ಇದು ನನ್ನ ಜೀವನದ ಎರಡನೇ ಅದ್ಭುತ ಜಯ ಎಂದ ಪವನ್ ಕಲ್ಯಾಣ್, ಮೊದಲ ಜಯ ಯಾವುದು?

ಪವನ್ ಕಲ್ಯಾಣ್ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ಇದು ಪವನ್​ಗೆ ರಾಜಕೀಯವಾಗಿ ಜನ್ಮ ನೀಡಿದ ಚುನಾವಣೆ ಎನ್ನಲಾಗುತ್ತಿದೆ. ಆದರೆ ಈ ಜಯವನ್ನು ತಮ್ಮ ಜೀವನದ ಎರಡನೇ ಅದ್ಭುತ ಜಯ ಎಂದಿದ್ದಾರೆ ಪವನ್. ಹಾಗಿದ್ದರೆ ಮೊದಲನೇ ಜಯ ಯಾವುದು?

ಇದು ನನ್ನ ಜೀವನದ ಎರಡನೇ ಅದ್ಭುತ ಜಯ ಎಂದ ಪವನ್ ಕಲ್ಯಾಣ್, ಮೊದಲ ಜಯ ಯಾವುದು?
Follow us
|

Updated on: Jun 05, 2024 | 3:22 PM

ಪವನ್ ಕಲ್ಯಾಣ್ (Pawan Kalyan) ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಜಯ ಸಾಧಿಸಿದ್ದಾರೆ. ಜನಸೇನಾ ಪಕ್ಷದ ಸಂಸ್ಥಾಪಕರಾದ ಪವನ್ ಕಲ್ಯಾಣ್, ಟಿಡಿಪಿ ಹಾಗೂ ಬಿಜೆಪಿ ಜೊತೆ ಸೇರಿ ಚುನಾವಣೆ ಎದುರಿಸಿದ್ದರು. ಈ ಚುನಾವಣೆಯಲ್ಲಿ ಅವರಿಗೆ 21 ಕ್ಷೇತ್ರಗಳನ್ನು ನೀಡಲಾಗಿತ್ತು. ಆ 21 ಕ್ಷೇತ್ರಗಳಲ್ಲಿಯೂ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದ್ದಾರೆ. ಆ ಮೂಲಕ ಭಾರಿ ರಾಜಕೀಯ ಜಯವನ್ನು ಪವನ್ ಪಡೆದಿದ್ದಾರೆ. ಪವನ್ ಪಾಲಿಗೆ ಇದು ಅಭೂತಪೂರ್ವ ಜಯ ಎನ್ನಲಾಗುತ್ತಿದೆ. ಇಲ್ಲಿಂದಲೇ ಪವನ್​ರ ರಾಜಕೀಯ ಪಯಣ ಪ್ರಾರಂಭವಾಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಪವನ್ ಕಲ್ಯಾಣ್ ಮಾತ್ರ, ಈ ಜಯ ತಮ್ಮ ಪಾಲಿಗೆ ಎರಡನೇ ಅದ್ಭುತ ಜಯ ಎಂದಿದ್ದಾರೆ.

ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಮಾತನಾಡಿರುವ ಪವನ್ ಕಲ್ಯಾಣ್, ‘ನನಗೆ ಏನು ಮಾತನಾಡಬೇಕು ಎಂಬುದು ಸಹ ತಿಳಿಯುತ್ತಿಲ್ಲ. ನನ್ನ ಜೀವನದಲ್ಲಿ ಈವರೆಗೆ ಬಹಳ ದೊಡ್ಡ ಜಯಗಳನ್ನೇನೂ ನಾನು ಪಡೆದಿಲ್ಲ. ಸಿನಿಮಾಗಳಲ್ಲಿ ನಟಿಸುವಾಗ ‘ತೊಲಿ ಪ್ರೇಮ’ ಎಂಬ ಸಿನಿಮಾ ಮಾಡಿದ್ದೆ. ಆಗ ಭಾರಿ ಗೆಲುವನ್ನು ನೋಡಿದ್ದೆ. ಅದಾದ ಬಳಿಕ ಯಾರೊಬ್ಬರೂ ಬಂದು ನೀನು ಗೆದ್ದಿದ್ದೀಯ, ನಿನ್ನ ಸಿನಿಮಾ ಭಾರಿ ದೊಡ್ಡ ಗೆಲುವು ಕಂಡಿದೆ, ಹಣ ಬಂದಿದೆ ಎಂದು ಹೇಳಿರಲಿಲ್ಲ’ ಎಂದಿದ್ದಾರೆ.

‘ನನ್ನ ಜೀವನದಲ್ಲಿ ಹೊಡೆತ ತಿಂದಿದ್ದೀನಿ, ಬೈಗುಳಗಳನ್ನು ಕೇಳಿಸಿಕೊಂಡಿದ್ದೀನಿ, ಬಿದ್ದಿದ್ದೀನಿ, ಎದ್ದಿದ್ದೀನಿ. ಅದೆಷ್ಟು ಎತ್ತರಕ್ಕೆ ಬೆಳಿದ್ದೀನಿ ಎಂಬುದು ಸಹ ನನಗೆ ಗೊತ್ತಿಲ್ಲ. ನಿಮ್ಮ ಹೃದಯಗಳಲ್ಲಿ ನನ್ನನ್ನು ಕೂರಿಸಿಕೊಂಡು 21 ಕ್ಕೆ 21 ಕ್ಷೇತ್ರಗಳನ್ನು ನನಗೆ ಗೆಲ್ಲಿಸಿಕೊಟ್ಟಿದ್ದೀರಿ. ಈ ಗೆಲುವು ಬಂದ ಬಳಿಕವೇ ನನಗೆ ಗೊತ್ತಾಗುತ್ತಿದೆ. ನೀವು ನನ್ನನ್ನು ಎಷ್ಟು ಪ್ರೀತಿಸಿದ್ದೀರೆಂದು’ ಎಂದು ಪವನ್ ಕಲ್ಯಾಣ್ ಭಾವುಕರಾಗಿ ಹೇಳಿದ್ದಾರೆ.

ಇದನ್ನೂ ಓದಿ:ಚುನಾವಣೆಯಲ್ಲಿ ಗೆದ್ದ ಪವನ್ ಕಲ್ಯಾಣ್​ಗೆ ಪತ್ನಿಯಿಂದ ವೀರತಿಲಕ

ಪವನ್ ಕಲ್ಯಾಣ್, ಅವರ ಅಣ್ಣ ಚಿರಂಜೀವಿ ಪ್ರಜಾರಾಜ್ಯಂ ರಾಜಕೀಯ ಪಕ್ಷ ಸ್ಥಾಪಿಸಿದಾಗ ಅದರ ಯುವಘಟಕದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಆದರೆ ಚಿರಂಜೀವಿ ಗೆ ರಾಜಕೀಯದಲ್ಲಿ ದೊಡ್ಡ ಗೆಲುವು ಧಕ್ಕಲಿಲ್ಲ. ಕೊನೆಗೆ ಪವನ್ ಕಲ್ಯಾಣ್ ಜನಸೇನಾ ಪಕ್ಷ ಸ್ಥಾಪಿಸಿ ರಾಜಕೀಯಕ್ಕೆ ಧುಮುಕಿದರು. ಕಳೆದ ಚುನಾವಣೆಯಲ್ಲಿ ಜನಸೇನಾದ ಒಬ್ಬ ಅಭ್ಯರ್ಥಿ ಸಹ ಗೆದ್ದಿರಲಿಲ್ಲ. ಸ್ವತಃ ಎರಡು ಕ್ಷೇತ್ರದಿಂದ ಚುನಾವಣೆಗೆ ನಿಂತಿದ್ದ ಪವನ್ ಸಹ ಎರಡೂ ಕಡೆ ಸೋತಿದ್ದರು. ಆದರೆ ಈ ಬಾರಿ 21 ಕ್ಷೇತ್ರದಲ್ಲಿ ಮಾತ್ರವೇ ಜನಸೇನಾ ಅಭ್ಯರ್ಥಿಗಳು ಸ್ಪರ್ಧಿಸಿ ಆ 21 ಕ್ಷೇತ್ರಗಳಲ್ಲಿಯೂ ಜನಸೇನಾ ಅಭ್ಯರ್ಥಿಗಳು ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ.

ಆಂಧ್ರದಲ್ಲಿ ಜಗನ್ ಸರ್ಕಾರವನ್ನು ತೆರವುಗೊಳಿಸಬೇಕೆಂಬ ಸಿಂಗಲ್ ಅಜೆಂಡ ಮೂಲಕ ಈ ಬಾರಿ ಪವನ್ ಚುನಾವಣೆಗೆ ಇಳಿದಿದ್ದರು, ಅದರಂತೆ ತಮ್ಮ ಗುರಿಯನ್ನು ಸಾಧಿಸಿದ್ದಾರೆ. ಆಂಧ್ರದ ಹೊಸ ಸಿಎಂ ಆಗಿ ಚಂದ್ರಬಾಬು ನಾಯ್ಡು ಜೂನ್ 9ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪವನ್ ಕಲ್ಯಾಣ್​ಗೆ ಆಂಧ್ರ ಸರ್ಕಾರದಲ್ಲಿ ಪ್ರಬಲವಾದ ಸಚಿವ ಸ್ಥಾನವೇ ಸಿಗಬಹುದು ಎಂಬ ನಿರೀಕ್ಷೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ
ಕಾಶ್ಮೀರವನ್ನು ಪಾಕಿಸ್ತಾನವಾಗಲು ಬಿಡುವುದಿಲ್ಲ: ಫಾರೂಕ್ ಅಬ್ದುಲ್ಲಾ
ಕಾಶ್ಮೀರವನ್ನು ಪಾಕಿಸ್ತಾನವಾಗಲು ಬಿಡುವುದಿಲ್ಲ: ಫಾರೂಕ್ ಅಬ್ದುಲ್ಲಾ
ಚನ್ನಪಟ್ಟಣ ಉಪ ಚುನಾವಣೆ: ಕಾಂಗ್ರೆಸ್ ಟಿಕೆಟ್ ಆಫರ್ ಬಗ್ಗೆ ಯೋಗೇಶ್ವರ್ ಮಾತು
ಚನ್ನಪಟ್ಟಣ ಉಪ ಚುನಾವಣೆ: ಕಾಂಗ್ರೆಸ್ ಟಿಕೆಟ್ ಆಫರ್ ಬಗ್ಗೆ ಯೋಗೇಶ್ವರ್ ಮಾತು
ಕಳೆದ ಸೀಸನ್ ಅವಾಂತರ ಮತ್ತೆ ರಿಪೀಟ್; ಟಾಸ್ಕ್​ ವೇಳೆ ಮಿತಿಮೀರಿತು ಕ್ರೌರ್ಯ
ಕಳೆದ ಸೀಸನ್ ಅವಾಂತರ ಮತ್ತೆ ರಿಪೀಟ್; ಟಾಸ್ಕ್​ ವೇಳೆ ಮಿತಿಮೀರಿತು ಕ್ರೌರ್ಯ
Daily Devotional: ವೀಳ್ಯದೆಲೆಯ ಮಹತ್ವ ಹಾಗೂ ಅದರ ಉಪಯೋಗಗಳು ತಿಳಿಯಿರಿ
Daily Devotional: ವೀಳ್ಯದೆಲೆಯ ಮಹತ್ವ ಹಾಗೂ ಅದರ ಉಪಯೋಗಗಳು ತಿಳಿಯಿರಿ
ಈ ರಾಶಿಯ ಮಹಿಳೆಯರು ಇಂದು ಹೂಡಿಕೆ ಮಾಡಿದರೆ ಒಳ್ಳೆ ಲಾಭ ಬರುವುದು
ಈ ರಾಶಿಯ ಮಹಿಳೆಯರು ಇಂದು ಹೂಡಿಕೆ ಮಾಡಿದರೆ ಒಳ್ಳೆ ಲಾಭ ಬರುವುದು