AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗಿನ ಟಾಪ್ ಟಾಕ್ ಶೋ ಮತ್ತೆ ಪ್ರಾರಂಭ: ಈ ಬಾರಿ ಅತಿಥಿಗಳ್ಯಾರು?

ತೆಲುಗಿನ ಜನಪ್ರಿಯ ಟಾಕ್ ಶೋ ಅನ್​ಸ್ಟಾಪೆಬಲ್ ವಿತ್ ಎನ್​ಬಿಕೆ ನಾಲ್ಕನೇ ಸೀಸನ್ ಆರಂಭ ಬರಲಿದೆ. ಯಾವ ದೊಡ್ಡ ಚಾನೆಲ್​ಗಳ ಕೈಗೆ ಸಹ ಸಿಗದ ತೆಲುಗಿನ ಸ್ಟಾರ್ ನಟ-ನಟಿಯರು ಬಾಲಯ್ಯ ನಡೆಸಿಕೊಡುವ ಈ ಒಟಿಟಿ ಟಾಕ್ ಶೋಗೆ ಬರುತ್ತಾರೆ. ಈ ಬಾರಿ ಯಾರ್ಯಾರು ಬರಲಿದ್ದಾರೆ?

ತೆಲುಗಿನ ಟಾಪ್ ಟಾಕ್ ಶೋ ಮತ್ತೆ ಪ್ರಾರಂಭ: ಈ ಬಾರಿ ಅತಿಥಿಗಳ್ಯಾರು?
ಮಂಜುನಾಥ ಸಿ.
|

Updated on: Oct 16, 2024 | 7:33 PM

Share

ತೆಲುಗು ಚಿತ್ರರಂಗದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿರುವ ಟಾಕ್ ಶೋ ಎಂದರೆ ಅದು ‘ಅನ್​ಸ್ಟಾಪೆಬಲ್ ವಿತ್ ಬಾಲಕೃಷ್ಣ’. ಆಹಾ ಒಟಿಟಿಯಲ್ಲಿ ಪ್ರಸಾರವಾಗುವ ಈ ಶೋ ಒಂದರಿಂದಲೇ ಒಟಿಟಿ ಲಾಭದಲ್ಲಿದೆ ಎಂದರೆ ತಪ್ಪಾಗಲಾರದು. ನಂದಮೂರಿ ಬಾಲಕೃಷ್ಣ ತಮ್ಮದೇ ಆದ ರಗಡ್ ಸ್ಟೈಲ್​ನಲ್ಲಿ ಈ ಶೋ ನಡೆಸಿಕೊಂಡು ಬರುತ್ತಿದ್ದಾರೆ. ಯಾವ ಟಿವಿ ಚಾನೆಲ್, ಯೂಟ್ಯೂಬ್ ಚಾನೆಲ್​ಗಳ ಕೈಗೂ ಸಿಕ್ಕದ ತೆಲುಗು ಚಿತ್ರರಂಗದ ಟಾಪ್ ಸ್ಟಾರ್​ಗಳು ಸಹ ಬಾಲಯ್ಯ ಕರೆದರೆ ಸಾಕು ಓಡೋಡಿ ಈ ಶೋಗೆ ಬರುತ್ತಾರೆ. ಬಾಲಯ್ಯ ಅಂತೂ ಯಾವುದೇ ಮುಲಾಜಿಲ್ಲದೆ ಪ್ರಶ್ನೆಗಳನ್ನು ಕೇಳಿ ಅತಿಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿ ಉತ್ತರ ಹೊರತೆಗೆಯುತ್ತಾರೆ.

ಕಳೆದ ಸೀಸನ್​ನಲ್ಲಿ ಬಾಲಿವುಡ್ ಸ್ಟಾರ್​ ನಟ ರಣ್​ಬೀರ್ ಕಪೂರ್, ಪವನ್ ಕಲ್ಯಾಣ್, ಸಿಎಂ ಚಂದ್ರಬಾಬು ನಾಯ್ಡು, ಮಹೇಶ್ ಬಾಬು, ಅಲ್ಲು ಅರ್ಜುನ್, ನಿರ್ಮಾಪಕ ಸುರೇಶ್, ಕೀರವಾಣಿ, ಬ್ರಹ್ಮಾನಂದಂ ಇನ್ನೂ ಹಲವಾರು ಟಾಪ್ ತಾರೆಯರು ಈ ಶೋಗೆ ಆಗಮಿಸಿದ್ದರು. ಪ್ರಭಾಸ್, ಅಲ್ಲು ಅರ್ಜುನ್, ಮಹೇಶ್ ಬಾಬು ಅವರುಗಳು ದೊಡ್ಡ ದೊಡ್ಡ ಟಿವಿ ಚಾನೆಲ್​ಗಳ ಕೈಗೆ ಸಿಗುವುದಿಲ್ಲ ಆದರೆ ಬಾಲಯ್ಯ ಶೋಗೆ ಖುದ್ದಾಗಿ ಬಂದು ಸಂದರ್ಶನ ನೀಡಿದ್ದರು.

ಇದನ್ನೂ ಓದಿ:ನಂದಮೂರಿ ಬಾಲಕೃಷ್ಣಗೆ ಇಲ್ಲ ಸಚಿವ ಸ್ಥಾನ, ಅಭಿಮಾನಿಗಳ ಬೇಸರ

ಈಗ ಅನ್​ಸ್ಟಾಪಬಲ್ ವಿತ್ ಬಾಲಯ್ಯ ಸೀಸನ್ 4 ಪ್ರಾರಂಭ ಆಗಲಿದೆ. ಆಹಾ ಒಟಿಟಿ ಈಗಾಗಲೇ ಮೊದಲ ಪ್ರೋಮೋ ಬಿಡುಗಡೆ ಮಾಡಿದೆ. ಆದರೆ ಇದರಲ್ಲಿ ಅತಿಥಿಗಳ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡಲಾಗಿಲ್ಲ. ಆದರೆ ಮೂಲಗಳ ಪ್ರಕಾರ, ಈ ಬಾರಿಯ ಸೀಸನ್​ನ ಮೊದಲ ಅತಿಥಿ ಮೆಗಾಸ್ಟಾರ್ ಚಿರಂಜೀವಿ ಆಗಿರಲಿದ್ದಾರೆ ಎನ್ನಲಾಗುತ್ತಿದೆ. ಚಿರಂಜೀವಿ ಹಾಗೂ ಬಾಲಯ್ಯ ನಡುವೆ ದಶಕಗಳ ಕಾಲ ಸ್ಪರ್ಧೆ-ಪ್ರತಿಸ್ಪರ್ಧೆ ಇದ್ದರೂ ಸಹ ಇಬ್ಬರೂ ಒಳ್ಳೆಯ ಗೆಳೆಯರೇ ಹಾಗಾಗಿ ಗೆಳೆಯನನ್ನು ಮೊದಲ ಸೀಸನ್​ಗೆ ಕರೆತರಲು ಬಾಲಯ್ಯ ಸಜ್ಜಾಗಿದ್ದಾರೆ.

ಮಾತ್ರವೇ ಅಲ್ಲದೆ ಈ ಬಾರಿ ‘ಪುಷ್ಪ 2’ ಬಿಡುಗಡೆ ಸಹ ಇರುವ ಕಾರಣ, ಅಲ್ಲು ಅರ್ಜುನ್ ಮತ್ತು ಸುಕುಮಾರ್ ಸಹ ಬರಲಿದ್ದಾರಂತೆ. ಹಾಗೆಯೇ ರಾಜಮೌಳಿ-ಮಹೇಶ್ ಬಾಬು, ಸಮಂತಾ ಈ ವರೆಗೂ ಅನ್​ಸ್ಟಾಪೆಬಲ್ ಶೋಗೆ ಬಂದಿಲ್ಲ ಹಾಗಾಗಿ ಸಮಂತಾ ಬರುವ ಸಾಧ್ಯತೆ ಇದೆ. ಶ್ರೀಲೀಲಾ ಸಹ ಬರಲಿದ್ದಾರೆ. ಇನ್ನೊಂದು ವಿಶೇಷವೆಂದರೆ ಹೀರೋ ಆಗಲು ಮುಂದಾಗಿರುವ ಬಾಲಯ್ಯ ಅವರ ಪುತ್ರ ಮೋಕ್ಷಜ್ಞ ಸಹ ಟಾಕ್ ಶೋಗೆ ಬರಲಿದ್ದಾರೆ. ಇನ್ನೂ ಕೆಲವು ಬಾಲಿವುಡ್ ತಾರೆಯರು ಸಹ ಈ ಶೋಗೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೇಗವಾಗಿ ಬಂದು ಕಾಲುವೆಗೆ ಉರುಳಿದ ಕಾರು
ವೇಗವಾಗಿ ಬಂದು ಕಾಲುವೆಗೆ ಉರುಳಿದ ಕಾರು
ವಧುವಿನ ಮೇಲೆ ಹೂವಿನಂತೆ ಬರೋಬ್ಬರಿ 8 ಕೋಟಿ ರೂ. ನಗದು ಚೆಲ್ಲಿದ ವರ
ವಧುವಿನ ಮೇಲೆ ಹೂವಿನಂತೆ ಬರೋಬ್ಬರಿ 8 ಕೋಟಿ ರೂ. ನಗದು ಚೆಲ್ಲಿದ ವರ
ಮಕ್ಕಳು ಮಾತನಾಡುವಾಗ ತೊದಲುತ್ತಿದ್ರೆ ಜ್ಯೋತಿಷ್ಯ ಪ್ರಕಾರ ಇದೇ ಕಾರಣ
ಮಕ್ಕಳು ಮಾತನಾಡುವಾಗ ತೊದಲುತ್ತಿದ್ರೆ ಜ್ಯೋತಿಷ್ಯ ಪ್ರಕಾರ ಇದೇ ಕಾರಣ
ಮದ್ಯದ ಅಮಲಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಕಾರು
ಮದ್ಯದ ಅಮಲಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಕಾರು
ಇಂದು ರಾಶಿಯವರಿಗೆಜವಾಬ್ದಾರಿಗಳು ಹೆಚ್ಚಾದರೂ, ಉದ್ಯೋಗದಲ್ಲಿ ಶುಭವಾಗಲಿದೆ
ಇಂದು ರಾಶಿಯವರಿಗೆಜವಾಬ್ದಾರಿಗಳು ಹೆಚ್ಚಾದರೂ, ಉದ್ಯೋಗದಲ್ಲಿ ಶುಭವಾಗಲಿದೆ
IIT ಬಾಂಬೆ ತರಗತಿಯ ಟೇಬಲ್ ಮೇಲೆ ಹತ್ತಿ ನಿಂತ ನಾಯಿ; ವಿಡಿಯೋ ವೈರಲ್
IIT ಬಾಂಬೆ ತರಗತಿಯ ಟೇಬಲ್ ಮೇಲೆ ಹತ್ತಿ ನಿಂತ ನಾಯಿ; ವಿಡಿಯೋ ವೈರಲ್
ಸಾರಿಗೆ ನೌಕರರ ವೇತನ ಪರಿಷ್ಕರಣೆ ಬಗ್ಗೆ ರಾಮಲಿಂಗಾರೆಡ್ಡಿ ಹೇಳಿದ್ದಿಷ್ಟು
ಸಾರಿಗೆ ನೌಕರರ ವೇತನ ಪರಿಷ್ಕರಣೆ ಬಗ್ಗೆ ರಾಮಲಿಂಗಾರೆಡ್ಡಿ ಹೇಳಿದ್ದಿಷ್ಟು
ದಿ ರೈಸ್ ಆಫ್ ಅಶೋಕ: ವೇದಿಕೆಯಲ್ಲಿ ಭಾವುಕವಾಗಿ ಮಾತನಾಡಿದ ಸತೀಶ್ ನೀನಾಸಂ
ದಿ ರೈಸ್ ಆಫ್ ಅಶೋಕ: ವೇದಿಕೆಯಲ್ಲಿ ಭಾವುಕವಾಗಿ ಮಾತನಾಡಿದ ಸತೀಶ್ ನೀನಾಸಂ
ಸಿಎಂ ಬದಲಾವಣೆ ಬಗ್ಗೆ ಕೋಡಿಮಠ ಸ್ವಾಮೀಜಿ ಸ್ಫೋಟಕ ಭವಿಷ್ಯ
ಸಿಎಂ ಬದಲಾವಣೆ ಬಗ್ಗೆ ಕೋಡಿಮಠ ಸ್ವಾಮೀಜಿ ಸ್ಫೋಟಕ ಭವಿಷ್ಯ
ಎಐ ಶೃಂಗಸಭೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಎಂಜಾಯ್ ಮಾಡಿದ ಜಾಗತಿಕ ನಾಯಕರು
ಎಐ ಶೃಂಗಸಭೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಎಂಜಾಯ್ ಮಾಡಿದ ಜಾಗತಿಕ ನಾಯಕರು