AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಡಿದ ತಪ್ಪಿಗೆ ಪ್ರಾಯಶ್ಚಿತ?; ತಾಯಾಣೆ ಬಡ ಮಕ್ಕಳಿಗೆ 10 ಸಾವಿರ ಮೊಟ್ಟೆ ದಾನ ಮಾಡ್ತೀನಿ ಎಂದ ಪ್ರಶಾಂತ್​ ಸಂಬರಗಿ

ನಾನು ಮನೆಯಲ್ಲಿ ಒಂದೆ ಹೊತ್ತು ಊಟ ಮಾಡ್ತೀನಿ. ಉಳಿದವರಿಗೆ ತಾಕತ್ತಿದೆಯಾ? ಎಂದು ಪ್ರಶಾಂತ್​ ಪ್ರಶ್ನೆ ಮಾಡಿದರು. ಮೊಟ್ಟೆ ದಾನ ಮಾಡುವ ನಿರ್ಧಾರದ ಬಗ್ಗೆ ಚಕ್ರವರ್ತಿ ಚಂದ್ರಚೂಡ್ ಸಂತಸ ವ್ಯಕ್ತಪಡಿಸಿದ್ದರು. 

ಮಾಡಿದ ತಪ್ಪಿಗೆ ಪ್ರಾಯಶ್ಚಿತ?; ತಾಯಾಣೆ ಬಡ ಮಕ್ಕಳಿಗೆ 10 ಸಾವಿರ ಮೊಟ್ಟೆ ದಾನ ಮಾಡ್ತೀನಿ ಎಂದ ಪ್ರಶಾಂತ್​ ಸಂಬರಗಿ
ಪ್ರಶಾಂತ್ ಸಂಬರಗಿ
ರಾಜೇಶ್ ದುಗ್ಗುಮನೆ
|

Updated on:Apr 24, 2021 | 3:08 PM

Share

ಪ್ರಶಾಂತ್ ಸಂಬರಗಿ ಬಿಗ್ ಬಾಸ್ ಮನೆಯಲ್ಲಿ ಒಂದಲ್ಲಾ ಒಂದು ವಿಚಾರಕ್ಕೆ ಚರ್ಚೆ ಆಗುತ್ತಲೇ ಇರುತ್ತಾರೆ. ಈ ಮೊದಲು ತುಪ್ಪ ಹಾಗೂ ಚಪಾತಿ ತಿಂದ ವಿಚಾರಕ್ಕೆ ಪ್ರಶಾಂತ್ ವಿವಾದಕ್ಕೆ ತುತ್ತಾಗಿದ್ದರು. ಈ ಬಾರಿ ಪ್ರಶಾಂತ್ ಮೊಟ್ಟೆ ವಿಚಾರಕ್ಕೆ ವಿವಾದಕ್ಕೆ ಸಿಲುಕಿದ್ದಾರೆ. ಊಟದ ವಿಚಾರಕ್ಕೆ ಪದೇ ಪದೇ ವಿವಾದಕ್ಕೆ ತುತ್ತಾಗುತ್ತಿರುವುದು ಪ್ರಶಾಂತ್​​ಗೆ ಬೇಸರ ತರಿಸಿದೆ. ಹೀಗಾಗಿ ಬಿಗ್ ಬಾಸ್ ಮನೆಯಲ್ಲಿ ಅವರು ಶಪಥ ಒಂದನ್ನು ಮಾಡಿದ್ದಾರೆ. ಮೊಟ್ಟೆಯನ್ನು ಓವನ್​​ನಲ್ಲಿ ಇಟ್ಟು ಬೇಯಿಸೋಕೆ ಮನೆ ಮಂದಿ ಮುಂದಾಗಿದ್ದರು. ನಿಧಿ ಹಾಗೂ ಪ್ರಶಾಂತ್ ಇಬ್ಬರೂ ಸೇರಿ ಮೊಟ್ಟೆ ಬೇಯಿಸಿದರು. ಆದರೆ, ಅದು ಒಡೆದು ಹೋಯಿತು. ಇದನ್ನು ನಾನು ಟ್ರೈಲ್ ನೋಡ್ತೀನಿ ಎಂದು ಪ್ರಶಾಂತ್ ತಿಂದರು. ಇದಾದ ನಂತರ ಮತ್ತೊಮ್ಮೆ ಪ್ರಶಾಂತ್ ಮೊಟ್ಟೆ ತಿನ್ನೋಕೆ ಮುಂದಾದರು. ಈ ವಿಚಾರ ಭಾರೀ ಚರ್ಚೆಗೆ ಕಾರಣವಾಯಿತು. ಮನೆಯವರ ಜತೆ ನಿಧಿ ಈ ಬಗ್ಗೆ ಅಪಸ್ವರ ತೆಗೆದರು. ಇದಕ್ಕೆ ಪ್ರಶಾಂತ್ ಬೇಸರಗೊಂಡರು.

ನಾನು ಮನೆಯಲ್ಲಿ ಏನು ತಿಂದರೂ ವಿವಾದ ಆಗುತ್ತದೆ. ಮೊಟ್ಟೆ ವಿವಾದ ಆಗಿರುವುದಕ್ಕೆ ಬಿಗ್ ಬಾಸ್ ಮನೆಯೇ ಸಾಕ್ಷಿ. ಹೊರಬಂದ ಕೂಡಲೇ 10 ಸಾವಿರ ಬಡ ಮಕ್ಕಳಿಗೆ ಮೊಟ್ಟೆ ಹಂಚುತ್ತೇನೆ. ತಾಯಾಣೆ ಇದನ್ನು ಸೀರಿಯಸ್ ಆಗಿ ತೆಗೆದುಕೊಂಡಿದ್ದೇನೆ. ಬಿಗ್ ಬಾಸ್ ನೀವು ಹೇಳಿದ ಶಾಲೆಗೆ 10 ಸಾವಿರ ಮೊಟ್ಟೆ ಕೊಡುತ್ತೇನೆ ಎಂದು ಪ್ರಶಾಂತ್ ಶಪಥ ಮಾಡಿದರು.

ನಾನು ಮನೆಯಲ್ಲಿ ಒಂದೇ  ಹೊತ್ತು ಊಟ ಮಾಡ್ತೀನಿ. ಉಳಿದವರಿಗೆ ತಾಕತ್ತಿದೆಯಾ? ಎಂದು ಪ್ರಶಾಂತ್​ ಪ್ರಶ್ನೆ ಮಾಡಿದರು. ಮೊಟ್ಟೆ ದಾನ ಮಾಡುವ ನಿರ್ಧಾರದ ಬಗ್ಗೆ ಚಕ್ರವರ್ತಿ ಚಂದ್ರಚೂಡ್ ಸಂತಸ ವ್ಯಕ್ತಪಡಿಸಿದ್ದರು.

ಆಗ ಮಾತನಾಡಿದ ಶಮಂತ್​ ಬ್ರೋ ಗೌಡ, ಮನೆಯವರಿಗೆ ಈ ಮಾತನ್ನು ಹೇಳಿ ಎಂದರು.  ಆ ರೀತಿ ಮಾಡೋದು ಸರಿಯಲ್ಲ. ನಾನು ಅದನ್ನು ಮಾಡಿ ತೋರಿಸಬೇಕು ಎಂದರು ಪ್ರಶಾಂತ್​. ಬಿಗ್​ ಬಾಸ್​ ಮನೆಯಿಂದ ಹೊರ ಬಂದ ಕೂಡಲೇ ಅವರು​ ಮೊಟ್ಟೆ ದಾನ ಮಾಡುತ್ತಾರೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: Kichcha Sudeep: ಆರೋಗ್ಯದ ಬಗ್ಗೆ ಅಪ್​ಡೇಟ್​ ನೀಡಿದ ಸುದೀಪ್​; ಈ ವಾರವೂ ಬಿಗ್​ ಬಾಸ್​ಗೆ ಕಿಚ್ಚ ಗೈರು

ಸೆಲ್ಫೀ ನೆಪದಲ್ಲಿ ಬಿಗ್​ ಬಾಸ್​ ಸ್ಪರ್ಧಿಗೆ ಎಲ್ಲರೆದುರೇ ಮುತ್ತಿಟ್ಟ ಅಭಿಮಾನಿ! ಮರುದಿನವೇ ಬಂತು ಕೊರೊನಾ

Published On - 3:02 pm, Sat, 24 April 21

ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ