AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾನ್​ಸ್ಟೇಬಲ್ ನಾಪತ್ತೆ ಹಿಂದಿನ ಕಥೆ; ಬಂದಿದೆ ಹೊಸ ಕ್ರೈಮ್ ಥ್ರಿಲರ್, ಪ್ರತಿ ಎಪಿಸೋಡ್​ನಲ್ಲೂ ಟ್ವಿಸ್ಟ್  

Kerala Crime Files Season 2: ‘ಕೇರಳ ಕ್ರೈಮ್ ಫೈಲ್ಸ್ ಸೀಸನ್ 2’ ಇತ್ತೀಚೆಗೆ ರಿಲೀಸ್ ಆಗಿದೆ. ಮಲಯಾಳಂ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅನಿರೀಕ್ಷಿತ ಟ್ವಿಸ್ಟ್‌ಗಳಿಂದ ಕೂಡಿದ ಈ ಸೀರಿಸ್‌ನ ಕ್ಲೈಮ್ಯಾಕ್ಸ್ ನಿರಾಸೆ ಮೂಡಿಸಬಹುದ. ಅಜು ವರ್ಗೀಸ್ ಮತ್ತು ಅರ್ಜುನ್ ರಾಧಾಕೃಷ್ಣನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಕಾನ್​ಸ್ಟೇಬಲ್ ನಾಪತ್ತೆ ಹಿಂದಿನ ಕಥೆ; ಬಂದಿದೆ ಹೊಸ ಕ್ರೈಮ್ ಥ್ರಿಲರ್, ಪ್ರತಿ ಎಪಿಸೋಡ್​ನಲ್ಲೂ ಟ್ವಿಸ್ಟ್  
ಕೇರಳಾ ಕ್ರೈಮ್ ಸ್ಟೋರಿ
ರಾಜೇಶ್ ದುಗ್ಗುಮನೆ
|

Updated on: Jun 23, 2025 | 12:48 PM

Share

ಒಟಿಟಿಯಲ್ಲಿ (OTT) ಪ್ರತಿ ವಾರ ಹೊಸ ಹೊಸ ಸಿನಿಮಾಗಳು ಹಾಗೂ ವೆಬ್ ಸೀರಿಸ್​ಗಳು ರಿಲೀಸ್ ಆಗುತ್ತಲೇ ಇರುತ್ತವೆ. ಆದರೆ, ಯಾವುದನ್ನು ನೋಡಬೇಕು ಎಂಬ ಗೊಂದಲ ಅನೇಕರಿಗೆ ಇರುತ್ತದೆ. ಏಕೆಂದರೆ ಸರಣಿ/ಸಿನಿಮಾನ ನೋಡಿ ನಿರಾಸೆ ಆದರೆ ಸಮಯವೆಲ್ಲ ವ್ಯರ್ಥ. ಆದರೆ, ನಾವು ಈಗ ಒಂದು ಹೊಸ ವೆಬ್ ಸೀರಿಸ್​ನ ಹೇಳುತ್ತಿದ್ದೇವೆ. ಜೂನ್ 20ರಂದು ಈ ಸರಣಿ ಪ್ರಸಾರ ಆರಂಭಿಸಿದೆ. ಹಾಗಾದರೆ ಯಾವುದು ಆ ಸೀರಿಸ್? ಆ ಬಗ್ಗೆ ಇಲ್ಲಿದೆ ವಿವರ.

‘ಕೇರಳ ಕ್ರೈಮ್ ಫೈಲ್ಸ್’ 2023ರ ಜೂನ್ ತಿಂಗಳಲ್ಲಿ ಪ್ರಸಾರ ಕಂಡಿತ್ತು. ಇದಾಗಿ ಸರಿಯಾಗಿ ಎರಡು ವರ್ಷ ಅಂದರೆ 2025ರ ಜೂನ್ ತಿಂಗಳಲ್ಲೇ ಈ ಸರಣಿಗೆ ಎರಡನೇ ಸೀಸನ್ ಪ್ರಸಾರ ಕಂಡಿದೆ. ಈ ವೆಬ್ ಸೀರಿಸ್​ನಲ್ಲಿ ಕಾನ್​ಸ್ಟೇಬಲ್ ಅಂಬಲಿ ರಾಜು (ಇಂದ್ರನ್ಸ್ ) ಹಾಗೂ ಅಯ್ಯಪ್ಪನ್ (ಹರಿಶ್ರೀ ಅಶೋಕನ್) ಕಾಣೆ ಆಗುತ್ತಾರೆ. ಅಂಬಲಿ ರಾಜು ತುಂಬಾನೇ ನಿಷ್ಠಾವಂತ ವ್ಯಕ್ತಿ. ಅಯ್ಯಪ್ಪನ್ ಡಾಗ್ ಶೆಲ್ಟರ್​ನಲ್ಲಿ ಕೆಲಸ ಮಾಡಿಕೊಂಡಿದ್ದವನು. ಇವರ ಕಾಣೆ ಹಿಂದಿನ ರಹಸ್ಯವೇನು? ಇವರು ಕೊನೆಯಲ್ಲಿ ಜೀವಂತವಾಗಿ ಸಿಗುತ್ತಾರಾ ಅನ್ನೋದನ್ನು ಸರಣಿ ನೋಡಿಯೇ ತಿಳಿದುಕೊಳ್ಳಬೇಕು.

ಮೊದಲ ಸರಣಿಯಲ್ಲಿ ಅಜು ವರ್ಗೀಸ್ ಅವರು ಎಸ್​ಐ ಮನೋಜ್ ಶ್ರೀಧರನ್ ಹೆಸರಿನ ಪಾತ್ರ ಮಾಡಿದ್ದರು. ಅವರು ಎರಡನೇ ಪಾರ್ಟ್​ನಲ್ಲೂ ಕಾಣಿಸಿಕೊಳ್ಳುತ್ತಾರೆ. ಅರ್ಜುನ್ ರಾಧಾಕೃಷ್ಣನ್ ಅವರಿಗೆ ಈ ಸರಣಿಯಲ್ಲಿ ಪ್ರಮುಖ ಪಾತ್ರ ಸಿಕ್ಕಿದೆ. ಸರಣಿ ಉದ್ದಕ್ಕೂ ಅವರು ಕಾಣಿಸಿಕೊಳ್ಳುತ್ತಾರೆ. ಎಸ್ಐ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ.

ಇದನ್ನೂ ಓದಿ
Image
ಸಲ್ಮಾನ್ ಖಾನ್​ಗೆ ನಿಜಕ್ಕೂ ಇದ್ದ ಗೆಳತಿಯರೆಷ್ಟು? ಲೆಕ್ಕ ಕೊಟ್ಟ ಸಲ್ಲು
Image
ಬಾಕ್ಸ್ ಆಫೀಸ್​ನಲ್ಲಿ ಜಾಕ್​ಪಾಟ್ ಹೊಡೆದ ‘ಕುಬೇರ’ ಹಾಗೂ ‘ಸಿತಾರೆ ಜಮೀನ್ ಪರ್
Image
ಸಲ್ಮಾನ್ ಖಾನ್​ಗೆ ಮೆದುಳು ಸಂಬಂಧಿ ರೋಗ; ಕಾಡುತ್ತಿದೆ ಸ್ಟ್ರೋಕ್ ಆಗೋ ಭಯ
Image
ನಿಜವಾದ ವಿಷಕಾರಿ ಜಂತುಗಳ ಜೊತೆ ರಾಜ್​ಕುಮಾರ್ ಶೂಟ್; ಇದಕ್ಕೆ ಗುಂಡಿಗೆ ಬೇಕು

ಇದನ್ನೂ ಓದಿ: ಈ ವಾರ ಒಟಿಟಿಗೆ ಬಂದ ಸಿನಿಮಾಗಳು ಯಾವುವು: ಇಲ್ಲಿದೆ ಪಟ್ಟಿ

ಈ ವೆಬ್ ಸೀರಿಸ್​ನಲ್ಲಿ ಹಲವು ಟ್ವಿಸ್ಟ್​ಗಳಿವೆ. ಪ್ರತಿ ಎಪಿಸೋಡ್ ಕೊನೆ ಆಗುವಾಗಲೂ ಒಂದಷ್ಟು ಹೊಸ ವಿಚಾರಗಳು ತೆರೆದುಕೊಳ್ಳುತ್ತಾ ಹೋಗುತ್ತದೆ. ಆದರೆ, ಸರಣಿಯ ಕ್ಲೈಮ್ಯಾಕ್ಸ್ ನೀವಂದುಕೊಡಂತೆ ಇರದೇ ಇರಬಹುದು. ಹೀಗಾಗಿ, ಕೆಲವರಿಗೆ ಈ ಬಗ್ಗೆ ಬೇಸರ ಆಗಿದ್ದಿದೆ. ನಿರ್ದೇಶಕ ಅಹ್ಮದ್ ಕಬೀರ್ ಅವರು ಹೊಸ ರೀತಿಯ ಪ್ರಯೋಗ ಮಾಡಲು ಈ ರೀತಿ ಮಾಡಿರಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್