ತೆಲುಗಿನ ಟಾಪ್ ಟಾಕ್ ಶೋ ಮತ್ತೆ ಪ್ರಾರಂಭ: ಈ ಬಾರಿ ಅತಿಥಿಗಳ್ಯಾರು?

ತೆಲುಗಿನ ಜನಪ್ರಿಯ ಟಾಕ್ ಶೋ ಅನ್​ಸ್ಟಾಪೆಬಲ್ ವಿತ್ ಎನ್​ಬಿಕೆ ನಾಲ್ಕನೇ ಸೀಸನ್ ಆರಂಭ ಬರಲಿದೆ. ಯಾವ ದೊಡ್ಡ ಚಾನೆಲ್​ಗಳ ಕೈಗೆ ಸಹ ಸಿಗದ ತೆಲುಗಿನ ಸ್ಟಾರ್ ನಟ-ನಟಿಯರು ಬಾಲಯ್ಯ ನಡೆಸಿಕೊಡುವ ಈ ಒಟಿಟಿ ಟಾಕ್ ಶೋಗೆ ಬರುತ್ತಾರೆ. ಈ ಬಾರಿ ಯಾರ್ಯಾರು ಬರಲಿದ್ದಾರೆ?

ತೆಲುಗಿನ ಟಾಪ್ ಟಾಕ್ ಶೋ ಮತ್ತೆ ಪ್ರಾರಂಭ: ಈ ಬಾರಿ ಅತಿಥಿಗಳ್ಯಾರು?
Follow us
|

Updated on: Oct 16, 2024 | 7:33 PM

ತೆಲುಗು ಚಿತ್ರರಂಗದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿರುವ ಟಾಕ್ ಶೋ ಎಂದರೆ ಅದು ‘ಅನ್​ಸ್ಟಾಪೆಬಲ್ ವಿತ್ ಬಾಲಕೃಷ್ಣ’. ಆಹಾ ಒಟಿಟಿಯಲ್ಲಿ ಪ್ರಸಾರವಾಗುವ ಈ ಶೋ ಒಂದರಿಂದಲೇ ಒಟಿಟಿ ಲಾಭದಲ್ಲಿದೆ ಎಂದರೆ ತಪ್ಪಾಗಲಾರದು. ನಂದಮೂರಿ ಬಾಲಕೃಷ್ಣ ತಮ್ಮದೇ ಆದ ರಗಡ್ ಸ್ಟೈಲ್​ನಲ್ಲಿ ಈ ಶೋ ನಡೆಸಿಕೊಂಡು ಬರುತ್ತಿದ್ದಾರೆ. ಯಾವ ಟಿವಿ ಚಾನೆಲ್, ಯೂಟ್ಯೂಬ್ ಚಾನೆಲ್​ಗಳ ಕೈಗೂ ಸಿಕ್ಕದ ತೆಲುಗು ಚಿತ್ರರಂಗದ ಟಾಪ್ ಸ್ಟಾರ್​ಗಳು ಸಹ ಬಾಲಯ್ಯ ಕರೆದರೆ ಸಾಕು ಓಡೋಡಿ ಈ ಶೋಗೆ ಬರುತ್ತಾರೆ. ಬಾಲಯ್ಯ ಅಂತೂ ಯಾವುದೇ ಮುಲಾಜಿಲ್ಲದೆ ಪ್ರಶ್ನೆಗಳನ್ನು ಕೇಳಿ ಅತಿಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿ ಉತ್ತರ ಹೊರತೆಗೆಯುತ್ತಾರೆ.

ಕಳೆದ ಸೀಸನ್​ನಲ್ಲಿ ಬಾಲಿವುಡ್ ಸ್ಟಾರ್​ ನಟ ರಣ್​ಬೀರ್ ಕಪೂರ್, ಪವನ್ ಕಲ್ಯಾಣ್, ಸಿಎಂ ಚಂದ್ರಬಾಬು ನಾಯ್ಡು, ಮಹೇಶ್ ಬಾಬು, ಅಲ್ಲು ಅರ್ಜುನ್, ನಿರ್ಮಾಪಕ ಸುರೇಶ್, ಕೀರವಾಣಿ, ಬ್ರಹ್ಮಾನಂದಂ ಇನ್ನೂ ಹಲವಾರು ಟಾಪ್ ತಾರೆಯರು ಈ ಶೋಗೆ ಆಗಮಿಸಿದ್ದರು. ಪ್ರಭಾಸ್, ಅಲ್ಲು ಅರ್ಜುನ್, ಮಹೇಶ್ ಬಾಬು ಅವರುಗಳು ದೊಡ್ಡ ದೊಡ್ಡ ಟಿವಿ ಚಾನೆಲ್​ಗಳ ಕೈಗೆ ಸಿಗುವುದಿಲ್ಲ ಆದರೆ ಬಾಲಯ್ಯ ಶೋಗೆ ಖುದ್ದಾಗಿ ಬಂದು ಸಂದರ್ಶನ ನೀಡಿದ್ದರು.

ಇದನ್ನೂ ಓದಿ:ನಂದಮೂರಿ ಬಾಲಕೃಷ್ಣಗೆ ಇಲ್ಲ ಸಚಿವ ಸ್ಥಾನ, ಅಭಿಮಾನಿಗಳ ಬೇಸರ

ಈಗ ಅನ್​ಸ್ಟಾಪಬಲ್ ವಿತ್ ಬಾಲಯ್ಯ ಸೀಸನ್ 4 ಪ್ರಾರಂಭ ಆಗಲಿದೆ. ಆಹಾ ಒಟಿಟಿ ಈಗಾಗಲೇ ಮೊದಲ ಪ್ರೋಮೋ ಬಿಡುಗಡೆ ಮಾಡಿದೆ. ಆದರೆ ಇದರಲ್ಲಿ ಅತಿಥಿಗಳ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡಲಾಗಿಲ್ಲ. ಆದರೆ ಮೂಲಗಳ ಪ್ರಕಾರ, ಈ ಬಾರಿಯ ಸೀಸನ್​ನ ಮೊದಲ ಅತಿಥಿ ಮೆಗಾಸ್ಟಾರ್ ಚಿರಂಜೀವಿ ಆಗಿರಲಿದ್ದಾರೆ ಎನ್ನಲಾಗುತ್ತಿದೆ. ಚಿರಂಜೀವಿ ಹಾಗೂ ಬಾಲಯ್ಯ ನಡುವೆ ದಶಕಗಳ ಕಾಲ ಸ್ಪರ್ಧೆ-ಪ್ರತಿಸ್ಪರ್ಧೆ ಇದ್ದರೂ ಸಹ ಇಬ್ಬರೂ ಒಳ್ಳೆಯ ಗೆಳೆಯರೇ ಹಾಗಾಗಿ ಗೆಳೆಯನನ್ನು ಮೊದಲ ಸೀಸನ್​ಗೆ ಕರೆತರಲು ಬಾಲಯ್ಯ ಸಜ್ಜಾಗಿದ್ದಾರೆ.

ಮಾತ್ರವೇ ಅಲ್ಲದೆ ಈ ಬಾರಿ ‘ಪುಷ್ಪ 2’ ಬಿಡುಗಡೆ ಸಹ ಇರುವ ಕಾರಣ, ಅಲ್ಲು ಅರ್ಜುನ್ ಮತ್ತು ಸುಕುಮಾರ್ ಸಹ ಬರಲಿದ್ದಾರಂತೆ. ಹಾಗೆಯೇ ರಾಜಮೌಳಿ-ಮಹೇಶ್ ಬಾಬು, ಸಮಂತಾ ಈ ವರೆಗೂ ಅನ್​ಸ್ಟಾಪೆಬಲ್ ಶೋಗೆ ಬಂದಿಲ್ಲ ಹಾಗಾಗಿ ಸಮಂತಾ ಬರುವ ಸಾಧ್ಯತೆ ಇದೆ. ಶ್ರೀಲೀಲಾ ಸಹ ಬರಲಿದ್ದಾರೆ. ಇನ್ನೊಂದು ವಿಶೇಷವೆಂದರೆ ಹೀರೋ ಆಗಲು ಮುಂದಾಗಿರುವ ಬಾಲಯ್ಯ ಅವರ ಪುತ್ರ ಮೋಕ್ಷಜ್ಞ ಸಹ ಟಾಕ್ ಶೋಗೆ ಬರಲಿದ್ದಾರೆ. ಇನ್ನೂ ಕೆಲವು ಬಾಲಿವುಡ್ ತಾರೆಯರು ಸಹ ಈ ಶೋಗೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೂರೈವತ್ತು ಜನಕ್ಕೆ ತಯಾರಿಸಿದ ಬಾಡೂಟ ಸೀಜ್ ಮಾಡಿದ ಚುನಾವಣಾಧಿಕಾರಿಗಳು
ನೂರೈವತ್ತು ಜನಕ್ಕೆ ತಯಾರಿಸಿದ ಬಾಡೂಟ ಸೀಜ್ ಮಾಡಿದ ಚುನಾವಣಾಧಿಕಾರಿಗಳು
ಮುಡಾ ಪ್ರಕರಣ ಮತ್ತು ಈಡಿ ನಡುವೆ ಎಲ್ಲಿಯ ಸಂಬಂಧ? ಸಂತೋಷ್ ಲಾಡ್, ಸಚಿವ
ಮುಡಾ ಪ್ರಕರಣ ಮತ್ತು ಈಡಿ ನಡುವೆ ಎಲ್ಲಿಯ ಸಂಬಂಧ? ಸಂತೋಷ್ ಲಾಡ್, ಸಚಿವ
ಟಿಕೆಟ್ ಸಿಗದಿದ್ದರೆ ಕಾರ್ಯಕರ್ತರು ಹೇಳಿದಂತೆ ಕೇಳುವೆ: ಸಿಪಿ ಯೋಗೇಶ್ವರ್
ಟಿಕೆಟ್ ಸಿಗದಿದ್ದರೆ ಕಾರ್ಯಕರ್ತರು ಹೇಳಿದಂತೆ ಕೇಳುವೆ: ಸಿಪಿ ಯೋಗೇಶ್ವರ್
ನಿರಂತರ ಮಳೆಗೆ ಗಿಡದಲ್ಲಿಯೇ ಕೊಳೆಯುತ್ತಿರೋ ದಾಳಿಂಬೆ; ಕಂಗಾಲಾದ ರೈತರು
ನಿರಂತರ ಮಳೆಗೆ ಗಿಡದಲ್ಲಿಯೇ ಕೊಳೆಯುತ್ತಿರೋ ದಾಳಿಂಬೆ; ಕಂಗಾಲಾದ ರೈತರು
ಸಿದ್ದರಾಮಯ್ಯರನ್ನು ಸಿಲುಕಿಸುವ ಪ್ರಯತ್ನದಲ್ಲಿ ಬಿಜೆಪಿ ಸಫಲವಾಗಲ್ಲ:ನಾಗೇಂದ್ರ
ಸಿದ್ದರಾಮಯ್ಯರನ್ನು ಸಿಲುಕಿಸುವ ಪ್ರಯತ್ನದಲ್ಲಿ ಬಿಜೆಪಿ ಸಫಲವಾಗಲ್ಲ:ನಾಗೇಂದ್ರ
ಸಿದ್ದರಾಮಯ್ಯ ಅತ್ಯಾಪ್ತ ಮರಿಗೌಡರನ್ನು ನಿಜಕ್ಕೂ ಅನಾರೋಗ್ಯ ಕಾಡುತ್ತಿದೆಯೇ?
ಸಿದ್ದರಾಮಯ್ಯ ಅತ್ಯಾಪ್ತ ಮರಿಗೌಡರನ್ನು ನಿಜಕ್ಕೂ ಅನಾರೋಗ್ಯ ಕಾಡುತ್ತಿದೆಯೇ?
ತೊರೆಕಾಡನಹಳ್ಳಿಗೆ ಕಾರಿನ ಬದಲು ಲಕ್ಸುರಿ ಬಸ್ಸಲ್ಲಿ ಹೋಗುವ ಅಗತ್ಯವಿತ್ತೇ?
ತೊರೆಕಾಡನಹಳ್ಳಿಗೆ ಕಾರಿನ ಬದಲು ಲಕ್ಸುರಿ ಬಸ್ಸಲ್ಲಿ ಹೋಗುವ ಅಗತ್ಯವಿತ್ತೇ?
ಮಳೆ ಅವಾಂತರ: ಕರ್ನಾಟಕ ಪೊಲೀಸ್ ಅಧಿಕಾರಿ ಮನೆಗೂ ನುಗ್ಗಿದ ನೀರು
ಮಳೆ ಅವಾಂತರ: ಕರ್ನಾಟಕ ಪೊಲೀಸ್ ಅಧಿಕಾರಿ ಮನೆಗೂ ನುಗ್ಗಿದ ನೀರು
ಅಭಿಮಾನಿಗಳ ಹರ್ಷೋದ್ಗಾರ... ಮಳೆಗೂ ಕುಗ್ಗದ ಕಿಂಗ್ ಕೊಹ್ಲಿಯ ಕ್ರೇಝ್
ಅಭಿಮಾನಿಗಳ ಹರ್ಷೋದ್ಗಾರ... ಮಳೆಗೂ ಕುಗ್ಗದ ಕಿಂಗ್ ಕೊಹ್ಲಿಯ ಕ್ರೇಝ್
ಸುರೇಶಣ್ಣ ಸ್ಪರ್ಧಿಸಿದರೆ ಮನೆಮನೆ ತಿರುಗಿ ಪ್ರಚಾರ ಮಾಡುವೆ: ಪ್ರದೀಪ್ ಈಶ್ವರ್
ಸುರೇಶಣ್ಣ ಸ್ಪರ್ಧಿಸಿದರೆ ಮನೆಮನೆ ತಿರುಗಿ ಪ್ರಚಾರ ಮಾಡುವೆ: ಪ್ರದೀಪ್ ಈಶ್ವರ್