AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಮಂತಾ ಬಿಟ್ಟು ಹೋದಾಗ ಡಿಪ್ರೆಸ್​ ಆಗಿದ್ದ ಮಗ ಈಗ ಖುಷಿ ಆಗಿದ್ದಾನೆ’: ನಾಗಾರ್ಜುನ

ಸಮಂತಾ ಮತ್ತು ನಾಗ ಚೈತನ್ಯ ಅವರು ಡಿವೋರ್ಸ್ ​ಪಡೆದಾಗ ಅಭಿಮಾನಿಗಳಿಗೆ ಶಾಕ್ ಆಗಿತ್ತು. ಕುಟುಂಬದವರಿಗೂ ಅದು ಕಷ್ಟದ ಕಾಲ. ಆ ಬಗ್ಗೆ ನಾಗಾರ್ಜುನ ಅವರು ಈಗ ಮಾತನಾಡಿದ್ದಾರೆ. ಸಮಂತಾ ಬಿಟ್ಟು ಹೋದಾಗ ನಾಗ ಚೈತನ್ಯ ಪರಿಸ್ಥಿತಿ ಹೇಗಿತ್ತು ಎಂಬುದನ್ನು ನಾಗಾರ್ಜುನ ವಿವರಿಸಿದ್ದಾರೆ. ಆಗಸ್ಟ್​ 8ರಂದು ನಟಿ ಶೋಭಿತಾ ಜೊತೆ ನಾಗ ಚೈತನ್ಯ ಎಂಗೇಜ್​ ಆಗಿದ್ದಾರೆ.

‘ಸಮಂತಾ ಬಿಟ್ಟು ಹೋದಾಗ ಡಿಪ್ರೆಸ್​ ಆಗಿದ್ದ ಮಗ ಈಗ ಖುಷಿ ಆಗಿದ್ದಾನೆ’: ನಾಗಾರ್ಜುನ
ಶೋಭಿತಾ, ನಾಗಾರ್ಜುನ, ನಾಗ ಚೈತನ್ಯ, ಸಮಂತಾ
ಮದನ್​ ಕುಮಾರ್​
|

Updated on: Aug 10, 2024 | 6:55 PM

Share

ಟಾಲಿವುಡ್​ ನಟ ಅಕ್ಕಿನೇನಿ ನಾಗ ಚೈತನ್ಯ ಅವರ ವೈಯಕ್ತಿಕ ಜೀವನದಲ್ಲಿ ಅನೇಕ ಏಳು-ಬೀಳುಗಳು ಉಂಟಾಗಿವೆ. ಹಲವು ವರ್ಷ ಪ್ರೀತಿಸಿ ಮದುವೆ ಆಗಿದ್ದ ಸಮಂತಾ ರುತ್​ ಪ್ರಭು ಜೊತೆ ಅವರು ವಿಚ್ಛೇದನ ಪಡೆಯುವಂತಾಯಿತು. ಆದರೆ ಈಗ ಮತ್ತೆ ನಾಗ ಚೈತನ್ಯ ಅವರ ಜೀವನದಲ್ಲಿ ಹೊಸ ಚಾಪ್ಟರ್​ ಶುರುವಾಗಿದೆ. ನಟಿ ಶೋಭಿತಾ ಜೊತೆ ಅವರು ಎಂಗೇಜ್​​ಮೆಂಟ್​ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ನೀಡಿದ್ದಾರೆ. ಈ ಬಗ್ಗೆ ಅವರ ತಂದೆ ಅಕ್ಕಿನೇನಿ ನಾಗಾರ್ಜುನ ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

2017ರಲ್ಲಿ ಸಮಂತಾ ರುತ್​ ಪ್ರಭು ಮತ್ತು ನಾಗ ಚೈತನ್ಯ ಅವರು ಮದುವೆ ಆಗಿದ್ದರು. ಆದರೆ 2021ರಲ್ಲಿ ಅವರಿಬ್ಬರು ವಿಚ್ಚೇದನ ಪಡೆದುಕೊಂಡರು. ‘ಡಿವೋರ್ಸ್​ ಆದಾಗ ನಾಗ ಚೈತನ್ಯ ಖಿನ್ನತೆಗೆ ಒಳಗಾಗಿದ್ದ. ಅದು ಅವನಿಗೆ ಮತ್ತು ಕುಟುಂಬಕ್ಕೆ ಕಷ್ಟದ ಸಮಯ ಆಗಿತ್ತು. ನನ್ನ ಮಗ ಯಾರ ಎದುರಲ್ಲೂ ಫೀಲಿಂಗ್ಸ್​ ತೋರಿಸಿಕೊಳ್ಳುವುದಿಲ್ಲ. ಆದರೆ ನನಗೆ ಗೊತ್ತು, ಆತ ದುಃಖದಲ್ಲಿದ್ದ. ಈಗ ಅವನು ಖುಷಿಯಾಗಿರುವುದು ಕಾಣುತ್ತಿದ್ದೇನೆ. ಶೋಭಿತಾ ಮತ್ತು ನಾಗ ಚೈತನ್ಯ ಒಳ್ಳೆಯ ಜೋಡಿ. ಇಬ್ಬರೂ ಪರಸ್ಪರ ತುಂಬ ಪ್ರೀತಿಸುತ್ತಾರೆ’ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಾಗಾರ್ಜುನ ಹೇಳಿದ್ದಾರೆ.

ಇದನ್ನೂ ಓದಿ: Photo Gallery: ನಾಗ ಚೈತನ್ಯ ಜತೆ ನಿಶ್ಚಿತಾರ್ಥ ಆಗಿದ್ದಕ್ಕೆ ನಟಿ ಶೋಭಿತಾಗೆ ಖುಷಿಯೋ ಖುಷಿ

ನಾಗ ಚೈತನ್ಯ ಮತ್ತು ಶೋಭಿತಾ ಅವರು ಡೇಟಿಂಗ್​ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿತ್ತು. ಆದರೆ ಏಕಾಏಕಿ ಅವರು ಎಂಗೇಜ್​ಮೆಂಟ್​ ಮಾಡಿಕೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಎಲ್ಲವೂ ಗಡಿಬಿಡಿಯಲ್ಲಿ ನಡೆದು ಹೋಗಿದೆ. ನಿಶ್ಚಿತಾರ್ಥದ ಫೋಟೋಗಳನ್ನು ಕುಟುಂಬದವರು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ತುಂಬಾ ಅವಸರದಲ್ಲಿ ಎಂಗೇಜ್​ಮೆಂಟ್​ ಮಾಡಿದ್ದು ಯಾಕೆ ಎಂಬುದನ್ನು ಕೂಡ ನಾಗಾರ್ಜುನ ವಿವರಿಸಿದ್ದಾರೆ.

ಆಗಸ್ಟ್​ 8ರಂದು ಶೋಭಿತಾ ಮತ್ತು ನಾಗ ಚೈತನ್ಯ ರಿಂಗ್​ ಬದಲಾಯಿಸಿಕೊಂಡರು. ‘ನಾವು ಈ ದಿನವನ್ನು ಸೆಲೆಕ್ಟ್​ ಮಾಡಿದ್ದು ಯಾಕೆಂದರೆ ಇದು ಒಳ್ಳೆಯ ದಿನವಾಗಿತ್ತು. ಎರಡೂ ಕುಟುಂಬದವರು ಜಾತಕ ನೋಡಿದಾಗ ಆಗಸ್ಟ್​ 8 ಒಳ್ಳೆಯ ದಿನ ಅಂತ ಹೇಳಿದರು. ಹಾಗಾಗಿ ನಾವು ಮುಂದುವರಿದೆವು. ಆದರೆ ಮದುವೆ ತಕ್ಷಣಕ್ಕೆ ಆಗುವುದಿಲ್ಲ’ ಎಂದು ನಾಗಾರ್ಜುನ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

TV9 Network ನ್ಯೂಸ್ ಡೈರೆಕ್ಟರ್​​ಗೆ ವಾಯ್ಸ್ ಆಪ್ ದ ಪೀಪಲ್ ಅವಾರ್ಡ್‌
TV9 Network ನ್ಯೂಸ್ ಡೈರೆಕ್ಟರ್​​ಗೆ ವಾಯ್ಸ್ ಆಪ್ ದ ಪೀಪಲ್ ಅವಾರ್ಡ್‌
ಕೆಂಪೇಗೌಡ ಏರ್ಪೋಟ್​​ನಲ್ಲೇ ಲಾಂಗ್ ಹಿಡಿದು ಅಟ್ಟಾಡಿಸಿದ ವಿಡಿಯೋ ಸೆರೆ
ಕೆಂಪೇಗೌಡ ಏರ್ಪೋಟ್​​ನಲ್ಲೇ ಲಾಂಗ್ ಹಿಡಿದು ಅಟ್ಟಾಡಿಸಿದ ವಿಡಿಯೋ ಸೆರೆ
ಸಿದ್ದರಾಮಯ್ಯ ಪತ್ನಿಗೆ ಐಸಿಯುನಲ್ಲಿ ಚಿಕಿತ್ಸೆ: ಪಾರ್ವತಿಯವರಿಗೆ ಆಗಿದ್ದೇನು?
ಸಿದ್ದರಾಮಯ್ಯ ಪತ್ನಿಗೆ ಐಸಿಯುನಲ್ಲಿ ಚಿಕಿತ್ಸೆ: ಪಾರ್ವತಿಯವರಿಗೆ ಆಗಿದ್ದೇನು?
ಯಮುನಾ ನದಿಯಲ್ಲಿ ತುಂಬಿದ್ದ ವಿಷಕಾರಿ ನೊರೆಯ ಕ್ಲೀನಿಂಗ್ ಶುರು
ಯಮುನಾ ನದಿಯಲ್ಲಿ ತುಂಬಿದ್ದ ವಿಷಕಾರಿ ನೊರೆಯ ಕ್ಲೀನಿಂಗ್ ಶುರು
ಪ್ರಧಾನಿ ಮೋದಿ ಭೇಟಿ ಹಿಂದಿನ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
ಪ್ರಧಾನಿ ಮೋದಿ ಭೇಟಿ ಹಿಂದಿನ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
ಸಮಸ್ಯೆ ಬಗೆಹರಿಸದ ಸ್ಥಳೀಯ ಆಡಳಿತ: ಪ್ರಧಾನಿ ತನಕ ಹೋದ ಬಾಲಕ
ಸಮಸ್ಯೆ ಬಗೆಹರಿಸದ ಸ್ಥಳೀಯ ಆಡಳಿತ: ಪ್ರಧಾನಿ ತನಕ ಹೋದ ಬಾಲಕ
ಯೋಗ್ಯತೆ ಇಲ್ಲದೇ ಬಿಗ್ ಬಾಸ್ ಮನೆ ಒಳಗೆ ಇರುವ ಸ್ಪರ್ಧಿಗಳು ಯಾರು?
ಯೋಗ್ಯತೆ ಇಲ್ಲದೇ ಬಿಗ್ ಬಾಸ್ ಮನೆ ಒಳಗೆ ಇರುವ ಸ್ಪರ್ಧಿಗಳು ಯಾರು?
ಶಬರಿಮಲೆ ದೇವಸ್ಥಾನ ಚಿನ್ನ ಕಳ್ಳತನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ
ಶಬರಿಮಲೆ ದೇವಸ್ಥಾನ ಚಿನ್ನ ಕಳ್ಳತನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ
VIDEO: ಪಾಕ್ ಆಟಗಾರನ ಆಕ್ರಮಣಕಾರಿ ವರ್ತನೆ... ವಾರ್ನಿಂಗ್!
VIDEO: ಪಾಕ್ ಆಟಗಾರನ ಆಕ್ರಮಣಕಾರಿ ವರ್ತನೆ... ವಾರ್ನಿಂಗ್!
ಚಂದ್ರಪ್ರಭ ಬಿಗ್ ಬಾಸ್​​ನಿಂದ ಹೊರಬಂದಿದ್ದಕ್ಕೆ ಅಸಲಿ ಕಾರಣ ತಿಳಿಸಿದ ಸುಧಿ
ಚಂದ್ರಪ್ರಭ ಬಿಗ್ ಬಾಸ್​​ನಿಂದ ಹೊರಬಂದಿದ್ದಕ್ಕೆ ಅಸಲಿ ಕಾರಣ ತಿಳಿಸಿದ ಸುಧಿ