ರತನ್​ ಟಾಟಾ ಕುಟುಂಬ ಶ್ರೀಮಂತರಾಗಿದ್ದು ಹೇಗೆ? ಈ ವೆಬ್​ ಸಿರೀಸ್​ನಲ್ಲಿ ಸಿಗಲಿದೆ ಸಂಪೂರ್ಣ ವಿವರ

Ratan Tata Web Series: ರತನ್​ ಟಾಟಾ ಸೇರಿದಂತೆ ಅವರ ಕುಟುಂಬದ ಹಲವು ಸದಸ್ಯರ ಪಾತ್ರದಲ್ಲಿ ನಟಿಸಲು ಖ್ಯಾತ ಮತ್ತು ಪ್ರತಿಭಾವಂತ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ವೆಬ್​ ಸರಣಿ ಬಗ್ಗೆ ಕೌತುಕ ನಿರ್ಮಾಣ ಆಗಿದೆ.

ರತನ್​ ಟಾಟಾ ಕುಟುಂಬ ಶ್ರೀಮಂತರಾಗಿದ್ದು ಹೇಗೆ? ಈ ವೆಬ್​ ಸಿರೀಸ್​ನಲ್ಲಿ ಸಿಗಲಿದೆ ಸಂಪೂರ್ಣ ವಿವರ
ರತನ್ ಟಾಟಾ
Follow us
| Updated By: ಮದನ್​ ಕುಮಾರ್​

Updated on: Jan 30, 2022 | 9:03 AM

ಭಾರತದಲ್ಲೀಗ ವೆಬ್​ ಸಿರೀಸ್​ಗಳ (Web Series) ಟ್ರೆಂಡ್​ ಜೋರಾಗಿದೆ. ಅದೇ ರೀತಿ ಬಯೋಪಿಕ್​ಗಳು ಸಹ ಸೌಂಡು ಮಾಡುತ್ತಿವೆ. ಎಲ್ಲ ಭಾಷೆಯಲ್ಲಿಯೂ ಒಳ್ಳೊಳ್ಳೆಯ ಕಥೆಗಳನ್ನು ಆಧರಿಸಿ ವೆಬ್​ ಸರಣಿ ನಿರ್ಮಾಣ ಮಾಡಲಾಗುತ್ತಿದೆ. ನಿಜಜೀವನದಲ್ಲಿ ಸಾಧನೆ ಮಾಡಿದ ಅನೇಕರ ಬದುಕಿನ ವಿವರಗಳು ವೆಬ್​ ಸಿರೀಸ್​ ಮೂಲಕ ಬಿತ್ತರಗೊಳ್ಳುತ್ತಿದೆ. ಈಗ ರತನ್​ ಟಾಟಾ (Ratan Tata) ಅವರ ಜೀವನವನ್ನು ಆಧರಿಸಿ ಒಂದು ವೆಬ್​ ಸಿರೀಸ್​ ಮಾಡಲು ಪ್ಲ್ಯಾನ್​ ಸಿದ್ಧವಾಗುತ್ತಿದೆ. ಈ ಬಗ್ಗೆ ಗುಸುಗುಸು ಸುದ್ದಿ ಹರಿದಾಡುತ್ತಿದೆ. ಕೋಟ್ಯಂತರ ಜನರಿಗೆ ರತನ್​ ಟಾಟಾ ಮಾದರಿ. ‘ಟಾಟಾ ಗ್ರೂಪ್​’ ಕಂಪನಿ ಮೂಲಕ ಅಪಾರ ಸಾಧನೆ ಮಾಡಿದ ಅವರ ಬಗ್ಗೆ ತಿಳಿದುಕೊಳ್ಳಲು ಎಲ್ಲರಿಗೂ ಆಸಕ್ತಿ ಇದೆ. ಹಾಗಾಗಿ ರತನ್​ ಟಾಟಾ ಮತ್ತು ಅವರ ಕುಟುಂಬದ (Ratan Tata Family) ಕುರಿತು ವೆಬ್​ ಸಿರೀಸ್​ ನಿರ್ಮಾಣ ಮಾಡಲು ಪ್ರೊಡಕ್ಷನ್​ ಕಂಪನಿಯೊಂದು ಮುಂದೆ ಬಂದಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವುದೊಂದೇ ಬಾಕಿ ಇದೆ. ರತನ್​ ಟಾಟಾ ಪಾತ್ರದಲ್ಲಿ ಯಾರು ನಟಿಸುತ್ತಾರೆ ಎಂಬ ಕೌತುಕ ಈಗ ನಿರ್ಮಾಣ ಆಗಿದೆ.

‘ಆಲ್​ಮೈಟಿ ಮೋಷನ್​ ಪಿಕ್ಚರ್’ ಸಂಸ್ಥೆಯು ರತನ್​ ಟಾಟಾ ಅವರ ಜೀವನವನ್ನು ಆಧರಿಸಿ ವೆಬ್​ ಸಿರೀಸ್​ ಮಾಡಲು ಸಿದ್ಧವಾಗಿದೆ. ‘The Tatas: How A Family Built A Business and A Nation’ ಪುಸ್ತಕದಲ್ಲಿ ರತನ್​ ಟಾಟಾ ಅವರ ಜೀವನದ ಬಗ್ಗೆ ವಿವರಗಳಿವೆ. ಆ ಪುಸ್ತಕದ ಹಕ್ಕುಗಳನ್ನು ‘ಆಲ್​ಮೈಟಿ ಮೋಷನ್​ ಪಿಕ್ಚರ್’ ಸಂಸ್ಥೆ ಖರೀದಿಸಿದೆ ಎಂದು ಬಾಲಿವುಡ್​ ಹಂಗಾಮ ವರದಿ ಮಾಡಿದೆ. ಖ್ಯಾತ ಲೇಖಕ, ಪತ್ರಕರ್ತ ಗಿರೀಶ್​ ಕುಬೇರ್​ ಅವರು ಈ ಪುಸ್ತಕ ಬರೆದಿದ್ದಾರೆ. ಇದರ ಹಕ್ಕುಗಳನ್ನು ತಾವು ಖರೀದಿಸಿರುವುದಾಗಿ ‘ಆಲ್​ಮೈಟಿ ಮೋಷನ್​ ಪಿಕ್ಚರ್’ ಸಂಸ್ಥೆಯ ಮುಖ್ಯಸ್ಥೆ ಪ್ರಬ್ಲೀನ್​ ಕೌರ್​ ಸಂಧು ಅವರು ಒಂದು ವೆಬ್​ಸೈಟ್​ಗೆ ಮಾಹಿತಿ ನೀಡಿದ್ದಾರೆ. ತಾವು ನಿರ್ಮಾಣ ಮಾಡಲಿರುವ ವೆಬ್​ ಸಿರೀಸ್​ನಲ್ಲಿ ರತನ್​ ಟಾಟಾ ಅವರ ಪೂರ್ವಜರ ಬಗ್ಗೆಯೂ ತೋರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಮೂರು ಸೀಸನ್​ಗಳಲ್ಲಿ ಈ ವೆಬ್​ ಸರಣಿ ಮೂಡಿಬರಲಿದೆ ಎಂದು ವರದಿ ಆಗಿದೆ.

ಈ ಕುರಿತಂತೆ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಸ್ಕ್ರಿಪ್ಟ್​ ಕೆಲಸ ಪೂರ್ಣಗೊಂಡ ಬಳಿಕ ಕಲಾವಿದರ ಆಯ್ಕೆ ಪ್ರಕ್ರಿಯೆ ಶುರುವಾಗಲಿದೆ. ರತನ್​ ಟಾಟಾ ಸೇರಿದಂತೆ ಅವರ ಕುಟುಂಬದ ಹಲವು ಸದಸ್ಯರ ಪಾತ್ರದಲ್ಲಿ ನಟಿಸಲು ಖ್ಯಾತ ಮತ್ತು ಪ್ರತಿಭಾವಂತ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಯಾಕೆಂದರೆ ಈ ವೆಬ್​ ಸರಣಿಯ ಬಗ್ಗೆ ಇಡೀ ದೇಶವೇ ಕುತೂಹಲ ಇಟ್ಟುಕೊಂಡಿದೆ. ಒಳ್ಳೆಯ ಕಲಾವಿದರ ಆಯ್ಕೆಯಿಂದ ತೂಕ ಹೆಚ್ಚಲಿದೆ ಅಂತ ಮೂಲಗಳು ತಿಳಿಸಿವೆ ಎಂದು ಬಾಲಿವುಡ್​ ಹಂಗಾಮ ವರದಿ ಪ್ರಕಟಿಸಿದೆ.

ಇದನ್ನೂ ಓದಿ:

ಪುನೀತ್​ ಕುರಿತು ಸಿದ್ಧವಾಗಲಿದೆ ಬಯೋಪಿಕ್​? ನಿರ್ದೇಶಕ ಸಂತೋಷ್​ ಆನಂದ್​ರಾಮ್​ ನೀಡಿದ್ರು ಸೂಚನೆ

ಕಪಿಲ್​ ಶರ್ಮಾ ಕುರಿತು ಬಯೋಪಿಕ್​; ಅಧಿಕೃತ ಘೋಷಣೆ ಮಾಡಿದ ಚಿತ್ರತಂಡ

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ