AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಟ್ರಸ್ಟ್​ಗೆ ಹಣ ಕಳಿಸಬೇಡಿ: ಮನವಿ ಮಾಡಿದ ರಾಘವ್ ಲಾರೆನ್ಸ್

Raghava lawrence: ಕಾರು ತೊಳಿಯುವ ಕೂಲಿಯಾಗಿ ವೃತ್ತಿ ಆರಂಭಿಸಿ, ಸಹ ಡ್ಯಾನ್ಸರ್, ಲೀಡ್ ಡ್ಯಾನ್ಸರ್, ಡ್ಯಾನ್ಸ್ ಮಾಸ್ಟರ್, ಸಿನಿಮಾ ನಿರ್ದೇಶಕನಾಗಿ ಈಗ ನಾಯಕನಾಗಿಯೂ ಮಿಂಚುತ್ತಿರುವ ರಾಘವ್ ಲಾರೆನ್ಸ್ ಇನ್ನು ಮುಂದೆ ತಮ್ಮ ಟ್ರಸ್ಟ್​ಗೆ ಯಾರು ಹಣ ಕಳಿಸಬೇಡಿ ಎಂದಿದ್ದಾರೆ. ಏಕೆ?

ನನ್ನ ಟ್ರಸ್ಟ್​ಗೆ ಹಣ ಕಳಿಸಬೇಡಿ: ಮನವಿ ಮಾಡಿದ ರಾಘವ್ ಲಾರೆನ್ಸ್
ರಾಘವ್ ಲಾರೆನ್ಸ್
ಮಂಜುನಾಥ ಸಿ.
|

Updated on: Aug 30, 2023 | 7:04 PM

Share

ಕಾರು ತೊಳಿಯುವ ಕೂಲಿಯಾಗಿ ವೃತ್ತಿ ಆರಂಭಿಸಿ, ಸಹ ಡ್ಯಾನ್ಸರ್, ಲೀಡ್ ಡ್ಯಾನ್ಸರ್, ಡ್ಯಾನ್ಸ್ ಮಾಸ್ಟರ್, ಸಿನಿಮಾ ನಿರ್ದೇಶಕನಾಗಿ ಈಗ ನಾಯಕನಾಗಿಯೂ ಮಿಂಚುತ್ತಿರುವ ರಾಘವ್ ಲಾರೆನ್ಸ್ (Raghava Lawrence) ತಮ್ಮ ಸಿನಿಮಾಗಳ ಜೊತೆಗೆ ಬಹು ವರ್ಷಗಳಿಂದಲೂ ನಡೆಸಿಕೊಂಡು ಬರುತ್ತಿರುವ ಸಮಾಜ ಸೇವೆಯಿಂದಲೂ ಖ್ಯಾತರು. ನೂರಾರು ಬಡ ಮಕ್ಕಳಿಗೆ ನಾನಾ ರೀತಿಯಲ್ಲಿ ಸಹಾಯ ಮಾಡುತ್ತಿರುವ ರಾಘವ್ ಲಾರೆನ್ಸ್ ಇತ್ತೀಚೆಗೆ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಮ್ಮ ಟ್ರಸ್ಟ್​ಗೆ ಇನ್ನು ಮುಂದೆ ಯಾರೂ ಹಣ ಕಳಿಸಬೇಡಿ ಎಂದಿದ್ದಾರೆ. ಅದಕ್ಕೆ ಕಾರಣವೂ ಇದೆ.

ರಾಘವ್ ಲಾರೆನ್ಸ್ ಡ್ಯಾನ್ಸರ್ ಆಗಿದ್ದಾಗಲೇ ಚಾರಿಟೆಬಲ್ ಟ್ರಸ್ಟ್ ಒಂದನ್ನು ತೆರೆದಿದ್ದರು. ಹಲವು ಬಡ, ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಅವರಿಗೆ ಶಿಕ್ಷಣ, ಆರೋಗ್ಯ ಇನ್ನಿತರೆ ನೆರವುಗಳನ್ನು ನೀಡುತ್ತಿದ್ದರು. ವಿಕಲಾಂಗರಿಗೆ ವಸತಿ ಒದಗಿಸಿ ಡ್ಯಾನ್ಸ್ ಕಲಿಸುತ್ತಿದ್ದರು. ಆಗ ಅವರ ಚಾರಿಟೇಬಲ್ ಟ್ರಸ್ಟ್​ಗೆ ಇತರರಿಂದ ಧನ ಸಹಾಯ ಪಡೆಯುತ್ತಿದ್ದರು. ಈಗಲೂ ಅದೇ ಟ್ರಸ್ಟ್ ಮೂಲಕ ಸಮಾಜ ಸೇವೆಯನ್ನು ರಾಘವ್ ಲಾರೆನ್ಸ್ ಮಾಡುತ್ತಿದ್ದಾರೆ ಆದರೆ ಈಗ ತಮ್ಮ ಟ್ರಸ್ಟ್​ಗೆ ಯಾರೂ ಹಣ ಕಳಿಸುವುದು ಬೇಡವೆಂದಿದ್ದಾರೆ.

ಅವರೇ ಹೇಳಿರುವಂತೆ, ”ನಾನು ಡ್ಯಾನ್ಸರ್ ಆಗಿದ್ದಾಗ ನನ್ನೊಬ್ಬನ ಸಂಪಾದನೆಯಿಂದ ಮಕ್ಕಳಿಗೆ ಸಹಾಯ ಮಾಡುವುದು ಕಷ್ಟವಾಗುತ್ತಿತ್ತು ಹಾಗಾಗಿ ಬೇರೆಯವರಿಂದ ನೆರವು ಪಡೆಯುತ್ತಿದ್ದೆ. ಆ ನಂತರ ನಾನು ನಾಯಕ ನಟನಾದೆ, ಎರಡು ವರ್ಷಗಳಿಗೆ ಒಂದು ಸಿನಿಮಾ ಮಾಡುತ್ತಿದ್ದೆ. ಈಗ ವರ್ಷಕ್ಕೆ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಸಾಕಷ್ಟು ಹಣ ಬರುತ್ತಿದೆ. ಈಗಲೂ ನಾನು ಇತರರಿಂದ ಹಣ ಪಡೆದು ಸಹಾಯ ಮಾಡುವುದು ಸರಿಯಲ್ಲ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ” ಎಂದಿದ್ದಾರೆ.

ಇದನ್ನೂ ಓದಿ:‘ಚಂದ್ರಮುಖಿ 2’ ಫಸ್ಟ್​ ಲುಕ್ ಬಿಡುಗಡೆ ಮಾಡಿದ ರಜನಿಕಾಂತ್​; ಗಣೇಶ ಚತುರ್ಥಿಗೆ ಬರಲಿದೆ ಬಹುನಿರೀಕ್ಷಿತ ಸಿನಿಮಾ

ಆದರೂ ಕೆಲವರು, ಹಣ ಕಳಿಸುತ್ತಿದ್ದಾರೆ. ನಾವು ನಿಮ್ಮೊಟ್ಟಿಗೆ ಕೆಲಸ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ನಾನು ಅಹಂಕಾರದಿಂದ ಹಣ ಬೇಡ ಎಂದು ಹೇಳುತ್ತಿಲ್ಲ, ಹಾಗೆ ಯಾರೂ ಭಾವಿಸಬೇಡಿ. ನನ್ನ ಟ್ರಸ್ಟ್​ಗೆ ಹಣ ಕಳಿಸುವ ಬದಲಿಗೆ ನೀವು ನಿಮ್ಮ ಮನೆಗಳ ಸಮೀಪದಲ್ಲಿ ಕೆಲಸ ಮಾಡುತ್ತಿರುವ ಟ್ರಸ್ಟ್​ಗಳಿಗೆ ಹಣ ಸಹಾಯ ಮಾಡಿ, ಇಲ್ಲವೇ ಯಾರಿಗೆ ಸಹಾಯದ ಅವಶ್ಯಕತೆ ಇದೆಯೋ ಅವರನ್ನು ನೀವೇ ಗುರುತಿಸಿ ನೇರವಾಗಿ ಅವರಿಗೆ ನಿಮ್ಮ ಹಣದಿಂದ ಸಹಾಯ ಮಾಡಿ ಅದರಿಂದ ಇನ್ನೂ ಹೆಚ್ಚಿನ ಆನಂದ ಸಿಗುತ್ತದೆ” ಎಂದಿದ್ದಾರೆ ರಾಘವ್ ಲಾರೆನ್ಸ್.

ರಾಘವ್ ಲಾರೆನ್ಸ್ ಪ್ರಸ್ತುತ ‘ಚಂದ್ರಮುಖಿ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ‘ಜಿಗರ್​ದಾಂಡ ಡಬಲ್ ಎಕ್ಸ್’, ‘ಅಧಿಕಾರಂ’, ‘ದುರ್ಗಾ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹೊಸ ಸಿನಿಮಾ ನಿರ್ದೇಶನದ ಬಗ್ಗೆಯೂ ಯೋಜಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
ಭೀಕರ ಅಪಘಾತ: ಡಿಕ್ಕಿ ರಭಸಕ್ಕೆ ಎರಡು ಪೀಸ್ ಆದ ಟೆಂಪೊ, EXCLUSIVE ದೃಶ್ಯ
ಭೀಕರ ಅಪಘಾತ: ಡಿಕ್ಕಿ ರಭಸಕ್ಕೆ ಎರಡು ಪೀಸ್ ಆದ ಟೆಂಪೊ, EXCLUSIVE ದೃಶ್ಯ
ಅರ್ಜೆಂಟೀನಾ ಭೇಟಿ ಫಲಪ್ರದವಾಗಿದೆ: ಪ್ರಧಾನಿ ಮೋದಿ
ಅರ್ಜೆಂಟೀನಾ ಭೇಟಿ ಫಲಪ್ರದವಾಗಿದೆ: ಪ್ರಧಾನಿ ಮೋದಿ