣ್ಯ ಕುಕ್ಕೆ, ಶಿವಲಿಂಗೇಗೌಡ ಎ.ಸಿ. ನಿರ್ದೇಶನ: ಅರುಣ್ ಅಮುಕ್ತ. ಪಾತ್ರವರ್ಗ: ಚಂದನ್​ ಶೆಟ್ಟಿ, ಮನೋಜ್​ ವಿವಾನ್​, ಮನಸ್ವಿ, ಭಾವನಾ ಅಪ್ಪು, ಅಮರ್​, ಭವ್ಯಾ, ರಘು ರಾಮನಕೊಪ್ಪ, ಸುನಿಲ್​ ಪುರಾಣಿಕ್​, ಪ್ರಶಾಂತ್​ ಸಂಬರ್ಗಿ ಮುಂತಾದವರು. ಸ್ಟಾರ್​: 2.5

ಚಂದನ್​ ಶೆಟ್ಟಿ ನಟನಾಗಿ ಬಡ್ತಿ ಪಡೆದಿದ್ದಾರೆ. ಇಷ್ಟು ದಿನ ಹಾಡುಗಳ ಮೂಲಕ ರಂಜಿಸಿದ್ದ ಅವರು ಈಗ ಅಭಿನಯದ ಮೂಲಕ ಜನರಿಗೆ ಇನ್ನಷ್ಟು ಹತ್ತಿರ ಆಗುವ ಪ್ರಯತ್ನ ಮಾಡಿದ್ದಾರೆ. ಅವರು ನಟಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾಗೆ ಅರುಣ್​ ಅಮುಕ್ತ ಅವರು ನಿರ್ದೇಶನ ಮಾಡಿದ್ದಾರೆ. ಬಹುತೇಕ ಹೊಸ ಕಲಾವಿದರೇ ಮುಖ್ಯ ಭೂಮಿಕೆಯಲ್ಲಿ ಇರುವ ಈ ಸಿನಿಮಾದಲ್ಲಿ ಸಂಪೂರ್ಣ ಯೂತ್​ಫುಲ್​ ಕಾಂಟೆಂಟ್​ ಇದೆ. ಶಾಲೆಯಲ್ಲಿ ನಡೆಯುವ ತರಲೆ, ಕೀಟಲೆ, ಅತಿಯಾದ ಹುಡುಗಾಟಿಕೆಯನ್ನೇ ಹೆಚ್ಚಾಗಿ ಈ ಚಿತ್ರದಲ್ಲಿ ತೋರಿಸಲಾಗಿದೆ. ಜೊತೆಗೆ ಒಂದು ಮೆಸೇಜ್​ ಕೂಡ ನೀಡಲಾಗಿದೆ. ಒಟ್ಟಾರೆ ಸಿನಿಮಾ ಹೇಗಿದೆ ಎಂಬುದಕ್ಕೆ ಉತ್ತರ ಈ ವಿಮರ್ಶೆಯಲ್ಲಿದೆ.

‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದಲ್ಲಿ ಹೊಸ ತಲೆಮಾರಿನ ಪ್ರೇಕ್ಷಕರನ್ನು ಸೆಳೆಯಲು ಡೈರೆಕ್ಟರ್​ ಅರುಣ್​ ಅಮುಕ್ತ ಪ್ರಯತ್ನ ಮಾಡಿದ್ದಾರೆ. ಹಾಗಾಗಿ ಅವರು ಹದಿಹರೆಯದ ಹುಡುಗ-ಹುಡುಗಿಯರ ಕಥೆಯಲ್ಲೇ ಇಲ್ಲಿ ಹೈಲೈಟ್​ ಮಾಡಿದ್ದಾರೆ. ಶ್ರೀಮಂತರ ಮಕ್ಕಳೇ ತುಂಬಿರುವ ಶಾಲೆಯೊಂದರಲ್ಲಿ ಏನೆಲ್ಲ ನಡೆಯಬಹುದು ಎಂಬುದನ್ನು ಅವರು ಈ ಸಿನಿಮಾದಲ್ಲಿ ತೋರಿಸಿದ್ದಾರೆ. ಹೈಸ್ಕೂಲ್​ನಲ್ಲಿ ಇರುವಾಗಲೇ ಲಂಗು-ಲಗಾಮು ಇಲ್ಲದೇ ಧೂಮಪಾನ, ಮದ್ಯಪಾನಕ್ಕೆ ದಾಸರಾದ ಯುವಕ-ಯುವತಿಯರೇ ಈ ಚಿತ್ರದ ಕೇಂದ್ರ ಪಾತ್ರಗಳು! ಆದರೆ ಕೊನೆಯಲ್ಲಿ ಬೇರೆಯದೇ ಮೆಸೇಜ್​ ಇದೆ.

ರ‍್ಯಾಗಿಂಗ್​ ನಿಜಕ್ಕೂ ಒಂದು ಪಿಡುಗು. ಅದನ್ನು ಖಂಡಿಸುವ ಕೆಲಸ ಈ ಸಿನಿಮಾದಿಂದ ಆಗಿದೆ. ಸ್ಮಾರ್ಟ್​ಫೋನ್​ಗಳಿಗೆ ಅಂಟಿಕೊಂಡ ಹದಿಹರೆಯದ ಹುಡುಗ-ಹುಡುಗಿಯರಿಗೆ ಈ ಸಿನಿಮಾ ಮೂಲಕ ಪಾಠ ಮಾಡಲಾಗಿದೆ. ಬಿಗ್ ಬಾಸ್ ರೀತಿಯ ರಿಯಾಲಿಟಿ ಶೋಗಳಲ್ಲಿ ಟಾಸ್ಕ್​ ನೀಡುವ ಹಾಗೆ, ಈ ಸಿನಿಮಾದಲ್ಲೂ ದಾರಿ ತಪ್ಪಿದ ಮಕ್ಕಳಿಗೆ ಟಾಸ್ಕ್​ ನೀಡಲಾಗುತ್ತದೆ. ಆ ಟಾಸ್ಕ್​ಗಳ ಮೂಲಕವೇ ಅವರನ್ನು ದಾರಿಗೆ ತರುವ ರೀತಿಯಲ್ಲಿ ನಿರ್ದೇಶಕರು ಕಥೆ ಹೆಣೆದಿದ್ದಾರೆ. ಆ ಕಾರಣದಿಂದಾಗಿ ಹೊಸ ಪೀಳಿಗೆಯ ಪ್ರೇಕ್ಷಕರಿಗೆ ಈ ಸಿನಿಮಾ ಆಪ್ತವಾಗುತ್ತದೆ.

ವಿಲನ್​ಗಳ ರೀತಿ ಇರುವ ಪಾತ್ರಗಳನ್ನೇ ಮುಂದಿಟ್ಟುಕೊಂಡು ಇಡೀ ಕಥೆಯನ್ನು ಹೇಳುವ ಸವಾಲನ್ನು ತೆಗೆದುಕೊಂಡಿರುವ ನಿರ್ದೇಶಕರು, ಕೊನೆಯಲ್ಲಿ ಅದೇ ಪಾತ್ರಗಳನ್ನು ಪರಿವರ್ತಿಸಿ ಒಳ್ಳೆಯ ಸಂದೇಶ ನೀಡಲು ಪ್ರಯತ್ನಿಸಿದ್ದಾರೆ. ಈ ಪ್ರಯತ್ನದಲ್ಲಿ ಅವರು ಭಾಗಶಃ ಸಫಲರಾಗಿದ್ದಾರೆ. ಆದರೆ ಇದಕ್ಕಾಗಿ ಅವರು ಹೆಣೆದ ದೃಶ್ಯಗಳು ಪ್ರೇಕ್ಷಕರಿಗೆ ಅಷ್ಟು ಸುಲಭವಾಗಿ ಕನೆಕ್ಟ್​ ಆಗುವುದಿಲ್ಲ. ಶಿಕ್ಷಕರು ಹಾಗೂ ತಂದೆ-ತಾಯಿ ಎಷ್ಟೇ ಬುದ್ಧಿ ಹೇಳಿದರೂ ಬಗ್ಗದ ಮಕ್ಕಳು ಒಂದೇ ಒಂದು ಗೇಮ್​ನಿಂದ ಬದಲಾಗಿಬಿಡುವ ಸನ್ನಿವೇಶ ಕೊಂಚ ಬಾಲಿಶ ಎನಿಸಬಹುದು. ಟಾಸ್ಕ್​ ನೀಡುವ ದೃಶ್ಯಗಳೇ ಈ ಸಿನಿಮಾದ ಮುಖ್ಯ ಭಾಗ. ಅದು ರುಚಿಸಿದರೆ ಪ್ರೇಕ್ಷಕರಿಗೆ ಈ ಚಿತ್ರ ಇಷ್ಟವಾಗುತ್ತದೆ. ಇಲ್ಲದಿದ್ದರೆ ಇಡೀ ಸಿನಿಮಾನೇ ಆ ಟಾಸ್ಕ್​ಗಳ ಸುಳಿಗೆ ಸಿಕ್ಕಂತೆ ಭಾಸವಾಗುತ್ತದೆ.

ಇದನ್ನೂ ಓದಿ: ದೇವಸ್ಥಾನ ಕಟ್ಟಿಸಿ ಓಟ್ ಕೇಳುವವರ ಕಿವಿ ಹಿಂಡಿದ ‘ಮೂರನೇ ಕೃಷ್ಣಪ್ಪ’

ಆರಂಭದಲ್ಲಿ ವಿದ್ಯಾರ್ಥಿಗಳ ಮೋಜು, ಮಸ್ತಿ, ರ‍್ಯಾಗಿಂಗ್​, ಅತಿರೇಕದ ವರ್ತನೆ ಮುಂತಾದ್ದನ್ನು ತೋರಿಸಲು ಹಲವು ದೃಶ್ಯಗಳು ಮೀಸಲಾಗಿವೆ. ಚಂದನ್​ ಶೆಟ್ಟಿ ಎಂಟ್ರಿ ನೀಡಿದ ಬಳಿಕ ಕಥೆಯಲ್ಲಿ ಸಣ್ಣ ಕುತೂಹಲ ಮೂಡುತ್ತದೆ. ಮಧ್ಯಂತರದ ಸಮಯದಲ್ಲಿ ಸ್ವಲ್ಪ ಟ್ವಿಸ್ಟ್ ಕೂಡ ಎದುರಾಗುತ್ತದೆ. ಆ ಬಳಿಕ ಏನಾಗುತ್ತದೆ ಎಂಬುದನ್ನು ಪ್ರೇಕ್ಷಕರು ಸುಲಭವಾಗಿ ಊಹಿಸಬಹುದು. ಇದು ಈ ಸಿನಿಮಾದ ಮುಖ್ಯವಾದ ಮೈನಸ್​ ಪಾಯಿಂಟ್​. ಈ ವಿಚಾರದ ಬಗ್ಗೆ ನಿರ್ದೇಶಕರು ಸ್ವಲ್ಪ ಗಮನ ಹರಿಸಬೇಕಿತ್ತು. ಇನ್ನು, ಕೆಲವು ವಿಚಾರಗಳ ಪುನರಾವರ್ತನೆಯಿಂದ ಸಿನಿಮಾದ ಅವಧಿ ಕೂಡ ಅನಗತ್ಯವಾಗಿ ಹೆಚ್ಚಾಗಿದೆ.

ಕ್ವಾಲಿಟಿಯಲ್ಲಿ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾ ಎಲ್ಲಿಯೂ ರಾಜಿ ಆಗಿಲ್ಲ. ಬಾಕಿ ದೃಶ್ಯಗಳಿಗಿಂತಲೂ ಹಾಡುಗಳನ್ನು ಹೆಚ್ಚು ಶ್ರೀಮಂತವಾಗಿ ಚಿತ್ರಿಸಲಾಗಿದೆ. ಚಂದನ್​ ಶೆಟ್ಟಿ ಅಭಿಮಾನಿಗಳಿಗೆ ‘ಪಾರ್ಟಿ ಸಾಂಗ್’ ಮನರಂಜನೆ ನೀಡುತ್ತದೆ. ಡಬಲ್​ ಶೆಡ್​ ಇರುವ ಪಾತ್ರವನ್ನ ಚಂದನ್​ ಶೆಟ್ಟಿ ಚೆನ್ನಾಗಿ ನಿಭಾಯಿಸಿದ್ದಾರೆ. ಹೊಸ ಪ್ರತಿಭೆಗಳಾದ ಮನೋಜ್​ ವಿವಾನ್​, ಮನಸ್ವಿ, ಭಾವನಾ ಅಪ್ಪು, ಅಮರ್​ ಕೂಡ ಉತ್ತಮವಾಗಿ ನಟಿಸಿದ್ದಾರೆ. ಸುನಿಲ್​ ಪುರಾಣಿಕ್​, ಭವ್ಯಾ ಮುಂತಾದ ಹಿರಿಯ ಕಲಾವಿದರು ಹೊಸ ಹುಡುಗರಿಗೆ ಸಾಥ್​ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:29 pm, Fri, 19 July 24

ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ