AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Family Pack: ಪ್ರೈಮ್​​ನಲ್ಲಿ ರಿಲೀಸ್ ಆಯ್ತು ಪುನೀತ್ ನಿರ್ಮಾಣದ ‘ಫ್ಯಾಮಿಲಿ ಪ್ಯಾಕ್’

OTT | Prime Video: ಫೆಬ್ರವರಿಯಲ್ಲಿ ಅಶ್ವಿನಿ ಪುನೀತ್​ ರಾಜ್​ಕುಮಾರ್ ಪಿಆರ್​ಕೆ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ನಿರ್ಮಾಣ ಮಾಡಿರುವ ಮೂರು ಚಿತ್ರಗಳು ಪ್ರೈಮ್​ನಲ್ಲಿ ಬಿತ್ತರವಾಗಲಿವೆ. ಈ ಪೈಕಿ ಎರಡನೇ ಚಿತ್ರವಾಗಿ ‘ಫ್ಯಾಮಿಲಿ ಪ್ಯಾಕ್’ ಇಂದು ರಿಲೀಸ್ ಆಗಿದೆ.

Family Pack: ಪ್ರೈಮ್​​ನಲ್ಲಿ ರಿಲೀಸ್ ಆಯ್ತು ಪುನೀತ್ ನಿರ್ಮಾಣದ ‘ಫ್ಯಾಮಿಲಿ ಪ್ಯಾಕ್’
ಫ್ಯಾಮಿಲಿ ಪ್ಯಾಕ್​​ನಲ್ಲಿ ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್
TV9 Web
| Edited By: |

Updated on: Feb 17, 2022 | 8:11 AM

Share

ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ನಟನೆಯ ಜತೆಜತೆಗೆ ನಿರ್ಮಾಣದಲ್ಲೂ ಸಕ್ರಿಯರಾಗಿದ್ದರು. ಪಿಆರ್​ಕೆ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಅವರು ಚಿತ್ರಗಳನ್ನು ನಿರ್ಮಿಸಿದ್ದಾರೆ. ಫೆಬ್ರವರಿಯಲ್ಲಿ ಪುನೀತ್ ನಿರ್ಮಾಣದ ಮೂರು‌ ಚಿತ್ರಗಳು ನೇರವಾಗಿ ಒಟಿಟಿ ಬಿಡುಗಡೆಯಾಗಲಿವೆ ಎಂದು ಘೋಷಿಸಲಾಗಿತ್ತು. ಅದರಂತೆ ದಾನಿಶ್ ಸೇಠ್ ನಟನೆಯ ‘ಒನ್ ಕಟ್ ಟು ಕಟ್’ ಚಿತ್ರ ಫೆಬ್ರವರಿ 3ರಂದು ರಿಲೀಸ್ ಆಗಿದೆ. ಇದೀಗ ‘ಫ್ಯಾಮಿಲಿ ಪ್ಯಾಕ್’ (Family Pack) ಸರದಿ. ಈಗಾಗಲೇ ಟ್ರೈಲರ್ ಹಾಗೂ ಹಾಡುಗಳಿಂದ ಗಮನ ಸೆಳೆದಿರುವ ‘ಫ್ಯಾಮಿಲಿ ಪ್ಯಾಕ್’, ಇಂದು (ಫೆಬ್ರವರಿ 17) ಅಮೆಜಾನ್ ಪ್ರೈಮ್​ನಲ್ಲಿ ರಿಲೀಸ್ ಆಗಿದೆ. ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್ ಮತ್ತು ರಂಗಾಯಣ ರಘು ಮುಖ್ಯ ಭೂಮಿಕೆ ನಿರ್ವಹಿಸಿರುವ ‘ಫ್ಯಾಮಿಲಿ ಪ್ಯಾಕ್’ ಒಂದು ಕಾಮಿಡಿ ಚಿತ್ರ ಎನ್ನುವುದನ್ನು ಈಗಾಗಲೇ ಟ್ರೈಲರ್ ಸಾಬೀತು ಮಾಡಿದೆ. ಚಿತ್ರದಲ್ಲಿ ಮತ್ತೇನೋ ಇದೆ ಎನ್ನುವುದನ್ನೂ ವೀಕ್ಷಕರು ಗುರುತಿಸಿದ್ದರು. ಅದೇನು? ಚಿತ್ರದಲ್ಲಿ ಮತ್ತೇನೇನಿದೆ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲಿದ್ದು, ಪ್ರೈಮ್​ನಲ್ಲಿ ಚಿತ್ರವನ್ನು ವೀಕ್ಷಿಸಬಹುದಾಗಿದೆ.

ಫ್ಯಾಮಿಲಿ ಪ್ಯಾಕ್ ರಿಲೀಸ್ ಕುರಿತು ಅಶ್ವಿನಿ ಪುನೀತ್ ರಾಜ್​ಕುಮಾರ್ ಟ್ವೀಟ್:

ಫ್ಯಾಮಿಲಿ ಪ್ಯಾಕ್​ನಲ್ಲಿ ಲಿಖಿತ್​ ಶೆಟ್ಟಿ, ಅಮೃತಾ ಅಯ್ಯಂಗಾರ್​, ರಂಗಾಯಣ ರಘು ಜತೆಗೆ ಪದ್ಮಜಾ ರಾವ್​, ನಾಗಭೂಷಣ್, ಸಿಹಿ ಕಹಿ ಚಂದ್ರು, ಸಾಧು ಕೋಕಿಲ ಮೊದಲಾದ ಕಲಾವಿದರು ಬಣ್ಣಹಚ್ಚಿದ್ದಾರೆ. ಅರ್ಜುನ್​ ಕುಮಾರ್ ಎಸ್​ ಆಕ್ಷನ್ ಕಟ್ ಹೇಳಿದ್ದು, ಪಿಆರ್​ಕೆ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಚಿತ್ರವನ್ನು ಅಶ್ವಿನಿ ಪುನೀತ್ ರಾಜ್​ಕುಮಾರ್ ನಿರ್ಮಾಣ ಮಾಡಿದ್ದಾರೆ. ಗುರುಕಿರಣ್ ಸಂಗೀತ ನೀಡಿರುವ ಈ ಚಿತ್ರಕ್ಕೆ, ಶ್ರೀಶ ಕುಡುವಳ್ಳಿ, ಉದಯ್ ಲೀಲಾ ಛಾಯಾಗ್ರಹಣ ಮಾಡಿದ್ದಾರೆ.

ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ಒನ್​ ಕಟ್ ಟು ಕಟ್:

ಇತ್ತೀಚೆಗಷ್ಟೇ ದಾನಿಶ್ ಸೇಠ್, ಸಂಯುಕ್ತಾ ಹೊರನಾಡು, ಪ್ರಕಾಶ್ ಬೆಳವಾಡಿ ಮೊದಲಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ‘ಒನ್ ಕಟ್ ಟು ಕಟ್’ ರಿಲೀಸ್ ಆಗಿತ್ತು. ಈ ಚಿತ್ರ ವೀಕ್ಷಕರ ಗಮನ ಸೆಳೆದಿತ್ತು. ವಂಶಿಧರ್ ಭೋಗರಾಜು ನಿರ್ದೇಶಿಸಿದ್ದ ಈ ಚಿತ್ರ ಕೂಡ ಸಂಪೂರ್ಣ ಕಾಮಿಡಿ ಎಂಟರ್​ಟೈನರ್ ಮಾದರಿಯಲ್ಲಿ ಮೂಡಿಬಂದಿತ್ತು. ಸರ್ಕಾರಿ ಶಾಲೆ ಉಳಿಸಿ ಎಂಬ ಸಂದೇಶವೂ ಚಿತ್ರದಲ್ಲಿತ್ತು.

ಪುನೀತ್ ಈಗಾಗಲೇ ಪಿಆರ್​ಕೆ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಈಗಾಗಲೇ ‘ಕವಲುದಾರಿ’, ‘ಮಾಯಾಬಜಾರ್2016’, ‘ಲಾ’, ‘ಫ್ರೆಂಚ್ ಬಿರಿಯಾನಿ’ ಚಿತ್ರಗಳನ್ನು ನಿರ್ಮಿಸಿದ್ದರು. ಅವರ ನಿರ್ಮಾಣದ 3 ಹೊಸ ಚಿತ್ರಗಳು ಫೆಬ್ರವರಿಯಲ್ಲಿ ನೇರವಾಗಿ ಒಟಿಟಿಯಲ್ಲಿ ಬಿತ್ತರವಾಗಲಿದೆ. ಇದೀಗ ‘ಫ್ಯಾಮಿಲಿ ಪ್ಯಾಕ್’ ಮೂಲಕ ಎರಡನೇ ಚಿತ್ರ ರಿಲೀಸ್ ಆದಂತಾಗಿದ್ದು, ‘ರಾಮಾ ರಾಮಾ ರೇ’ ಖ್ಯಾತಿಯ ಸತ್ಯಪ್ರಕಾಶ್ ನಿರ್ದೇಶನದ ‘ಮ್ಯಾನ್ ಆಫ್ ದಿ ಮ್ಯಾಚ್’ ಶೀಘ್ರದಲ್ಲೇ ತೆರೆ ಕಾಣಲಿದೆ.

ಇದನ್ನೂ ಓದಿ:

Love Mocktail 2 Review: ಮತ್ತಷ್ಟು ಲವ್​, ಮತ್ತಷ್ಟು ರಂಜನೆ, ಮತ್ತೆ ಮಿಲನಾ; ಅಂತ್ಯವಾಗಿದ್ದ ಕಥೆಗೆ ಸಿಕ್ಕಿದೆ ಹೊಸ ಆದಿ

Gehraiyaan Movie Review: ‘ಗೆಹರಾಯಿಯಾ’ ಇದು ಕೇವಲ ಹಸಿಬಿಸಿ ದೃಶ್ಯಗಳ ಕಥೆಯಲ್ಲ..

Follow Us
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
"ಕಳೆದ 2 ವರ್ಷಗಳಲ್ಲಿ 3000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ"
ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್, ಆ.3ರಂದು ಸಿಎಂಗಳ ಸಭೆ ನಿಗದಿ
ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್, ಆ.3ರಂದು ಸಿಎಂಗಳ ಸಭೆ ನಿಗದಿ
ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ!
ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ!