AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prashanth Sambargi: ಹನ್ನೆರಡನೇ ವಾರಕ್ಕೆ ಬಿಗ್​ ಬಾಸ್​ ಆಟ ಮುಗಿಸಿ ಮನೆಯಿಂದ ಹೊರ ನಡೆದ ಪ್ರಶಾಂತ್‌ ಸಂಬರ್ಗಿ

ಬಿಗ್​ ಬಾಸ್ ಸೀಸನ್​ 9 ಹನ್ನೆರಡನೇ ವಾರಕ್ಕೆ ಕಾಲಿಟ್ಟಿದ್ದು, ಈ ವಾರ ದೊಡ್ಮನೆಯಿಂದ ಪ್ರಶಾಂತ್‌ ಸಂಬರ್ಗಿ ಅವರು ಹೊರ ನಡೆದಿದ್ದಾರೆ.

Prashanth Sambargi: ಹನ್ನೆರಡನೇ ವಾರಕ್ಕೆ ಬಿಗ್​ ಬಾಸ್​ ಆಟ ಮುಗಿಸಿ ಮನೆಯಿಂದ ಹೊರ ನಡೆದ ಪ್ರಶಾಂತ್‌ ಸಂಬರ್ಗಿ
ಪ್ರಶಾಂತ್‌ ಸಂಬರ್ಗಿ 
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Dec 11, 2022 | 10:32 PM

Share

‘ಬಿಗ್​ ಬಾಸ್​ ಸೀಸನ್​ 9’ (BBK9) ಸದ್ಯ ಹನ್ನೆರಡನೇ ವಾರಕ್ಕೆ ಕಾಲಿಟ್ಟಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶೋ ಮುಕ್ತಾಯ ಹಂತ ಕೂಡ ತಲುಪಲಿದೆ. ಹೀಗಿರುವಾಗ ದೊಡ್ಮನೆಯಿಂದ ಒಬ್ಬೊಬರಾಗಿ ಸ್ಪರ್ಧಿಗಳು ಹೊರ ಹೋಗುತ್ತಿದ್ದಾರೆ. ಕಳೆದ ವಾರದಲ್ಲಿ ‘ಮಂಗಳಗೌರಿ ಮದುವೆ’ ಧಾರಾವಾಹಿ ಖ್ಯಾತಿಯ ಕಾವ್ಯಶ್ರೀ ಗೌಡ ಅವರು ಬಿಗ್​ ಬಾಸ್​ ಮನೆಯಿಂದ ಔಟ್​ ಆಗಿದ್ದರು. ಸದ್ಯ ಈ ವಾರ ನಟ ಕಿಚ್ಚ ಸುದೀಪ್​ ಅವರು ದೊಡ್ಮನೆಯಿಂದ ಯಾರನ್ನ ಹೊರೆಗೆ ಕರೆಯುತ್ತಾರೆ ಮತ್ತು ಯಾರು ಹೋಗಬಹುದು ಎಂಬ ಕುತೂಹಲ ಬಿಗ್​ ಬಾಸ್​ ಪ್ರಿಯರಿಗೆ ಕಾಡುತ್ತಿತ್ತು. ಈ ಕುತೂಹಲಕ್ಕೆ ಸದ್ಯ ಬ್ರೇಕ್​ ಬಿದಿದ್ದು, ಬಿಗ್​ ಬಾಸ್​ ಮನೆಯಿಂದ ಈ ವಾರ ಪ್ರಶಾಂತ್‌ ಸಂಬರ್ಗಿ ಅವರು ಹೊರ ನಡೆದಿದ್ದಾರೆ. ಪ್ರಶಾಂತ್‌ ಸಂಬರ್ಗಿ (Prashanth Sambargi) ಅವರಿಗೆ ಈ ಹಿಂದಿನದಕ್ಕಿಂತ ಕಡಿಮೆ ಓಟುಗಳು ಬಂದಿದ್ದರಿಂದ ಅವರು ದೊಡ್ಮನೆಯಿಂದ ಔಟ್​ ಆಗಿದ್ದಾರೆ.

ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣ ವಿಚಾರವಾಗಿ ಪ್ರಶಾಂತ್‌ ಸಂಬರ್ಗಿ ಅವರು ಹೆಚ್ಚು ಸಾರ್ವಜನಿಕವಾಗಿ ಗುರುತಿಸಿಕೊಂಡಿದ್ದರು. ಬಳಿಕ ಅವರು ಬಿಗ್​ ಬಾಸ್​ ಸೀಸನ್​ 8ರಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಜಗಳ, ವಾದ, ಮಾತುಗಾರಿಕೆಯಿಂದಲೇ ಪ್ರಶಾಂತ್ ಸಂಬರ್ಗಿ ಅವರು ದೊಡ್ಮನೆಯಲ್ಲಿ ಗಮನಸೆಳೆದಿದ್ದರು. ಆದರೆ ಮನರಂಜನೆ ವಿಚಾರ ಅಂತ ಬಂದಾಗ ಅವರು ಜನರ ಕಣ್ಣಿಗೆ ಅಷ್ಟೊಂದು ಕಾಣಿಸಿಕೊಳ್ಳದೆ ಇರುವುದು ಬಿಗ್​ ಬಾಸ್​ ಸೀಸನ್​ 8ರಲ್ಲಿ ಅವರ ಸೋಲಿಗೆ ಕಾರಣ ಎನ್ನಲಾಗಿತ್ತು.

ಇದನ್ನೂ ಓದಿ: BBK9: ಹೊಡೆದಾಡಿಕೊಂಡ ಗುರೂಜಿ-ರೂಪೇಶ್​ ರಾಜಣ್ಣ; ಇಬ್ಬರ ಕೋಪದಿಂದ ಕೈ ಮೀರಿತು ಪರಿಸ್ಥಿತಿ

ಬಿಗ್​ ಬಾಸ್​ ಸೀಸನ್​ 9ರಲ್ಲಿ ಪ್ರಶಾಂತ್ ಸಂಬರ್ಗಿ ಅವರಿಗೆ ಮತ್ತೆ ಚಾನ್ಸ್​ ಸಿಕ್ಕಿತು. ಇದು ಕೆಲವರಲ್ಲಿ ಖುಷಿ ಮೂಡಿಸಿದರೆ, ಮತ್ತೆ ಕೆಲವರಲ್ಲಿ ಬೇಸರ ಉಂಟುಮಾಡಿತ್ತು. ಟಾಸ್ಕ್​ ವಿಚಾರದಲ್ಲಿ ಪ್ರಶಾಂತ್​ ಸಂಬರ್ಗಿ ಅವರು ಬಿಗ್​ ಬಾಸ್​ ಮನೆಯ ಪ್ರತಿ ಸದಸ್ಯನಿಗೂ ಟಫ್ ಕಂಟೆಸ್ಟಂಟ್ ಆಗಿದ್ದರು.

ಇದನ್ನೂ ಓದಿ: BBK9: ‘ನೀನು ಯಾವ ಸೀಮೆ ಫ್ರೆಂಡ್​?’: ಸಂಬರ್ಗಿಗೆ ನೇರವಾಗಿ ಕೇಳಿದ ರೂಪೇಶ್​ ರಾಜಣ್ಣ

ಕಳೆದ ವಾರ ದೊಡ್ಮನೆಯಲ್ಲಿ ಅನುಪಮಾ, ಅರುಣ್‌ ಸಾಗರ್‌, ಆರ್ಯವರ್ಧನ್‌, ದೀಪಿಕಾ ದಾಸ್‌, ದಿವ್ಯ ಉರುಡುಗ, ಪ್ರಶಾಂತ್‌ ಸಂಬರ್ಗಿ, ಅಮೂಲ್ಯಗೌಡ, ರಾಕೇಶ್‌ ಅಡಿಗ ನಾಮಿನೇಟ್‌ ಆಗಿದ್ದರು. ಪ್ರಶಾಂತ್‌ ಸಂಬರ್ಗಿ ಅವರು ಪ್ರತಿ ಸಲ ನಾಮಿನೇಟ್‌ ಆದಾಗಲೂ ಸೇಫ್​ ಆಗಿದ್ದರು. ಆದರೆ ಈ ಬಾರಿ ಅದೃಷ್ಟ ಕೈಕೊಟ್ಟಿದ್ದು ದೊಡ್ಮನೆಯಿಂದ ಎಲಿಮಿನೇಟ್​ ಆಗಿ ಹೊರ ನಡೆದಿದ್ದಾರೆ.

ಮತ್ತಷ್ಟು ಬಿಗ್​ ಬಾಸ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:17 pm, Sun, 11 December 22

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!