Tatsama Tadbhava Review: ಕೊಲೆ ಕೌತುಕದ ಕಥೆಯೊಂದಿಗೆ ನೋಡುಗರ ತಲೆಗೆ ಹುಳ ಬಿಡುವ ‘ತತ್ಸಮ ತದ್ಭವ’

ಪತ್ತೆದಾರಿ ಮಾದರಿಯ ಸಿನಿಮಾ ಬಯಸುವವರಿಗೆ ‘ತತ್ಸಮ ತದ್ಭವ’ ಇಷ್ಟವಾಗುತ್ತದೆ. ಈ ಸಿನಿಮಾ ನೋಡುವಾಗ ಪ್ರೇಕ್ಷಕರು ಸಂಪೂರ್ಣ ಗಮನ ನೀಡಬೇಕು. ಮೇಘನಾ ರಾಜ್​ ಅವರು ಒಂದು ಸವಾಲಿನ ಪಾತ್ರವನ್ನು ನಿಭಾಯಿಸಿದ್ದಾರೆ. ಪೊಲೀಸ್​ ಪಾತ್ರದಲ್ಲಿ ಪ್ರಜ್ವಲ್​ ದೇವರಾಜ್​ ಕಾಣಿಸಿಕೊಂಡಿದ್ದಾರೆ. ‘ತತ್ಸಮ ತದ್ಭವ’ ಚಿತ್ರದ ವಿಮರ್ಶೆ ಇಲ್ಲಿದೆ..

Tatsama Tadbhava Review: ಕೊಲೆ ಕೌತುಕದ ಕಥೆಯೊಂದಿಗೆ ನೋಡುಗರ ತಲೆಗೆ ಹುಳ ಬಿಡುವ ‘ತತ್ಸಮ ತದ್ಭವ’
ಪ್ರಜ್ವಲ್​ ದೇವರಾಜ್​, ಮೇಘನಾ ರಾಜ್​
Follow us
|

Updated on: Sep 15, 2023 | 3:07 PM

ಚಿತ್ರ: ತತ್ಸಮ ತದ್ಭವ. ನಿರ್ಮಾಣ: ಪಿ.ಬಿ. ಸ್ಡುಡಿಯೋಸ್​, ಅನ್ವಿತ್​ ಸಿನಿಮಾಸ್​. ನಿರ್ದೇಶನ: ವಿಶಾಲ್​ ಆತ್ರೇಯ. ಪಾತ್ರವರ್ಗ: ಮೇಘನಾ ರಾಜ್​, ಪ್ರಜ್ವಲ್​ ದೇವರಾಜ್​, ಅರವಿಂದ್​​ ಅಯ್ಯರ್​, ಮಹತಿ ವೈಷ್ಣವಿ ಭಟ್​, ಶ್ರುತಿ, ಟಿಎಸ್​ ನಾಗಾಭರಣ, ಗಿರಿಜಾ ಲೋಕೇಶ್​, ರಾಜಶ್ರೀ ಪೊನ್ನಪ್ಪ ಮುಂತಾದವರು. ಸ್ಟಾರ್​: 3/5

ನಟಿ ಮೇಘನಾ ರಾಜ್​ (Meghana Raj) ಅವರು ಒಂದಷ್ಟು ವರ್ಷಗಳ ಹಿಂದೆ ಬ್ಯಾಕ್​ ಟು ಬ್ಯಾಕ್​ ಸಿನಿಮಾ ಮಾಡುತ್ತಿದ್ದರು. ಆದರೆ ಚಿರಂಜೀವಿ ಸರ್ಜಾ ನಿಧನದ ಬಳಿಕ ಅವರು ನಟನೆಯಿಂದ ಅಂತರ ಕಾಯ್ದುಕೊಂಡಿದ್ದರು. ಇತ್ತೀಚೆಗೆ ಎಲ್ಲ ನೋವನ್ನು ಪಕ್ಕಕ್ಕೆ ಇಟ್ಟು ಅವರು ಮತ್ತೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದು ಅವರ ಅಭಿಮಾನಿಗಳಿಗೆ ಖುಷಿ ನೀಡಿತ್ತು. ಮೇಘನಾ ರಾಜ್​ ಅವರು ‘ತತ್ಸಮ ತದ್ಭವ’ (Tatsama Tadbhava) ಸಿನಿಮಾದ ಮೂಲಕ ಕಮ್​ಬ್ಯಾಕ್​ ಮಾಡಿದ್ದಾರೆ. ಸೈಕಲಾಜಿಕಲ್​ ಥ್ರಿಲ್ಲರ್​ ಶೈಲಿಯಲ್ಲಿ ಈ ಸಿನಿಮಾ ಮೂಡಿಬಂದಿದೆ. ಹೊಸ ನಿರ್ದೇಶಕ ವಿಶಾಲ್​ ಆತ್ರೇಯಾ ಅವರು ಪ್ರೇಕ್ಷಕರ ಕುತೂಹಲವನ್ನು ಹಿಡಿದಿಡುವಂತಹ ಪ್ರಯತ್ನ ಮಾಡಿದ್ದಾರೆ. ಮೇಘನಾ ರಾಜ್​ ಅವರ ಜೊತೆ ಪ್ರಜ್ವಲ್​ ದೇವರಾಜ್​ (Prajwal Devaraj) ಕೂಡ ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಮೇಘನಾ ರಾಜ್ ಅವರಿಗೆ ಒಂದು ರೀತಿಯಲ್ಲಿ ಈ ಸಿನಿಮಾ ಚಾಲೆಂಜಿಂಗ್​ ಆಗಿದೆ. ಪೂರ್ತಿ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ.

ಮರ್ಡರ್​ ಮಿಸ್ಟರಿ:

‘ತತ್ಸಮ ತದ್ಭಮ’ ಸಿನಿಮಾದಲ್ಲಿ ಒಂದು ಮರ್ಡರ್ ಮಿಸ್ಟರಿ ಕಥೆ ಇದೆ. ಗಂಡನನ್ನು ಕಳೆದುಕೊಂಡ ಕಥಾನಾಯಕಿ ಆರಿಕಾ (ಮೇಘನಾ ರಾಜ್​) ಪೊಲೀಸ್​ ಠಾಣೆಗೆ ಬಂದು ದೂರು ನೀಡುತ್ತಾಳೆ. ಅಲ್ಲಿ ಇರುವ ದಕ್ಷ ಪೊಲೀಸ್​ ಅಧಿಕಾರಿ ಅರವಿಂದ್​ಗೆ (ಪ್ರಜ್ವಲ್​) ಈ ಕೇಸ್​ ಬಹಳ ಸವಾಲಾಗಿ ಪರಿಣಮಿಸುತ್ತದೆ. ಪ್ರತಿ ಹಂತದಲ್ಲೂ ಅನುಮಾನ ಹೆಚ್ಚುತ್ತದೆ. ಆದರೆ ಅಪರಾಧಿ ಯಾರು ಎಂಬುದನ್ನು ಕಂಡುಹಿಡಿಯುವುದು ಅಷ್ಟು ಸುಲಭವಲ್ಲ. ಅದರ ನಡುವೆ ಹೊಸ ಪಾತ್ರಗಳು ಕೂಡ ಎಂಟ್ರಿ ಪಡೆದುಕೊಳ್ಳುತ್ತವೆ. ನಂತರ ಬರುವುದು ಅಸಲಿ ಟ್ವಿಸ್ಟ್​. ಹಾಗಾದರೆ ಕೊಲೆ ಮಾಡಿದವರು ಯಾರು? ಆ ಕೊಲೆಯ ಹಿಂದಿನ ಉದ್ದೇಶ ಏನು? ಕಥಾನಾಯಕಿ ಹೇಳಿದ್ದು ನಿಜವೋ ಸುಳ್ಳೋ ಎಂಬುದೆಲ್ಲ ತಿಳಿಯಬೇಕಾದರೆ ಪೂರ್ತಿ ಸಿನಿಮಾ ನೋಡಬೇಕು.

ಮೇಘನಾ ರಾಜ್​ಗೆ ಸಖತ್ ಇಷ್ಟವಾಯ್ತು ‘ಆಚಾರ್ ಆ್ಯಂಡ್ ಕೋ’ ಸಿನಿಮಾ; ಕಾರಣ ತಿಳಿಸಿದ ನಟಿ

ಮೇಘನಾಗೆ ಮೆಚ್ಚುಗೆ:

ನಟಿ ಮೇಘನಾ ರಾಜ್​ ಅವರಿಗೆ ಈ ಸಿನಿಮಾದಲ್ಲಿ ಸವಾಲಿನ ಪಾತ್ರ ಇದೆ. ಎರಡು ಡಿಫರೆಂಟ್​ ಶೇಡ್​ ಇರುವ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ಇಡೀ ಸಿನಿಮಾದ ಕಥೆ ಅವರ ಸುತ್ತವೇ ಸುತ್ತುತ್ತದೆ. ಇದೊಂದು ನಾಯಕಿ ಪ್ರಧಾನ ಸಿನಿಮಾ ಆದ್ದರಿಂದ ಮೇಘನಾ ರಾಜ್​ ಅವರು ಹೆಚ್ಚು ಸ್ಕ್ರೀನ್​ ಸ್ಪೇಸ್​ ಪಡೆದುಕೊಂಡಿದ್ದಾರೆ. ಹಾಗಾಗಿ ಅವರ ಅಭಿಮಾನಿಗಳಿಗೆ ‘ತತ್ಸಮ ತದ್ಭವ’ ಸಿನಿಮಾ ಇಷ್ಟ ಆಗಲಿದೆ. ಮೇಘನಾ ರಾಜ್​ ಅವರ ಕಮ್​ಬ್ಯಾಕ್​ಗೆ ಸೂಕ್ತವಾದಂತಹ ಕಥೆ ಈ ಸಿನಿಮಾದಲ್ಲಿದೆ.

ಮೆರುಗು ತಂದ ಪ್ರಜ್ವಲ್​ ದೇವರಾಜ್​:

ನಟ ಪ್ರಜ್ವಲ್​ ದೇವರಾಜ್​ ಅವರದ್ದು ‘ತತ್ಸಮ ತದ್ಭವ’ ಸಿನಿಮಾದಲ್ಲಿ ಹೀರೋ ಪಾತ್ರ ಅಲ್ಲ. ಆದರೂ ಕೂಡ ಅವರು ಹೀರೋ ರೀತಿಯಲ್ಲೇ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಕಥೆಗೆ ಪ್ರಮುಖ ತಿರುವುಗಳನ್ನು ನೀಡುವ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅವರಿಂದಾಗಿ ಈ ಚಿತ್ರದ ಮೆರುಗು ಹೆಚ್ಚಿದೆ. ಇನ್ನುಳಿದಂತೆ ಬಾಲಾಜಿ ಮನೋಹರ್​, ಅರವಿಂದ್​ ಅಯ್ಯರ್​, ಗಿರಿಜಾ ಲೋಕೇಶ್​, ಶ್ರುತಿ, ಟಿ.ಎಸ್​. ನಾಗಾಭರಣ, ರಾಜಶ್ರೀ ಪೊನ್ನಪ್ಪ ಅವರ ಪಾತ್ರಗಳು ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಕೂಡ ಪರಿಣಾಮಕಾರಿ ಆಗಿವೆ.

ಇದನ್ನೂ ಓದಿ: Jawan Movie Review: ಶಾರುಖ್​ ಖಾನ್​ ಅಭಿಮಾನಿಗಳಿಗಾಗಿ ಅಟ್ಲಿ ಮಾಡಿದ ಮಿಕ್ಸ್​ ಮಸಾಲಾ ಸಿನಿಮಾ

ಪ್ರೇಕ್ಷಕರ ತಲೆಗೆ ಕೆಲಸ:

ಬೇರೆ ಸಿನಿಮಾಗಳಂತೆ ಗಮನ ಎತ್ತಲೋ ಇಟ್ಟುಕೊಂಡು ‘ತತ್ಸಮ ತದ್ಭವ’ ಚಿತ್ರವನ್ನು ನೋಡಲು ಸಾಧ್ಯವಿಲ್ಲ. ಯಾಕೆಂದರೆ, ಈ ಸಿನಿಮಾದ ಕಥೆಯು ಪ್ರೇಕ್ಷಕರ ತಲೆಗೆ ಕೆಲಸ ಕೊಡುತ್ತದೆ. ಎಲ್ಲ ದೃಶ್ಯಗಳನ್ನು ಬಹಳ ಗಮನವಹಿಸಿ ನೋಡಿದರೆ ಮಾತ್ರ ಅಸಲಿ ಕಹಾನಿ ಏನು ಎಂಬುದು ಅರ್ಥವಾಗುತ್ತದೆ. ಅತ್ತಿತ್ತ ನೋಡಿದರೆ ಲಿಂಕ್​ ಮಿಸ್​ ಆಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಈ ಪ್ರಕಾರದ ಸಿನಿಮಾಗಳನ್ನು ಬಯಸುವ ಪ್ರೇಕ್ಷಕರಿಗೆ ‘ತತ್ಸಮ ತದ್ಭವ’ ಹಿಡಿಸುತ್ತದೆ. ಗಮನ ಬೇರೆಡೆಗೆ ಇಟ್ಟುಕೊಂಡು ಅರೆಬರೆ ಸಿನಿಮಾ ನೋಡಿದರೆ ರುಚಿಸದೇ ಇರಬಹುದು. ಬೇರೆ ಬೇರೆ ಕಾಲಘಟ್ಟದಲ್ಲಿ ಕಥೆಯನ್ನು ಹೇಳುವ ಕೆಲವು ದೃಶ್ಯಗಳಲ್ಲಿ ಈ ಸಿನಿಮಾ ಗೊಂದಲ ಮೂಡಿಸುತ್ತದೆ. ಎರಡನೇ ಬಾರಿ ನೋಡಿದರೆ ಮಾತ್ರ ಗ್ರಹಿಕೆಗೆ ಸಿಗುವಂತಹ ನಿರೂಪಣೆ ಈ ಚಿತ್ರದಲ್ಲಿದೆ.

ಚುರುಕಾಗಿ, ಚುಟುಕಾಗಿ

‘ತತ್ಸಮ ತದ್ಭವ’ ಸಿನಿಮಾದ ಅವಧಿ ಕೇವಲ 2 ಗಂಟೆ 2 ನಿಮಿಷ ಮಾತ್ರ ಇದೆ. ಅಷ್ಟರೊಳಗೆ ಹೇಳಬೇಕಾದ ಕಥೆಯನ್ನು ಬಹಳ ಚುರುಕಾಗಿ, ಚುಟುಕಾಗಿ ಹೇಳಿ ಮುಗಿಸಲಾಗಿದೆ. ಹಾಗಾಗಿ ಈ ಸಿನಿಮಾ ಎಲ್ಲಿಯೂ ಬೋರು ಹೊಡೆಯುವುದಿಲ್ಲ. ಆರಂಭದಲ್ಲಿ ಕಥೆ ತೆರೆದುಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ. ಇಂಟರ್​ವಲ್​ ಬಳಿಕ ಚಿತ್ರದ ವೇಗ ಹೆಚ್ಚುತ್ತದೆ. ಸಂಗೀತ ನಿರ್ದೇಶಕ ವಾಸುಕಿ ವೈಭವ್​ ಅವರು ಹಿನ್ನೆಲೆ ಸಂಗೀತದಲ್ಲಿ ಹಾಗೂ ‘ದೂರಿ ಲಾಲಿ..’ ಹಾಡಿನಲ್ಲಿ ಇಷ್ಟವಾಗುತ್ತಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು