ಶುಭಾ ಬಳಿ ಇರುವ ಅಮೂಲ್ಯ ವಸ್ತು ಕದಿಯಲು ಸಂಬರಗಿ ಪ್ಲ್ಯಾನ್​; ಮಂಜು ಕೊಟ್ರು ಎಚ್ಚರಿಕೆ

ಇತ್ತೀಚೆಗೆ ಶಮಂತ್​ ಬಳಿ ಕುಳಿತಿದ್ದಾಗ ಮಾತನಾಡಿದ್ದ ಪ್ರಶಾಂತ್​, ಗೋಲ್ಡನ್​ ಪಾಸ್​ ಶುಭಾ ಬಳಿ ಇದೆ. ಅದನ್ನು ಹೇಗಾದರೂ ಮಾಡಿ ಎತ್ತಬೇಕು ಎಂದು ಹೇಳಿಕೊಂಡಿದ್ದರು.

ಶುಭಾ ಬಳಿ ಇರುವ ಅಮೂಲ್ಯ ವಸ್ತು ಕದಿಯಲು ಸಂಬರಗಿ ಪ್ಲ್ಯಾನ್​; ಮಂಜು ಕೊಟ್ರು ಎಚ್ಚರಿಕೆ
ಶುಭಾ ಫೂಂಜಾ
Follow us
|

Updated on: Apr 30, 2021 | 3:39 PM

ಬಿಗ್​ ಬಾಸ್​ ಮನೆ ನಿತ್ಯ ಒಂದಿಲ್ಲೊಂದು ಹೊಸ ಬೆಳವಣಿಗೆಗೆ ಸಾಕ್ಷಿ ಆಗುತ್ತಲೇ ಇರುತ್ತದೆ. ಈಗ ಶುಭಾ ಪೂಂಜಾ ಬಳಿ ಇರುವ ಅತ್ಯಮೂಲ್ಯ ವಸ್ತುವನ್ನು ಕದಿಯಲು ಪ್ರಶಾಂತ್​ ಸಂಬರಗಿ ಪ್ಲ್ಯಾನ್​ ರೂಪಿಸಿದ್ದಾರೆ. ಮಂಜು ಪಾವಗಡಗೆ ಇದರ ಮುನ್ಸೂಚನೆ ಸಿಕ್ಕಿದೆ. ಅಲ್ಲದೆ, ಈ ವಿಚಾರದಲ್ಲಿ ಶುಭಾಗೆ ಎಚ್ಚರಿಕೆ ನೀಡಿದ್ದಾರೆ.

ಬಸ್​ ಟಾಸ್ಕ್​​ನಲ್ಲಿ ಗೆದ್ದವರಿಗೆ ಗೋಲ್ಡನ್​ ಪಾಸ್​ ಸಿಗುತ್ತಿತ್ತು. ಈ ಗೋಲ್ಡನ್​ ಪಾಸ್​ ತುಂಬಾನೇ ಮಹತ್ವ ಪಡೆದುಕೊಂಡಿದೆ. ಯಾವಾಗಲಾದರೂ ಎಲಿಮಿನೇಷನ್​ಗೆ ನಾಮಿನೇಟ್​ ಆದರೆ ಈ ಪಾಸ್​ ಬಳಕೆ ಮಾಡಿಕೊಳ್ಳಬಹುದು. ಈ ಮೂಲಕ ಎಲಿಮಿನೇಷನ್​ ತೂಗುಗತ್ತಿಯಿಂದ ಬಚಾವ್​ ಆಗಬಹುದು. ಟಾಸ್ಕ್​ನಲ್ಲಿ ಗೆದ್ದು ರಾಜೀವ್​ ಗೋಲ್ಡನ್​ ಪಾಸ್​ ತೆಗೆದುಕೊಂಡಿದ್ದರು. ಆದರೆ, ಅದನ್ನು ಅವರು ಬಳಕೆ ಮಾಡಿಕೊಂಡಿರಲಿಲ್ಲ. ಹೀಗಾಗಿ, ಎಲಿಮಿನೇಟ್​ ಆದರು. ಎಂಟನೇ ವಾರ ಅವರು ಎಲಿಮಿನೇಷನ್​ ಆಗಿ ಹೊರ ಹೋಗುವಾಗ ಈ ಪಾಸ್​ಅನ್ನು ಶುಭಾಗೆ ನೀಡಿ ತೆರಳಿದ್ದರು.

ಶುಭಾ ಈ ಗೋಲ್ಡನ್​ ಪಾಸ್ಅನ್ನು ಬ್ಯಾಗ್​ನಲ್ಲಿ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಶಮಂತ್​ ಬಳಿ ಕುಳಿತಿದ್ದಾಗ ಮಾತನಾಡಿದ್ದ ಪ್ರಶಾಂತ್​, ಗೋಲ್ಡನ್​ ಪಾಸ್​ ಶುಭಾ ಬಳಿ ಇದೆ. ಅದನ್ನು ಹೇಗಾದರೂ ಮಾಡಿ ಎತ್ತಬೇಕು ಎಂದು ಹೇಳಿಕೊಂಡಿದ್ದರು.

ಇದರ ಸೂಚನೆ ಮಂಜು ಪಾವಗಡಗೆ ಸಿಕ್ಕಂತೆ ಕಾಣುತ್ತಿದೆ. ಹೀಗಾಗಿ ಶುಭಾ ಅವರನ್ನು ಕರೆದು ಕಿವಿಮಾತು ಹೇಳಿದ್ದಾರೆ. ಗೋಲ್ಡನ್​ ಪಾಸ್​ ಸರಿಯಾಗಿ ಇಟ್ಟುಕೋ. ಮನೆಯಲ್ಲಿ ಯಾರನ್ನೂ ನಂಬೋಕೆ ಆಗೋದಿಲ್ಲ. ನಿಯಮದಲ್ಲಿ ಅದನ್ನು ಕದಿಯಬಹುದು ಎಂದಿದೆ. ಹೀಗಾಗಿ, ಅದನ್ನು ಜೋಪಾನ ಮಾಡಿಟ್ಟುಕೊಂಡಷ್ಟು ಒಳ್ಳೆಯದು ಎಂದಿದ್ದಾರೆ. ಶುಭಾಗೆ ಇದು ಹೌದೆನ್ನಿಸಿ ತಲೆಯಾಡಿಸಿದ್ದಾರೆ.

ಇದನ್ನೂ ಓದಿ:  Kichcha Sudeep Health update: ಆರೋಗ್ಯ ಮತ್ತು ಬಿಗ್​ ಬಾಸ್​ ಬಗ್ಗೆ ಗುಡ್​ ನ್ಯೂಸ್​ ಕೊಟ್ಟ ಕಿಚ್ಚ ಸುದೀಪ್​

ಆಪ್ತ ಚಂದ್ರಚೂಡ್​ ವಿರುದ್ಧವೇ ತಿರುಗಿಬಿದ್ದ ಪ್ರಶಾಂತ್​ ಸಂಬರಗಿ; ಬಿಗ್​ ಬಾಸ್​ ಮನೆಯಲ್ಲಿ 36 ಗಂಟೆಗಳ ಉಪವಾಸ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ