ಸಲ್ಮಾನ್ ಮುಂದೆ ಹೀಗೆ ಮಾಡ್ತೀರಾ? ರಿತೇಶ್ ದೇಶಮುಖ್ ಜೊತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ನೇರ ಪ್ರಶ್ನೆ
ಲಾಕಪ್ ಶೋ ಸ್ಪರ್ಧಿ ರಾಮ್ ಕಪೂರ್ ತುಂಬಾ ಅಸಭ್ಯವಾಗಿ ವರ್ತಿಸಿದ್ದಾರೆ. ಅವರು ಶೋನ ನಿರೂಪಕ ರಿತೇಶ್ ದೇಶಮುಖ್ ಮೇಲೆ ತೀವ್ರ ಕೋಪಗೊಂಡಿದ್ದರು. ಈ ವರ್ತನೆಗೆ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಲ್ಮಾನ್ ಖಾನ್ ಅವರ ಮುಂದೆ ಇಂತಹ ಕೆಲಸ ಮಾಡಲು ಇವರಿಗೆ ಧೈರ್ಯ ಇರುತ್ತಿತ್ತಾ ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ.

ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ‘ಲಾಕ್ ಅಪ್: ಸಚ್ ಯಾ ಸಜಾ’ ರಿಯಾಲಿಟಿ ಶೋನ ಎರಡನೇ ಸೀಸನ್ ಇದೀಗ ಆರಂಭವಾಗಿದೆ. ಈ ಸೀಸನ್ ಮೊದಲ ಕಂತಿನಿಂದಲೂ ವಿವಾದಗಳು, ಜಗಳಗಳು ಭಾರಿ ಸುದ್ದಿಯಲ್ಲಿದೆ. ಇತ್ತೀಚಿನ ಎಪಿಸೋಡ್ನಲ್ಲಿ ನಟ,ಸ್ಪರ್ಧಿ ರಾಮ್ ಕಪೂರ್ ತುಂಬಾ ಅಸಭ್ಯವಾಗಿ ವರ್ತಿಸಿದ್ದಾರೆ. ಅವರು ಶೋನ ನಿರೂಪಕ ರಿತೇಶ್ ದೇಶಮುಖ್ ಮೇಲೆ ತೀವ್ರ ಕೋಪಗೊಂಡಿದ್ದರು. ಈ ವರ್ತನೆಗೆ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಲ್ಮಾನ್ ಖಾನ್ ಅವರ ಮುಂದೆ ಇಂತಹ ಕೆಲಸ ಮಾಡಲು ಇವರಿಗೆ ಧೈರ್ಯ ಇರುತ್ತಿತ್ತಾ ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ.
‘ಲಾಕ್ ಅಪ್ 2’ ಕಾರ್ಯಕ್ರಮವನ್ನು ಫರಾ ಖಾನ್ ಮತ್ತು ರಿತೇಶ್ ದೇಶಮುಖ್ ಜಂಟಿಯಾಗಿ ನಿರೂಪಣೆ ಮಾಡುತ್ತಿದ್ದಾರೆ. ನೆಟ್ಫ್ಲಿಕ್ಸ್ ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಈ ಶೋನ ಟಾಸ್ಕ್ ಒಂದರಲ್ಲಿ, ಹರ್ಷದ್ ಚೋಪ್ರಾ ಮತ್ತು ಆಕಾಂಕ್ಷಾ ಚಮೋಲಾ ಕೈಯಲ್ಲಿ ಪೇಂಟ್ಬಾಲ್ ಗನ್ಗಳನ್ನು ಹಿಡಿದಿದ್ದರು. ಈ ವಾರದ ಎಲಿಮಿನೇಷನ್ನಿಂದ ಬದುಕುಳಿಯಲು ದುರ್ಬಲ ಸ್ಪರ್ಧಿಗಳು ಒಂದೇ ಒಂದು ಪೇಂಟ್ಬಾಲ್ ಗುಂಡು ತಗುಲದಂತೆ ನಿಗದಿ ಪಡಿಸಿದ ಸ್ಥಳ ತಲುಪಬೇಕಾಗಿತ್ತು. ಆದರೆ ಈ ಟಾಸ್ಕ್ನಲ್ಲಿ ರಾಮ್ ಕಪೂರ್ ಗೆಲ್ಲಲು ವಿಫಲರಾಗಿದ್ದಲ್ಲದೆ, ಆಟದ ಮಧ್ಯದಲ್ಲಿ ನೀರು ಕೇಳಲು ಆರಂಭಿಸಿದರು.
View this post on Instagram
ಸಕಾಲಕ್ಕೆ ನೀರು ಸಿಗದಿದ್ದಾಗ ತೀವ್ರ ಕೋಪಗೊಂಡ ರಾಮ್ ಕಪೂರ್, ‘ನಾನು ಬಹಳ ಸಮಯದಿಂದ ನೀರು ಕೇಳುತ್ತಿದ್ದೇನೆ. ನೀವು ಇದನ್ನೆಲ್ಲಾ ಮಾಡುವಂತೆ ನಮ್ಮನ್ನು ಒತ್ತಾಯಿಸುತ್ತಿದ್ದೀರಿ, ಆದರೆ ನಮಗೆ ನೀರು ಕೊಡುತ್ತಿಲ್ಲ. ಇದು ಸರಿಯಲ್ಲ, ತಕ್ಷಣ ನೀರು ಕಳುಹಿಸಿ’ ಎಂದು ಕಿರುಚಾಡಿದರು. ಟಾಸ್ಕ್ ಮುಗಿಯುವ ವೇಳೆಗೆ ತನ್ನ ಹಠ ಸಾಧಿಸದ ಕಾರಣ ಕೊನೆಗೆ ರಾಮ್ ಆಟವನ್ನು ಮುಂದುವರಿಸಲು ನಿರಾಕರಿಸಿದರು. ರಾಮ್ನ ಮೊಂಡುತನವನ್ನು ನೋಡಿ ನಿರೂಪಕ ರಿತೇಶ್ ದೇಶಮುಖ್ ಅವರು ಬಣ್ಣದ ಚೆಂಡಿನಿಂದ ಪೆಟ್ಟು ಬೀಳಬಹುದು ಎಂದು ಎಚ್ಚರಿಸಿದಾಗ, ರಾಮ್ ಅವಾಚ್ಯವಾಗಿ ‘ಧೈರ್ಯವಿದ್ದರೆ ನನ್ನನ್ನು ಹೊಡೆಯಲು ಬಾ’ ಎಂದು ಸವಾಲು ಹಾಕಿದರು.
ಇದನ್ನೂ ಓದಿ: ‘ಲಾಕ್ ಅಪ್ ಸೀಸನ್ 2’: ಶೋನಿಂದ ಕಂಗನಾ ರಣಾವತ್ನ ಹೊರಗಿಟ್ಟಿದ್ದೇಕೆ?
ಇದಕ್ಕೆ ಶಾಂತವಾಗಿಯೇ ಉತ್ತರಿಸಿದ ರಿತೇಶ್, ಪ್ರತಿಯೊಬ್ಬ ಸ್ಪರ್ಧಿಗಳಿಗೂ ಈಗಾಗಲೇ ವೈಯಕ್ತಿಕ ನೀರಿನ ಬಾಟಲಿಯನ್ನು ನೀಡಲಾಗಿದೆ ಮತ್ತು ಟಾಸ್ಕ್ ಸಮಯದಲ್ಲಿ ಅದನ್ನು ತಮ್ಮೊಂದಿಗೆ ಕೊಂಡೊಯ್ಯುವುದು ಸ್ಪರ್ಧಿಯ ಜವಾಬ್ದಾರಿಯಾಗಿದೆ ಎಂದು ವಿವರಿಸಿದರು. ಇದನ್ನು ಕೇಳಿದ ನಂತರ ರಾಮ್ ಕಪೂರ್ ಅಂತಿಮವಾಗಿ ಪಕ್ಕಕ್ಕೆ ಸರಿದು ಆಟವನ್ನು ಮುಂದುವರಿಸಲು ಅವಕಾಶ ನೀಡಿದರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ತಕ್ಷಣ ನೆಟ್ಟಿಗರು ರಾಮ್ ಅವರ ಅಸಭ್ಯ ವರ್ತನೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ‘ಅವರು ಸಲ್ಮಾನ್ ಖಾನ್ ಮುಂದೆ ಖಂಡಿತಾ ಹೀಗೆ ವರ್ತಿಸುತ್ತಿರಲಿಲ್ಲ, ರಿತೇಶ್ ಒಳ್ಳೆಯವರು ಎಂಬ ಕಾರಣಕ್ಕೆ ಇಷ್ಟೊಂದು ಅತಿಯಾಗಿ ಆಡುತ್ತಿದ್ದಾರೆ’ ಎಂದು ಕಾಮೆಂಟ್ ಬಾಕ್ಸ್ನಲ್ಲಿ ಕಿಡಿಕಾರಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




