Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪಾತಾಳ್ ಲೋಕ್’ ‘ ಸೀರಿಸ್​ನಿಂದ ಬದಲಾಯ್ತು ಬದುಕು; 50 ಪಟ್ಟು ಹೆಚ್ಚು ಸಂಬಳ ಪಡೆದ ಜೈದೀಪ್

ಜೈದೀಪ್ ಅಹ್ಲಾವತ್ ಅವರ ಜನ್ಮದಿನದಂದು, ಅವರ ಅದ್ಭುತ ನಟನೆಯಿಂದಾಗಿ ಜನಪ್ರಿಯವಾದ ‘ಪಾತಾಳ್ ಲೋಕ್ 2’ ಸರಣಿಯ ಯಶಸ್ಸು ಮತ್ತು ಅವರ ಸಂಭಾವನೆಯ ಬಗ್ಗೆ ಚರ್ಚಿಸಲಾಗಿದೆ. ಈ ಕ್ರೈಮ್ ಥ್ರಿಲ್ಲರ್ ಸರಣಿಯಲ್ಲಿ ಅವರ ಪಾತ್ರ ಮತ್ತು ಅವರ ವೃತ್ತಿಪರ ಪ್ರಗತಿಯನ್ನು ಈ ಲೇಖನ ವಿವರಿಸುತ್ತದೆ.

‘ಪಾತಾಳ್ ಲೋಕ್’ ‘ ಸೀರಿಸ್​ನಿಂದ ಬದಲಾಯ್ತು ಬದುಕು; 50 ಪಟ್ಟು ಹೆಚ್ಚು ಸಂಬಳ ಪಡೆದ ಜೈದೀಪ್
ಜೈದೀಪ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Feb 08, 2025 | 6:30 AM

ಜೈದೀಪ್ ಅಹ್ಲಾವತ್ ಅವರಿಗೆ (ಫೆಬ್ರವರಿ 8) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಈ ವರ್ಷ ಅವರಿಗೆ ಸಖತ್ ವಿಶೇಷ. ಅವರ ನಟನೆಯ ‘ಪಾತಾಳ್​ ಲೋಕ್ 2’ ಸರಣಿ ಜನವರಿ 27ರಂದು ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಪ್ರಸಾರ ಕಂಡಿದೆ. ಕ್ರೈಮ್ ಥ್ರಿಲ್ಲರ್ ಶೈಲಿಯಲ್ಲಿ ಈ ಸರಣಿ ಮೂಡಿ ಬಂದಿದೆ. ಹಾಥಿರಾಮ್ ಚೌಧರಿ ಪಾತ್ರದಲ್ಲಿ ಅವರು ಗಮನ ಸೆಳೆದಿದ್ದಾರೆ. ಅವರ ಸಂಭಾವನೆ ವಿಚಾರ ಕೂಡ ಚರ್ಚೆಗೆ ಕಾರಣ ಆಗಿದೆ.

‘ಪಾತಾಳ್ ಲೋಕ್’ ಸರಣಿ ಸೂಪರ್ ಹಿಟ್ ಆಗಿತ್ತು. ಈ ಸರಣಿ ಕೂಡ ಕ್ರೈಮ್ ಥ್ರಿಲರ್ ಶೈಲಿಯಲ್ಲಿ ಮೂಡಿ ಬಂದಿತ್ತು. ಜರ್ನಲಿಸಂ ಲೋಕದ ಕೆಲವು ಕರಾಳ ಸತ್ಯಗಳನ್ನು ಹೇಳುವ ಪ್ರಯತ್ನ ಮಾಡಲಾಗಿತ್ತು. ಎರಡನೇ ಭಾಗದಲ್ಲೂ ಒಂದೊಳ್ಳೆಯ ಕಥೆಯ ಜೊತೆಗೆ ಬರಲಾಗಿದೆ. ಈ ಸರಣಿಗೆ ಇವರು ಪಡೆದ ಸಂಭಾವನೆ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಜೈದೀಪ್ ಅಹ್ಲಾವತ್ ಅವರು ಹಾಥಿರಾಮ್ ಚೌಧರಿ ಪಾತ್ರದಲ್ಲಿ ಮುಂದವುರಿದಿದ್ದಾರೆ. ಅವರು ಮೊದಲ ಸೀಸನ್​ಗಿಂತ 50 ಪಟ್ಟು ಹೆಚ್ಚಿನ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ. ಅವರು 40 ಲಕ್ಷ ರೂಪಾಯಿನ ಮೊದಲ ಸೀಸನ್​ಗೆ ಪಡೆದಿದ್ದರು. ಅವರ ಖ್ಯಾತಿ ಹೆಚ್ಚಿದ್ದರಿಂದ ಎರಡನೇ ಸೀಸನ್​ಗೆ 20 ಕೋಟಿ ರೂಪಾಯಿ ಪಡೆದರು ಎನ್ನುತ್ತಿದೆ ವರದಿ.

2020ರಲ್ಲಿ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಈ ಶೋ ಪ್ರಸಾರ ಕಂಡಿತು. ಹಾಥಿರಾಮ್ ಆಗಿ ಜೈದೀಪ್ ನಟನೆ ಎಲ್ಲರಿಗೂ ಇಷ್ಟ ಆಯಿತು. ಇದನ್ನು ಅನುಷ್ಕಾ ಶರ್ಮಾ ಸಹೋದರ ಕರ್ಣೇಶ್ ಶರ್ಮಾ ಅವರು ನಿರ್ಮಾಣ ಮಾಡಿದ್ದಾರೆ. ಮೊದಲ ಸೀಸನ್​​ನಲ್ಲಿ ಅನುಷ್ಕಾ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.

ಇದನ್ನೂ ಓದಿ: ಟೀಸರ್​ ಮೂಲಕ ಭಾರಿ ನಿರೀಕ್ಷೆ ಸೃಷ್ಟಿಸಿದ ‘ಪಾತಾಳ್ ಲೋಕ್ 2’ ವೆಬ್ ಸಿರೀಸ್​

‘ಪಾತಾಳ್ ಲೋಕ್ 2’ ಇನ್ವೆಸ್ಟಿಗೇಷನ್ ಡ್ರಾಮಾ ಕಥೆ ಹೊಂದಿದೆ. ನಾಗಾಲ್ಯಾಂಡ್​ನ ಪ್ರಮುಖ ವ್ಯಕ್ತಿಯ ಕೊಲೆ ಆಗುತ್ತದೆ. ಈ ಕೊಲೆಯನ್ನು ಬೆನ್ನತ್ತಿ ಹೋಗುವ  ಹಾಥಿರಾಮ್ ಅವರು ಸಾಕಷ್ಟು ಏಳುಬೀಳುಗಳನ್ನು ಕಾಣುತ್ತಾರೆ. ಗೆಳೆಯನನ್ನೂ ಅವರು ಕಳೆದುಕೊಳ್ಳುತ್ತಾರೆ. ಜೈದೀಪ್ ಅವರು 2010ರಲ್ಲೇ ಚಿತ್ರರಂಗಕ್ಕೆ ಕಾಲಿಟ್ಟರು. ‘ರಾಝಿ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅವರು ಕೆಲವು ವೆಬ್​ ಸೀರಿಸ್​ಗಳಲ್ಲೂ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ನಿರ್ದೇಶಕ ಎಟಿ ರಘು ನಿಧನದ ಸುದ್ದಿ ಕೇಳಿ ಆಘಾತ ಆಯಿತು: ದೊಡ್ಡಣ್ಣ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ