AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Neha Dhupia: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಸ್ಟಾರ್​ ಕಪಲ್​; ನೇಹಾ ಧೂಪಿಯಾ- ಅಗಂದ್​ ಬೇಡಿ ಹಂಚಿಕೊಂಡ್ರು ಸಿಹಿ ಸುದ್ದಿ

ನೇಹಾ ಧೂಪಿಯಾ- ಅಗಂದ್​ ಬೇಡಿ : ಸ್ಟಾರ್​ ಕಪಲ್​ ಕುಟುಂಬ ಸಮೇತರಾಗಿ ಕ್ಲಿಕ್ಕಿಸಿಕೊಂಡ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ನೇಹಾ ಧೂಪಿಯಾ, ಪತಿ ಅಗಂದ್​ ಬೇಡಿ ಮತ್ತು ಮೊದಲ ಮಗಳು ಸೇರಿ ಮೂವರೂ ಕೂಡಾ ಕಪ್ಪು ಬಣ್ಣದ ಡ್ರೆಸ್​ ತೊಟ್ಟು ನಿಂತಿರುವ ಫೋಟೋ ನೋಡಬಹುದು.

Neha Dhupia: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಸ್ಟಾರ್​ ಕಪಲ್​; ನೇಹಾ ಧೂಪಿಯಾ- ಅಗಂದ್​ ಬೇಡಿ ಹಂಚಿಕೊಂಡ್ರು ಸಿಹಿ ಸುದ್ದಿ
ಎರಡನೇ ಮಗುವಿನ ನಿರೀಕ್ಷೆಯಲ್ಲಿ ಸ್ಟಾರ್​ ಕಪಲ್
TV9 Web
| Edited By: |

Updated on:Jul 19, 2021 | 5:15 PM

Share

ಬಾಲಿವುಡ್​ ಸ್ಟಾರ್​ ಕಪಲ್​ ನೇಹಾ ಧೂಪಿಯಾ ಮತ್ತು ಅಗಂದ್​ ಬೇಡಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವಿಷಯವನ್ನು ತಮ್ಮ ಅಭಿಮಾನಿ ಬಳಗಕ್ಕೆ ತಿಳಿಸುವ ಸಲುವಾಗಿ ನೇಹಾ ಧೂಪಿಯಾ(Neha Dhupia) ಇನ್​ಸ್ಟಾಗ್ರಾಂ(Instagram) ಅಧಿಕೃತ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. ಸ್ಟಾರ್​ ಕಪಲ್​ ಕುಟುಂಬ ಸಮೇತರಾಗಿ ಕ್ಲಿಕ್ಕಿಸಿಕೊಂಡ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ನೇಹಾ ಧೂಪಿಯಾ, ಪತಿ ಅಗಂದ್​ ಬೇಡಿ(Angad Bedi) ಮತ್ತು ಮೊದಲ ಮಗಳು ಮೆಹೆರ್​ ಸೇರಿ ಮೂವರೂ ಕೂಡಾ ಕಪ್ಪು ಬಣ್ಣದ ಡ್ರೆಸ್​ ತೊಟ್ಟು ನಿಂತಿರುವ ಫೋಟೋ ನೋಡಬಹುದು.

ಫೋಟೋದಲ್ಲಿ ಗಮನಿಸುವಂತೆ ಎಲ್ಲರ ಮುಖದಲ್ಲೂ ಸಂತೋಷವನ್ನು ಕಾಣಬಹುದು. ನೇಹಾ ಮತ್ತು ಅಗಂದ್​ ಬೇಡಿ ಅವರ ಅಭಿಮಾನಿ ಬಳಗ, ಕುಟುಂಬ ಮತ್ತು ಸ್ನೇಹಿತರು ಕಾಮೆಂಟ್​ ವಿಭಾಗದಲ್ಲಿ ಶುಭ ಹಾರೈಸಿದ್ದಾರೆ. ‘ಹೊಸ ಹೋಮ್​ ಪ್ರೊಡಕ್ಷನ್​ ಹತ್ತಿರದಲ್ಲಿದೆ’ ಎಂದು ಅಗಂದ್​ ಬೇಡಿ ಪೋಸ್ಟ್​ ಹಂಚಿಕೊಂಡಿದ್ದಾರೆ. ಜತೆಗೆ ನೇಹಾ ಬೇಬಿ ಬಂಪ್​ ತೋರಿಸುವ ಫೋಟೋವನ್ನು ಹಂಚಿಕೊಂಡಿದ್ದಾರೆ.

2018ರಲ್ಲಿ ನೇಹಾ ಮತ್ತು ಅಗಂದ್​ ಬೇಡಿ ವಿವಾಹವಾದರು. ಕೆಲವು ತಿಂಗಳೊಳಗೆ ಮಗಳು (ಮೆಹೆರ್​) ಜನಿಸಿದಳು. ಮದುವೆಗೆ ಮುಂಚೆಯೇ ನೇಹಾ ಗರ್ಭಿಣಿಯಾಗಿದ್ದರು ಎಂಬ ವಿಷಯವನ್ನು ಮದುವೆಯ ಬಳಿಕ ಅಗಂದ್​ ಬೇಡಿ ಬಹಿರಂಗಪಡಿಸಿದರು. ಇದೀಗ ನೇಹಾ ಅವರಿಗೆ 40 ವರ್ಷ. ತಮ್ಮ 2ನೇ ಮಗುವಿನ ಜನನದ ವಿಷಯವನ್ನು ಬಹಿರಂಗಪಡಿಸಿದ್ದಾರೆ.

View this post on Instagram

A post shared by Neha Dhupia (@nehadhupia)

View this post on Instagram

A post shared by ANGAD BEDI (@angadbedi)

ಇದನ್ನೂ ಓದಿ:

ರಾಜ್​ ಕೌಶಲ್​ ಅಂತ್ಯಕ್ರಿಯೆ: ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಗಂಡನ ಅಂತ್ಯಸಂಸ್ಕಾರ ಮಾಡಿದ ಮಂದಿರಾ ಬೇಡಿ

ಗಾಯಕಿ ನೇಹಾ ಕಕ್ಕರ್ ಗರ್ಭಿಣಿ ಅಲ್ಲ, ಹೊಸ ಮ್ಯೂಸಿಕ್ ವಿಡಿಯೊದ ಪ್ರಚಾರ ತಂತ್ರ ಇದು!

Published On - 5:09 pm, Mon, 19 July 21

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?