AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿ ನೀರಿಗೆ ಮದ್ಯ ಬೆರೆಸಿ ಕುಡಿಯುತ್ತಾರೆ ಬಾಲಯ್ಯ; ಅಳಿಯನೇ ರಿವೀಲ್ ಮಾಡಿದ ಸಂಗತಿ

‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾದ ಪ್ರೀ-ರಿಲೀಸ್ ಈವೆಂಟ್​ಗೆ ತೆರಳಿದ್ದರು ಬಾಲಯ್ಯ. ವೇದಿಕೆ ಮೇಲೆ ಅವರು ಅಂಜಲಿ ಅವರನ್ನು ತಳ್ಳಿದ್ದರು. ಇದಕ್ಕೂ ಮೊದಲು ಅವರ ಕಾಲಿನ ಸಮೀಪ ನೀರಿನ ಬಾಟಲಿಯಲ್ಲಿ ಮದ್ಯದ ರೀತಿಯ ದ್ರವ ಇತ್ತು. ಈಗ ಅವರ ಅಳಿಯ ಹೇಳಿರೋ ವಿಡಿಯೋ ವೈರಲ್ ಆಗಿದೆ.

ಬಿಸಿ ನೀರಿಗೆ ಮದ್ಯ ಬೆರೆಸಿ ಕುಡಿಯುತ್ತಾರೆ ಬಾಲಯ್ಯ; ಅಳಿಯನೇ ರಿವೀಲ್ ಮಾಡಿದ ಸಂಗತಿ
ಶ್ರೀಭರತ್- ಬಾಲಯ್ಯ
ರಾಜೇಶ್ ದುಗ್ಗುಮನೆ
|

Updated on: Jun 03, 2024 | 11:01 AM

Share

ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು ಸದ್ಯ ಸುದ್ದಿಯಲ್ಲಿದ್ದಾರೆ. ಅವರು ನಟಿ ಅಂಜಲಿ ಅವರನ್ನು ವೇದಿಕೆಯ ಮೇಲೆ ತಳ್ಳಿದ್ದರು. ಇದು ಸಾಕಷ್ಟು ಸುದ್ದಿ ಆಗಿತ್ತು. ಅವರು ಈ ರೀತಿ ಮಾಡಿದ್ದು ಸರಿ ಅಲ್ಲ ಎಂದು ಕೆಲವರು ಹೇಳಿದ್ದರು. ಈ ವೇದಿಕೆ ಮೇಲೆ ಮದ್ಯ ಇದೆ ಎಂದು ಹೇಳಲಾದ ಬಾಟಲಿ ಕಾಣಿಸಿದ್ದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಹೀಗಿರುವಾಗ ಬಾಲಯ್ಯ ಅಳಿಯ ಶ್ರೀಭರತ್ ನೀಡಿದ ಹೇಳಿಕೆ ವೈರಲ್ ಆಗಿದೆ. ಬಿಸಿ ನೀರಿನೊಂದಿಗೆ ನಮ್ಮ ಮಾವ ಎಣ್ಣೆ ಕುಡಿಯುತ್ತಾರೆ ಎಂದಿದ್ದರು ಅವರು.

ವಿವಾದ ಏನು?

ಇತ್ತೀಚೆಗೆ ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾದ ಪ್ರೀ-ರಿಲೀಸ್ ಈವೆಂಟ್​ಗೆ ತೆರಳಿದ್ದರು ಬಾಲಯ್ಯ. ವೇದಿಕೆ ಮೇಲೆ ಅವರು ಅಂಜಲಿ ಅವರನ್ನು ತಳ್ಳಿದ್ದರು. ಇದಕ್ಕೂ ಮೊದಲು ಅವರ ಕಾಲಿನ ಸಮೀಪ ನೀರಿನ ಬಾಟಲಿಯಲ್ಲಿ ಮದ್ಯದ ರೀತಿಯ ದ್ರವ ಇತ್ತು. ಕುಡಿದಿದ್ದರಿಂದಲೇ ಬಾಲಯ್ಯ ಈ ರೀತಿ ಮಾಡಿದ್ದರು ಎಂದು ಕೆಲವರು ಹೇಳಿದರು. ಇದನ್ನು ನಿರ್ದೇಶಕರು ತಳ್ಳಿ ಹಾಕಿದ್ದರು.

ಹಳೆಯ ವಿಡಿಯೋ ವೈರಲ್

ಬಾಲಯ್ಯ ಅವರ ಅಳಿಯ ಶ್ರೀಭರತ್ ನೀಡಿದ ಹೇಳಿಕೆ ಈಗ ವೈರಲ್ ಆಗುತ್ತಿದೆ. ಸ್ಟ್ರೀಟ್ ಬೈಟ್ ಹೆಸರಿನ ಫುಡ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಶ್ರೀಭರತ್ ಮಾತನಾಡಿದ್ದರು. ‘ನನ್ನ ಮಾವ ಕುಡಿಯೋ ಮದ್ಯದ ಹೆಸರು ಹೇಳಿದರೆ ಅದರ ಸ್ಟಾಕ್ ಬೆಲೆ ಏರಿಕೆ ಆಗುತ್ತದೆ’ ಎಂದು ಅವರು ಹೇಳಿದ್ದರು. ಆ ಬಳಿಕ ಅವರು ಬ್ರ್ಯಾಂಡ್ ಯಾವುದುದು ಎಂಬುದನ್ನು ರಿವೀಲ್ ಮಾಡಿದರು.

ಇದನ್ನೂ ಓದಿ: ‘ರೀ ಅದು ಎಣ್ಣೆ ಅಲ್ಲ, ಗ್ರಾಫಿಕ್ಸ್ ಬಾಟಲಿ’; ಬಾಲಯ್ಯ ವಿವಾದ ಮುಚ್ಚಿಹಾಕಲು ನಿರ್ಮಾಪಕ ಕೊಟ್ಟ ಉತ್ತರವಿದು

‘ನನ್ನ ಮಾವ ಮ್ಯಾನ್ಷನ್ ಹೌಸ್ ಬ್ರ್ಯಾಂಡ್​ನ ಕುಡಿಯುತ್ತಾರೆ. ಅವರು ಬಿಸಿ ನೀರಿಗೆ ಮದ್ಯ ಸೇವಿಸಿ ಕುಡಿಯುತ್ತಾರೆ’ ಎಂದಿದ್ದರು ಶ್ರೀಭರತ್. ‘ನನ್ನ ಮಾವ ಯಾವಾಗಲೂ ಒಂದು ಬ್ಯಾಗ್ ಇಟ್ಟುಕೊಳ್ಳುತ್ತಾರೆ. ಅದರಲ್ಲಿ ಬಿಸಿ ನೀರು ಇರುತ್ತದೆ. ಅಮೆರಿಕ್ಕೆ ಹೋಗುವಾಗಲೂ ಅವರು ಈ ಬ್ಯಾಗ್ ತೆಗೆದುಕೊಂಡು ಹೋಗಿದ್ದರು’ ಎಂದಿದ್ದಾರೆ ಶ್ರೀಭರತ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಭಾರೀ ಮಳೆ ಮುನ್ಸೂಚನೆ: ಜು.2ರಂದು ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ
ಭಾರೀ ಮಳೆ ಮುನ್ಸೂಚನೆ: ಜು.2ರಂದು ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ
ರಾಮಮಂದಿರದ ಹುಂಡಿ ಲೂಟಿ: ಆರೋಪಿಗಳ ಬಳಿ ಇದ್ದ ಹಣ ಜಪ್ತಿ
ರಾಮಮಂದಿರದ ಹುಂಡಿ ಲೂಟಿ: ಆರೋಪಿಗಳ ಬಳಿ ಇದ್ದ ಹಣ ಜಪ್ತಿ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ವಿ ಸೋಮಣ್ಣ
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ವಿ ಸೋಮಣ್ಣ
ಮೊಮ್ಮಕ್ಕಳನ್ನು ಹೇಗೆ ಸಾಕಲಿ’: ಗೋಳಾಡಿದ ಬೀದಿ ವ್ಯಾಪಾರಿ ಅಜ್ಜಿ
ಮೊಮ್ಮಕ್ಕಳನ್ನು ಹೇಗೆ ಸಾಕಲಿ’: ಗೋಳಾಡಿದ ಬೀದಿ ವ್ಯಾಪಾರಿ ಅಜ್ಜಿ
ಸೋಶಿಯಲ್ ಮೀಡಿಯಾ ಹಿರೋ ಆಗಬೇಕು ಅನ್ಕೊಂಡಿದ್ದಿಯಾ? ರೌಡಿಗೆ ಕಮಿಷನರ್ ವಾರ್ನ್
ಸೋಶಿಯಲ್ ಮೀಡಿಯಾ ಹಿರೋ ಆಗಬೇಕು ಅನ್ಕೊಂಡಿದ್ದಿಯಾ? ರೌಡಿಗೆ ಕಮಿಷನರ್ ವಾರ್ನ್
ಸಿ.ಟಿ. ರವಿ ತನ್ನ ಬಾಸ್​​ ಎಂದ ಉಪರಾಷ್ಟ್ರಪತಿ​​: ವಿಡಿಯೋ ವೈರಲ್
ಸಿ.ಟಿ. ರವಿ ತನ್ನ ಬಾಸ್​​ ಎಂದ ಉಪರಾಷ್ಟ್ರಪತಿ​​: ವಿಡಿಯೋ ವೈರಲ್
ಆಪರೇಷನ್ ಫುಟ್​​ಪಾತ್ ಬಗ್ಗೆ ಸಚಿವ ಕೃಷ್ಣಭೈರೇಗೌಡ ಖಡಕ್ ಮಾತು
ಆಪರೇಷನ್ ಫುಟ್​​ಪಾತ್ ಬಗ್ಗೆ ಸಚಿವ ಕೃಷ್ಣಭೈರೇಗೌಡ ಖಡಕ್ ಮಾತು
ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹತ್ತಿ ಬರೋರಿಗೆ ಹಾಲು ಬಿಸ್ಕೆಟ್ ವ್ಯವಸ್ಥೆ!
ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹತ್ತಿ ಬರೋರಿಗೆ ಹಾಲು ಬಿಸ್ಕೆಟ್ ವ್ಯವಸ್ಥೆ!
ರಾಮಮಂದಿರ ದೇಣಿಗೆ ಕಳ್ಳತನ ಕೇಸ್​: ಅನಧಿಕೃತ ಕಾಣಿಕೆ ಹುಂಡಿಗಳು ಪತ್ತೆ
ರಾಮಮಂದಿರ ದೇಣಿಗೆ ಕಳ್ಳತನ ಕೇಸ್​: ಅನಧಿಕೃತ ಕಾಣಿಕೆ ಹುಂಡಿಗಳು ಪತ್ತೆ
ಸಾಲದ ಗೋಳು ಹೇಳಿಕೊಂಡ ಮಾಜಿ ಬಿಗ್​​ಬಾಸ್ ಸ್ಪರ್ಧಿ ಸೋನು ಗೌಡ
ಸಾಲದ ಗೋಳು ಹೇಳಿಕೊಂಡ ಮಾಜಿ ಬಿಗ್​​ಬಾಸ್ ಸ್ಪರ್ಧಿ ಸೋನು ಗೌಡ