AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊರ ಜಗತ್ತಿಗೆ ತಿಳಿಯಲೇ ಇಲ್ಲ ಮೋಹನ್​ಲಾಲ್​-ಪವನ್​ ಕಲ್ಯಾಣ್​ ಭೇಟಿ; ಏನಿದರ ಉದ್ದೇಶ?

ಹೈದರಾಬಾದ್​ ಸಿನಿಮಾ ಶೂಟಿಂಗ್​ ಹಾಟ್​ಸ್ಪಾಟ್​. ನಿತ್ಯ ಸಾಕಷ್ಟು ಸಿನಿಮಾಗಳ ಶೂಟಿಂಗ್​ ಇಲ್ಲಿ ನಡೆಯುತ್ತಿದೆ. ಅದೇ ರೀತಿ ಮೋಹನ್​ಲಾಲ್​ ಹಾಗೂ ಪವನ್​ ಕಲ್ಯಾಣ್​ ಹೈದರಾಬಾದ್​ನ ಅಲ್ಯೂಮೀನಿಯಂ ಫ್ಯಾಕ್ಟರಿಯಲ್ಲಿ ತಮ್ಮ ಸಿನಿಮಾ ಶೂಟಿಂಗ್​ ನಡೆಸುತ್ತಿದ್ದಾರೆ.

ಹೊರ ಜಗತ್ತಿಗೆ ತಿಳಿಯಲೇ ಇಲ್ಲ ಮೋಹನ್​ಲಾಲ್​-ಪವನ್​ ಕಲ್ಯಾಣ್​ ಭೇಟಿ; ಏನಿದರ ಉದ್ದೇಶ?
ಹೊರ ಜಗತ್ತಿಗೆ ತಿಳಿಯಲೇ ಇಲ್ಲ ಮೋಹನ್​ಲಾಲ್​-ಪವನ್​ ಕಲ್ಯಾಣ್​ ಭೇಟಿ; ಏನಿದರ ಉದ್ದೇಶ?
TV9 Web
| Edited By: |

Updated on: Aug 20, 2021 | 8:35 PM

Share

ಕೊವಿಡ್​ ಎರಡನೇ ಅಲೆ ತಣ್ಣಗಾದ ಬೆನ್ನಲ್ಲೇ ಸಿನಿಮಾ ಕೆಲಸಗಳು ಜೋರಾಗಿವೆ. ನಟ-ನಟಿಯರು, ಕಲಾವಿದರು ಹಾಗೂ ತಾಂತ್ರಿಕ ವರ್ಗ ಸಿನಿಮಾ ಸೆಟ್​ಗೆ ಮರಳಿದೆ. ಈ ಮಧ್ಯೆ, ಮಲಯಾಳಂ ಖ್ಯಾತ ನಟ ಮೋಹನ್​ಲಾಲ್​ ಹಾಗೂ ಟಾಲಿವುಡ್​ ಸ್ಟಾರ್​ ನಟ, ರಾಜಕಾರಣಿ ಪವನ್​ ಕಲ್ಯಾಣ್​ ಅವರು ಹೈದರಾಬಾದ್​ನಲ್ಲಿ ಗುಪ್ತವಾಗಿ ಮೀಟ್​ ಮಾಡಿದ್ದಾರೆ ಎನ್ನುವ ಸುದ್ದಿ ಲೀಕ್​ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್​ ಅಚ್ಚರಿ ಹೊರಹಾಕಿದ್ದಾರೆ.

ಹೈದರಾಬಾದ್​ ಸಿನಿಮಾ ಶೂಟಿಂಗ್​ ಹಾಟ್​ಸ್ಪಾಟ್​. ನಿತ್ಯ ಸಾಕಷ್ಟು ಸಿನಿಮಾಗಳ ಶೂಟಿಂಗ್​ ಇಲ್ಲಿ ನಡೆಯುತ್ತಿದೆ. ಅದೇ ರೀತಿ ಮೋಹನ್​ಲಾಲ್​ ಹಾಗೂ ಪವನ್​ ಕಲ್ಯಾಣ್​ ಹೈದರಾಬಾದ್​ನ ಅಲ್ಯೂಮೀನಿಯಂ ಫ್ಯಾಕ್ಟರಿಯಲ್ಲಿ ತಮ್ಮ ಸಿನಿಮಾ ಶೂಟಿಂಗ್​ ನಡೆಸುತ್ತಿದ್ದಾರೆ. ಸಿನಿಮಾ ಶೂಟಿಂಗ್​ಗೆ ಇಬ್ಬರೂ ಒಂದೇ ಲೊಕೇಶನ್​ಲ್ಲಿರುವ ವಿಚಾರ ಗೊತ್ತಾಗಿದೆ. ಹೀಗಾಗಿ, ಮೋಹನ್​ಲಾಲ್​ ಹಾಗೂ ಪವನ್​ ಕಲ್ಯಾಣ್​ ಭೇಟಿ ಮಾಡಿದ್ದಾರೆ.

ಮಧ್ಯಾಹ್ನದ ಬಿಡುವಿನ ವೇಳೆ ಈ ಭೇಟಿ ನಡೆದಿದೆ. ಇವರಿಗೋಸ್ಕರ ನಿರ್ಮಾಪಕರು ವಿಶೇಷ ಊಟದ ವ್ಯವಸ್ಥೆ ಮಾಡಿದ್ದರು. ಊಟ ಸವಿದ ನಂತರದಲ್ಲಿ ಇಬ್ಬರೂ ರಾಜಕೀಯ ಹಾಗೂ ಸಿನಿಮಾ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಕೆಲ ಪ್ರಮುಖರು ಮಾತ್ರ ಅವರ ಜತೆ ಇದ್ದರು ಎಂದು ತಿಳಿದು ಬಂದಿದೆ.

ಸಾಮಾನ್ಯವಾಗಿ ಇಂಥ ಭೇಟಿ ನಡೆದರೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಸುದ್ದಿಯಾಗುತ್ತದೆ. ಫೋಟೋಗಳು ವೈರಲ್​ ಆಗುತ್ತವೆ. ಆದರೆ, ಇಬ್ಬರೂ ಹೀರೋಗಳು ಇದಕ್ಕೆ ಹೈಪ್​ ಕೊಡದಂತೆ ಸೂಚನೆ ನೀಡಿದ್ದಾರಂತೆ. ಇದೊಂದು ಸಾಮಾನ್ಯ ಭೇಟಿ. ಒಂದೊಮ್ಮೆ ಭೇಟಿಯಾದ ಫೋಟೋ ವೈರಲ್​ ಆದರೆ, ಅದಕ್ಕೆ ಬೇರೆ ಅರ್ಥ ಬರಬಹುದು ಎನ್ನುವುದು ಚಿತ್ರತಂಡದ ಲೆಕ್ಕಾಚಾರ. ಈ ಕಾರಣಕ್ಕೆ ಸಿನಿಮಾ ತಂಡ ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದು ಬಂದಿದೆ.

ಹೈದರಾಬಾದ್​ನಲ್ಲಿರುವುದರಿಂದ ಮೋಹನ್​ಲಾಲ್​ ಅವರು ತೆಲುಗು ಇಂಡಸ್ಟ್ರಿಯ ಸಾಕಷ್ಟು ಗೆಳೆಯರನ್ನು ಭೇಟಿ ಮಾಡುತ್ತಿದ್ದಾರೆ. ಮೋಹನ್​ ಬಾಬು ಅವರನ್ನು ಮೋಹನ್​ಲಾಲ್​ ಭೇಟಿ ಮಾಡಿದ್ದಾರೆ. ಮೋಹನ್​ಲಾಲ್​ ಹಾಗೂ ಚಿರಂಜೀವಿ ತುಂಬಾನೇ ಕ್ಲೋಸ್​ ಫ್ರೆಂಡ್ಸ್​. ಅವರನ್ನು ಭೇಟಿ ಮಾಡುವ ಆಲೋಚನೆ ಕೂಡ ಮೋಹನ್​ಲಾಲ್ ಹೊಂದಿದ್ದಾರೆ.

ಇದನ್ನೂ ಓದಿ: KGF Chapter 2: ಕೆಜಿಎಫ್​ 2 ಚಿತ್ರಕ್ಕೂ ಮೊದಲೇ ತೆಲುಗು ಸಿನಿಮಾ ಮೂಲಕ ತೆರೆ ಮೇಲೆ ಬರಲಿದ್ದಾರಂತೆ ಯಶ್! ಏನಿದು ಸರ್​ಪ್ರೈಸ್?

ವಿಜಯ್​ ದೇವರಕೊಂಡ ಡಿಮ್ಯಾಂಡ್​ಗೆ ಬೇಸತ್ತ ನಿರ್ದೇಶಕ; ಇದು ದುರಹಂಕಾರ ಎಂದ ಫ್ಯಾನ್ಸ್​

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್