AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾನ್​ಸ್ಟೇಬಲ್ ನಾಪತ್ತೆ ಹಿಂದಿನ ಕಥೆ; ಬಂದಿದೆ ಹೊಸ ಕ್ರೈಮ್ ಥ್ರಿಲರ್, ಪ್ರತಿ ಎಪಿಸೋಡ್​ನಲ್ಲೂ ಟ್ವಿಸ್ಟ್  

Kerala Crime Files Season 2: ‘ಕೇರಳ ಕ್ರೈಮ್ ಫೈಲ್ಸ್ ಸೀಸನ್ 2’ ಇತ್ತೀಚೆಗೆ ರಿಲೀಸ್ ಆಗಿದೆ. ಮಲಯಾಳಂ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅನಿರೀಕ್ಷಿತ ಟ್ವಿಸ್ಟ್‌ಗಳಿಂದ ಕೂಡಿದ ಈ ಸೀರಿಸ್‌ನ ಕ್ಲೈಮ್ಯಾಕ್ಸ್ ನಿರಾಸೆ ಮೂಡಿಸಬಹುದ. ಅಜು ವರ್ಗೀಸ್ ಮತ್ತು ಅರ್ಜುನ್ ರಾಧಾಕೃಷ್ಣನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಕಾನ್​ಸ್ಟೇಬಲ್ ನಾಪತ್ತೆ ಹಿಂದಿನ ಕಥೆ; ಬಂದಿದೆ ಹೊಸ ಕ್ರೈಮ್ ಥ್ರಿಲರ್, ಪ್ರತಿ ಎಪಿಸೋಡ್​ನಲ್ಲೂ ಟ್ವಿಸ್ಟ್  
ಕೇರಳಾ ಕ್ರೈಮ್ ಸ್ಟೋರಿ
ರಾಜೇಶ್ ದುಗ್ಗುಮನೆ
|

Updated on: Jun 23, 2025 | 12:48 PM

Share

ಒಟಿಟಿಯಲ್ಲಿ (OTT) ಪ್ರತಿ ವಾರ ಹೊಸ ಹೊಸ ಸಿನಿಮಾಗಳು ಹಾಗೂ ವೆಬ್ ಸೀರಿಸ್​ಗಳು ರಿಲೀಸ್ ಆಗುತ್ತಲೇ ಇರುತ್ತವೆ. ಆದರೆ, ಯಾವುದನ್ನು ನೋಡಬೇಕು ಎಂಬ ಗೊಂದಲ ಅನೇಕರಿಗೆ ಇರುತ್ತದೆ. ಏಕೆಂದರೆ ಸರಣಿ/ಸಿನಿಮಾನ ನೋಡಿ ನಿರಾಸೆ ಆದರೆ ಸಮಯವೆಲ್ಲ ವ್ಯರ್ಥ. ಆದರೆ, ನಾವು ಈಗ ಒಂದು ಹೊಸ ವೆಬ್ ಸೀರಿಸ್​ನ ಹೇಳುತ್ತಿದ್ದೇವೆ. ಜೂನ್ 20ರಂದು ಈ ಸರಣಿ ಪ್ರಸಾರ ಆರಂಭಿಸಿದೆ. ಹಾಗಾದರೆ ಯಾವುದು ಆ ಸೀರಿಸ್? ಆ ಬಗ್ಗೆ ಇಲ್ಲಿದೆ ವಿವರ.

‘ಕೇರಳ ಕ್ರೈಮ್ ಫೈಲ್ಸ್’ 2023ರ ಜೂನ್ ತಿಂಗಳಲ್ಲಿ ಪ್ರಸಾರ ಕಂಡಿತ್ತು. ಇದಾಗಿ ಸರಿಯಾಗಿ ಎರಡು ವರ್ಷ ಅಂದರೆ 2025ರ ಜೂನ್ ತಿಂಗಳಲ್ಲೇ ಈ ಸರಣಿಗೆ ಎರಡನೇ ಸೀಸನ್ ಪ್ರಸಾರ ಕಂಡಿದೆ. ಈ ವೆಬ್ ಸೀರಿಸ್​ನಲ್ಲಿ ಕಾನ್​ಸ್ಟೇಬಲ್ ಅಂಬಲಿ ರಾಜು (ಇಂದ್ರನ್ಸ್ ) ಹಾಗೂ ಅಯ್ಯಪ್ಪನ್ (ಹರಿಶ್ರೀ ಅಶೋಕನ್) ಕಾಣೆ ಆಗುತ್ತಾರೆ. ಅಂಬಲಿ ರಾಜು ತುಂಬಾನೇ ನಿಷ್ಠಾವಂತ ವ್ಯಕ್ತಿ. ಅಯ್ಯಪ್ಪನ್ ಡಾಗ್ ಶೆಲ್ಟರ್​ನಲ್ಲಿ ಕೆಲಸ ಮಾಡಿಕೊಂಡಿದ್ದವನು. ಇವರ ಕಾಣೆ ಹಿಂದಿನ ರಹಸ್ಯವೇನು? ಇವರು ಕೊನೆಯಲ್ಲಿ ಜೀವಂತವಾಗಿ ಸಿಗುತ್ತಾರಾ ಅನ್ನೋದನ್ನು ಸರಣಿ ನೋಡಿಯೇ ತಿಳಿದುಕೊಳ್ಳಬೇಕು.

ಮೊದಲ ಸರಣಿಯಲ್ಲಿ ಅಜು ವರ್ಗೀಸ್ ಅವರು ಎಸ್​ಐ ಮನೋಜ್ ಶ್ರೀಧರನ್ ಹೆಸರಿನ ಪಾತ್ರ ಮಾಡಿದ್ದರು. ಅವರು ಎರಡನೇ ಪಾರ್ಟ್​ನಲ್ಲೂ ಕಾಣಿಸಿಕೊಳ್ಳುತ್ತಾರೆ. ಅರ್ಜುನ್ ರಾಧಾಕೃಷ್ಣನ್ ಅವರಿಗೆ ಈ ಸರಣಿಯಲ್ಲಿ ಪ್ರಮುಖ ಪಾತ್ರ ಸಿಕ್ಕಿದೆ. ಸರಣಿ ಉದ್ದಕ್ಕೂ ಅವರು ಕಾಣಿಸಿಕೊಳ್ಳುತ್ತಾರೆ. ಎಸ್ಐ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ.

ಇದನ್ನೂ ಓದಿ
Image
ಸಲ್ಮಾನ್ ಖಾನ್​ಗೆ ನಿಜಕ್ಕೂ ಇದ್ದ ಗೆಳತಿಯರೆಷ್ಟು? ಲೆಕ್ಕ ಕೊಟ್ಟ ಸಲ್ಲು
Image
ಬಾಕ್ಸ್ ಆಫೀಸ್​ನಲ್ಲಿ ಜಾಕ್​ಪಾಟ್ ಹೊಡೆದ ‘ಕುಬೇರ’ ಹಾಗೂ ‘ಸಿತಾರೆ ಜಮೀನ್ ಪರ್
Image
ಸಲ್ಮಾನ್ ಖಾನ್​ಗೆ ಮೆದುಳು ಸಂಬಂಧಿ ರೋಗ; ಕಾಡುತ್ತಿದೆ ಸ್ಟ್ರೋಕ್ ಆಗೋ ಭಯ
Image
ನಿಜವಾದ ವಿಷಕಾರಿ ಜಂತುಗಳ ಜೊತೆ ರಾಜ್​ಕುಮಾರ್ ಶೂಟ್; ಇದಕ್ಕೆ ಗುಂಡಿಗೆ ಬೇಕು

ಇದನ್ನೂ ಓದಿ: ಈ ವಾರ ಒಟಿಟಿಗೆ ಬಂದ ಸಿನಿಮಾಗಳು ಯಾವುವು: ಇಲ್ಲಿದೆ ಪಟ್ಟಿ

ಈ ವೆಬ್ ಸೀರಿಸ್​ನಲ್ಲಿ ಹಲವು ಟ್ವಿಸ್ಟ್​ಗಳಿವೆ. ಪ್ರತಿ ಎಪಿಸೋಡ್ ಕೊನೆ ಆಗುವಾಗಲೂ ಒಂದಷ್ಟು ಹೊಸ ವಿಚಾರಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ಆದರೆ, ಸರಣಿಯ ಕ್ಲೈಮ್ಯಾಕ್ಸ್ ನೀವಂದುಕೊಡಂತೆ ಇರದೇ ಇರಬಹುದು. ಹೀಗಾಗಿ, ಕೆಲವರಿಗೆ ಈ ಬಗ್ಗೆ ಬೇಸರ ಆಗಿದ್ದಿದೆ. ನಿರ್ದೇಶಕ ಅಹ್ಮದ್ ಕಬೀರ್ ಅವರು ಹೊಸ ರೀತಿಯ ಪ್ರಯೋಗ ಮಾಡಲು ಈ ರೀತಿ ಮಾಡಿರಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು
ಪ್ರವಾಹ: ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಅಂಗಡಿ ಮುಂಗಟ್ಟುಗಳು