AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Neha Dhupia: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಸ್ಟಾರ್​ ಕಪಲ್​; ನೇಹಾ ಧೂಪಿಯಾ- ಅಗಂದ್​ ಬೇಡಿ ಹಂಚಿಕೊಂಡ್ರು ಸಿಹಿ ಸುದ್ದಿ

ನೇಹಾ ಧೂಪಿಯಾ- ಅಗಂದ್​ ಬೇಡಿ : ಸ್ಟಾರ್​ ಕಪಲ್​ ಕುಟುಂಬ ಸಮೇತರಾಗಿ ಕ್ಲಿಕ್ಕಿಸಿಕೊಂಡ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ನೇಹಾ ಧೂಪಿಯಾ, ಪತಿ ಅಗಂದ್​ ಬೇಡಿ ಮತ್ತು ಮೊದಲ ಮಗಳು ಸೇರಿ ಮೂವರೂ ಕೂಡಾ ಕಪ್ಪು ಬಣ್ಣದ ಡ್ರೆಸ್​ ತೊಟ್ಟು ನಿಂತಿರುವ ಫೋಟೋ ನೋಡಬಹುದು.

Neha Dhupia: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಸ್ಟಾರ್​ ಕಪಲ್​; ನೇಹಾ ಧೂಪಿಯಾ- ಅಗಂದ್​ ಬೇಡಿ ಹಂಚಿಕೊಂಡ್ರು ಸಿಹಿ ಸುದ್ದಿ
ಎರಡನೇ ಮಗುವಿನ ನಿರೀಕ್ಷೆಯಲ್ಲಿ ಸ್ಟಾರ್​ ಕಪಲ್
TV9 Web
| Edited By: |

Updated on:Jul 19, 2021 | 5:15 PM

Share

ಬಾಲಿವುಡ್​ ಸ್ಟಾರ್​ ಕಪಲ್​ ನೇಹಾ ಧೂಪಿಯಾ ಮತ್ತು ಅಗಂದ್​ ಬೇಡಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವಿಷಯವನ್ನು ತಮ್ಮ ಅಭಿಮಾನಿ ಬಳಗಕ್ಕೆ ತಿಳಿಸುವ ಸಲುವಾಗಿ ನೇಹಾ ಧೂಪಿಯಾ(Neha Dhupia) ಇನ್​ಸ್ಟಾಗ್ರಾಂ(Instagram) ಅಧಿಕೃತ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. ಸ್ಟಾರ್​ ಕಪಲ್​ ಕುಟುಂಬ ಸಮೇತರಾಗಿ ಕ್ಲಿಕ್ಕಿಸಿಕೊಂಡ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ನೇಹಾ ಧೂಪಿಯಾ, ಪತಿ ಅಗಂದ್​ ಬೇಡಿ(Angad Bedi) ಮತ್ತು ಮೊದಲ ಮಗಳು ಮೆಹೆರ್​ ಸೇರಿ ಮೂವರೂ ಕೂಡಾ ಕಪ್ಪು ಬಣ್ಣದ ಡ್ರೆಸ್​ ತೊಟ್ಟು ನಿಂತಿರುವ ಫೋಟೋ ನೋಡಬಹುದು.

ಫೋಟೋದಲ್ಲಿ ಗಮನಿಸುವಂತೆ ಎಲ್ಲರ ಮುಖದಲ್ಲೂ ಸಂತೋಷವನ್ನು ಕಾಣಬಹುದು. ನೇಹಾ ಮತ್ತು ಅಗಂದ್​ ಬೇಡಿ ಅವರ ಅಭಿಮಾನಿ ಬಳಗ, ಕುಟುಂಬ ಮತ್ತು ಸ್ನೇಹಿತರು ಕಾಮೆಂಟ್​ ವಿಭಾಗದಲ್ಲಿ ಶುಭ ಹಾರೈಸಿದ್ದಾರೆ. ‘ಹೊಸ ಹೋಮ್​ ಪ್ರೊಡಕ್ಷನ್​ ಹತ್ತಿರದಲ್ಲಿದೆ’ ಎಂದು ಅಗಂದ್​ ಬೇಡಿ ಪೋಸ್ಟ್​ ಹಂಚಿಕೊಂಡಿದ್ದಾರೆ. ಜತೆಗೆ ನೇಹಾ ಬೇಬಿ ಬಂಪ್​ ತೋರಿಸುವ ಫೋಟೋವನ್ನು ಹಂಚಿಕೊಂಡಿದ್ದಾರೆ.

2018ರಲ್ಲಿ ನೇಹಾ ಮತ್ತು ಅಗಂದ್​ ಬೇಡಿ ವಿವಾಹವಾದರು. ಕೆಲವು ತಿಂಗಳೊಳಗೆ ಮಗಳು (ಮೆಹೆರ್​) ಜನಿಸಿದಳು. ಮದುವೆಗೆ ಮುಂಚೆಯೇ ನೇಹಾ ಗರ್ಭಿಣಿಯಾಗಿದ್ದರು ಎಂಬ ವಿಷಯವನ್ನು ಮದುವೆಯ ಬಳಿಕ ಅಗಂದ್​ ಬೇಡಿ ಬಹಿರಂಗಪಡಿಸಿದರು. ಇದೀಗ ನೇಹಾ ಅವರಿಗೆ 40 ವರ್ಷ. ತಮ್ಮ 2ನೇ ಮಗುವಿನ ಜನನದ ವಿಷಯವನ್ನು ಬಹಿರಂಗಪಡಿಸಿದ್ದಾರೆ.

View this post on Instagram

A post shared by Neha Dhupia (@nehadhupia)

View this post on Instagram

A post shared by ANGAD BEDI (@angadbedi)

ಇದನ್ನೂ ಓದಿ:

ರಾಜ್​ ಕೌಶಲ್​ ಅಂತ್ಯಕ್ರಿಯೆ: ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಗಂಡನ ಅಂತ್ಯಸಂಸ್ಕಾರ ಮಾಡಿದ ಮಂದಿರಾ ಬೇಡಿ

ಗಾಯಕಿ ನೇಹಾ ಕಕ್ಕರ್ ಗರ್ಭಿಣಿ ಅಲ್ಲ, ಹೊಸ ಮ್ಯೂಸಿಕ್ ವಿಡಿಯೊದ ಪ್ರಚಾರ ತಂತ್ರ ಇದು!

Published On - 5:09 pm, Mon, 19 July 21

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ