Dhoomam First Half Review: ಪವನ್​ ಕುಮಾರ್​ ನಿರ್ದೇಶನದ ‘ಧೂಮಂ’ ಸಿನಿಮಾ ಹೇಗಿದೆ? ಇಲ್ಲಿದೆ ಫಸ್ಟ್​ ಹಾಫ್​ ರಿಪೋರ್ಟ್​

Fahadh Faasil New Movie: ಕನ್ನಡ ಮತ್ತು ಮಲಯಾಳಂನಲ್ಲಿ ‘ಧೂಮಂ’ ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರದ ಫಸ್ಟ್​ ಹಾಫ್​ನಲ್ಲಿ ಏನೆಲ್ಲ ಇದೆ ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ.

Dhoomam First Half Review: ಪವನ್​ ಕುಮಾರ್​ ನಿರ್ದೇಶನದ ‘ಧೂಮಂ’ ಸಿನಿಮಾ ಹೇಗಿದೆ? ಇಲ್ಲಿದೆ ಫಸ್ಟ್​ ಹಾಫ್​ ರಿಪೋರ್ಟ್​
ಫಹಾದ್​ ಫಾಸಿಲ್​
Follow us
| Updated By: Digi Tech Desk

Updated on:Jun 23, 2023 | 12:17 PM

‘ಲೂಸಿಯಾ’ ಖ್ಯಾತಿಯ ನಿರ್ದೇಶಕ ಪವನ್​ ಕುಮಾರ್ (Pawan Kumar)​ ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ನಿರ್ದೇಶನದ ಬಗ್ಗೆ ಪ್ರೇಕ್ಷಕರಿಗೆ ಭರವಸೆ ಇದೆ. ‘ಯು ಟರ್ನ್​’ ನಂತರ ಅವರು ದೊಡ್ಡ ಗ್ಯಾಪ್​ ತೆಗೆದುಕೊಂಡು ‘ಧೂಮಂ’ ಸಿನಿಮಾ (Dhoomam Movie) ಮಾಡಿದ್ದಾರೆ. ವಿಶೇಷ ಏನೆಂದರೆ ಈ ಚಿತ್ರ ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗಿದೆ. ಇಂದು (ಜೂನ್​ 23) ತೆರೆಕಂಡಿರುವ ಈ ಚಿತ್ರದಲ್ಲಿ ಪ್ರತಿಭಾನ್ವಿತ ಕಲಾವಿದರಾದ ಫಹಾದ್​ ಫಾಸಿಲ್​ (Fahadh Faasil), ರೋಷನ್​ ಮ್ಯಾಥೀವ್​, ಅಪರ್ಣಾ ಬಾಲಮುರಳಿ, ಅಚ್ಯುತ್​ ಕುಮಾರ್​ ಮುಂತಾದವರು ನಟಿಸಿದ್ದಾರೆ. ‘ಹೊಂಬಾಳೆ ಫಿಲ್ಮ್ಸ್​’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಪೂರ್ಣಚಂದ್ರ ತೇಜಸ್ವಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಪೋಸ್ಟರ್​ ಮತ್ತು ಟ್ರೇಲರ್​ ಮೂಲಕ ಗಮನ ಸೆಳೆದ ‘ಧೂಮಂ’ ಸಿನಿಮಾದ ಫಸ್ಟ್​ ಹಾಫ್​ನಲ್ಲಿ ಏನೆಲ್ಲ ಇದೆ ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ…

  1. ಕೌತುಕ ಮೂಡಿಸುವ ದೃಶ್ಯಗಳ ಮೂಲಕ ‘ಧೂಮಂ’ ಕತೆ ಆರಂಭಿಸಿದ ನಿರ್ದೇಶಕ ಪವನ್ ಕುಮಾರ್.
  2. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿದೆ ಸಿಗರೇಟ್‌ಗೆ ಸಂಬಂಧಿಸಿದ ‘ಧೂಮಂ’ ಕಥೆ
  3. ಫ್ಲ್ಯಾಶ್‌‌‌‌ಬ್ಯಾಕ್ ಮತ್ತು ಪ್ರಸೆಂಟ್ ದೃಶ್ಯಗಳ ಮೂಲಕ ಸಸ್ಪೆನ್ಸ್ ಹೆಚ್ಚಿಸಿದ ನಿರೂಪಣೆ.
  4. ಸಿಗರೇಟ್ ಕಂಪನಿಯ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥನ ಪಾತ್ರದಲ್ಲಿ ಕಾಣಿಸಿಕೊಂಡ ಫಹಾದ್ ಫಾಸಿಲ್.
  5. ಧೂಮಪಾನದ ಹಿಂದಿರಬಹುದಾದ ಕರಾಳ ಜಗತ್ತಿನ ಪರಿಚಯ ಮಾಡಿಸುವ ರೀತಿ ಇದೆ ‘ಧೂಮಂ’ ಫಸ್ಟ್ ಹಾಫ್.
  6. ಸಿಗರೇಟ್ ಕಂಪನಿಯ ಓನರ್ ಪಾತ್ರದಲ್ಲಿ ನಟಿಸಿದ ರೋಷನ್ ಮ್ಯಾಥೀವ್.
  7. ‘ಧೂಮಂ’ ಚಿತ್ರದ ಸನ್ನಿವೇಶಗಳಲ್ಲಿ ನೆನಪಾಗುತ್ತದೆ ‘ಯು ಟರ್ನ್’ ಸಿನಿಮಾದ ಛಾಯೆ.
  8. ಜಾಸ್ತಿ ಏನೂ ರಹಸ್ಯ ಬಿಟ್ಟುಕೊಡದೇ ಮಧ್ಯಂತರದವರೆಗೂ ಸಾಗುವ ‘ಧೂಮಂ’ ಸಿನಿಮಾ ಕಥೆ.
  9. ಸಿಗರೇಟ್ ಮತ್ತು ಹ್ಯೂಮನ್ ಬಾಂಬ್ ನಡುವೆ ಸಂಬಂಧ ಇದೆ ಎಂಬಂತಹ ಒಗಟಿನ ರೀತಿಯ ದೃಶಗಳಿಗೆ ‘ಧೂಮಂ’ ಫಸ್ಟ್ ಹಾಫ್ ಸೀಮಿತ.
  10. ಸಿಂಪಲ್ ಹುಡುಗಿಯಾಗಿ ಕಾಣಿಸಿಕೊಂಡು ಇಂಟರ್‌ವಲ್ ವೇಳೆಗೆ ಸಣ್ಣ ಟ್ವಿಸ್ಟ್ ನೀಡಿದ ಅಪರ್ಣಾ ಬಾಲಮುರಳಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:04 pm, Fri, 23 June 23

ತಾಜಾ ಸುದ್ದಿ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!