AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲಾರ್​ ಬಳಿಕ ಕಾದಿದೆ ಸರ್ಪ್ರೈಸ್​; ಪ್ರಭಾಸ್​ ಜೊತೆ ಇಂಥ ಸಿನಿಮಾನೂ ಮಾಡ್ತಾರಾ ಪ್ರಶಾಂತ್​ ನೀಲ್​?

ಸಲಾರ್​ ಬಳಿಕ ಮತ್ತೊಂದು ಸಿನಿಮಾದಲ್ಲೂ ಪ್ರಶಾಂತ್​ ನೀಲ್​ ಮತ್ತು ಪ್ರಭಾಸ್​ ಒಂದಾಗುತ್ತಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಆ ಹೊಸ ಚಿತ್ರಕ್ಕೆ ಟಾಲಿವುಡ್​ನ ಖ್ಯಾತ ನಿರ್ಮಾಪಕ ದಿಲ್​ ರಾಜು ಬಂಡವಾಳ ಹೂಡಲಿದ್ದಾರೆ.

ಸಲಾರ್​ ಬಳಿಕ ಕಾದಿದೆ ಸರ್ಪ್ರೈಸ್​; ಪ್ರಭಾಸ್​ ಜೊತೆ ಇಂಥ ಸಿನಿಮಾನೂ ಮಾಡ್ತಾರಾ ಪ್ರಶಾಂತ್​ ನೀಲ್​?
ಪ್ರಶಾಂತ್​ ನೀಲ್​ - ಪ್ರಭಾಸ್​
Follow us
ಮದನ್​ ಕುಮಾರ್​
|

Updated on:Jun 10, 2021 | 8:10 AM

ನಿರ್ದೇಶಕ ಪ್ರಶಾಂತ್​ ನೀಲ್​ ಅವರಿಗೆ ದೇಶಾದ್ಯಂತ ಡಿಮ್ಯಾಂಡ್​ ಹೆಚ್ಚಿದೆ. ‘ಕೆಜಿಎಫ್​: ಚಾಪ್ಟರ್​ 2’ ಬಿಡುಗಡೆಗೂ ಮುನ್ನವೇ ಅವರು ಹಲವು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಪರಭಾಷೆಯ ಘಟಾನುಘಟಿ ನಟರ ಚಿತ್ರಗಳಿಂದ ಪ್ರಶಾಂತ್ ನೀಲ್​ಗೆ ಬೇಡಿಕೆ ಬಂದಿದೆ. ಈಗಾಗಲೇ ಅವರು ಪ್ರಭಾಸ್​ ಜೊತೆ ‘ಸಲಾರ್​’ ಮಾಡುತ್ತಿದ್ದಾರೆ. ಬಳಿಕ ಜ್ಯೂ. ಎನ್​ಟಿಆರ್​ ಜೊತೆಗೆ ಸಿನಿಮಾ ಮಾಡುವುದು ಕೂಡ ಪಕ್ಕಾ ಆಗಿದೆ. ಈಗ ಇನ್ನೊಂದು ಇಂಟರೆಸ್ಟಿಂಗ್​ ನ್ಯೂಸ್​ ಕೇಳಿಬಂದಿದೆ.

ಸದ್ಯ ಸಲಾರ್​ ಚಿತ್ರದ ಮೇಲೆ ಪ್ರಶಾಂತ್​ ನೀಲ್​ ಅವರ ಗಮನ ಇದೆ. ಅಚ್ಚರಿ ಎಂದರೆ ಸಲಾರ್​ ಮಾತ್ರವಲ್ಲದೆ, ಮತ್ತೊಂದು ಸಿನಿಮಾದಲ್ಲೂ ಪ್ರಶಾಂತ್​ ನೀಲ್​ ಮತ್ತು ಪ್ರಭಾಸ್​ ಒಂದಾಗುತ್ತಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಆ ಹೊಸ ಚಿತ್ರಕ್ಕೆ ಟಾಲಿವುಡ್​ನ ಖ್ಯಾತ ನಿರ್ಮಾಪಕ ದಿಲ್​ ರಾಜು ಬಂಡವಾಳ ಹೂಡಲಿದ್ದಾರೆ. ಅದು ಪೌರಾಣಿಕ ಸಿನಿಮಾ ಆಗಿರಲಿದೆ ಎಂಬುದು ವಿಶೇಷ.

ಉಗ್ರಂ ಮತ್ತು ಕೆಜಿಎಫ್​ ಚಿತ್ರಗಳಲ್ಲಿ ರಗಡ್​ ಆದಂತಹ ಕಥೆಗಳನ್ನು ಹೇಳಿರುವ ಪ್ರಶಾಂತ್​ ನೀಲ್ ಅವರು ಪೌರಾಣಿಕ ಸಿನಿಮಾವನ್ನೂ ಹ್ಯಾಂಡಲ್​ ಮಾಡಬಲ್ಲರಾ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿದೆ. ಅದರಲ್ಲೂ ನಿರ್ದಿಷ್ಟವಾಗಿ ಅವರು ಯಾವ ಕಥೆಯನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಗಮನಿಸಬೇಕಾದ ಅಂಶ ಏನೆಂದರೆ, ಈ ಸಿನಿಮಾ ಬಾಹುಬಲಿಗಿಂತಲೂ ದೊಡ್ಡ ಕ್ಯಾನ್ವಾಸ್​ನಲ್ಲಿ ಮೂಡಿಬರಲಿದೆಯಂತೆ.

ಈ ಚಿತ್ರಕ್ಕಾಗಿ ದೊಡ್ಡ ಮಟ್ಟದ ಪ್ರೀ ಪ್ರೊಡಕ್ಷನ್​ ಕೆಲಸಗಳು ಆಗಬೇಕಿದೆ. ಬೃಹತ್​ ಸೆಟ್​ಗಳು ನಿರ್ಮಾಣ ಆಗಬೇಕಿದೆ. ಆದರೆ ಅದೆಲ್ಲದಕ್ಕೂ ಮುನ್ನ ಪ್ರಭಾಸ್​ ಮತ್ತು ಪ್ರಶಾಂತ್ ನೀಲ್​ ಅವರು ಈಗಿರುವ ಕಮಿಟ್​ಮೆಂಟ್​ಗಳನ್ನು ಮುಗಿಸಿಕೊಳ್ಳಬೇಕಿದೆ. ಸಲಾರ್​, ರಾಧೆ ಶ್ಯಾಮ್​, ಆದಿಪುರುಷ್​ ಸಿನಿಮಾ ಕೆಲಸಗಳಲ್ಲಿ ಪ್ರಭಾಸ್​ ಬ್ಯುಸಿ ಇದ್ದಾರೆ. ಅವರು ಪ್ರಶಾಂತ್ ನೀಲ್​ ಜೊತೆ ಮಾಡಲಿರುವ ಈ ಪೌರಾಣಿಕ ಚಿತ್ರ ಅವರ 25ನೇ ಸಿನಿಮಾ ಆಗಲಿದೆ ಎಂಬ ಸುದ್ದಿ ಕೇಳಿಬಂದಿದೆ. ಈ ಬಗ್ಗೆ ಮಾತುಕಥೆಗಳು ನಡೆಯುತ್ತಿದ್ದು, ಚಿತ್ರತಂಡದವರಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಇದನ್ನೂ ಓದಿ:

ಪ್ರಶಾಂತ್​ ನೀಲ್​ ಜನ್ಮದಿನ; ಪ್ರೀತಿಯಿಂದ ಶುಭಕೋರಿದ ಜ್ಯೂ. ಎನ್​ಟಿಆರ್​ ಕಾಯುತ್ತಿರುವುದು ಆ ಒಂದು ಕ್ಷಣಕ್ಕಾಗಿ

ಲಸಿಕೆ ಪಡೆದ ಆ ಯುವಕನ ರೀತಿಯೇ ವೈರಲ್​ ಆಯ್ತು ಪ್ರಶಾಂತ್​ ನೀಲ್ ಫೋಟೋ​; ಆದರೆ ಕಾರಣ ಬೇರೆ

Published On - 8:06 am, Thu, 10 June 21

ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿದ ಯುವಕ
ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿದ ಯುವಕ
ನನ್ನ ಪತ್ರ ಸಿಎಂ ಏನು ಮಾಡಬೇಕೆಂದು ಕುಮಾರಸ್ವಾಮಿ ಹೇಳಬೇಕಿಲ್ಲ: ಪಾಟೀಲ್
ನನ್ನ ಪತ್ರ ಸಿಎಂ ಏನು ಮಾಡಬೇಕೆಂದು ಕುಮಾರಸ್ವಾಮಿ ಹೇಳಬೇಕಿಲ್ಲ: ಪಾಟೀಲ್
ಅಬ್ಬಬ್ಬಾ...ಒಂದೇ ಬೈಕ್​​ ನಲ್ಲಿ 5 ಜನ ಸವಾರಿ, ಈ ವಿಡಿಯೋ ನೋಡ್ರಿ
ಅಬ್ಬಬ್ಬಾ...ಒಂದೇ ಬೈಕ್​​ ನಲ್ಲಿ 5 ಜನ ಸವಾರಿ, ಈ ವಿಡಿಯೋ ನೋಡ್ರಿ
ಗಮನಸೆಳೆದ ಶತಾಯುಷಿ ಅಜ್ಜಿಯ 100ನೇ ಬರ್ತಡೇ ಸಂಭ್ರಮಾಚರಣೆ
ಗಮನಸೆಳೆದ ಶತಾಯುಷಿ ಅಜ್ಜಿಯ 100ನೇ ಬರ್ತಡೇ ಸಂಭ್ರಮಾಚರಣೆ
ರಾಷ್ಟ್ರಪತಿಯವರನ್ನು ಭೇಟಿಯಾಗಿ ಮಸೂದೆಗಳ ಅನುಮೋದನೆ ಜ್ಞಾಪಿಸಿದೆವು: ಸಿಎಂ
ರಾಷ್ಟ್ರಪತಿಯವರನ್ನು ಭೇಟಿಯಾಗಿ ಮಸೂದೆಗಳ ಅನುಮೋದನೆ ಜ್ಞಾಪಿಸಿದೆವು: ಸಿಎಂ
ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು: ಸಚಿವ
ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು: ಸಚಿವ
ಈಗ ಅನುಮತಿ ನೀಡಿದರೆ ಏನು ಪ್ರಯೋಜನ? ಪತ್ರಕ್ಕೆ ಉತ್ತರ ಕೂಡ ಇಲ್ಲ: ಖರ್ಗೆ
ಈಗ ಅನುಮತಿ ನೀಡಿದರೆ ಏನು ಪ್ರಯೋಜನ? ಪತ್ರಕ್ಕೆ ಉತ್ತರ ಕೂಡ ಇಲ್ಲ: ಖರ್ಗೆ
ಗುತ್ತಿಗೆದಾರನ ಹತ್ಯೆ: ಕೊಚ್ಚಿ ಕೊಲ್ಲುತ್ತಿರುವ ಭಯಾನಕ ದೃಶ್ಯ ಇಲ್ಲಿದೆ!
ಗುತ್ತಿಗೆದಾರನ ಹತ್ಯೆ: ಕೊಚ್ಚಿ ಕೊಲ್ಲುತ್ತಿರುವ ಭಯಾನಕ ದೃಶ್ಯ ಇಲ್ಲಿದೆ!
ರೀಲ್ಸ್ ಮಾಡುತ್ತಿದ್ದ ಯುವತಿಗೆ ಮಾಡೆಲಿಂಗ್​ನಲ್ಲಿ ಆಸಕ್ತಿಯಿತ್ತು: ಸಂಬಂಧಿ
ರೀಲ್ಸ್ ಮಾಡುತ್ತಿದ್ದ ಯುವತಿಗೆ ಮಾಡೆಲಿಂಗ್​ನಲ್ಲಿ ಆಸಕ್ತಿಯಿತ್ತು: ಸಂಬಂಧಿ
ನನ್ನನ್ನು ರಾಜನಾಗಿ ಮೆರೆಸಿದ್ದು ಹಂಸಲೇಖ: ರವಿಚಂದ್ರನ್
ನನ್ನನ್ನು ರಾಜನಾಗಿ ಮೆರೆಸಿದ್ದು ಹಂಸಲೇಖ: ರವಿಚಂದ್ರನ್