AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುಭಾ ಬಳಿ ಇರುವ ಅಮೂಲ್ಯ ವಸ್ತು ಕದಿಯಲು ಸಂಬರಗಿ ಪ್ಲ್ಯಾನ್​; ಮಂಜು ಕೊಟ್ರು ಎಚ್ಚರಿಕೆ

ಇತ್ತೀಚೆಗೆ ಶಮಂತ್​ ಬಳಿ ಕುಳಿತಿದ್ದಾಗ ಮಾತನಾಡಿದ್ದ ಪ್ರಶಾಂತ್​, ಗೋಲ್ಡನ್​ ಪಾಸ್​ ಶುಭಾ ಬಳಿ ಇದೆ. ಅದನ್ನು ಹೇಗಾದರೂ ಮಾಡಿ ಎತ್ತಬೇಕು ಎಂದು ಹೇಳಿಕೊಂಡಿದ್ದರು.

ಶುಭಾ ಬಳಿ ಇರುವ ಅಮೂಲ್ಯ ವಸ್ತು ಕದಿಯಲು ಸಂಬರಗಿ ಪ್ಲ್ಯಾನ್​; ಮಂಜು ಕೊಟ್ರು ಎಚ್ಚರಿಕೆ
ಶುಭಾ ಫೂಂಜಾ
ರಾಜೇಶ್ ದುಗ್ಗುಮನೆ
|

Updated on: Apr 30, 2021 | 3:39 PM

Share

ಬಿಗ್​ ಬಾಸ್​ ಮನೆ ನಿತ್ಯ ಒಂದಿಲ್ಲೊಂದು ಹೊಸ ಬೆಳವಣಿಗೆಗೆ ಸಾಕ್ಷಿ ಆಗುತ್ತಲೇ ಇರುತ್ತದೆ. ಈಗ ಶುಭಾ ಪೂಂಜಾ ಬಳಿ ಇರುವ ಅತ್ಯಮೂಲ್ಯ ವಸ್ತುವನ್ನು ಕದಿಯಲು ಪ್ರಶಾಂತ್​ ಸಂಬರಗಿ ಪ್ಲ್ಯಾನ್​ ರೂಪಿಸಿದ್ದಾರೆ. ಮಂಜು ಪಾವಗಡಗೆ ಇದರ ಮುನ್ಸೂಚನೆ ಸಿಕ್ಕಿದೆ. ಅಲ್ಲದೆ, ಈ ವಿಚಾರದಲ್ಲಿ ಶುಭಾಗೆ ಎಚ್ಚರಿಕೆ ನೀಡಿದ್ದಾರೆ.

ಬಸ್​ ಟಾಸ್ಕ್​​ನಲ್ಲಿ ಗೆದ್ದವರಿಗೆ ಗೋಲ್ಡನ್​ ಪಾಸ್​ ಸಿಗುತ್ತಿತ್ತು. ಈ ಗೋಲ್ಡನ್​ ಪಾಸ್​ ತುಂಬಾನೇ ಮಹತ್ವ ಪಡೆದುಕೊಂಡಿದೆ. ಯಾವಾಗಲಾದರೂ ಎಲಿಮಿನೇಷನ್​ಗೆ ನಾಮಿನೇಟ್​ ಆದರೆ ಈ ಪಾಸ್​ ಬಳಕೆ ಮಾಡಿಕೊಳ್ಳಬಹುದು. ಈ ಮೂಲಕ ಎಲಿಮಿನೇಷನ್​ ತೂಗುಗತ್ತಿಯಿಂದ ಬಚಾವ್​ ಆಗಬಹುದು. ಟಾಸ್ಕ್​ನಲ್ಲಿ ಗೆದ್ದು ರಾಜೀವ್​ ಗೋಲ್ಡನ್​ ಪಾಸ್​ ತೆಗೆದುಕೊಂಡಿದ್ದರು. ಆದರೆ, ಅದನ್ನು ಅವರು ಬಳಕೆ ಮಾಡಿಕೊಂಡಿರಲಿಲ್ಲ. ಹೀಗಾಗಿ, ಎಲಿಮಿನೇಟ್​ ಆದರು. ಎಂಟನೇ ವಾರ ಅವರು ಎಲಿಮಿನೇಷನ್​ ಆಗಿ ಹೊರ ಹೋಗುವಾಗ ಈ ಪಾಸ್​ಅನ್ನು ಶುಭಾಗೆ ನೀಡಿ ತೆರಳಿದ್ದರು.

ಶುಭಾ ಈ ಗೋಲ್ಡನ್​ ಪಾಸ್ಅನ್ನು ಬ್ಯಾಗ್​ನಲ್ಲಿ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಶಮಂತ್​ ಬಳಿ ಕುಳಿತಿದ್ದಾಗ ಮಾತನಾಡಿದ್ದ ಪ್ರಶಾಂತ್​, ಗೋಲ್ಡನ್​ ಪಾಸ್​ ಶುಭಾ ಬಳಿ ಇದೆ. ಅದನ್ನು ಹೇಗಾದರೂ ಮಾಡಿ ಎತ್ತಬೇಕು ಎಂದು ಹೇಳಿಕೊಂಡಿದ್ದರು.

ಇದರ ಸೂಚನೆ ಮಂಜು ಪಾವಗಡಗೆ ಸಿಕ್ಕಂತೆ ಕಾಣುತ್ತಿದೆ. ಹೀಗಾಗಿ ಶುಭಾ ಅವರನ್ನು ಕರೆದು ಕಿವಿಮಾತು ಹೇಳಿದ್ದಾರೆ. ಗೋಲ್ಡನ್​ ಪಾಸ್​ ಸರಿಯಾಗಿ ಇಟ್ಟುಕೋ. ಮನೆಯಲ್ಲಿ ಯಾರನ್ನೂ ನಂಬೋಕೆ ಆಗೋದಿಲ್ಲ. ನಿಯಮದಲ್ಲಿ ಅದನ್ನು ಕದಿಯಬಹುದು ಎಂದಿದೆ. ಹೀಗಾಗಿ, ಅದನ್ನು ಜೋಪಾನ ಮಾಡಿಟ್ಟುಕೊಂಡಷ್ಟು ಒಳ್ಳೆಯದು ಎಂದಿದ್ದಾರೆ. ಶುಭಾಗೆ ಇದು ಹೌದೆನ್ನಿಸಿ ತಲೆಯಾಡಿಸಿದ್ದಾರೆ.

ಇದನ್ನೂ ಓದಿ:  Kichcha Sudeep Health update: ಆರೋಗ್ಯ ಮತ್ತು ಬಿಗ್​ ಬಾಸ್​ ಬಗ್ಗೆ ಗುಡ್​ ನ್ಯೂಸ್​ ಕೊಟ್ಟ ಕಿಚ್ಚ ಸುದೀಪ್​

ಆಪ್ತ ಚಂದ್ರಚೂಡ್​ ವಿರುದ್ಧವೇ ತಿರುಗಿಬಿದ್ದ ಪ್ರಶಾಂತ್​ ಸಂಬರಗಿ; ಬಿಗ್​ ಬಾಸ್​ ಮನೆಯಲ್ಲಿ 36 ಗಂಟೆಗಳ ಉಪವಾಸ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ