AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಜುಗೆ ದಿವ್ಯಾ ಮೇಲೆ ಇರೋದು ಪ್ರೀತಿ ಅಲ್ಲ ಅದು ಬೇರೆಯೇ; ಶುಭಾ-ನಿಧಿ ಗುಟ್ಟಿನ ಮಾತು ರಟ್ಟು

ಮಂಜು ಪಾವಗಡ ಇತ್ತೀಚೆಗೆ ಟಾಸ್ಕ್​ ಮೇಲೆ ಹೆಚ್ಚು ಕಾನ್ಸಂಟ್ರೇಟ್​​ ಮಾಡುತ್ತಿಲ್ಲ. ದಿವ್ಯಾ ಅತ್ತಾಗ, ಬೇಸರ ಮಾಡಿಕೊಂಡಾಗ ಅಲ್ಲಿಗೆ ಹೋಗಿ ಅವರನ್ನು ಸಮಾಧಾನ ಮಾಡೋಕೆ ಪ್ರಯತ್ನ ಮಾಡುತ್ತಾರೆ.

ಮಂಜುಗೆ ದಿವ್ಯಾ ಮೇಲೆ ಇರೋದು ಪ್ರೀತಿ ಅಲ್ಲ ಅದು ಬೇರೆಯೇ; ಶುಭಾ-ನಿಧಿ ಗುಟ್ಟಿನ ಮಾತು ರಟ್ಟು
ಮಂಜು ಪಾವಗಡ - ದಿವ್ಯಾ ಸುರೇಶ್​
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​|

Updated on: May 09, 2021 | 7:11 AM

Share

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್​ ಮೊದಲ ದಿನದಿಂದಲೂ ಆಪ್ತರಾಗಿದ್ದಾರೆ. ಆದರೆ, ಬರುಬರುತ್ತಾ ಮಂಜು ತಮ್ಮ ಎನರ್ಜಿಯೆಲ್ಲ ದಿವ್ಯಾ ಅವರನ್ನು ಸಂಭಾಳಿಸಲು ವ್ಯರ್ಥ ಮಾಡುತ್ತಿದ್ದಾರೆ ಎನ್ನುವ ಮಾತಿದೆ. ಪ್ರೇಕ್ಷಕರಿಗೂ ಕೂಡ ಇದು ಹೌದೆನ್ನಿಸಿದೆ. ಹೀಗಿರುವಾಗಲೇ ಬಿಗ್​ ಬಾಸ್​ ಮನೆಯಲ್ಲಿ ನಿಧಿ ಹಾಗೂ ಶುಭಾ ಗುಟ್ಟಿನ ಮಾತು ಹೊರ ಬಿದ್ದಿದೆ.

ಮಂಜು ಪಾವಗಡ ಇತ್ತೀಚೆಗೆ ಟಾಸ್ಕ್​ ಮೇಲೆ ಹೆಚ್ಚು ಕಾನ್ಸಂಟ್ರೇಟ್​​ ಮಾಡುತ್ತಿಲ್ಲ. ದಿವ್ಯಾ ಅತ್ತಾಗ, ದಿವ್ಯಾ ಬೇಸರ ಮಾಡಿಕೊಂಡಾಗ ಅಲ್ಲಿಗೆ ಹೋಗಿ ಅವರನ್ನು ಸಮಾಧಾನ ಮಾಡೋಕೆ ಪ್ರಯತ್ನ ಮಾಡುತ್ತಾರೆ. ಇನ್ನು ಸಂತೋಷದಲ್ಲಿದ್ದಾಗ ದಿವ್ಯಾ-ಮಂಜು ಪ್ರತ್ಯೇಕವಾಗಿ ಕೂತು ಮಾತುಕತೆ ನಡೆಸುತ್ತಾರೆ.

ಮೇ 8ರ ಎಪಿಸೋಡ್​ನಲ್ಲಿ ಅದೇ ರೀತಿ ಆಗಿದೆ. ಕಥೆ ಕಟ್ಟುವ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಒಂದೊಂದು ಜೋಡಿ ಕಥೆ ಹೇಳಬೇಕು. ಮಧ್ಯೆ ಮಧ್ಯೆ ಸ್ಪರ್ಧಿಗಳು ಒಂದು ಶಬ್ದಕೊಡುತ್ತಾರೆ. ಆ ಶಬ್ದ ಬಳಕೆ ಮಾಡಿಕೊಂಡು ಕಥೆ ಮುಂದುವರಿಸಬೇಕು.

ಯಾರು ಉತ್ತಮವಾಗಿ ಕಥೆ ಹೇಳಿದರೋ ಅವರು ಟಾಸ್ಕ್​ ಗೆದ್ದಂತೆ. ಈ ಟಾಸ್ಕ್​ನಲ್ಲಿ ನಾನು  ಉತ್ತಮವಾಗಿ ಕಥೆ ಹೇಳಿದ್ದೇನೆ ಎಂದು ಹೇಳುವಂತೆ ಮಂಜು ಅವರನ್ನು ಒತ್ತಾಯಿಸಿದರು. ಈ ವಿಚಾರ ನಿಧಿ ಕಿವಿಗೆ ಬಿದ್ದಿದೆ. ಇದನ್ನು ಶುಭಾ ಬಳಿ ಹಂಚಿಕೊಂಡಿದ್ದಾರೆ.

ಮಂಜುನ ನಾನೂ ಗಮನಿಸುತ್ತಿದ್ದೇನೆ. ಆರಂಭದಲ್ಲಿ ಆತ ಫಿಯರ್​ಲೆಸ್​ ಆಗಿದ್ದ. ಈಗ ಮಂಜು ಬದಲಾಗಿದ್ದಾನೆ. ಮಂಜುಗೆ ದಿವ್ಯಾ ಮೇಲೆ ಪ್ರೀತಿ ಇಲ್ಲ. ಆತನಿಗೆ ಅವಳ ಮೇಲೆ ಇರೋದು ಕೇವಲ ಭಯ ಎಂದು ಶುಭಾ-ನಿಧಿ ಮಾತನಾಡಿಕೊಂಡರು. ಪ್ರೇಕ್ಷಕರಿಗೂ ಕೂಡ ಇದು ಹೌದೆನ್ನಿಸಿದೆ.

ಇದನ್ನೂ ಓದಿ: Bigg Boss Kannada: ಮನಸ್ಸು ಭಾರವಾಗಿದೆ, ಬಿಗ್​ ಬಾಸ್​ ನಿಲ್ಲುತ್ತಿದೆ; ನೋವು ಹೊರಹಾಕಿದ ಪರಮೇಶ್ವರ್​ ಗುಂಡ್ಕಲ್​ 

ಬಿಗ್​ ಬಾಸ್​ ಮನೆಯಲ್ಲಿ ಅರವಿಂದ್​ ಅಂದು ಹೇಳಿದ್ದ ಮಾತು ಇಷ್ಟು ಬೇಗ ನಿಜವಾಯ್ತೇ?

ಪಾಕಿಸ್ತಾನದಲ್ಲಿ ಭಾರೀ ಪ್ರವಾಹ; 116 ಸಾವು, 253 ಜನರಿಗೆ ಗಾಯ
ಪಾಕಿಸ್ತಾನದಲ್ಲಿ ಭಾರೀ ಪ್ರವಾಹ; 116 ಸಾವು, 253 ಜನರಿಗೆ ಗಾಯ
ಮನೆಯಂಗಳಕ್ಕೆ ಉರುಳಿ ಬಂದ ಕಲ್ಲು, ಮಣ್ಣು ಮತ್ತು ಗಿಡಗಳು
ಮನೆಯಂಗಳಕ್ಕೆ ಉರುಳಿ ಬಂದ ಕಲ್ಲು, ಮಣ್ಣು ಮತ್ತು ಗಿಡಗಳು
ಪಾಟ್ನಾದ ಆಸ್ಪತ್ರೆಗೆ ದಾಖಲಾಗಿದ್ದ ಕೊಲೆ ಆರೋಪಿಯನ್ನು ಶೂಟ್ ಮಾಡಿ ಕೊಲೆ
ಪಾಟ್ನಾದ ಆಸ್ಪತ್ರೆಗೆ ದಾಖಲಾಗಿದ್ದ ಕೊಲೆ ಆರೋಪಿಯನ್ನು ಶೂಟ್ ಮಾಡಿ ಕೊಲೆ
ಶ್ರೀರಾಮುಲು ಮಾತುಗಳಲ್ಲಿ ಸ್ಪಷ್ಟತೆಯ ಕೊರತೆ, ಮಾತುಗಳಲ್ಲಿ ಗೊಂದಲ
ಶ್ರೀರಾಮುಲು ಮಾತುಗಳಲ್ಲಿ ಸ್ಪಷ್ಟತೆಯ ಕೊರತೆ, ಮಾತುಗಳಲ್ಲಿ ಗೊಂದಲ
3 ನಿಮಿಷಗಳ ವಿಡಿಯೋದಲ್ಲಿ ಕೊಹ್ಲಿ ಏನು ಹೇಳಿದ್ದಾರೆ? ನೀವೇ ನೋಡಿ
3 ನಿಮಿಷಗಳ ವಿಡಿಯೋದಲ್ಲಿ ಕೊಹ್ಲಿ ಏನು ಹೇಳಿದ್ದಾರೆ? ನೀವೇ ನೋಡಿ
ಬಿಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ವಿಂಗಡಿಸಲು ನಿರ್ಧರಿಸಲಾಗಿದೆ: ಶಿವಕುಮಾರ
ಬಿಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ವಿಂಗಡಿಸಲು ನಿರ್ಧರಿಸಲಾಗಿದೆ: ಶಿವಕುಮಾರ
ರವಿಚಂದ್ರನ್ ಅವರನ್ನು ಅಳುವಂತೆ ಮಾಡಿದ ಏಕೈಕ ಸಿನಿಮಾ ಇದು
ರವಿಚಂದ್ರನ್ ಅವರನ್ನು ಅಳುವಂತೆ ಮಾಡಿದ ಏಕೈಕ ಸಿನಿಮಾ ಇದು
ಸೇತುವೆ ಲೋಕಾರ್ಪಣೆಗೆ ಬರಬೇಡವೆಂದು ಸಿಎಂಗೆ ಬಿಎಸ್​ವೈ ಹೇಳಿದ್ದರು: ಯತ್ನಾಳ್
ಸೇತುವೆ ಲೋಕಾರ್ಪಣೆಗೆ ಬರಬೇಡವೆಂದು ಸಿಎಂಗೆ ಬಿಎಸ್​ವೈ ಹೇಳಿದ್ದರು: ಯತ್ನಾಳ್
ವಿಶ್ವ ನಂ.1 ಕಾರ್ಲ್ಸನ್​ಗೆ ಸೋಲುಣಿಸಿದ ಮತ್ತೊಬ್ಬ ಭಾರತೀಯ
ವಿಶ್ವ ನಂ.1 ಕಾರ್ಲ್ಸನ್​ಗೆ ಸೋಲುಣಿಸಿದ ಮತ್ತೊಬ್ಬ ಭಾರತೀಯ
ಶಾಸಕರು ಅನುದಾನಗಳಿಗಾಗಿ ಸುರ್ಜೇವಾಲಾರನ್ನು ಭೇಟಿಯಾಗುತ್ತಿದ್ದಾರೆ: ನಿಖಿಲ್
ಶಾಸಕರು ಅನುದಾನಗಳಿಗಾಗಿ ಸುರ್ಜೇವಾಲಾರನ್ನು ಭೇಟಿಯಾಗುತ್ತಿದ್ದಾರೆ: ನಿಖಿಲ್