AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sidlingu 2 Review: ‘ಸಿದ್ಲಿಂಗು 2’ ಚಿತ್ರದಲ್ಲೂ ಮುಂದುವರಿದ ಯೋಗಿ-ವಿಜಯ್ ಪ್ರಸಾದ್ ‘ಕಾರು’ಬಾರು

ನಟ ಲೂಸ್ ಮಾದ ಯೋಗಿ ಮತ್ತು ನಿರ್ದೇಶಕ ವಿಜಯ್ ಪ್ರಸಾದ್ ಅವರ ಕಾಂಬಿನೇಷನ್​ನಲ್ಲಿ ಕಾರಿನ ಕಥೆ ಮುಂದುವರಿದಿದೆ. ಹಳೆಯ ಮತ್ತು ಹೊಸ ಪಾತ್ರಗಳ ಸಂಗಮದಿಂದ ‘ಸಿದ್ಲಿಂಗು 2’ ಚಿತ್ರಕ್ಕೆ ಬೇರೆ ಮೆರಗು ಬಂದಿದೆ. ಒಟ್ಟಾರೆ ಸಿನಿಮಾ ಹೇಗಿದೆ ಎಂಬುದು ತಿಳಿಯಲು ಈ ವಿಮರ್ಶೆ ಓದಿ..

Sidlingu 2 Review: ‘ಸಿದ್ಲಿಂಗು 2’ ಚಿತ್ರದಲ್ಲೂ ಮುಂದುವರಿದ ಯೋಗಿ-ವಿಜಯ್ ಪ್ರಸಾದ್ ‘ಕಾರು’ಬಾರು
Loose Mada Yogi, Sonu Gowda
ಮದನ್​ ಕುಮಾರ್​
|

Updated on: Feb 16, 2025 | 3:05 PM

Share

ಸಿನಿಮಾ: ಸಿದ್ಲಿಂಗು 2. ನಿರ್ಮಾಣ: ಶ್ರೀಹರಿ, ರಾಜು ಶೇರೇಗಾರ್. ನಿರ್ದೇಶನ: ವಿಜಯ್ ಪ್ರಸಾದ್. ಪಾತ್ರವರ್ಗ: ಲೂಸ್ ಮಾದ ಯೋಗಿ, ಸೋನು ಗೌಡ, ಸುಮನ್ ರಂಗನಾಥ್, ಪದ್ಮಜಾ ರಾವ್, ಬಿ. ಸುರೇಶ ಮುಂತಾದವರು. ಸ್ಟಾರ್​: 3/5

ನಿರ್ದೇಶಕ ವಿಜಯ್ ಪ್ರಸಾದ್ ಅವರು ಸಿನಿಮಾ ಮಾಡುವ ಶೈಲಿಯೇ ಭಿನ್ನ. ಜನರ ನಡುವಿನ ಸಂಬಂಧಗಳ ಎಳೆಯನ್ನೇ ಇಟ್ಟುಕೊಂಡು ಅವರು ನವಿರಾದ ಕಥೆ ಹೇಳುತ್ತಾರೆ. ಆದರೆ ಇತ್ತೀಚಿನ ಕೆಲವು ಸಿನಿಮಾಗಳಲ್ಲಿ ಕೊಂಚ ಹದ ತಪ್ಪಿತ್ತು. ಡಬಲ್ ಮೀನಿಂಗ್ ಸಂಭಾಷಣೆಗಳ ಬಳಕೆಯಿಂದ ನಿಜವಾದ ಫ್ಲೇವರ್ ಕಾಣೆ ಆಗಿತ್ತು. ಆದರೆ ಈಗ ವಿಜಯ್ ಪ್ರಸಾದ್ ಅವರು ಮತ್ತೆ ಸರಿಯಾದ ಹಳಿಗೆ ಮರಳಿದ್ದಾರೆ. ಅದು ‘ಸಿದ್ಲಿಂಗು 2’ ಸಿನಿಮಾ ಮೂಲಕ. ಈ ಸಿನಿಮಾದ ವಿಮರ್ಶೆ ಇಲ್ಲಿದೆ..

ಕೇವಲ ಶೀರ್ಷಿಕೆ ಬೇಕು ಎಂಬ ಕಾರಣಕ್ಕೆ ವಿಜಯ್ ಪ್ರಸಾದ್ ಅವರು ‘ಸಿದ್ಲಿಂಗು 2’ ಸಿನಿಮಾ ಮಾಡಿಲ್ಲ. ಬದಲಿಗೆ ನಿಜವಾಗಿಯೂ ‘ಸಿದ್ಲಿಂಗು’ ಕಥೆಯನ್ನು 2ನೇ ಪಾರ್ಟ್​ನಲ್ಲಿ ಮುಂದುವರಿಸಿದ್ದಾರೆ. ಕಾರಿಗಾಗಿ ಸಿದ್ಲಿಂಗು ನಡೆಸುವ ಹುಡುಕಾಟ, ಹೋರಾಟ ಈ ಬಾರಿಯೂ ಮುಂದುವರಿದಿದೆ. ಇಲ್ಲಿ ಕಾರು ಒಂದು ನೆಪವಷ್ಟೇ. ಅದನ್ನು ಇಟ್ಟುಕೊಂಡು ಸಂಬಂಧಗಳ ಮೌಲ್ಯವನ್ನು ತಿಳಿಸುವ ಪ್ರಯತ್ನವನ್ನು ಎಲ್ಲ ಪಾತ್ರಗಳ ಮೂಲಕ ಮಾಡಲಾಗಿದೆ.

ಮೊದಲ ಪಾರ್ಟ್​ನಲ್ಲಿ ಮಂಗಳಾ ಟೀಚರ್​ ಪಾತ್ರವನ್ನು ರಮ್ಯಾ ಮಾಡಿದ್ದರು. ಈಗ ‘ಸಿದ್ಲಿಂಗು 2’ ಸಿನಿಮಾದಲ್ಲಿ ಅವರ ಪಾತ್ರ ಫ್ಲ್ಯಾಶ್ ಬ್ಯಾಕ್​ಗೆ ಮಾತ್ರ ಸೀಮಿತವಾಗಿದೆ. ಆದರೆ ಆ ಪಾತ್ರದ ಛಾಯೆ ಕೊನೆವರೆಗೂ ಸಾಗಿ ಬಂದಿದೆ. ನಟಿ ಸೋನು ಗೌಡ ಅವರು ಸೀಕ್ವೆಲ್​ಗೆ ನಾಯಕಿ ಆಗಿದ್ದಾರೆ. ಅವರು ಕೂಡ ಟೀಚರ್​ ಆಗಿಯೇ ನಿವೇದಿತಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಮನ್ ರಂಗನಾಥ್ ಕೂಡ ಕೆಲವು ದೃಶ್ಯಗಳಲ್ಲಿ ಬಂದು ಟ್ವಿಸ್ಟ್ ನೀಡುತ್ತಾರೆ.

‘ಸಿದ್ಲಿಂಗು’ ನೋಡಿ ಇಷ್ಟಪಟ್ಟಿದ್ದವರಿಗೆ ‘ಸಿದ್ಲಿಂಗು 2’ ಸಿನಿಮಾ ಸುಲಭವಾಗಿ ಕನೆಕ್ಟ್ ಆಗುತ್ತದೆ. ಈ ಬಾರಿ ಒಂದಷ್ಟು ಹೊಸ ಪಾತ್ರಗಳನ್ನು ಪರಿಚಯಿಸಲಾಗಿದೆ. ಆ ಪಾತ್ರಗಳೇ ಹೆಚ್ಚು ಹೈಲೈಟ್ ಆಗಿವೆ. ಸ್ಮಶಾನದಲ್ಲಿ ಗುಂಡಿ ತೆಗೆಯುವ ಕೆಲಸ ಮಾಡುವ ಮಹಿಳೆಯಾಗಿ ಪದ್ಮಜಾ ರಾವ್ ಅವರು ಚೆನ್ನಾಗಿ ಅಭಿನಯಿಸಿದ್ದಾರೆ. ಮಂಜುನಾಥ್ ಹೆಗಡೆ ನಿಭಾಯಿಸಿರುವ ಪಾತ್ರವೂ ಗಮನ ಸೆಳೆಯುತ್ತದೆ. ಕೋಪಿಷ್ಠ ತಂದೆಯಾಗಿ ಬಿ. ಸುರೇಶ ಅವರು ಸದ್ದು ಮಾಡಿದ್ದಾರೆ. ಸೌಮ್ಯ ಸ್ವಭಾವದ ಹುಡುಗಿಯಾಗಿ ಸೋನು ಗೌಡ ಇಷ್ಟ ಆಗುತ್ತಾರೆ. ನಿರ್ದೇಶಕ ವಿಜಯ್ ಪ್ರಸಾದ್ ಅವರು ದೇವರಾಗಿ ಕಾಣಿಸಿಕೊಂಡಿದ್ದಾರೆ.

ಹಾಸ್ಯ ಮತ್ತು ಭಾವುಕತೆಯನ್ನು ಪ್ರಧಾನವಾಗಿ ಇಟ್ಟುಕೊಂಡು ನಿರ್ದೇಶಕ ವಿಜಯ್ ಪ್ರಸಾದ್ ಅವರು ಈ ಸಿನಿಮಾದ ಕಥೆಯನ್ನು ನಿರೂಪಿಸಿದ್ದಾರೆ. ಅದಕ್ಕೆ ಯೋಗಿ ಚೆನ್ನಾಗಿ ಸಾಥ್ ನೀಡಿದ್ದಾರೆ. ನಗಿಸುತ್ತಾ, ಎಮೋಷನಲ್ ಆಗಿಸುತ್ತ ಅವರು ಪ್ರೇಕ್ಷಕರಿಗೆ ಇಷ್ಟ ಆಗುತ್ತಾರೆ. ಯಾವುದೇ ಅತಿರೇಕ ಎನಿಸದ ಹಾಗೆ ಅವರು ನೋಡಿಕೊಂಡಿದ್ದಾರೆ. ಬದುಕಿನಲ್ಲಿ ಎದುರಾಗುವ ಒಳ್ಳೆಯ ಮನಸ್ಸುಗಳಿಗೆ ಗೌರವ ನೀಡುವ ವ್ಯಕ್ತಿಯಾಗಿ ಅವರ ಪಾತ್ರ ಮೂಡಿಬಂದಿದೆ. ಸಾಮಾನ್ಯ ಜನರ ನಡುವೆ ಇರುವ ಹೀರೋ ರೀತಿ ಸಿದ್ಲಿಂಗು ಪಾತ್ರ ಕಾಣಿಸುತ್ತದೆ.

ಇದನ್ನೂ ಓದಿ: ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ‘ಭುವನಂ ಗಗನಂ’ ಸಿನಿಮಾ ಮೂಲಕ ಪ್ರೀತಿ ಪಾಠ

ಇನ್ನು, ‘ಸಿದ್ಲಿಂಗು 2’ ಸಿನಿಮಾದಲ್ಲಿ ಕೆಲವು ಲೋಪಗಳೂ ಕಾಣಿಸುತ್ತವೆ. ಕಥೆಗೆ ಸಂಬಂಧವೇ ಇಲ್ಲದೇ ಡೈಲಾಗ್​ಗಳ ನಡುವೆ ನುಸುಳಿ ಬರುವ ಡಾಲಿ ಧನಂಜಯ, ವಾಸುಕಿ ವೈಭವ್ ಮುಂತಾದವರ ಹೆಸರುಗಳು ಅನಗತ್ಯ ಎನಿಸುತ್ತವೆ. ಕಥೆಯಲ್ಲಿ ಒಮ್ಮೊಮ್ಮೆ ಲಾಜಿಕ್​ಗಳ ಕಡೆಗೆ ನಿರ್ದೇಶಕರು ಗಮನ ನೀಡಿದಂತಿಲ್ಲ. ಹಾಡುಗಳು ತಕ್ಷಣಕ್ಕೆ ಸೆಳೆಯುವುದಿಲ್ಲ. ಇಂಥ ಕೆಲವು ಮೈನಸ್ ಅಂಶಗಳನ್ನು ಬದಿಗಿಟ್ಟರೆ ‘ಸಿದ್ಲಿಂಗು 2’ ಸಿನಿಮಾ ನೋಡಿಸಿಕೊಂಡು ಸಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?