AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್​ಕುಮಾರ್ ಬಳಿ ಇತ್ತು ಒಂದು ದೊಡ್ಡ ಬ್ರಹ್ಮಾಸ್ತ್ರ; ವಿವರಿಸಿದ್ದ ಜಗ್ಗೇಶ್

ಜಗ್ಗೇಶ್ ಅವರು ರಾಜ್​ಕುಮಾರ್ ಅವರ ಸರಳತೆಯನ್ನು ಅವರ ದೊಡ್ಡ ಬ್ರಹ್ಮಾಸ್ತ್ರ ಎಂದು ವಿವರಿಸಿದ್ದಾರೆ. ರಾಜ್​ಕುಮಾರ್ ಅವರ ಜನಪ್ರಿಯತೆ ಮತ್ತು ಸಂಪತ್ತಿದ್ದರೂ, ಅವರು ಎಂದಿಗೂ ತಮ್ಮ ದೊಡ್ಡತನವನ್ನು ತೋರಿಸಲಿಲ್ಲ. ಅವರ ಸೌಮ್ಯತೆ ಮತ್ತು ಇತರರ ಬಗ್ಗೆ ಗೌರವದಿಂದ ಮಾತನಾಡುವ ಗುಣ ಅವರನ್ನು ವಿಶೇಷವಾಗಿಸಿತು. ಪಂಚೆ-ಬಿಳಿ ಶರ್ಟ್ ಧರಿಸುವುದು ಕೂಡ ಅವರ ಸರಳತೆಯನ್ನು ಪ್ರತಿಬಿಂಬಿಸುತ್ತದೆ.

ರಾಜ್​ಕುಮಾರ್ ಬಳಿ ಇತ್ತು ಒಂದು ದೊಡ್ಡ ಬ್ರಹ್ಮಾಸ್ತ್ರ; ವಿವರಿಸಿದ್ದ ಜಗ್ಗೇಶ್
ರಾಜ್​ಕುಮಾರ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Jun 13, 2025 | 8:04 AM

Share

ರಾಜ್​ಕುಮಾರ್ (Rajkumar) ಅವರು ನಮ್ಮನ್ನು ಅಗಲಿ ಹಲವು ವರ್ಷಗಳೇ ಕಳೆದಿವೆ. ಆದರೆ, ಅವರು ಸದಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಅವರ ಬಗ್ಗೆ, ಅವರ ಸಿನಿಮಾಗಳ ಬಗ್ಗೆ ಈಗಲೂ ಚರ್ಚೆಗಳು ಆಗುತ್ತವೆ. ರಾಜ್​ಕುಮಾರ್ ಬಳಿ ಒಂದು ದೊಡ್ಡ ಬ್ರಹ್ಮಾಸ್ತ್ರ ಇತ್ತು ಎಂಬುದು ಜಗ್ಗೇಶ್ ಅಭಿಪ್ರಾಯ. ಈ ಮೊದಲು ಸಂದರ್ಶನ ಒಂದರಲ್ಲಿ ಈ ಬಗ್ಗೆ ಅವರು ಮಾತನಾಡಿದ್ದರು. ಆ ಮಾತನ್ನು ನಾವು ಮತ್ತೊಮ್ಮೆ ನೆನಪಿಸಿಕೊಳ್ಳೋಣ.

ರಾಜ್​ಕುಮಾರ್ ಅವರು ಸರಳತೆಗೆ ಹೆಸರು ವಾಸಿ ಆಗಿದ್ದರು. ಇದುವೇ ಅವರ ಬ್ರಹ್ಮಾಸ್ತ್ರ ಎಂದು ಜಗ್ಗೇಶ್ ಈ ಮೊದಲು ಅಭಿಪ್ರಾಯ ಹೊರಹಾಕಿದ್ದರು. ರಾಜ್​ಕುಮಾರ್ ಬಳಿ ಸಾಕಷ್ಟು ಹಣ ಇತ್ತು. ಅಷ್ಟೇ ಏಕೆ ಸಾಕಷ್ಟು ಜನಪ್ರಿಯತೆ ಇತ್ತು. ಅವರು ಕರೆದರೆ ಪರಭಾಷೆಯ ಸೆಲೆಬ್ರಿಟಿಗಳು ಇಲ್ಲಿಗೆ ಬರುತ್ತಿದ್ದರು. ಆದರೆ, ಅವರು ಎಂದಿಗೂ ತಮ್ಮ ದೊಡ್ಡತನವನ್ನು ತೋರಿಸುವ ಪ್ರಯತ್ನ ಮಾಡಲೇ ಇಲ್ಲ.

ರಾಜ್​ಕುಮಾರ್ ಬಳಿ ಮತ್ತೊಂದು ಒಳ್ಳೆಯ ಗುಣ ಇತ್ತು. ಅದುವೇ ಯಾರ ಬಗ್ಗೆಯೂ ಕೆಟ್ಟ ಮಾತು ಆಡದೆ ಇರುವುದು. ರಾಜ್​ಕುಮಾರ್ ಅವರು ಯಾರ ಬಗ್ಗೆಯೂ ಕೆಟ್ಟ ಮಾತನ್ನು ಹೇಳುತ್ತಿರಲಿಲ್ಲ. ಯಾರ ಬಗ್ಗೆಯೂ ಚಾಡಿ ಹೇಳುವ ಕೆಲಸವನ್ನು ಅವರು ಮಾಡಿರಲೇ ಇಲ್ಲ. ಬೇರೆಯವರ ವಿಚಾರ ಬಂತು ಎಂದರೆ ಅವರು ಆ ಸ್ಥಳದಿಂದಲೇ ಎದ್ದು ನಡೆಯುತ್ತಿದ್ದರು.

ಇದನ್ನೂ ಓದಿ
Image
ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್ ನನ್ನ ಸಂಬಂಧಿ ಅಲ್ಲ; ವಿಕ್ರಾಂತ್ ಮಾಸಿ
Image
ವಿಮಾನ ದುರಂತದ ಟ್ವೀಟ್ ಮಾಡಿದ ಬಳಿಕ ಹೃದಯಾಘಾತದಿಂದ ನಟಿಯ ಮಾಜಿ ಪತಿ ನಿಧನ
Image
ವಿಮಾನ ದುರಂತ: ‘12th ಫೇಲ್’ ನಟನ ಸಂಬಂಧಿ, ಕರ್ನಾಟಕದ ಕ್ಲೈವ್ ಕುಂದರ್ ಸಾವು
Image
ನಿಶಾ ರವಿಕೃಷ್ಣನ್​ಗೆ ತೆಲುಗು ಕಿರುತೆರೆಯಲ್ಲಿ ಎದುರಾದ ಕಷ್ಟಗಳು ಒಂದೆರಡಲ್ಲ

‘ರಾಜ್​ಕುಮಾರ್ ಸರಳತೆಯೇ ಅವರ ಬ್ರಹ್ಮಾಸ್ತ್ರ. ಒಂದು ದಿನ ಇನ್ನೊಬ್ಬರ ಬಗ್ಗೆ ಮಾತನಾಡಿಲ್ಲ. ಒಬ್ಬರ ಬಗ್ಗೆ ಬೈದಿಲ್ಲ. ಒಬ್ಬರನ್ನು ಏಕವಚನದಲ್ಲಿ ಮಾತನಾಡಿಸಿಲ್ಲ. ಎಗ್ಸೈಟ್​ಮೆಂಟ್ ಅನ್ನೋದು, ಕಸಿವಿಸಿ ಇಲ್ಲ. ಪ್ರಶಾಂತವಾಗಿರುತ್ತಿದ್ದರು. ಯಾವುದೋ ತಪಸ್ವಿ ಜೊತೆ ಇದ್ದಂತೆ ಅನಿಸುತ್ತಿತ್ತು’ ಎಂದು ರಾಜ್​ಕುಮಾರ್ ಅವರು ಫಿಲ್ಮ್ ಕಂಪಾನಿಯನ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಇದನ್ನೂ ಓದಿ: ರಾಜ್​ಕುಮಾರ್ ಬಗ್ಗೆ ಆರ್​ಜಿವಿ ಅಲ್ಪಜ್ಞಾನದ ಹೇಳಿಕೆ ಸುಳ್ಳು; ಅಣ್ಣಾವ್ರ ಚಿತ್ರವನ್ನು ರಿಮೇಕ್ ಮಾಡಿದ್ದ ಅಮಿತಾಭ್

ರಾಜ್​ಕುಮಾರ್ ಈ ಮೊದಲು ಜೀನ್ಸ್ ಹಾಕುತ್ತಿದ್ದರು. ಆದರೆ, ವಿಮಾನ ನಿಲ್ದಾಣದಲ್ಲಿ ಸಿಕ್ಕ ಪೈಲಟ್ ಒಬ್ಬರು ಈ ಬಗ್ಗೆ ಪ್ರಶ್ನೆ ಮಾಡಿದರು. ಪಂಚೆ-ಬಿಳಿ ಶರ್ಟ್ ನಿಮಗೆ ಸೂಕ್ತ ಎಂದರು. ಅಂದಿನಿಂದ ಅದನ್ನೇ ಅವರು ಹಾಕೋಕೆ ಆರಂಭಿಸಿದರು. ಕೊನೆಯವರೆಗೂ ರಾಜ್​ಕುಮಾರ್ ಹೀಗೆಯೇ ಇದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ