Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪಾತಾಳ್ ಲೋಕ್’ ‘ ಸೀರಿಸ್​ನಿಂದ ಬದಲಾಯ್ತು ಬದುಕು; 50 ಪಟ್ಟು ಹೆಚ್ಚು ಸಂಬಳ ಪಡೆದ ಜೈದೀಪ್

ಜೈದೀಪ್ ಅಹ್ಲಾವತ್ ಅವರ ಜನ್ಮದಿನದಂದು, ಅವರ ಅದ್ಭುತ ನಟನೆಯಿಂದಾಗಿ ಜನಪ್ರಿಯವಾದ ‘ಪಾತಾಳ್ ಲೋಕ್ 2’ ಸರಣಿಯ ಯಶಸ್ಸು ಮತ್ತು ಅವರ ಸಂಭಾವನೆಯ ಬಗ್ಗೆ ಚರ್ಚಿಸಲಾಗಿದೆ. ಈ ಕ್ರೈಮ್ ಥ್ರಿಲ್ಲರ್ ಸರಣಿಯಲ್ಲಿ ಅವರ ಪಾತ್ರ ಮತ್ತು ಅವರ ವೃತ್ತಿಪರ ಪ್ರಗತಿಯನ್ನು ಈ ಲೇಖನ ವಿವರಿಸುತ್ತದೆ.

‘ಪಾತಾಳ್ ಲೋಕ್’ ‘ ಸೀರಿಸ್​ನಿಂದ ಬದಲಾಯ್ತು ಬದುಕು; 50 ಪಟ್ಟು ಹೆಚ್ಚು ಸಂಬಳ ಪಡೆದ ಜೈದೀಪ್
ಜೈದೀಪ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Feb 08, 2025 | 6:30 AM

ಜೈದೀಪ್ ಅಹ್ಲಾವತ್ ಅವರಿಗೆ (ಫೆಬ್ರವರಿ 8) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಈ ವರ್ಷ ಅವರಿಗೆ ಸಖತ್ ವಿಶೇಷ. ಅವರ ನಟನೆಯ ‘ಪಾತಾಳ್​ ಲೋಕ್ 2’ ಸರಣಿ ಜನವರಿ 27ರಂದು ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಪ್ರಸಾರ ಕಂಡಿದೆ. ಕ್ರೈಮ್ ಥ್ರಿಲ್ಲರ್ ಶೈಲಿಯಲ್ಲಿ ಈ ಸರಣಿ ಮೂಡಿ ಬಂದಿದೆ. ಹಾಥಿರಾಮ್ ಚೌಧರಿ ಪಾತ್ರದಲ್ಲಿ ಅವರು ಗಮನ ಸೆಳೆದಿದ್ದಾರೆ. ಅವರ ಸಂಭಾವನೆ ವಿಚಾರ ಕೂಡ ಚರ್ಚೆಗೆ ಕಾರಣ ಆಗಿದೆ.

‘ಪಾತಾಳ್ ಲೋಕ್’ ಸರಣಿ ಸೂಪರ್ ಹಿಟ್ ಆಗಿತ್ತು. ಈ ಸರಣಿ ಕೂಡ ಕ್ರೈಮ್ ಥ್ರಿಲರ್ ಶೈಲಿಯಲ್ಲಿ ಮೂಡಿ ಬಂದಿತ್ತು. ಜರ್ನಲಿಸಂ ಲೋಕದ ಕೆಲವು ಕರಾಳ ಸತ್ಯಗಳನ್ನು ಹೇಳುವ ಪ್ರಯತ್ನ ಮಾಡಲಾಗಿತ್ತು. ಎರಡನೇ ಭಾಗದಲ್ಲೂ ಒಂದೊಳ್ಳೆಯ ಕಥೆಯ ಜೊತೆಗೆ ಬರಲಾಗಿದೆ. ಈ ಸರಣಿಗೆ ಇವರು ಪಡೆದ ಸಂಭಾವನೆ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಜೈದೀಪ್ ಅಹ್ಲಾವತ್ ಅವರು ಹಾಥಿರಾಮ್ ಚೌಧರಿ ಪಾತ್ರದಲ್ಲಿ ಮುಂದವುರಿದಿದ್ದಾರೆ. ಅವರು ಮೊದಲ ಸೀಸನ್​ಗಿಂತ 50 ಪಟ್ಟು ಹೆಚ್ಚಿನ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ. ಅವರು 40 ಲಕ್ಷ ರೂಪಾಯಿನ ಮೊದಲ ಸೀಸನ್​ಗೆ ಪಡೆದಿದ್ದರು. ಅವರ ಖ್ಯಾತಿ ಹೆಚ್ಚಿದ್ದರಿಂದ ಎರಡನೇ ಸೀಸನ್​ಗೆ 20 ಕೋಟಿ ರೂಪಾಯಿ ಪಡೆದರು ಎನ್ನುತ್ತಿದೆ ವರದಿ.

2020ರಲ್ಲಿ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಈ ಶೋ ಪ್ರಸಾರ ಕಂಡಿತು. ಹಾಥಿರಾಮ್ ಆಗಿ ಜೈದೀಪ್ ನಟನೆ ಎಲ್ಲರಿಗೂ ಇಷ್ಟ ಆಯಿತು. ಇದನ್ನು ಅನುಷ್ಕಾ ಶರ್ಮಾ ಸಹೋದರ ಕರ್ಣೇಶ್ ಶರ್ಮಾ ಅವರು ನಿರ್ಮಾಣ ಮಾಡಿದ್ದಾರೆ. ಮೊದಲ ಸೀಸನ್​​ನಲ್ಲಿ ಅನುಷ್ಕಾ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.

ಇದನ್ನೂ ಓದಿ: ಟೀಸರ್​ ಮೂಲಕ ಭಾರಿ ನಿರೀಕ್ಷೆ ಸೃಷ್ಟಿಸಿದ ‘ಪಾತಾಳ್ ಲೋಕ್ 2’ ವೆಬ್ ಸಿರೀಸ್​

‘ಪಾತಾಳ್ ಲೋಕ್ 2’ ಇನ್ವೆಸ್ಟಿಗೇಷನ್ ಡ್ರಾಮಾ ಕಥೆ ಹೊಂದಿದೆ. ನಾಗಾಲ್ಯಾಂಡ್​ನ ಪ್ರಮುಖ ವ್ಯಕ್ತಿಯ ಕೊಲೆ ಆಗುತ್ತದೆ. ಈ ಕೊಲೆಯನ್ನು ಬೆನ್ನತ್ತಿ ಹೋಗುವ  ಹಾಥಿರಾಮ್ ಅವರು ಸಾಕಷ್ಟು ಏಳುಬೀಳುಗಳನ್ನು ಕಾಣುತ್ತಾರೆ. ಗೆಳೆಯನನ್ನೂ ಅವರು ಕಳೆದುಕೊಳ್ಳುತ್ತಾರೆ. ಜೈದೀಪ್ ಅವರು 2010ರಲ್ಲೇ ಚಿತ್ರರಂಗಕ್ಕೆ ಕಾಲಿಟ್ಟರು. ‘ರಾಝಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅವರು ಕೆಲವು ವೆಬ್​ ಸೀರಿಸ್​ಗಳಲ್ಲೂ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Daily Devotional: ದೇವಸ್ಥಾನದಲ್ಲಿ ಮಹಿಳೆಯರು ಹೂವು ಧರಿಸುವುದು ಶುಭವೇ?
Daily Devotional: ದೇವಸ್ಥಾನದಲ್ಲಿ ಮಹಿಳೆಯರು ಹೂವು ಧರಿಸುವುದು ಶುಭವೇ?
Daily horoscope: ಹುಣ್ಣಿಮೆಯ ದಿನದ ರಾಶಿ ಫಲಗಳನ್ನು ತಿಳಿಯಿರಿ
Daily horoscope: ಹುಣ್ಣಿಮೆಯ ದಿನದ ರಾಶಿ ಫಲಗಳನ್ನು ತಿಳಿಯಿರಿ
ಮಂಗಳೂರಿನಲ್ಲೊಂದು ಎದೆ ಝಲ್ ಎನಿಸುವ ಭೀಕರ ಅಪಘಾತ
ಮಂಗಳೂರಿನಲ್ಲೊಂದು ಎದೆ ಝಲ್ ಎನಿಸುವ ಭೀಕರ ಅಪಘಾತ
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ