ಹೆಣ್ಮಕ್ಳ ಬಗ್ಗೆ ಬೇಕಾಬಿಟ್ಟಿ ಮಾತನಾಡಬೇಡಿ, ನಿಮ್ಮ ಚಪ್ಪಲ್ಲಿಯಲ್ಲಿ ನೀವೇ ಹೊಡ್ಕೋಳಿ; ಚಕ್ರವರ್ತಿ ವಿರುದ್ಧ ತಿರುಗಿಬಿದ್ದ ನಿಧಿ

Chakravarthy Chandrachud: ಟಾಸ್ಕ್​​ನಲ್ಲಿ ರಾಜೀವ್​ ಪಾಲ್ಗೊಂಡ ಬಗ್ಗೆ ಚಕ್ರವರ್ತಿ ಚಂದ್ರಚೂಡ್​ ಅಸಮಧಾನ ಹೊರ ಹಾಕಿದರು.

ಹೆಣ್ಮಕ್ಳ ಬಗ್ಗೆ ಬೇಕಾಬಿಟ್ಟಿ ಮಾತನಾಡಬೇಡಿ, ನಿಮ್ಮ ಚಪ್ಪಲ್ಲಿಯಲ್ಲಿ ನೀವೇ ಹೊಡ್ಕೋಳಿ; ಚಕ್ರವರ್ತಿ ವಿರುದ್ಧ ತಿರುಗಿಬಿದ್ದ ನಿಧಿ
ನಿಧಿ ಸುಬ್ಬಯ್ಯ
Follow us
|

Updated on: Apr 22, 2021 | 10:36 PM

ಮನೆಯಲ್ಲಿ ಸ್ಪರ್ಧಿಗಳು ಬಳಕೆ ಮಾಡುವ ವಸ್ತುಗಳ ಮೌಲ್ಯವನ್ನು ತಿಳಿಸುವ ಉದ್ದೇಶದಿಂದ ಎಲ್ಲಾ ಸೌಲಭ್ಯಗಳನ್ನು ಬಿಗ್​ ಬಾಸ್​ ಹಿಂದಕ್ಕೆ ಪಡೆದಿದೆ. ಇದರಿಂದ ಮನೆಯ ಸದಸ್ಯರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಶುಭಾ ಪೂಂಜಾ ಸೇರಿದಂತೆ ಅನೇಕರು ಬಿಗ್​ ಬಾಸ್​ಗೆ ಹಿಡಿಶಾಪ ಹಾಕುತ್ತಿದ್ದಾರೆ. ಇದರ ಜತೆಗೆ ಅವರಿಗೆ ಮನೆಯಲ್ಲಿರುವ ವಸ್ತುಗಳ ಮೌಲ್ಯ ನಿಧಾನವಾಗಿ ತಿಳಿಯುತ್ತಿದೆ. ಈ ಮಧ್ಯೆ ಬಿಗ್​ ಬಾಸ್​ ಮನೆಯಲ್ಲಿ ದೊಡ್ಡ ಜಗಳವೇ ನಡೆದುಹೋಗಿದೆ.

ಬಿಗ್​ ಬಾಸ್​ ಮನೆಯಲ್ಲಿ ನೀಡುವ ಟಾಸ್ಕ್​ ಗೆಲ್ಲಬೇಕು ಎನ್ನುವ ಕಾರಣಕ್ಕೆ ದೈಹಿಕವಾಗಿ ಬಲಾಢ್ಯರಾದ ಮಂಜು ಪಾವಗಡ, ರಾಜೀವ್​ ಹಾಗೂ ಅರವಿಂದ್​ ಟಾಸ್ಕ್​ನಲ್ಲಿ ಪಾಲ್ಗೊಂಡಿದ್ದಾರೆ. ಐದು ಟಾಸ್ಕ್​ಗಳ ಪೈಕಿ ಮೂರು ಟಾಸ್ಕ್​ನಲ್ಲಿ ಇವರೇ ಆಟವಾಡಿದ್ದಾರೆ. ಇದನ್ನು ಬಿಗ್​ ಬಾಸ್​ ಗಮನಿಸಿದ್ದಾರೆ. ಅಲ್ಲದೆ, ಈ ಮೂವರಿಗೆ ಮಾತ್ರ ಗ್ಯಾಸ್​ ಸೌಲಭ್ಯ ಸಿಗುತ್ತಿದೆ. ಈ ವಿಚಾರ ಬಿಗ್​ ಬಾಸ್​ ಮನೆಯಲ್ಲಿ ಚರ್ಚೆ ಆಗುತ್ತಿದೆ.

ಟಾಸ್ಕ್​​ನಲ್ಲಿ ರಾಜೀವ್​ ಪಾಲ್ಗೊಂಡ ಬಗ್ಗೆ ಚಕ್ರವರ್ತಿ ಚಂದ್ರಚೂಡ್​ ಅಸಮಧಾನ ಹೊರ ಹಾಕಿದರು. ಈ ಬಗ್ಗೆ ಮಾತನಾಡಿದ ಚಕ್ರವರ್ತಿ, ಬೆಳಗ್ಗೆ ನಾನು ಟಾಸ್ಕ್​ನಲ್ಲಿ ಪಾಲ್ಗೊಳ್ಳುತ್ತೇನೆ ಎಂದೆ. ಆಗ ನಿಧಿ ನಾನು ಬೇಡ ರಾಜೀವ್​ ಪಾಲ್ಗೊಳ್ಳಲಿ ಎಂದರು. ಈ ವಿಚಾರಕ್ಕೆ ನನಗೆ ಬೇಸರ ಆಯ್ತು ಎಂದರು. ಆಗ ನಿಧಿ ಸಿಟ್ಟಾದರು.

ನಾನು ಹಾಗೆ ಹೇಳಲೇ ಇಲ್ಲ. ಹೆಣ್ಮಕ್ಳ ಬಗ್ಗೆ ಬೇಕಾಬಿಟ್ಟಿ ಮಾತಾಡಬೇಡಿ ಎಂದು ಸಿಟ್ಟಾದರು. ಈ ವಿಚಾರಕ್ಕೆ ಸಂಬಂಧಿಸಿ ಪ್ರಶಾಂತ್​ ಕೂಡ ಸಿಟ್ಟಾದರು. ನಾನು ಹೇಳಿದ್ದು ಸುಳ್ಳು ಎನ್ನುವುದಾದರೆ ನನ್ನ ಚಪ್ಪಲ್ಲಿ ಕೊಡ್ತೇನೆ. ಹೊಡೆದುಬಿಡಿ ಎಂದರು. ನೀವು ಹೇಳಿದ್ದು ಸಂಪೂರ್ಣ ಸುಳ್ಳು. ನಿಮ್ಮ ಚಪ್ಪಲ್ಲಿಯಲ್ಲಿ ನೀವೇ ಹೊಡೆದುಕೊಳ್ಳಿ ಎಂದು ನಿಧಿ ಸಿಟ್ಟಾದರು. ಈ ವಿಚಾರದ ಬಗ್ಗೆ ಮನೆಯಲ್ಲಿ ದೊಡ್ಡ ಜಗಳವೇ ನಡೆದುಹೋಗಿದೆ.

ಇದನ್ನೂ ಓದಿ: Kichcha Sudeep Salary: ಬಿಗ್​ ಬಾಸ್​ ಸೀಸನ್​ 8ಗೆ ಕಿಚ್ಚ ಸುದೀಪ್​ ಪಡೆದ ಸಂಭಾವನೆ ಎಷ್ಟು?

ಮಂಜು-ಅರವಿಂದ್​ ಸ್ಟ್ರಾಂಗ್​​ ಎಂದು ಒಪ್ಪಿಕೊಂಡ ಬಿಗ್​ಬಾಸ್​ ಸ್ಪರ್ಧಿಗಳಿಗೆ ಕಠಿಣ ಶಿಕ್ಷೆ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ