AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dhoomam First Half Review: ಪವನ್​ ಕುಮಾರ್​ ನಿರ್ದೇಶನದ ‘ಧೂಮಂ’ ಸಿನಿಮಾ ಹೇಗಿದೆ? ಇಲ್ಲಿದೆ ಫಸ್ಟ್​ ಹಾಫ್​ ರಿಪೋರ್ಟ್​

Fahadh Faasil New Movie: ಕನ್ನಡ ಮತ್ತು ಮಲಯಾಳಂನಲ್ಲಿ ‘ಧೂಮಂ’ ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರದ ಫಸ್ಟ್​ ಹಾಫ್​ನಲ್ಲಿ ಏನೆಲ್ಲ ಇದೆ ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ.

Dhoomam First Half Review: ಪವನ್​ ಕುಮಾರ್​ ನಿರ್ದೇಶನದ ‘ಧೂಮಂ’ ಸಿನಿಮಾ ಹೇಗಿದೆ? ಇಲ್ಲಿದೆ ಫಸ್ಟ್​ ಹಾಫ್​ ರಿಪೋರ್ಟ್​
ಫಹಾದ್​ ಫಾಸಿಲ್​
ಮದನ್​ ಕುಮಾರ್​
| Edited By: |

Updated on:Jun 23, 2023 | 12:17 PM

Share

‘ಲೂಸಿಯಾ’ ಖ್ಯಾತಿಯ ನಿರ್ದೇಶಕ ಪವನ್​ ಕುಮಾರ್ (Pawan Kumar)​ ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ನಿರ್ದೇಶನದ ಬಗ್ಗೆ ಪ್ರೇಕ್ಷಕರಿಗೆ ಭರವಸೆ ಇದೆ. ‘ಯು ಟರ್ನ್​’ ನಂತರ ಅವರು ದೊಡ್ಡ ಗ್ಯಾಪ್​ ತೆಗೆದುಕೊಂಡು ‘ಧೂಮಂ’ ಸಿನಿಮಾ (Dhoomam Movie) ಮಾಡಿದ್ದಾರೆ. ವಿಶೇಷ ಏನೆಂದರೆ ಈ ಚಿತ್ರ ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗಿದೆ. ಇಂದು (ಜೂನ್​ 23) ತೆರೆಕಂಡಿರುವ ಈ ಚಿತ್ರದಲ್ಲಿ ಪ್ರತಿಭಾನ್ವಿತ ಕಲಾವಿದರಾದ ಫಹಾದ್​ ಫಾಸಿಲ್​ (Fahadh Faasil), ರೋಷನ್​ ಮ್ಯಾಥೀವ್​, ಅಪರ್ಣಾ ಬಾಲಮುರಳಿ, ಅಚ್ಯುತ್​ ಕುಮಾರ್​ ಮುಂತಾದವರು ನಟಿಸಿದ್ದಾರೆ. ‘ಹೊಂಬಾಳೆ ಫಿಲ್ಮ್ಸ್​’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಪೂರ್ಣಚಂದ್ರ ತೇಜಸ್ವಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಪೋಸ್ಟರ್​ ಮತ್ತು ಟ್ರೇಲರ್​ ಮೂಲಕ ಗಮನ ಸೆಳೆದ ‘ಧೂಮಂ’ ಸಿನಿಮಾದ ಫಸ್ಟ್​ ಹಾಫ್​ನಲ್ಲಿ ಏನೆಲ್ಲ ಇದೆ ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ…

  1. ಕೌತುಕ ಮೂಡಿಸುವ ದೃಶ್ಯಗಳ ಮೂಲಕ ‘ಧೂಮಂ’ ಕತೆ ಆರಂಭಿಸಿದ ನಿರ್ದೇಶಕ ಪವನ್ ಕುಮಾರ್.
  2. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿದೆ ಸಿಗರೇಟ್‌ಗೆ ಸಂಬಂಧಿಸಿದ ‘ಧೂಮಂ’ ಕಥೆ
  3. ಫ್ಲ್ಯಾಶ್‌‌‌‌ಬ್ಯಾಕ್ ಮತ್ತು ಪ್ರಸೆಂಟ್ ದೃಶ್ಯಗಳ ಮೂಲಕ ಸಸ್ಪೆನ್ಸ್ ಹೆಚ್ಚಿಸಿದ ನಿರೂಪಣೆ.
  4. ಸಿಗರೇಟ್ ಕಂಪನಿಯ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥನ ಪಾತ್ರದಲ್ಲಿ ಕಾಣಿಸಿಕೊಂಡ ಫಹಾದ್ ಫಾಸಿಲ್.
  5. ಧೂಮಪಾನದ ಹಿಂದಿರಬಹುದಾದ ಕರಾಳ ಜಗತ್ತಿನ ಪರಿಚಯ ಮಾಡಿಸುವ ರೀತಿ ಇದೆ ‘ಧೂಮಂ’ ಫಸ್ಟ್ ಹಾಫ್.
  6. ಸಿಗರೇಟ್ ಕಂಪನಿಯ ಓನರ್ ಪಾತ್ರದಲ್ಲಿ ನಟಿಸಿದ ರೋಷನ್ ಮ್ಯಾಥೀವ್.
  7. ‘ಧೂಮಂ’ ಚಿತ್ರದ ಸನ್ನಿವೇಶಗಳಲ್ಲಿ ನೆನಪಾಗುತ್ತದೆ ‘ಯು ಟರ್ನ್’ ಸಿನಿಮಾದ ಛಾಯೆ.
  8. ಜಾಸ್ತಿ ಏನೂ ರಹಸ್ಯ ಬಿಟ್ಟುಕೊಡದೇ ಮಧ್ಯಂತರದವರೆಗೂ ಸಾಗುವ ‘ಧೂಮಂ’ ಸಿನಿಮಾ ಕಥೆ.
  9. ಸಿಗರೇಟ್ ಮತ್ತು ಹ್ಯೂಮನ್ ಬಾಂಬ್ ನಡುವೆ ಸಂಬಂಧ ಇದೆ ಎಂಬಂತಹ ಒಗಟಿನ ರೀತಿಯ ದೃಶಗಳಿಗೆ ‘ಧೂಮಂ’ ಫಸ್ಟ್ ಹಾಫ್ ಸೀಮಿತ.
  10. ಸಿಂಪಲ್ ಹುಡುಗಿಯಾಗಿ ಕಾಣಿಸಿಕೊಂಡು ಇಂಟರ್‌ವಲ್ ವೇಳೆಗೆ ಸಣ್ಣ ಟ್ವಿಸ್ಟ್ ನೀಡಿದ ಅಪರ್ಣಾ ಬಾಲಮುರಳಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:04 pm, Fri, 23 June 23

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ