AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗಿನ ಟಾಪ್ ಟಾಕ್ ಶೋ ಮತ್ತೆ ಪ್ರಾರಂಭ: ಈ ಬಾರಿ ಅತಿಥಿಗಳ್ಯಾರು?

ತೆಲುಗಿನ ಜನಪ್ರಿಯ ಟಾಕ್ ಶೋ ಅನ್​ಸ್ಟಾಪೆಬಲ್ ವಿತ್ ಎನ್​ಬಿಕೆ ನಾಲ್ಕನೇ ಸೀಸನ್ ಆರಂಭ ಬರಲಿದೆ. ಯಾವ ದೊಡ್ಡ ಚಾನೆಲ್​ಗಳ ಕೈಗೆ ಸಹ ಸಿಗದ ತೆಲುಗಿನ ಸ್ಟಾರ್ ನಟ-ನಟಿಯರು ಬಾಲಯ್ಯ ನಡೆಸಿಕೊಡುವ ಈ ಒಟಿಟಿ ಟಾಕ್ ಶೋಗೆ ಬರುತ್ತಾರೆ. ಈ ಬಾರಿ ಯಾರ್ಯಾರು ಬರಲಿದ್ದಾರೆ?

ತೆಲುಗಿನ ಟಾಪ್ ಟಾಕ್ ಶೋ ಮತ್ತೆ ಪ್ರಾರಂಭ: ಈ ಬಾರಿ ಅತಿಥಿಗಳ್ಯಾರು?
ಮಂಜುನಾಥ ಸಿ.
|

Updated on: Oct 16, 2024 | 7:33 PM

Share

ತೆಲುಗು ಚಿತ್ರರಂಗದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿರುವ ಟಾಕ್ ಶೋ ಎಂದರೆ ಅದು ‘ಅನ್​ಸ್ಟಾಪೆಬಲ್ ವಿತ್ ಬಾಲಕೃಷ್ಣ’. ಆಹಾ ಒಟಿಟಿಯಲ್ಲಿ ಪ್ರಸಾರವಾಗುವ ಈ ಶೋ ಒಂದರಿಂದಲೇ ಒಟಿಟಿ ಲಾಭದಲ್ಲಿದೆ ಎಂದರೆ ತಪ್ಪಾಗಲಾರದು. ನಂದಮೂರಿ ಬಾಲಕೃಷ್ಣ ತಮ್ಮದೇ ಆದ ರಗಡ್ ಸ್ಟೈಲ್​ನಲ್ಲಿ ಈ ಶೋ ನಡೆಸಿಕೊಂಡು ಬರುತ್ತಿದ್ದಾರೆ. ಯಾವ ಟಿವಿ ಚಾನೆಲ್, ಯೂಟ್ಯೂಬ್ ಚಾನೆಲ್​ಗಳ ಕೈಗೂ ಸಿಕ್ಕದ ತೆಲುಗು ಚಿತ್ರರಂಗದ ಟಾಪ್ ಸ್ಟಾರ್​ಗಳು ಸಹ ಬಾಲಯ್ಯ ಕರೆದರೆ ಸಾಕು ಓಡೋಡಿ ಈ ಶೋಗೆ ಬರುತ್ತಾರೆ. ಬಾಲಯ್ಯ ಅಂತೂ ಯಾವುದೇ ಮುಲಾಜಿಲ್ಲದೆ ಪ್ರಶ್ನೆಗಳನ್ನು ಕೇಳಿ ಅತಿಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿ ಉತ್ತರ ಹೊರತೆಗೆಯುತ್ತಾರೆ.

ಕಳೆದ ಸೀಸನ್​ನಲ್ಲಿ ಬಾಲಿವುಡ್ ಸ್ಟಾರ್​ ನಟ ರಣ್​ಬೀರ್ ಕಪೂರ್, ಪವನ್ ಕಲ್ಯಾಣ್, ಸಿಎಂ ಚಂದ್ರಬಾಬು ನಾಯ್ಡು, ಮಹೇಶ್ ಬಾಬು, ಅಲ್ಲು ಅರ್ಜುನ್, ನಿರ್ಮಾಪಕ ಸುರೇಶ್, ಕೀರವಾಣಿ, ಬ್ರಹ್ಮಾನಂದಂ ಇನ್ನೂ ಹಲವಾರು ಟಾಪ್ ತಾರೆಯರು ಈ ಶೋಗೆ ಆಗಮಿಸಿದ್ದರು. ಪ್ರಭಾಸ್, ಅಲ್ಲು ಅರ್ಜುನ್, ಮಹೇಶ್ ಬಾಬು ಅವರುಗಳು ದೊಡ್ಡ ದೊಡ್ಡ ಟಿವಿ ಚಾನೆಲ್​ಗಳ ಕೈಗೆ ಸಿಗುವುದಿಲ್ಲ ಆದರೆ ಬಾಲಯ್ಯ ಶೋಗೆ ಖುದ್ದಾಗಿ ಬಂದು ಸಂದರ್ಶನ ನೀಡಿದ್ದರು.

ಇದನ್ನೂ ಓದಿ:ನಂದಮೂರಿ ಬಾಲಕೃಷ್ಣಗೆ ಇಲ್ಲ ಸಚಿವ ಸ್ಥಾನ, ಅಭಿಮಾನಿಗಳ ಬೇಸರ

ಈಗ ಅನ್​ಸ್ಟಾಪಬಲ್ ವಿತ್ ಬಾಲಯ್ಯ ಸೀಸನ್ 4 ಪ್ರಾರಂಭ ಆಗಲಿದೆ. ಆಹಾ ಒಟಿಟಿ ಈಗಾಗಲೇ ಮೊದಲ ಪ್ರೋಮೋ ಬಿಡುಗಡೆ ಮಾಡಿದೆ. ಆದರೆ ಇದರಲ್ಲಿ ಅತಿಥಿಗಳ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡಲಾಗಿಲ್ಲ. ಆದರೆ ಮೂಲಗಳ ಪ್ರಕಾರ, ಈ ಬಾರಿಯ ಸೀಸನ್​ನ ಮೊದಲ ಅತಿಥಿ ಮೆಗಾಸ್ಟಾರ್ ಚಿರಂಜೀವಿ ಆಗಿರಲಿದ್ದಾರೆ ಎನ್ನಲಾಗುತ್ತಿದೆ. ಚಿರಂಜೀವಿ ಹಾಗೂ ಬಾಲಯ್ಯ ನಡುವೆ ದಶಕಗಳ ಕಾಲ ಸ್ಪರ್ಧೆ-ಪ್ರತಿಸ್ಪರ್ಧೆ ಇದ್ದರೂ ಸಹ ಇಬ್ಬರೂ ಒಳ್ಳೆಯ ಗೆಳೆಯರೇ ಹಾಗಾಗಿ ಗೆಳೆಯನನ್ನು ಮೊದಲ ಸೀಸನ್​ಗೆ ಕರೆತರಲು ಬಾಲಯ್ಯ ಸಜ್ಜಾಗಿದ್ದಾರೆ.

ಮಾತ್ರವೇ ಅಲ್ಲದೆ ಈ ಬಾರಿ ‘ಪುಷ್ಪ 2’ ಬಿಡುಗಡೆ ಸಹ ಇರುವ ಕಾರಣ, ಅಲ್ಲು ಅರ್ಜುನ್ ಮತ್ತು ಸುಕುಮಾರ್ ಸಹ ಬರಲಿದ್ದಾರಂತೆ. ಹಾಗೆಯೇ ರಾಜಮೌಳಿ-ಮಹೇಶ್ ಬಾಬು, ಸಮಂತಾ ಈ ವರೆಗೂ ಅನ್​ಸ್ಟಾಪೆಬಲ್ ಶೋಗೆ ಬಂದಿಲ್ಲ ಹಾಗಾಗಿ ಸಮಂತಾ ಬರುವ ಸಾಧ್ಯತೆ ಇದೆ. ಶ್ರೀಲೀಲಾ ಸಹ ಬರಲಿದ್ದಾರೆ. ಇನ್ನೊಂದು ವಿಶೇಷವೆಂದರೆ ಹೀರೋ ಆಗಲು ಮುಂದಾಗಿರುವ ಬಾಲಯ್ಯ ಅವರ ಪುತ್ರ ಮೋಕ್ಷಜ್ಞ ಸಹ ಟಾಕ್ ಶೋಗೆ ಬರಲಿದ್ದಾರೆ. ಇನ್ನೂ ಕೆಲವು ಬಾಲಿವುಡ್ ತಾರೆಯರು ಸಹ ಈ ಶೋಗೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್