‘ಗುಂಟೂರು ಖಾರಂ’ ಸಿನಿಮಾ ಬಗ್ಗೆ ಸ್ಪೆಷಲ್ ಅಪ್​ಡೇಟ್ ಕೊಟ್ಟ ನಿರ್ಮಾಪಕ ನಾಗ ವಂಶಿ

‘ಗುಂಟೂರು ಖಾರಂ’ ಸಿನಿಮಾ ಬಗ್ಗೆ ಹಲವು ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿವೆ. ಇನ್ನೂ ಚಿತ್ರದ ಶೂಟಿಂಗ್ ಪ್ರಗತಿಯಲ್ಲಿದೆ, ಡಬ್ಬಿಂಗ್ ಮುಗಿದಿಲ್ಲ ಎಂಬಿತ್ಯಾದಿ ವಿಚಾರಗಳು ಚರ್ಚೆಯಲ್ಲಿವೆ.

‘ಗುಂಟೂರು ಖಾರಂ’ ಸಿನಿಮಾ ಬಗ್ಗೆ ಸ್ಪೆಷಲ್ ಅಪ್​ಡೇಟ್ ಕೊಟ್ಟ ನಿರ್ಮಾಪಕ ನಾಗ ವಂಶಿ
ಮಹೇಶ್ ಬಾಬು
Edited By:

Updated on: Jan 03, 2024 | 12:18 PM

ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾ (Guntur Kaaram Movie) ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ. ಈ ಚಿತ್ರಕ್ಕೆ ತ್ರಿವಿಕ್ರಂ ಶ್ರೀನಿವಾಸ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ರಿಲೀಸ್​ಗೆ ಉಳಿದಿರೋದು ಇನ್ನು ಕೆಲವೇ ದಿನಗಳು ಮಾತ್ರ. ಈ ಸಂದರ್ಭದಲ್ಲಿ ನಿರ್ಮಾಪಕ ನಾಗ ವಂಶಿ ಅವರು ಫ್ಯಾನ್ಸ್​ಗೆ ಖುಷಿ ಆಗುವಂಥ ವಿಚಾರ ರಿವೀಲ್ ಮಾಡಿದ್ದಾರೆ.

‘ಗುಂಟೂರು ಖಾರಂ’ ಸಿನಿಮಾ ಬಗ್ಗೆ ಹಲವು ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿವೆ. ಇನ್ನೂ ಚಿತ್ರದ ಶೂಟಿಂಗ್ ಪ್ರಗತಿಯಲ್ಲಿದೆ, ಡಬ್ಬಿಂಗ್ ಮುಗಿದಿಲ್ಲ ಎಂಬಿತ್ಯಾದಿ ವಿಚಾರಗಳು ಚರ್ಚೆಯಲ್ಲಿವೆ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣ ಆಗಿದೆ. ಈ ಮಧ್ಯೆ ನಿರ್ಮಾಪಕ ನಾಗ ವಂಶಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಅಪ್​ಡೇಟ್ ಕೊಟ್ಟಿದ್ದಾರೆ.

‘ಗುಂಟೂರು ಖಾರಂ ಸಿನಿಮಾದ ಮೊದಲಾರ್ಧದಲ್ಲಿ ಒಂದು ಫೈಟ್ ಇದೆ. ನಿಮಗೆ ಎರಡೆರಡು ಸೂಪರ್​ಸ್ಟಾರ್​​ಗಳ ಕಾಣಲಿದ್ದಾರೆ. ಮೊದಲಾರ್ಧದಲ್ಲಿ ಸೂಪರ್ಸ್ಟಾರ್ ಕೃಷ್ಣ ಅವರ ರೆಫರೆನ್ಸ್ ಇದೆ. ಅಭಿಮಾನಿಗಳಿಗೆ ಈ ಸಂಕ್ರಾಂತಿ ಹೆಚ್ಚು ವಿಶೇಷ ಆಗಲಿದೆ. ಕೊನೆಯ 45 ನಿಮಿಷ ಸಿನಿಮಾದ ವಿಶೇಷ ಹೈಲೈಟ್’ ಎಂದು ನಾಗ ವಂಶಿ ಬರೆದುಕೊಂಡಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: ಇನ್ನೂ ಪೂರ್ಣಗೊಂಡಿಲ್ಲ ‘ಗುಂಟೂರು ಖಾರಂ’ ಸಿನಿಮಾ ಶೂಟಿಂಗ್; ಅಭಿಮಾನಿಗಳಿಗೆ ಆಗಿದೆ ಚಿಂತೆ

‘ಗುಂಟೂರು ಖಾರಂ’ ಸಿನಿಮಾ ಜನವರಿ 12ರಂದು ರಿಲೀಸ್ ಆಗಲಿದೆ. ಸಿನಿಮಾದ ಸಾಂಗ್​ಗಳು ಮಾತ್ರ ರಿಲೀಸ್ ಆಗಿವೆ. ಈ ಚಿತ್ರಕ್ಕೆ ದೊಡ್ಡ ಮಟ್ಟದ ಪ್ರಚಾರ ನೀಡಲು ತಂಡದ ಬಳಿ ಸಮಯ ಇಲ್ಲ. ಇದು ಫ್ಯಾನ್ಸ್ ಬೇಸರಕ್ಕೆ ಕಾರಣ ಆಗಿದೆ. ಈಗ ನಿರ್ಮಾಪಕರಿಂದ ಭರವಸೆ ಸಿಕ್ಕಿದ್ದರಿಂದ ಅಭಿಮಾನಗಳು ಕೊಂಚ ನಿರಾಳ ಆಗಿದ್ದರು. ಈ ಚಿತ್ರದ ಟ್ರೇಲರ್ ರಿಲೀಸ್​ಗಾಗಿ ಫ್ಯಾನ್ಸ್ ಕಾದಿದ್ದಾರೆ. ಜನವರಿ 6ರಂದು ಟ್ರೇಲರ್ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ