AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prashanth Sambargi: ಹನ್ನೆರಡನೇ ವಾರಕ್ಕೆ ಬಿಗ್​ ಬಾಸ್​ ಆಟ ಮುಗಿಸಿ ಮನೆಯಿಂದ ಹೊರ ನಡೆದ ಪ್ರಶಾಂತ್‌ ಸಂಬರ್ಗಿ

ಬಿಗ್​ ಬಾಸ್ ಸೀಸನ್​ 9 ಹನ್ನೆರಡನೇ ವಾರಕ್ಕೆ ಕಾಲಿಟ್ಟಿದ್ದು, ಈ ವಾರ ದೊಡ್ಮನೆಯಿಂದ ಪ್ರಶಾಂತ್‌ ಸಂಬರ್ಗಿ ಅವರು ಹೊರ ನಡೆದಿದ್ದಾರೆ.

Prashanth Sambargi: ಹನ್ನೆರಡನೇ ವಾರಕ್ಕೆ ಬಿಗ್​ ಬಾಸ್​ ಆಟ ಮುಗಿಸಿ ಮನೆಯಿಂದ ಹೊರ ನಡೆದ ಪ್ರಶಾಂತ್‌ ಸಂಬರ್ಗಿ
ಪ್ರಶಾಂತ್‌ ಸಂಬರ್ಗಿ 
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Dec 11, 2022 | 10:32 PM

‘ಬಿಗ್​ ಬಾಸ್​ ಸೀಸನ್​ 9’ (BBK9) ಸದ್ಯ ಹನ್ನೆರಡನೇ ವಾರಕ್ಕೆ ಕಾಲಿಟ್ಟಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶೋ ಮುಕ್ತಾಯ ಹಂತ ಕೂಡ ತಲುಪಲಿದೆ. ಹೀಗಿರುವಾಗ ದೊಡ್ಮನೆಯಿಂದ ಒಬ್ಬೊಬರಾಗಿ ಸ್ಪರ್ಧಿಗಳು ಹೊರ ಹೋಗುತ್ತಿದ್ದಾರೆ. ಕಳೆದ ವಾರದಲ್ಲಿ ‘ಮಂಗಳಗೌರಿ ಮದುವೆ’ ಧಾರಾವಾಹಿ ಖ್ಯಾತಿಯ ಕಾವ್ಯಶ್ರೀ ಗೌಡ ಅವರು ಬಿಗ್​ ಬಾಸ್​ ಮನೆಯಿಂದ ಔಟ್​ ಆಗಿದ್ದರು. ಸದ್ಯ ಈ ವಾರ ನಟ ಕಿಚ್ಚ ಸುದೀಪ್​ ಅವರು ದೊಡ್ಮನೆಯಿಂದ ಯಾರನ್ನ ಹೊರೆಗೆ ಕರೆಯುತ್ತಾರೆ ಮತ್ತು ಯಾರು ಹೋಗಬಹುದು ಎಂಬ ಕುತೂಹಲ ಬಿಗ್​ ಬಾಸ್​ ಪ್ರಿಯರಿಗೆ ಕಾಡುತ್ತಿತ್ತು. ಈ ಕುತೂಹಲಕ್ಕೆ ಸದ್ಯ ಬ್ರೇಕ್​ ಬಿದಿದ್ದು, ಬಿಗ್​ ಬಾಸ್​ ಮನೆಯಿಂದ ಈ ವಾರ ಪ್ರಶಾಂತ್‌ ಸಂಬರ್ಗಿ ಅವರು ಹೊರ ನಡೆದಿದ್ದಾರೆ. ಪ್ರಶಾಂತ್‌ ಸಂಬರ್ಗಿ (Prashanth Sambargi) ಅವರಿಗೆ ಈ ಹಿಂದಿನದಕ್ಕಿಂತ ಕಡಿಮೆ ಓಟುಗಳು ಬಂದಿದ್ದರಿಂದ ಅವರು ದೊಡ್ಮನೆಯಿಂದ ಔಟ್​ ಆಗಿದ್ದಾರೆ.

ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣ ವಿಚಾರವಾಗಿ ಪ್ರಶಾಂತ್‌ ಸಂಬರ್ಗಿ ಅವರು ಹೆಚ್ಚು ಸಾರ್ವಜನಿಕವಾಗಿ ಗುರುತಿಸಿಕೊಂಡಿದ್ದರು. ಬಳಿಕ ಅವರು ಬಿಗ್​ ಬಾಸ್​ ಸೀಸನ್​ 8ರಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಜಗಳ, ವಾದ, ಮಾತುಗಾರಿಕೆಯಿಂದಲೇ ಪ್ರಶಾಂತ್ ಸಂಬರ್ಗಿ ಅವರು ದೊಡ್ಮನೆಯಲ್ಲಿ ಗಮನಸೆಳೆದಿದ್ದರು. ಆದರೆ ಮನರಂಜನೆ ವಿಚಾರ ಅಂತ ಬಂದಾಗ ಅವರು ಜನರ ಕಣ್ಣಿಗೆ ಅಷ್ಟೊಂದು ಕಾಣಿಸಿಕೊಳ್ಳದೆ ಇರುವುದು ಬಿಗ್​ ಬಾಸ್​ ಸೀಸನ್​ 8ರಲ್ಲಿ ಅವರ ಸೋಲಿಗೆ ಕಾರಣ ಎನ್ನಲಾಗಿತ್ತು.

ಇದನ್ನೂ ಓದಿ: BBK9: ಹೊಡೆದಾಡಿಕೊಂಡ ಗುರೂಜಿ-ರೂಪೇಶ್​ ರಾಜಣ್ಣ; ಇಬ್ಬರ ಕೋಪದಿಂದ ಕೈ ಮೀರಿತು ಪರಿಸ್ಥಿತಿ

ಬಿಗ್​ ಬಾಸ್​ ಸೀಸನ್​ 9ರಲ್ಲಿ ಪ್ರಶಾಂತ್ ಸಂಬರ್ಗಿ ಅವರಿಗೆ ಮತ್ತೆ ಚಾನ್ಸ್​ ಸಿಕ್ಕಿತು. ಇದು ಕೆಲವರಲ್ಲಿ ಖುಷಿ ಮೂಡಿಸಿದರೆ, ಮತ್ತೆ ಕೆಲವರಲ್ಲಿ ಬೇಸರ ಉಂಟುಮಾಡಿತ್ತು. ಟಾಸ್ಕ್​ ವಿಚಾರದಲ್ಲಿ ಪ್ರಶಾಂತ್​ ಸಂಬರ್ಗಿ ಅವರು ಬಿಗ್​ ಬಾಸ್​ ಮನೆಯ ಪ್ರತಿ ಸದಸ್ಯನಿಗೂ ಟಫ್ ಕಂಟೆಸ್ಟಂಟ್ ಆಗಿದ್ದರು.

ಇದನ್ನೂ ಓದಿ: BBK9: ‘ನೀನು ಯಾವ ಸೀಮೆ ಫ್ರೆಂಡ್​?’: ಸಂಬರ್ಗಿಗೆ ನೇರವಾಗಿ ಕೇಳಿದ ರೂಪೇಶ್​ ರಾಜಣ್ಣ

ಕಳೆದ ವಾರ ದೊಡ್ಮನೆಯಲ್ಲಿ ಅನುಪಮಾ, ಅರುಣ್‌ ಸಾಗರ್‌, ಆರ್ಯವರ್ಧನ್‌, ದೀಪಿಕಾ ದಾಸ್‌, ದಿವ್ಯ ಉರುಡುಗ, ಪ್ರಶಾಂತ್‌ ಸಂಬರ್ಗಿ, ಅಮೂಲ್ಯಗೌಡ, ರಾಕೇಶ್‌ ಅಡಿಗ ನಾಮಿನೇಟ್‌ ಆಗಿದ್ದರು. ಪ್ರಶಾಂತ್‌ ಸಂಬರ್ಗಿ ಅವರು ಪ್ರತಿ ಸಲ ನಾಮಿನೇಟ್‌ ಆದಾಗಲೂ ಸೇಫ್​ ಆಗಿದ್ದರು. ಆದರೆ ಈ ಬಾರಿ ಅದೃಷ್ಟ ಕೈಕೊಟ್ಟಿದ್ದು ದೊಡ್ಮನೆಯಿಂದ ಎಲಿಮಿನೇಟ್​ ಆಗಿ ಹೊರ ನಡೆದಿದ್ದಾರೆ.

ಮತ್ತಷ್ಟು ಬಿಗ್​ ಬಾಸ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:17 pm, Sun, 11 December 22

ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಆಟಗಾರರೊಂದಿಗೆ ತಮ್ಮ ಮಕ್ಕಳ ಫೋಟೋಗಾಗಿ ನಮ್ಮ ಮಕ್ಕಳ ಬಲಿ ಪಡೆದರು: ಲಕ್ಷ್ಮಣ
ಆಟಗಾರರೊಂದಿಗೆ ತಮ್ಮ ಮಕ್ಕಳ ಫೋಟೋಗಾಗಿ ನಮ್ಮ ಮಕ್ಕಳ ಬಲಿ ಪಡೆದರು: ಲಕ್ಷ್ಮಣ
ಪರಿಹಾರಕ್ಕಾಗಿ ವಿಶೇಷ ಪ್ರಕರಣವೆಂದು ಸರ್ಕಾರ ಪರಿಗಣಿಸಲಿ: ಕುಮಾರಸ್ವಾಮಿ
ಪರಿಹಾರಕ್ಕಾಗಿ ವಿಶೇಷ ಪ್ರಕರಣವೆಂದು ಸರ್ಕಾರ ಪರಿಗಣಿಸಲಿ: ಕುಮಾರಸ್ವಾಮಿ
ಕಾಲ್ತುಳಿತ ಸಂಭವಿಸಿದಾಗ ಬಚಾವಾಗೋದು ಹೇಗೆ, ಏನು ಮಾಡಬೇಕು? ಇಲ್ಲಿದೆ ಟಿಪ್ಸ್
ಕಾಲ್ತುಳಿತ ಸಂಭವಿಸಿದಾಗ ಬಚಾವಾಗೋದು ಹೇಗೆ, ಏನು ಮಾಡಬೇಕು? ಇಲ್ಲಿದೆ ಟಿಪ್ಸ್
ಪ್ರಿಯಕರನೊಂದಿಗೆ ಬದುಕಿಕೋ ಎಂದು ಪತ್ನಿಯನ್ನು ಕಳಿಸಿದ್ದ ಪತಿ
ಪ್ರಿಯಕರನೊಂದಿಗೆ ಬದುಕಿಕೋ ಎಂದು ಪತ್ನಿಯನ್ನು ಕಳಿಸಿದ್ದ ಪತಿ
ಅಪಘಾತದ ನಂತರ ರಸ್ತೆಬದಿ ಹೋಟೆಲ್​​ಗೆ ನುಗ್ಗಿದ ಒಂದು ಟಿಪ್ಪರ್
ಅಪಘಾತದ ನಂತರ ರಸ್ತೆಬದಿ ಹೋಟೆಲ್​​ಗೆ ನುಗ್ಗಿದ ಒಂದು ಟಿಪ್ಪರ್
Daily Devotional: ಕಷ್ಟಕಾಲದಲ್ಲಿ ಮಾಡಿದ ಸಹಾಯದ ಮಹತ್ವ ತಿಳಿಯಿರಿ
Daily Devotional: ಕಷ್ಟಕಾಲದಲ್ಲಿ ಮಾಡಿದ ಸಹಾಯದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ವಾಹನ ಖರೀದಿಸುವ ಯೋಗವಿದೆ
Daily Horoscope: ಈ ರಾಶಿಯವರಿಗೆ ವಾಹನ ಖರೀದಿಸುವ ಯೋಗವಿದೆ
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರಾದ ವಿಡಿಯೋ ನೋಡಿ
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರಾದ ವಿಡಿಯೋ ನೋಡಿ
ಒಂದೇ ದಿನ ಪ್ರೇಮಿ ಮತ್ತು ವಿಲನ್ ಆದ ಶ್ರೀನಗರ ಕಿಟ್ಟಿ; ಹೇಗಿದೆ ರೆಸ್ಪಾನ್ಸ್?
ಒಂದೇ ದಿನ ಪ್ರೇಮಿ ಮತ್ತು ವಿಲನ್ ಆದ ಶ್ರೀನಗರ ಕಿಟ್ಟಿ; ಹೇಗಿದೆ ರೆಸ್ಪಾನ್ಸ್?