AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಜವಾದ ವಿಷಕಾರಿ ಜಂತುಗಳ ಜೊತೆ ರಾಜ್​ಕುಮಾರ್ ಶೂಟ್; ಇದಕ್ಕೆ ಡಬಲ್ ಗುಂಡಿಗೆ ಬೇಕು

ರಾಜ್‌ಕುಮಾರ್ ಅವರು ತಮ್ಮ ಸಿನಿಮಾಗಳಲ್ಲಿ ನಿಜ ಪ್ರಾಣಿಗಳೊಂದಿಗೆ ಅಪಾಯಕಾರಿ ದೃಶ್ಯಗಳನ್ನು ನಿರ್ವಹಿಸುತ್ತಿದ್ದರು. 'ಒಂದು ಮುತ್ತಿನ ಕಥೆ' ಮತ್ತು 'ಗಂಧದಗುಡಿ' ಚಿತ್ರಗಳಲ್ಲಿನ ಅವರ ಕೆಲಸ ಇದಕ್ಕೆ ಉದಾಹರಣೆ. ಈಗಿನ ಕಾಲದಲ್ಲಿ VFX ತಂತ್ರಜ್ಞಾನದಿಂದ ಇಂತಹ ದೃಶ್ಯಗಳನ್ನು ಸುಲಭವಾಗಿ ಸೃಷ್ಟಿಸಬಹುದು. ಆದರೆ, ರಾಜ್‌ಕುಮಾರ್ ಅವರ ನಿಜವಾದ ಸಾಹಸಗಳನ್ನು ಮರೆಯಲು ಸಾಧ್ಯವಿಲ್ಲ.

ನಿಜವಾದ ವಿಷಕಾರಿ ಜಂತುಗಳ ಜೊತೆ ರಾಜ್​ಕುಮಾರ್ ಶೂಟ್; ಇದಕ್ಕೆ ಡಬಲ್ ಗುಂಡಿಗೆ ಬೇಕು
ರಾಜ್​ಕುಮಾರ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jun 20, 2025 | 8:09 AM

Share

ಈಗಿನ ಕಾಲಕ್ಕೆ ಯಾವುದನ್ನೇ ಶೂಟ್ ಮಾಡಬೇಕು ಎಂದರೂ ಸುಲಭ. ಒಂದು ಶಾರ್ಕ್ ಜೊತೆ, ಹಾವಿನ ಜೊತೆ ಹೀರೋ ಸೆಣೆಸಾಡಿದಂತೆ ತೋರಿಸಬೇಕು ಎಂದರೆ ವಿಎಫ್​ಎಕ್ಸ್ ಬಳಕೆ ಮಾಡಿದರಾಯಿತು. ‘ಆರ್​ಆರ್​ಆರ್’ (RRR) ಚಿತ್ರದಲ್ಲಿ ಈ ರೀತಿಯೇ ಅನೇಕ ಪ್ರಾಣಿಗಳನ್ನು ಸೃಷ್ಟಿ ಮಾಡಲಾಗಿದೆ. ಈ ರೀತಿಯ ಸಾಕಷ್ಟು ಉದಾಹರಣೆ ಸಿಗುತ್ತವೆ. ಆದರೆ, ಮೊದಲೆಲ್ಲ ಹೀಗೆ ಇರಲಿಲ್ಲ. ನಿಜವಾದ ಪ್ರಾಣಿಗಳು, ಜಂತುಗಳ ಜೊತೆ ಶೂಟ್ ಮಾಡಬೇಕಿತ್ತು. ರಾಜ್​ಕುಮಾರ್ ಅಂಥ ರಿಸ್ಕ್​ಗಳನ್ನು ತೆಗೆದುಕೊಳ್ಳುತ್ತಿದ್ದರು.

ರಾಜ್​ಕುಮಾರ್ ಅವರು ಸಿನಿಮಾನ ತುಂಬಾನೇ ಇಷ್ಟಪಡುತ್ತಿದ್ದರು. ಯಾವುದೇ ಶೂಟಿಂಗ್ ಇದ್ದರೂ ನೈಜವಾಗಿ ಮೂಡಿ ಬರುವಂತೆ ಮಾಡೋದು ಅವರ ಆಸೆ. ಈ ಕಾರಣಕ್ಕೆ ಎಂಥ ರಿಸ್ಕ್ ಇದ್ದರೂ ತೆಗೆದುಕೊಳ್ಳುತ್ತಿದ್ದರು. ‘ಒಂದು ಮುತ್ತಿನ ಕಥೆ’ ಸಿನಿಮಾ ಶೂಟ್ ಸಂದರ್ಭದಲ್ಲಿ ನೀರಿನ ಆಳದಲ್ಲಿ ಇಳಿದು ಆ್ಯಕ್ಟ್ ಮಾಡಿದ್ದರು. ಈಗ ರಾಜ್​ಕುಮಾರ್ ಅವರು ಚೇಳಿನ ಜೊತೆ ಸೆಣೆಸಾಡಿದ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ
Image
ಸೆಲೆಬ್ರಿಟಿಗಳು ಎಷ್ಟು ಗಂಟೆಗೆ ಕೊನೆಯ ಊಟ ಮಾಡುತ್ತಾರೆ? ಇಲ್ಲಿದೆ ಮಾಹಿತಿ
Image
ಲಕ್ಷ್ಮೀ ನಿವಾಸದ ಲಕ್ಷ್ಮೀ ಪಾತ್ರಕ್ಕೆ ಶ್ವೇತಾ ಗುಡ್​ಬೈ; ಹೊಸ ಕಲಾವಿದೆ ಇವರೇ
Image
ರುಕ್ಮಿಣಿ ವಸಂತ್ ಶರ್ಟ್​ ಮೇಲೆ ಟೈಗರ್ ಚಿತ್ರ; ಇದರ ಹಿಂದಿದೆ ದೊಡ್ಡ ರಹಸ್ಯ
Image
ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಧನರಾಜ್, ಪತ್ನಿ

ರಾಜ್​ಕುಮಾರ್ ಅವರ ದೇಹದ ಮೇಲೆ ಚೇಳು ಕುಳಿತುಕೊಳ್ಳುತ್ತದೆ. ನಂತರ ಅದನ್ನು ರಾಜ್​ಕುಮಾರ್ ಅವರು ತೆಗೆದು ಬೀಸಾಕುತ್ತಾರೆ. ಇದನ್ನು ಅವರು ರಿಯಲ್ ಆಗಿ ಮಾಡಿದ್ದರು. ಇದನ್ನು ನೋಡಿ ಅನೇಕರಿಗೆ ಅಚ್ಚರಿ ಆಗಿದೆ.

‘ಆವಾಗಿನ ಸಿನಿಮಾದಲ್ಲಿ ರಿಯಲ್ ಹಾವು ಸಿಂಹ ಚಿರತೆ ಆನೆ ಜೊತೆ ಸಿನಿಮಾ ಮಾಡೋರು ಈಗ ಕೇವಲ ಗ್ರಾಫಿಕ್ಸ್’ ಸಿನಿಮಾಗಳು ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು, ಎಂಪಿ ಶಂಕರ್ ಡೈರೆಕ್ಷನ್ ಸಿನಿಮಾಗಳೆಲ್ಲ ನಿಜವಾದ ಪ್ರಾಣಿಗಳನ್ನು ಬಳಕೆ ಮಾಡುತ್ತಿದ್ದರು. ಟೈಗರ್ ಪ್ರಭಾಕರ್ ಅವರ ‘ಕಾಡಿನ ರಾಜ’ ರೀತಿಯ ಚಿತ್ರಗಳು ಇದಕ್ಕೆ ಉದಾಹರಣೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ರಾಜ್​ಕುಮಾರ್ ಬಳಿ ಇತ್ತು ಒಂದು ದೊಡ್ಡ ಬ್ರಹ್ಮಾಸ್ತ್ರ; ವಿವರಿಸಿದ್ದ ಜಗ್ಗೇಶ್

ರಾಜ್​ಕುಮಾರ್ ಅವರು ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಅವರು ಪ್ರಾಣಿಗಳನ್ನು ಉಳಿಸಿ ಎಂದು ಕೇಳಿಕೊಳ್ಳಲು ‘ಗಂಧದಗುಡಿ’ ಸಿನಿಮಾ ಮಾಡಿದರು. ಆ ಸಂದರ್ಭದಲ್ಲಿ ನಿಜವಾದ ಕಾಡಿಗೆ ತೆರಳಿ ಶೂಟ್ ಮಾಡಲಾಗಿತ್ತು. ಈಗಿನ ಕಾಲದಲ್ಲಿ ಆಗಿದ್ದರೆ ಸೆಟ್​ಗಳ ನಿರ್ಮಾಣ ಮಾಡಿ ಸಿನಿಮಾ ಶೂಟ್ ಮಾಡಲಾಗುತ್ತಿತ್ತೇನೋ. ಆದರೆ, ಆಗಿನ ಕಾಲದಲ್ಲಿ ಆ ರೀತಿ ಮಾಡಿರಲಿಲ್ಲ ಅನ್ನೋದು ವಿಶೇಷ. ರಾಜ್​ಕುಮಾರ್ ಇಲ್ಲ ಎಂಬ ನೋವ ಅನೇಕರನ್ನು ಕಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್